ಏನೋ ಮಾಡಲು ಹೋಗಿ ಏನು ಮಾಡಿದೆ ನೀನು...!?! ಅಂಬರೀಶಣ್ಣ
ಅಂಬಿ ಎರಡಕ್ಷರದಲ್ಲೇ ಅಡಗಿತ್ತು ಆ ಅಭಿಮಾನ, ಮಳವಳ್ಳಿ ಹುಚ್ಚೇಗೌಡ ಅಮರನಾಥ್, ಅಂಬರೀಶ್ ಆಗಿ, ಜಲೀಲನಾಗಿ, ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಕನ್ನಡಿಗರ ಮನಗೆದ್ದ ಈ ಅಂಬಿ ಈ ಜಗತ್ತಿನೊಳಗಿಲ್ಲ, ನಿಜವೇ... ಊಹೂ ನಂಬಲಸಾಧ್ಯ ಎಂದೇ ಹೇಳುತ್ತಾರೆ ಎಲ್ಲರೂ, ಆದರೂ ಸತ್ಯ ಸತ್ಯವೇ, ಸಾವು ಸಾವೇ ಜಗತ್ತಿನಲ್ಲಿ ಏನು ಬೇಕಾದರೂ ಕಾಸು ಕೊಟ್ಟು ಕೊಂಡುಕೊಳ್ಳಬಹುದು ಆದರೇ ಈ ಉಸಿರು ?
ಕಣ್ಣಿಗೆ ಕಾಣದ ಗಾಳಿ ಜಗತ್ತಿನ ತುಂಬೆಲ್ಲಾ ಹರಿದಾಡುತ್ತಿದೆಯಾದರೂ ದೇಹಕ್ಕೆ ಬೇಕಾದ ಗಾಳಿಯನ್ನು ಹಿಡಿದಿಟ್ಟುಕೊಳ್ಳಲಾಗುವುದಿಲ್ಲ.
ಆದುದರಿಂದಲೇ ಈ ಎರಡಕ್ಷರದ ಸಾವು ಎಂಬ ಪದಕ್ಕೆ ಎಲ್ಲಿಲ್ಲದ ಮನ್ನಣೆ, ಕಳ್ಳ, ಪುಂಡ, ಪೋಕರಿ, ರಾಜಮಹಾರಾಜ, ಪ್ರಧಾನಮಂತ್ರಿ, ಸಹಸ್ರಾರು ಕೋಟಿಗಳ ಒಡೆಯ ಅಷ್ಟೇ ಏಕೆ ಸತ್ಯಶೀಲ, ಮಹಾತ್ಮ ಎಂದೆನಿಸಿಕೊಳ್ಳುವವನು ಸಹ *ಆಯಸ್ಸು* ಮುಗಿದ ಒಂದು ಕ್ಷಣವೂ ಭೂಮಿ ಮೇಲಿರಲು ಅರ್ಹನಾಗಿರುವುದಿಲ್ಲ ಈ ಸಾಲಿಗೆ ಖಡಕ್ ಮಾತುಗಾರ ಕನ್ನಡದ ಕಂದ ಹಲವು ಬಿರುದಾಂಕಿತ ರೆಬೆಲ್ ಸ್ಟಾರ್ ಡಾ ಅಂಬರೀಶ್ ಇಂದು ನಮ್ಮೆಲ್ಲರ ಮುಂದೆ ಮಣ್ಣಾಗುವ ತನಕ ಒಂದು ನಿರ್ಜೀವ ವಸ್ತು, ಮಣ್ಣಾದ ನಂತರ ನೆನಪು ಅಷ್ಟೇ.
ಯಾರೂ ಏನು ಬೇಕಾದರೂ ಹೇಳಲಿ, ಟೀಕಿಸಲಿ ಕೆಲವು ವಿಷಯಗಳಲ್ಲಿ ಅದರಲ್ಲೂ ದಾನ ಧರ್ಮ ಸಿನಿಮಾ ರಂಗದ ಬಿಕ್ಕಟ್ಟು ಬಗೆಹರಿಸುವ ಬಗ್ಗೆ ಹೀಗೆ ಅನೇಕ ವಿಷಯಗಳಲ್ಲಿ ಮೇರುನಟರಾದ ಡಾ ರಾಜಕುಮಾರ್, ಡಾ ವಿಷ್ಣುವರ್ಧನ್ ಮತ್ತು ಶಂಕರ್ ನಾಗ್ ರವರನ್ನು ಮೀರಿಸುವ ಏಕೈಕ ಕಲಾವಿದ ಎಂದರೆ ತಪ್ಪಾಗಲಾರದು, ದೊಡ್ಡವರಿರಲಿ, ಚಿಕ್ಕವರಿರಲಿ ಬಡವ ಬಲ್ಲಿದನಿರಲಿ, ಅವನೆಂತ ರಾಜಕಾರಣಿಯೇ ಆಗಿರಲಿ *ಏಕ್ ಮಾರ್ ದೋ ತುಕಡಾ* ಅನ್ನೋ ಹಾಗೆ ಒಂದೇ ಮಾತು, *ಏಯ್ ಏನಿವಾಗ, ಏನ್ಮಾಡ್ತೀಯಾ ?* ಎಂಬ ಖಡಕ್ ಮಾತುಗಳೇ ಎದುರುಗಡೆಯವರನ್ನು ಅಧೀರಗೊಳಿಸಿಬಿಡುತ್ತಿದ್ದವು.
ಕನ್ನಡ ಚಿತ್ರರಂಗದಲ್ಲಿ ಬಹುತೇಕ ಅವರು ನಟಿಸಿರುವ ಚಿತ್ರಗಳಲ್ಲಿ ಕನ್ನಡಕ್ಕೆ ಸಂಬಂಧಿಸಿದ ಹಾಡುಗಳು ಇದ್ದೇ ಇರುತ್ತಿದ್ದವು, ಅವುಗಳ ಜೊತೆಗೆ ರಾಜಕಾರಣಿಗಳನ್ನು ಮತ್ತು ಅಧಿಕಾರಿಗಳನ್ನು ಬಗ್ಗು ಬಡಿಯುವ ಪಾತ್ರಕ್ಕೆ ಹೆಚ್ಚು ಮಹತ್ವ ಕೊಡುತ್ಯಿದ್ದರು. ಗಜೇಂದ್ರ ಚಿತ್ರದ ಅಕ್ಕಿಇಲ್ಲಾ, ಬೇಳೆಇಲ್ಲಾ, ಸ್ವಾತಂತ್ರ್ಯ ಬಂದಾದರೂ... ಚಕ್ರವ್ಯೂಹ ಚಕ್ರವ್ಯೂಹ ಚಕ್ರವ್ಯೂಹ, ಇನ್ನಿತರೆ ದೇಶದ ರಾಜ್ಯದ ರಾಜಕಾರಣಿಗಳ ಥ ಬಯಲಿಗೆಳದಂತ ಚಿತ್ರಗಳು.
ಏನೋ ಮಾಡಲೂ ಹೋಗಿ ಏನು ಮಾಡಿದೆ ನೀನೂ...
ಏಳುಸುತ್ತಿನಕೋಟೆ ಯ ಈ ಚಿತ್ರದ ಹಾಡು ಅವರ ಬದುಕಿನ ಕೆಲವು ಒಳ ಅಂಶಗಳನ್ನು ತೆರೆದಿಡಬಲ್ಲದು, ಅವರು ಚಟವಾಗಿಸಿಕೊಂಡ ಸಿಗರೆಟ್ ಮತ್ತು ಮದ್ಯಪಾನ ಅವರ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರಿತ್ತು ಎಂಬುದು ಎಲ್ಲರ ವಿಶ್ಲೇಷಣೆ ಆಗಿದೆ. ಆದರೂ ಅರವತ್ತಾರು ಸಾಯುವ ವಯಸ್ಸಲ್ಲ, ಅದೂ ಒಬ್ಬ ಮಹಾನ್ ಕಲಾವಿದ, ಯಾವುದೇ ಜಾತಿ, ಧರ್ಮ, ಪಕ್ಷ, ವ್ಯಕ್ತಿ ಎಲ್ಲವನ್ನೂ ಮೀರಿ ಬೆಳೆದ ವ್ಯಕ್ತಿ ಇಂದು ನಮ್ಮೊಡನಿಲ್ಲ, ಛೇ ಇದೆಂತಹ ದುರ್ವಿಧಿ.
ಅವರಿನ್ನೂ ಇರಬೇಕಾಗಿತ್ತು, ಇದೀಗ ತಾನೆ ಚಿತ್ರರಂಗದಲ್ಲಿ ಅಂಬೆಗಾಲಿಡಲು ಸಜ್ಜಾಗಿರುವ ಮಗ ಅಭಿಷೇಕ್, ಪ್ರೀತಿಯ ಮಡದಿ ಸುಮಲತಾ, ಎಂದೆಂದಿಗೂ ಬಗೆಹರಿಯದ ಕೆಲವು ಚಿತ್ರರಂಗ ಮತ್ತು ಚಿತ್ರ ನಟರ ಸಮಸ್ಯೆಗಳನ್ನು ಬಗೆಹರಿಸಲು ನೊಂದು ಬೆಂದವರಿಗೆ ಸಹಾಯ ಮಾಡಲು ಆತ ಇರಬೇಕಾಗಿತ್ತು ಆದರೆ ಸಾವು ಯಾರಪ್ಪನ ಸ್ವತ್ತು ಅಲ್ಲಾ ಇಂದು ಅವರು ನಾಳೆ ನಾವು, ನಾಡಿದ್ದು ಯಾರೋ ಹೀಗೆ ಜಗತ್ತಿನಲ್ಲಿ ಅತ್ಯಂತ ಕ್ರೂರಿ ಎಂದರೆ ಅದು ಸಾವು. ಆದರೂ ಅವರಿರಬೇಕಾಗಿತ್ತು.
ಅಂಬರೀಶ್ ಇಂದು ಇಹಲೋಕ ತ್ಯಜಿಸಿದ್ದಾರೆ, ಅವರನ್ನು ಎಲ್ಲಿ ಮಣ್ಣು ಮಾಡಬೇಕು, ಸುಡಬೇಕಾ ? ಹೂಳಬೇಕಾ ? ದೇಹದಾನ ಮಾಡಬೇಕಾ ? ಅಭಿಮಾನಿದ ಜೊತೆಗೆ ಬರಹಗಾರನಾದ ನಾನು ಓದುಗರಾದ ನೀವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ಅದಕ್ಕೆಂದೇ ಬೇರೆಯವರಿದ್ದಾರೆ, ನಮ್ಮಗಳ ಕೆಲಸವಿಷ್ಟೆ ಅವರ ಆತ್ಮಕ್ಕೆ ಚಿರಶಾಂತಿ ದೊರಕಲು ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಕಾಣದ ಆ ಭಗವಂತನಲ್ಲಿ ಪ್ರಾರ್ಥಿಸುವುದರ ಜೊತೆಗೆ ಆ ಕಲಾವಿದನ ಹೆಸರು ಶಾಶ್ವತವಾಗಿ ನೆಲೆಯೂರಬೇಕಾದರೆ ತೆಗೆದುಕೊಳ್ಳಬಹುದಾದ ನಿರ್ಧಾರವಷ್ಟೇ ನಮ್ಮ ಕೆಲಸ, ಆದುದರಿಂದ ನಿಂತಲ್ಲೇ ಆತ್ಮಾಭಿನಾದಿಂದ, ಅವರಿಗೆ ಗೌರವ ಸಮರ್ಪಿಸೋಣಾ.
(*ಆತ್ಮೀಯರೇ ವಯುಕ್ತಿಕವಾಗಿ ನಾನೊಬ್ಬ ಬಹುದೊಡ್ಡ ಅಭಿಮಾನಿ. ನಾನು ಪಾಂಡವಪುರ ತಾಲ್ಲೂಕಿನಲ್ಲಿ ಹುಟ್ಟಿ ಬೆಳೆದಿದ್ದಕ್ಕೋ ಅಥವಾ ಅವರು ದುರಾಡಳಿತ ಆಡಳಿತಾಧಿಕಾರಿಗಳ ವಿರುದ್ಧ ಸಿಡಿದೇಳುವ ಪಾತ್ರಗಳಲ್ಲಿ ನಟಿಸಿದ್ದಕ್ಕೋ ಗೊತ್ತಿಲ್ಲ, ಅವರನ್ನು ಕಂಡರೆ ಎಲ್ಲಿಲ್ಲದ ಅಭಿಮಾನ. ರಾತ್ರಿ ಪೂರಾ ನಿದ್ರೆ ಬರಲಿಲ್ಲ, ಆ ಸಮಯದಲ್ಲಿ ಅಂದರೆ ೨೫/೧೧/೨೦೧೮ ಬೆಳಿಗ್ಗೆ ಒಂದು ಗಂಟೆಯ ಸಮಯದಲ್ಲಿ ಬರೆದ ಲೇಖನ.*)*
ಗೋ ರಾ ಶ್ರೀನಿವಾಸ...
ಮೊ:9845856139
Recent news in karnataka »
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ರಾಮನಗರ, ಫೆ. 02 : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ
ಸಂವಿಧಾನ ಜಾಗೃತಿ ಜಾಥಾ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ
ಪ್ರತಿಕ್ರಿಯೆಗಳು