Tel: 7676775624 | Mail: info@yellowandred.in

Language: EN KAN

    Follow us :


ತೋಟಗಾರಿಕೆ ಇಲಾಖೆಯಲ್ಲಿನ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು

Posted date: 08 Oct, 2018

Powered by:     Yellow and Red

ತೋಟಗಾರಿಕೆ ಇಲಾಖೆಯಲ್ಲಿನ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು

ತೋಟಗಾರಿಕೆ ಇಲಾಖೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನೆಗಳು, ತಾಲೂಕು ಪಂಚಾಯತ್ ಯೋಜನೆಗಳು, ರಾಜ್ಯ ವಲಯ ಜನೆಗಳು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಗಳಿದ್ದು ಈ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಚನ್ನಪಟ್ಟಣ ತೋಟಗಾರಿಕೆ ಸಹಾಯಕ ನಿರ್ದೇಶಕ ವಿವೇಕ್ ಹೇಳಿದರು. ತಾಲ್ಲೂಕಿನಲ್ಲಿ 20,000 ಹೆಕ್ಟೇರ್‍ಗೂ ಹೆಚ್ಚು ತೋಟಗಾರಿಕೆ ಬೆಳೆಯಿದ್ದು 12,000 ಹೆಕ್ಟೇರ್ ತೆಂಗು, 5,000 ಹೆಕ್ಟೇರ್ ಮಾವು, 3,000 ಹೆಕ್ಟೇರ್ ಬಾಳೆ ಮತ್ತು ಇನ್ನಿತರೆ ತೋಟಗಾರಿಕೆ ಬೆಳೆಯನ್ನು ಬೆಳೆ ಯಲಾಗುತ್ತಿದೆ.
ಪ್ರತಿ ವರ್ಷವೂ ನರೇಗಾ ಸೇರಿದಂತೆ ಎಂಟರಿಂದ ಒಂಭತ್ತು ಕೋಟಿ ಅನುದಾನ ಬರುತಿದ್ದು {ಅಧಿಕಾರಿ ಗಳು ಮತ್ತು ತೋಟಗಾರಿಕೆ ಸಿಬ್ಬಂದಿಗಳ ಸಂಬಳ ಸೇರಿದಂತೆ} ಬಹುತೇಕ ಯೋಜನೆಗಳ ಹಣವು ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ.

ಜಿಲ್ಲಾ ಪಂಚಾಯತ್ ಯೋಜನೆಗಳು

ಜಿಲ್ಲಾ ಪಂಚಾಯತ್ ಯೋಜನೆಗಳಲ್ಲಿ ತೆಂಗು ಬೀಜ ಸಂಗ್ರಹಣೆ ಮತ್ತು ನರ್ಸರಿ ನಿರ್ವಹಣೆ ಮಾಡಿ ಗುಣಮಟ್ಟದ ಸಸಿಗಳನ್ನು ವಿತರಿಸುವುದು ಮತ್ತು ಜೇನು ಕೃಷಿ ಮಾಡುವವರಿಗೆ ಶೇಕಡಾ 50 ರ ರಿಯಾ ಯಿತಿಯಲ್ಲಿ ಕೃಷಿ ಪರಿಕರಗಳನ್ನು ಒದಗಿಸಲಾಗುತ್ತದೆ. ತಾಲ್ಲೂಕು ಪಂಚಾಯತ್ ಯೋಜನೆಗಳು ತಾಲ್ಲೂಕು ಪಂಚಾಯತ್ ಯೋಜನೆಗಳಲ್ಲಿ ತೋಟಗಾರಿಕೆಗೆ ನುರಿತ ವಿದ್ವಾಂಸರಿಂದ ತಾಂತ್ರಿಕತೆ ಮತ್ತು ನೂತನ ಆವಿಸ್ಕಾರಗಳ ಕುರಿತು ತರಬೇತಿ. ರೈತರಿಗೆ ಒಂದು ಎಕರೆ ಪ್ರದೇಶಕ್ಕೆ 1,000 ರೂ ಗಳಿಗೆ ಮೀರದಂತೆ ಉಚಿತವಾಗಿ
ತೆಂಗು, ಮಾವು ಸಪೋಟ ಮುಂತಾದ ಗಿಡಗಳನ್ನು ವಿತರಿಸುವುದು. ರೋಗ ಮತ್ತು ಕೀಟ ಬಾಧೆಗಳ ನಿಯಂತ್ರಣಕ್ಕೆ ಪ್ರತಿ
ಹೆಕ್ಟೇರ್‍ಗೆ ಗರಿಷ್ಠ 2,000 ರೂ ಮೀರದಂತೆ ಮಾರ್ಗಸೂಚಿ ಪ್ರಕಾರ ಎಲ್ 1 ದರ ಆಧರಿಸಿ ಶೇಕಡಾ 50 ರಷ್ಟು ಸಹಾಯಧನ ಒದಗಿಸುತ್ತದೆ.
2018-19ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ವರ್ಗದ ರೈತರಿಗೆ 2.1 ಎಕರೆ ಹೊಸದಾಗಿ ತೆಂಗು, ಹಣ್ಣಿನ ತೋಟ ಸ್ಥಾಪಿಸಲು ಸಹಾಯಧನ ನೀಡುತ್ತದೆ.

ರಾಜ್ಯವಲಯ ಯೋಜನೆಗಳು

ತೋಟಗಾರಿಕೆ ಬೆಳೆಗಳ ರೋಗ, ಕೀಟಗಳ ನಿಯಂತ್ರ ಣದಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇಕಡಾ 50, ಪರಿಶಿಷ್ಠ ವರ್ಗದ ರೈತರಿಗೆ ಶೇಕಡಾ 90 ರಂತೆ ಗರಿಷ್ಠ 2 ಹೆಕ್ಟೇರ್ ಗೆ ಸಂರಕ್ಷಣಾ ಔಷಧಿ ಖರೀದಿಗೆ ಸಹಾಯ ನೀಡಲಾಗುತ್ತದೆ. ತೆಂಗು ಬೆಳೆ ಅಭಿವೃದ್ದಿ ಯೋಜನೆ ಯಲ್ಲಿ ಸಂಯೋಜಿತ ಬೇಸಾಯ ಮಾಡಿದರೆ ಶೇಕಡಾ 75 ರಂತೆ ಕೀಟ ಬಾಧೆಗಳ ರೋಗಕ್ಕೆ, ಪೋಷಕಾಂಶ ನಿರ್ವಹಣೆಗೆ ಶೇಕಡಾ 75 ರಂತೆ,
ಪ್ರದೇಶ ವಿಸ್ತರಣೆಗೆ ರಾಜ್ಯದ ಪಾಲು ಸೇರಿ ಶೇಕಡಾ 50 ರಂತೆ ಹಾಗೂ ಮರು ನಾಟಿ ಮತ್ತು ಪುನಶ್ಚೇತನ, ನಿರ್ವಹಣೆಗೆ ಪ್ರತಿ ಹೆಕ್ಟೇರ್‍ಗೆ 44,750 ರೂ ಮೊದಲನೇ ವರ್ಷ, ಎರಡನೇ ವರ್ಷ 8,750 ರೂ ಗಳನ್ನು ನೀಡಲಾಗುತ್ತದೆ. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ
ಗುಚ್ಚಗಳಲ್ಲಿ ಅಂದರೆ ನಾಲ್ಕೈದು ಗ್ರಾಮಗಳ ರೈತರನ್ನು ಒಟ್ಟಿಗೆ ಸೇರಿಸಿ ಒಂದೇ ಕಡೆ ಒಂದೊಂದೇ ಬೆಳೆಯನ್ನು ಬೆಳೆಯುವಂತೆ ಪ್ರೋತ್ಸಾಹ ನೀಡುವುದು. ಟೊಮ್ಯಾಟೋ, ಫೋಲ್‍ಬೀನ್ಸ್, ಮಾವು ಮುಂತಾದ ಬೆಳೆಗಳನ್ನು ಗುಚ್ಚ ಪದ್ದತಿಯಲ್ಲಿ ಬೆಳೆಯಬೇಕಾದರೆ ಹನಿ ನೀರಾವರಿ ಕಡ್ಡಾಯವಾಗಿದ್ದು, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಹನಿ ನೀರಾ ವರಿ, ಉತ್ಪನ್ನಗಳ ಗುಣಮಟ್ಟ, ಸಂಸ್ಕರಣೆ ಮತ್ತು ಮೌಲ್ಯವರ್ದನೆ ಪ್ಯಾಕ್‍ಹೌಸ್, ಕೃಷಿಹೊಂಡ, ಪ್ಲಾಷ್ಟಿಕ್ ಕ್ರೇಟ್ಸ್, ಮಾರುಕಟ್ಟೆ ಸುವ್ಯವಸ್ಥೆ ಕಲ್ಪಿಸಲಾಗುತ್ತದೆ, ಪರಿಶಿಷ್ಟ ಜಾತಿಗೆ ಶೇಕಡಾ 90, ಸಾಮಾನ್ಯ ವರ್ಗಕ್ಕೆ ಶೇಕಡಾ 50 ಸಹಾಯಧನ ನೀಡಲಾಗುತ್ತದೆ. ನೀರಿನ ಟ್ಯಾಂಕ್ ಖರೀದಿಸಲು, ಕೈತೋಟ ಮತ್ತು ತಾರಸಿ
ತೋಟಗಳ ಉತ್ತೇಜನ, ಅಪ್ರಧಾನ ಹಣ್ಣುಗಳ ಪ್ರದೇಶ ವಿಸ್ತರಣೆ, ಕೃಷಿ ಭಾಗ್ಯ ಯೋಜನೆಳಿಗೂ ಸಹಾಯಧನ ಒದಗಿಸಲಾಗುತ್ತದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ

ಗೆಡ್ಡೆ ಬಾಳೆ, ಅಂಗಾಂಶ ಕೃಷಿ ಬಾಳೆ, ಪಪ್ಪಾಯ, ತರಕಾರಿ ನಿಖರ ಬೇಸಾಯ ಪದ್ದತಿಯಲ್ಲಿ ಬೆಳೆಯಲು ಸಹಾಯಧನ, ಅಗತ್ಯವಿರುವ ಅನುಮೋದಿತ ಖರೀದಿಸಿದ ಉಪಕರಣಗಳಿಗೆ ಎಸ್‍ಎಂಎಎಂ ಯೋಜನೆಯಡಿಯಲ್ಲಿ ಸಹಾಯಧನ, ಆರ್‍ಕೆವಿವೈ ಯೋಜನೆಯಡಿ ಪರಂಪರಾಗತ ಕೃಷಿವಿಕಾಸ ಯೋಜನೆಯಡಿಯಲ್ಲಿ ಪ್ಯಾಕ್‍ಹೌಸ್, ಜೇನು ಸಾಕಾ ಣಿಕೆ ತರಬೇತಿ ಮತ್ತು ಪಿಎಂಕೆಸಿವೈ ಯೋಜನೆಯಡಿ ಹನಿ, ತುಂತುರು ನೀರಾವರಿ ಯೋಜನೆಗಳಿಗೆ ಸಹಾಯ ಧನ ಒದಗಿಸಲಾಗುತ್ತದೆ.

ಸಮಗ್ರ ತೋಟಗಾರಿಕೆ ಅಭಿವೃದ್ದಿ ಮಿಷನ್ ಯೋಜನೆ

ಈ ಎನ್‍ಹೆಚ್‍ಎಂ ಯೋಜನೆಯಡಿಯಲ್ಲಿ ಅಂಗಾಂಶ ಕೃಷಿ ಬಾಳೆ ಪ್ರದೇಶ ವಿಸ್ತರಣೆ, ಪುಷ್ಪಾಭಿವೃದ್ಧಿ, ತರಕಾರಿ ಬೇಸಾಯ, ಹಸಿರುಮನೆ, ನೆರಳು ಚಪ್ಪರ ನಿರ್ಮಾಣ, ಮತ್ತು ತೇವಾಂಶ ಕಾಪಾಡಲು ಹಾಗೂ ಕಳೆ ನಿಯಂ ತರಿಸಲು ಶೇಕಡಾ 50 ರಷ್ಟು ಸಹಾಯಧನ ನೀಡ ಲಾಗುತ್ತದೆ. ಟ್ರ್ಯಾಕ್ಟರ್, ಟಿಲ್ಲರ್ ಖರೀದಿಸಲು, ರೋಗ ಮತ್ತು ಕೀಟಗಳ ನಿಯಂತ್ರಣಕ್ಕೆ ಸಹಾಯಧನ, ರೈತರಿಗೆ ತರಬೇತಿ,
ಪ್ಯಾಕ್‍ಹೌಸ್ ನಿರ್ಮಾಣ, ಹಣ್ಣು ಮಾಗಿ ಸುವ ಘಟಕ, ಶೀತಲ ಗೃಹ ಘಟಕಗಳಿಗೂ ಸಹ ಸಾಮಥ್ರ್ಯ ಕ್ಕನುಗುಣವಾಗಿ ಸಹಾಯಧನ ನೀಡಲಾಗುತ್ತಿದೆ.

ರೈತರಿಗಾಗಿ ನಾವು ಹೆಚ್‍ಆರ್ ವಿವೇಕ್

ಸರ್ಕಾರದಿಂದ ಬರುವ ಎಲ್ಲಾ ಯೋಜನೆಗಳನ್ನು ಫಲಾನುಭವಿ ರೈತರಿಗೆ ಪತ್ರಿಕೆಗಳ ಮೂಲಕ, ಕೆಲವು ಜಾಹೀರಾತುಗಳು, ಕರಪತ್ರಗಳ ಮೂಲಕ ರೈತರಿಗೆ ತಲುಪಿಸುತ್ತಿದ್ದೇವೆ. ಕೆಲವೊಂದು ಬೆಳೆಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಬೆಳೆಗಳಿಗೆ ಬರುವ ಸಹಾಯಧನವೂ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ, ಇನ್ನು ಮುಂದೆಯೂ ಸಹ ತಾಲ್ಲೂಕಿನಾದ್ಯಂತ ರೈತರು ಮತ್ತು
ಬೆಳೆಗೆ ಸಂಬಂಧಿಸಿದಂತೆ ತಿಳುವಳಿಕೆ ಮೂಡಿಸಿ ಎಲ್ಲರಿಗೂ ಅನುಕೂಲ ಕಲ್ಪಿಸುಕೊಡಲು ಪ್ರಯತ್ನಿ ಸುತ್ತೇನೆ ಎಂದು ವಿಶ್ವಾಸ ವ್ಯಕ್ತÀಪಡಿಸಿದರು.

ಈ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ

ಚನ್ನಪಟ್ಟಣ ತಾಲ್ಲೂಕು ತೋಟಗಾರಿಕೆ ಇಲಾಖೆ ಯಲ್ಲಿ ಒಟ್ಟು 23 ಹುದ್ದೆಗಳಿದ್ದು ಸದ್ಯ 11 ಹುದ್ದೆಗಳು ಮಾತ್ರ ಭರ್ತಿಂiÉiÁಗಿವೆ. ಸಹಾಯಕ ತೋಟಗಾರಿಕೆ ಅಧಿ ಕಾರಿಗಳ 5 ಹುದ್ದೆಗಳಲ್ಲಿ ಕೇವಲ ಇಬ್ಬರು ಅಧಿಕಾರಿ ಗಳಿದ್ದಾರೆ. ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಒಂದಿದ್ದು ಅದೂ ಖಾಲಿ ಇದೆ, ತೋಟಗಾರರ ಎಂಟು ಹುದ್ದೆ ಗಳಿದ್ದು, ಎಂಟು ಹುದ್ದೆಗಳನ್ನು ಭರ್ತಿ ಮಾಡದೆ ಇರುವುದು ನಿಜಕ್ಕೂ ದಾಖಲೆಯೇ ಸರಿ.

 

ಗೋ ರಾ ಶ್ರೀನಿವಾಸ...

ಮೊ: 9845856139.

ಪ್ರತಿಕ್ರಿಯೆಗಳು1 comments

  • Puttegowda s s wrote:
    08 Oct, 2018 08:34 pm

    Hello sir naaanobba raitha naanu Reshme ilakege documents submitt maadi 3 months agide Inna bandu gps madila response madala

  • Puttegowda s s wrote:
    08 Oct, 2018 08:34 pm

    Hello sir naaanobba raitha naanu Reshme ilakege documents submitt maadi 3 months agide Inna bandu gps madila response madala

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ

ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ

ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

Top Stories »  


Top ↑