ವಿದ್ಯಾ ದಾನದ ಹೆಸರಿನಲ್ಲಿ ಹಣ ಲೂಟಿ ಸ್ಪ್ರಿಂಗ್ ಪೀಲ್ಡ್(Spring field) ಶಾಲೆ ವಿರುದ್ಧ ಪೋಷಕರಿಂದ ದೂರು
ಚನ್ನಪಟ್ಟಣ: ವಿದ್ಯಾದಾನದ ಹೆಸರಿನಲ್ಲಿ ನಾಯಿಕೊಡೆಯಂತೆ ತಲೆ ಎತ್ತಿರುವ ಶಾಲೆಗಳು ಶಿಕ್ಷಣದ ವ್ಯಾಪಾರಿ ಕರಣಕ್ಕೆ ನಿಂತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಆರ್ಟಿಇ ಮಕ್ಕಳಿಂದ ಶುಲ್ಕ ವಸೂಲಿಗೆ ನಿಂತ ಖಾಸಗಿ ಶಾಲೆಯ ವಿರುದ್ಧ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಖಾಸಗಿ ಶಾಲೆಗಳು ಪೋಷಕರನ್ನು ಶುಲ್ಕದ ಹೆಸರಿನಲ್ಲಿ ಉರಿದು ಮುಕ್ಕುತ್ತಿವೆ ಎಂಬ ಕೂಗು ವ್ಯಾಪಕವಾಗಿದೆ. ಡೊನೇಷನ್ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ ಸಾಕಷ್ಟು ನಿಯಮ ರೂಪಿಸಿದೆಯಾದರೂ ಅಧಿಕಾರಿಗಳ ಜಾಣ ಮೌನದಿಂದಾಗಿ ಖಾಸಗಿ ಶಾಲೆಗಳು ಇಲ್ಲಸಲ್ಲದ ಶುಲ್ಕ ಎಂದು ಪೋಷಕರನ್ನು ಹುರಿದು ಮುಕ್ಕುತ್ತಿವೆ. ಇಂತಹುದೇ ಒಂದು ಪ್ರಕರಣ ತಾಲೂಕಿನ ಸ್ಪ್ರಿಂಗ್ ಪೀಲ್ಡ್ ಶಾಲೆಯಲ್ಲಿ ನಡೆದಿದೆ.
ಆರ್ಟಿಇ ಮಕ್ಕಳಿಗೆ ೨೫ ಸಾವಿರ ರೂ.: ಬಡ ಮಕ್ಕಳಿಗೂ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ದೊರಕ ಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ಆರ್ಟಿಇ ಕಾಯಿದೆಯಡಿ ಕೆಲ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರ್ಪಡೆ ಗೊಳಿಸಲಾಗಿದೆ. ಈ ಮಕ್ಕಳ ಖರ್ಚನ್ನು ನಿಯಮಾನುಸಾರ ಸರ್ಕಾರವೇ ಬರಿಸುತ್ತದೆ. ಸರ್ಕಾರದಿಂದ ನಿಗದಿತ ಶುಲ್ಕ ಪಡೆಯುವ ಖಾಸಗಿ ಶಾಲೆಗಳು ಇತ್ತ ಪೋಷಕರಿಂದಲೂ ಹಣ ಕೇಳುತ್ತಿದ್ದು ಇಲ್ಲಿನ ಸ್ಪ್ರಿಂಗ್ ಪೀಲ್ಡ್ ಶಾಲೆ ೨೫ ಸಾವಿರ ರೂ. ಶುಲ್ಕವನ್ನು ಆರ್ಟಿಇ ವಿದ್ಯಾರ್ಥಿಯಿಂದ ಪಡೆದಿರುವುದಾಗಿ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಅಳಲು ತೋಡಿ ಕೊಂಡ ಪೋಷಕರು: ಸ್ಪ್ರಿಂಗ್ ಫೀಲ್ಡ್ ಶಾಲೆಯು ನಗರದ ರಾಜಾ ಕೆಂಪೇಗೌಡ ಬಡಾವಣೆಯಲ್ಲಿ ನೋಂದಣಿ ಆಗಿದ್ದು ಮೂರು ವರ್ಷಗಳಿಂದಲೂ ಮೂರು ಕಿಲೋಮೀಟರ್ ದೂರವಿರುವ ಗೋವಿಂದೇಗೌಡನದೊಡ್ಡಿ ಗ್ರಾಮದಲ್ಲಿ ಶಾಲೆಯು ಕಾರ್ಯ ನಿರ್ವಹಿಸುತ್ತಿದೆ, ಅಲ್ಲಿಗಿನ್ನೂ ಅನುಮತಿಯೇ ಪಡೆದಿಲ್ಲ, ಜೊತೆಗೆ ಆ ಶಾಲೆಯು ರಾಜ್ಯ ಪಠ್ಯವನ್ನು(Sಣಚಿಣe ಅಥಿಟebus) ಮಾತ್ರ ಬೋಧಿಸಲು ಅನುಮತಿ ಪಡೆದಿದ್ದು ಪೋಷಕರಿಗೆ ಸಿಬಿಎಸ್ಸಿ (ಅಃSಇ) ಭೋಧಿಸುತ್ತೇವೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿದರು.
ಆರ್ ಟಿ ಇ ಮೂಲಕ ಪ್ರವೇಶ ಪಡೆದಿರುವ ಮಕ್ಕಳಿಗೂ ಅವರಿಗೆ ಇಷ್ಟ ಬಂದ ರೀತಿಯಲ್ಲಿ ೮,೫೦೦ ರಿಂದ ೧೭,೦೦೦ ರೂಪಾಯಿಗಳನ್ನು ಶುಲ್ಕವಾಗಿ ಪಡೆದಿದ್ದಾರೆ ಅದನ್ನು ಪ್ರಶ್ನಿಸಿದರೆ ಹೌದು ನಾವು ಹಾಗೆಯೇ ತೆಗೆದುಕೊಳ್ಳುತ್ತೇವೆ ಇಷ್ಟವಿದ್ದರೇ ಸೇರಿಸಿ ಇಲ್ಲಾಂದ್ರೆ ಕರೆದುಕೊಂಡು ಹೋಗಿ ಯಾರಿಗೆ ಬೇಕಾದರೂ ಹೇಳಿಕೊಳ್ಳಿ ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ಪೋಷಕರೊಬ್ಬರು ನೊಂದು ನುಡಿದರು.
ಸ್ಪ್ರಿಂಗ್ ಫೀಲ್ಡ್ ಶಾಲೆಯಲ್ಲಿ ಯಾವ ತರಗತಿಯ ಮಕ್ಕಳಗೂ ೧೭,೫೦೦ ರೂ ಗಳಿಗೆ ಮಾತ್ರ ರಶೀದಿ ಕೊಡುತ್ತಾರೆ, ಉಳಿದ ೮,೦೦೦ ರೂ ಗಳಿಗೆ ಯಾವುದೇ ರೀತಿಯ ರಶೀದಿ ಕೊಡುವುದಿಲ್ಲ ಕೇಳಿದರೆ ದಬಾಯಿಸಿ ಕಳುಹಿಸುತ್ತಾರೆ, ಇಲ್ಲವೇ ಮಕ್ಕಳ ಭವಿಷ್ಯ ಹಾಳಾಗುತ್ತದೆ ನೋಡಿ ಎಂದು ಹೆದರಿಸುತ್ತಾರೆ ಎಂದು ತಮ್ಮ ಅಳಲನ್ನು ಶಿಕ್ಷಣಾಧಿಕಾರಿಗಳ ಬಳಿ ತೋಡಿಕೊಂಡರು.
ಸ್ಪ್ರಿಂಗ್ ಫೀಲ್ಡ್ ಶಾಲೆಯ ಮುಖ್ಯೋಪಾಧ್ಯಾಯಿನಿಯವರು ಹಾಜರಿದ್ದು ನಾನು ಈ ಶಾಲೆಗೆ ಬಂದು ಕೇವಲ ಒಂದು ವಾರ ಆಗಿದೆ, ನನ್ನ ಗಮನಕ್ಕೆ ಬಂದಿಲ್ಲ ಕಾರ್ಯದರ್ಶಿಯವರ ಬಳಿ ಮಾತನಾಡುತ್ತೇನೆ ಎಂದು ಜಾರಿಕೆ ಉತ್ತರ ಕೊಡಲು ಮುಂದಾದಾಗ ಇವಾಗಲೇ ಮಾತನಾಡಿ ನಾಳೆ ಬೆಳಿಗ್ಗೆ ಬರಲೇಬೇಕೆಂದು ಹೇಳಬೇಕು ಎಂದು ಪೋಷಕರು ಒತ್ತಾಯಿಸಿದರು, ತಕ್ಷಣ ಕಾರ್ಯದರ್ಶಿ ಗೆ ಕರೆಮಾಡಿದ ಮುಖ್ಯೋಪಾಧ್ಯಾಯಿನಿಯವರು ನಾಳೆ ಬಿಇಓ ಕಛೇರಿಗೆ ಬರಲು ಹೇಳಿದರು.
ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ರವರು ಅನ್ಯಾಯವಾಗಿರುವ ಪೋಷಕರು ನಾಳೆ ಬೆಳಿಗ್ಗೆ ಕಛೇರಿಗೆ ಬಂದು ಬಗೆಹರಿಸಿಕೊಳ್ಳಲು ಮನವಿ ಮಾಡಿದರು.
ಈ ವೇಳೆ ನಗರಸಭಾ ಮಾಜಿ ಸದಸ್ಯ ಕೃಷ್ಣೇಗೌಡ, ವಿಠಲೇನಹಳ್ಳಿ ಗ್ರಾಮದ ಅಂಗಡಿ ಕೃಷ್ಣೇಗೌಡ, ಕಾಂತರಾಜು, ರಮೇಶ್, ಮೊಗಣ್ಣ, ಕುಮಾರ್, ಪೋಷಕರಾದ ಚಂದ್ರು, ವೈದ್ಯೇಗೌಡ, ರಾಜು ಮುಂತಾದವರು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ: 9845856139.
Recent news in education »
ಅಂದು ಶಾಲೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಅಪ್ಪಗೆರೆ ತಿಮ್ಮರಾಜು
ಚನ್ನಪಟ್ಟಣ: ನಾವು ನಮ್ಮ ಕಾಲದಲ್ಲಿ ಶಾಲೆಗೆ ಹೋಗಿ ವಿದ್ಯೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಹಲವಾರು ಸಮಸ್ಯೆಗಳು ನಮ್ಮ ಎದುರಿಗಿದ್ದವು. ಆದರೆ, ಈಗ ಅಂತಹ
ಪ್ರತಿ ವಿದ್ಯಾರ್ಥಿಗಳು ಕೌಶಲ್ಯ ರೂಢಿಸಿಕೊಳ್ಳಬೇಕು: ಶಿಕ್ಷಣಾಧಿಕಾರಿ ಮರಿಗೌಡ
ಚನ್ನಪಟ್ಟಣ: ಶಾಲಾ ವಿದ್ಯಾರ್ಥಿಗಳು ಕೇವಲ ಪಾಠ ಮತ್ತು ಆಟಕ್ಕೆ ಸೀಮಿತವಾಗದೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಕೌಶಲ್ಯ ಕಲಿತ ಮಕ್ಕಳ ಪ್ರತಿಭೆಯನ್ನ
ಪ್ರತಿ ಸರ್ಕಾರಗಳು ಪದವೀಧರರ ಜೊತೆ ಚೆಲ್ಲಾಟವಾಡುತ್ತಿವೆ, ಉದಯ್ ಸಿಂಗ್
ಚನ್ನಪಟ್ಟಣ: ಪ್ರತಿ ವರ್ಷವೂ ಲಕ್ಷಾಂತರ ಯುವಕ ಯುವತಿಯರು ಪದವಿಯೊಂದಿಗೆ ಹೊರಬರುತ್ತಾರೆ. ವಿಶ್ವ ವಿದ್ಯಾಲಯಗಳಿಂದ ಪದವಿಯೊಂದಿಗೆ ಬರುವವರಿಗೆ ಸೂಕ್ತ ಉದ್ಯೋಗ
ದಿವ್ಯಚೇತನ ಇಂಗ್ಲಿಷ್ ಶಾಲೆಯಲ್ಲಿ ಮೇಳೈಸಿದ ಮಿನಿ ವಿಜ್ಞಾನ ಮೇಳ
ಚನ್ನಪಟ್ಟಣ: ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಬ್ರಾಡ್ಕಾಂ ವಿಜ್ಞಾನ ಕೇಂದ್ರ ಚನ್ನಪಟ್ಟಣ ಇವರ ವತಿಯಿಂದ ನಗರದ ದಿವ್ಯ ಚೇತನ ಇಂಗ್ಲಿಷ್ ಪ್ರೌಢಶಾಲೆಯಲ್ಲ
ಪಾಠದ ಜೊತೆಗೆ ಆಟದಲ್ಲಿಯೂ ಮುಂಚೂಣಿಗೆ ಬರಬೇಕು. ವಿ ಬಾಲಸುಬ್ರಹ್ಮಣ್ಯಂ
ಚನ್ನಪಟ್ಟಣ,: ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದ ಜೊತೆಯಲ್ಲಿ ಕ್ರೀಡಾಮನೋಭಾವನೆ ಬೆಳಸಿಕೊಳ್ಳಬೇಕು. ಮನಸ್ಸು ಉಲ್ಲಸಿತವಾಗಲು ಕ್ರೀಡೆ ಸಹಕಾರಿ ಎಂದು ಬಾಲು
ಉಪನ್ಯಾಸಕರ ಧರಣಿ, ಕಲಿಕೆಗೆ ತೊಂದರೆ, ಎಬಿವಿಪಿ ಯಿಂದ ಪ್ರತಿಭಟನೆ
ಚನ್ನಪಟ್ಟಣ: ಸರ್ಕಾರಿ ಕಾಲೇಜುಗಳ ಉಪನ್ಯಾಸಕರು ಧರಣಿ ನಿರತರಾಗಿರುವುದರಿಂದ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿದೆ. ಇದರಿಂದ ಶೈಕ್ಷಣಿಕ ವರ್ಷದ ಕಲಿಕೆಗೆ ತೊ
ಆರೋಗ್ಯ, ಆಯಸ್ಸು ಹೆಚ್ಚಿಸುವ ವೈದ್ಯರು ಆರೋಗ್ಯ ಕಾಪಾಡಿಕೊಳ್ಳಬೇಕು. ಚಾಮುಂಡೇಶ್ವರಿ ಆಸ್ಪತ್ರೆ ಉದ್ಘಾಟನೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ
ಚನ್ನಪಟ್ಟಣ:bಆಸ್ಪತ್ರೆಗೆ ಬರುವ ರೋಗಿಗಳ ಅರೋಗ್ಯ ತಪಾಸಿಸಿ, ರೋಗ ವಾಸಿ ಮಾಡಿ, ಅವರ ಆರೋಗ್ಯ ದ ಜೊತೆಗೆ ಆಯಸ್ಸನ್ನು ಹೆಚ್ಚಿಸುವಲ್ಲಿ ನಿಷ್ಣಾತರಾದ ವೈದ್ಯರು
ಪೆಟ್ಟಾ ಸರ್ಕಾರಿ ಶಾಲಾ ಆವರಣದಲ್ಲಿ ನಗರಸಭೆಯ ಕಸದ ರಾಶಿ, ಅಲ್ಲಗಳೆದ ಪೌರಾಯುಕ್ತ
ಆರ್ಥಿಕವಾಗಿ ಬೆಳೆದವರೆಲ್ಲರೂ ವಿದ್ಯಾರ್ಜನೆಗೆ ಮುಂದಡಿಯಿಡಬೇಕು, ಸಚಿವ ಮಧುಬಂಗಾರಪ್ಪ
ಚನ್ನಪಟ್ಟಣ: ಬಡತನದ ಬೇಗೆಯಲ್ಲಿ ಬೆಂದು, ಉನ್ನತ ಶಿಕ್ಷಣ ಪಡೆದು, ಉತ್ತಮ ಸ್ಥಾನಮಾನದ ಜೊತೆಗೆ ಆರ್ಥಿಕವಾಗಿ ಸದೃಢವಾದ ನಂತರ ತನ್ನ ಜನ್ಮದಾತರಿಗೆ, ಹುಟ್ಡಿದೂರ
ಕಾವೇರಿ ಕಿಚ್ಚು, ರಾಮನಗರ ಜಿಲ್ಲೆ ಬಂದ್, ಶಾಲಾ-ಕಾಲೇಜಿಗೆ ರಜೆ, ಸರ್ಕಾರಿ ಕಛೇರಿ ರಜೆಗಾಗಿ ಕಾಯುತ್ತಿರುವ ನೌಕರರು
ರಾಮನಗರ: ನಮ್ಮ ರಾಜ್ಯದ ಕೆಲ ಭಾಗಗಳಿಗೆ ಕುಡಿಯುವ ನೀರಿಗೆ ತತ್ವಾರವಾಗಿದೆ, ಮಂಡ್ಯ, ಮೈಸೂರು ಭಾಗದ ರೈತರಿಗೆ ಬೆಳೆ ಬೆಳೆಯಲು ನೀರಿಲ್ಲಾ, ಇಂತಹ ಸಂಕಷ್ಟದ ಸಮಯ
ಪ್ರತಿಕ್ರಿಯೆಗಳು