Tel: 7676775624 | Mail: info@yellowandred.in

Language: EN KAN

    Follow us :


ಬಿತ್ತಿರುವ ಕಾಳುಗಳಿಗೆ ಬಿತ್ತಲು ಸಜ್ಜಾಗಿರುವ ರೈತನಿಗೆ ಸಂತಸ ತಂದ ಮಳೆರಾಯ

Posted date: 11 Aug, 2018

Powered by:     Yellow and Red

ಬಿತ್ತಿರುವ ಕಾಳುಗಳಿಗೆ ಬಿತ್ತಲು ಸಜ್ಜಾಗಿರುವ ರೈತನಿಗೆ ಸಂತಸ ತಂದ ಮಳೆರಾಯ

ಮಳೆಯಾಧಾರಿತ ಭೂಮಿಯಲ್ಲಿ ಈಬಾರಿ ಅನೇಕ ರೈತರು ಬೆಳೆ ಬೆಳೆಯಲು ಭೂಮಿಯನ್ನು ಉತ್ತು ಹಸನು ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದರೇ ಕೆಲವು ರೈತರು ಅದಾಗಲೇ ಬಿತ್ತನೆ ಬೀಜ ಬಿತ್ತಿದ್ದು ಮೊಳಕೆಯೊಡೆದು ಪೈರು ಬಂದಿದ್ದು ಒಣಗಿ ಹೋಗುವ ಹಂತಕ್ಕೆ ತಲುಪಿದ್ದವು.


ಬೆಳೆಯುತ್ತಿರುವ ಬೆಳೆಗೆ ಮತ್ತು ರೈತರು ಬಿತ್ತನೆ ಬಿತ್ತಲು ಮಳೆಗಾಗಿ ಕಾಯುತಿದ್ದು ಇದಕ್ಕೆ ಮಳೆರಾಯ ಇಂದು ಕೃಪೆ ತೋರಿ ರೈತರ ಮೊಗದಲ್ಲಿ ಸಂತಸ ಇಣುಕುವಂತೆ ಮಾಡಿದೆ.


ತಾಲ್ಲೂಕಿನ ಬಹುಭಾಗ ಮಳೆಯಾಧಾರಿತ ಭೂಮಿಯಿದ್ದು ಅಲ್ಲಿ ರಾಗಿ, ಎಳ್ಳು, ಹುಚ್ಚೆಳ್ಳು, ಅವರೆ ಮತ್ತು ತೊಗರಿಯನ್ನು ಬಿತ್ತಲು ತಂತಮ್ಮ ಭೂಮಿಯನ್ನು ಈಗಾಗಲೇ ಹಸನು ಮಾಡಿಕೊಂಡಿದ್ದಾರೆ, ಇಷ್ಟೊತ್ತಿಗಾಗಲೇ ರಾಗಿಯೂ ಹೆಗ್ಗುಂಟೆ ಹೊಡೆಯುವ ಹಂತಕ್ಕೆ ಬರಬೇಕಾಗಿತ್ತು, ಮಳೆರಾಯ ಮುನಿದ ಕಾರಣ ಕೈಚೆಲ್ಲಿ ಕುಳಿತ ರೈತರು ಇಂದು ಮಧ್ಯಾಹ್ನ ಸುರಿದ ಮಳೆಯನ್ನು ಕಂಡು ಉಲ್ಲಸಿತರಾಗಿದ್ದಾರೆ.


ಸಂಪೂರ್ಣ ರಾಸಾಯನಿಕ ಕ್ಕೆ ಮಾರುಹೋಗಿದ್ದ ಅನೇಕ ರೈತರು ಸಾವಯವ ಕೃಷಿಗೆ ಬದಲಾಗುತ್ತಿದ್ದರೂ ಸಹ ರಾಸಾಯನಿಕ ವನ್ನು ಸಂಪೂರ್ಣವಾಗಿ ಬಿಡಲಾಗದೆ ಅಡಕತ್ತರಿಯಲ್ಲಿ ಸಿಲುಕಿದ್ದು ಸದ್ಯದ ಪರಿಸ್ಥಿತಿಯಲ್ಲಿ ಗೋಚರಿಸುತ್ತಿದೆ.


ತಾಲ್ಲೂಕು ಆಡಳಿತ ಸಹ ಸರಿಯಾದ ಸಮಯಕ್ಕೆ ರಸಗೊಬ್ಬರವನ್ನು ಒದಗಿಸಿಕೊಟ್ಟರೆ ಸದ್ಯದ ರೈತನ ಬೆಳೆ ಸರಿಯಾದ ಸಮಯಕ್ಕೆ ಕೊಯ್ಲಿಗೆ ಬರಬೇಕಾದರೆ ಆಡಳಿತ ಇಂದಿನಿಂದಲೇ ರಸಗೊಬ್ಬರ ಒದಗಿಸಲು ಸಜ್ಜಾಗಬೇಕಿದೆ.


ತಾಲ್ಲೂಕಿನ ಕೃಷಿ ಇಲಾಖೆಯು ಸಹ ಕೃಷಿಕರಿಗೆ ಯಾವ್ಯಾವ ರಾಗಿ ತಳಿಗಳನ್ನು ಹಾಗೂ ಧವಸ ಧಾನ್ಯಗಳನ್ನು ಬೆಳೆದರೆ ಸರಿ ಎಂಬ ಮಾಹಿತಿಯನ್ನು ಎಲ್ಲಾ ರೈತರಿಗೂ ತಿಳಿಹೇಳಿದರೆ ರೈತ ಮತ್ತಷ್ಟು ಉತ್ತೇಜನಗೊಂಡು ತನ್ನ ಬೆಳೆಯನ್ನು ರಕ್ಷಿಸಿ ಪೋಷಿಸುವ ಕೆಲಸವನ್ನು ಮಾಡಲು ತಯಾರಾಗಲಯ ಸಹಕಾರಿಯಾಗುತ್ತದೆ.

 

ಗೋ ರಾ ಶ್ರೀನಿವಾಸ...

ಮೊ; 9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ

ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ

ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

Top Stories »  


Top ↑