Tel: 7676775624 | Mail: info@yellowandred.in

Language: EN KAN

    Follow us :


ಜನಸಂಖ್ಯೆ ಏರಿಕೆ ಪರಿಸರಕ್ಕೆ ಮಾತ್ರ ಮಾರಕವಲ್ಲ-ಅಭಿವೃದ್ಧಿ ಶೀಲ ದೇಶಗಳಿಗೂ ಮಾರಕ.....

Posted date: 10 Jul, 2018

Powered by:     Yellow and Red

ಜನಸಂಖ್ಯೆ ಏರಿಕೆ ಪರಿಸರಕ್ಕೆ ಮಾತ್ರ ಮಾರಕವಲ್ಲ-ಅಭಿವೃದ್ಧಿ ಶೀಲ ದೇಶಗಳಿಗೂ ಮಾರಕ.....

ಏನು ಮಾಡುವುದು, ಈ ಜನಸಂಖ್ಯೆ ನಿಯಂತ್ರಣ ವಿಚಾರ ಒಂದು ರೀತಿಯ ಬಿಡಿಸಲಾಗದ ಕಗ್ಗಂಟು. ಯಾರಿಗೆ ಹೇಳೋದು ಯಾರಿಗೆ ಬಿಡೋದು, ಮಾನವ ಸಂಪನ್ಮೂಲವೇ ಜಗತ್ತು. ಆದರೂ ಇತಿಮಿತಿ ಆರೋಗ್ಯಕರ, ಈಗಾಗಲೇ ದೇಶದಲ್ಲಿ ಜನಸಂಖ್ಯೆ 125 ಕೋಟಿ ಮೀರಿದೆ. 130 ಕೋಟಿ ಮುಟಟುತ್ತಿದೆ. ಅಂಕಿ ಅಂಶಗಳ ಪ್ರಕಾರ, ಸರಿ ಇದನ್ನು ನಿಯಂತ್ರಿಸುವ ಕಥೆ ಹೇಗೆ? ಈ ಭೂಮಂಡಲದ ಮೇಲೆ ವಾಸ ಮಾಡುವ ಸರ್ವಜನತೆಗೂ ಬದುಕಿ ಬಾಳುವ ಆಸೆ, ತಮ್ಮ ತಮ್ಮ ಮಕ್ಕಳಿಗೆ ಮದುವೆ ಮಾಡಿ, ಮಕ್ಕಳು ಮೊಮ್ಮಕ್ಕಳನ್ನು ಪಡೆದು ಮನೆತನ-ವಂಶ ಬೆಳೆಯಬೇಕು ಎನ್ನುವ ಮಹದಾಸೆ ಇದೆ. ಇದು ಎಲ್ಲರಿಗೂ ತಿಳಿದಿರುವ ಸತ್ಯ ಸಂಗತಿ. ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಕೈಹಾಕುವ ಸಾಹಸದ ಕೆಲಸ ಕಷ್ಟವೇ ಹೌದು. ಜೊತೆಗೆ ಪ್ರಕೃತಿ ತಾನೆ, ಸೃಷ್ಟಿ, ಇದನ್ನು ತಡೆಯಲಾಗದು, ಪ್ರಕೃತಿ/ಸೃಷ್ಠಿಗೆ ಯಾರ್ರೀ ಹೊಣೆ ಅವೆಲ್ಲ ದೈವ ನೇಮಕ ಎನ್ನುತ್ತಾರೆ ಜನರು. ಹಾಗಾದ್ರೆ ನಿಮ್ಗೆ ಮಕ್ಕಳು ಬೇಡವೇನ್ರಿ, ಮೊಮ್ಮಕ್ಕಳು ಬೇಡವೇನ್ರಿ, ಮನೆ ಬೆಳೆಯೋದು ಬೇಡವೇನ್ರಿ, ಇಷ್ಟೆಲ್ಲ ಸಂಪಾದನೆ ಮಾಡಿ ಏನ್ ಮಾಡ್ತೀರಿ, ಬೀದಿ ಬಿಕಾರಿಗಳಿಗೆ, ಭಿಕ್ಷುಕರಿಗೆ ಅಲ್ಲಿ ಇಲ್ಲಿ ಮರದಡಿಯಲ್ಲಿ, ಜೋಪಡಿಯಲ್ಲಿ ಪಾಳುಮನೆ ದೇವಸ್ಥಾನ, ಅಂತ ಇಂತ ಕಡೆಗಳಲ್ಲಿ ವಾಸ ಮಾಡುವ ಜನರೆಲ್ಲ ಮಕ್ಕಳನ್ನು ಇತಿಮಿತಿ ಇಲ್ಲದೆ ಹಡೆದು ಬೀದಿ ಬೀದಿಗಳಲ್ಲಿ ಅಲೆಮಾರಿಗಳಾಗಿ, ಭಿಕ್ಞುಕರಾಗಿ ಅಲೀತಾವೆ. ಅವರಂತವರೇ ಮಕ್ಕಳನ್ನು ಪಡಿತಾರೆ ಇನ್ನು ನಮ್ಗೆ ನಮ್ಮ ಮಕ್ಕಳಿಗೆ ಮಕ್ಕಳು ಬೇಡವೇನ್ರೀ, ಇದು ಜನಮನದ ವಾಡಿಕೆ ಮಾತು. ಆದರೂ ಜನಸಂಖ್ಯೆಯ ಏರಿಕೆ ದೇಶಕ್ಕೆ ಮಾರಕ-ಏನು ಮಾಡಬಹುದು ಚಿಂತನೆಯೂ ಇಲ್ಲಿ ಪ್ರಸ್ತುತ.
ಈ ಜನಸಂಖ್ಯೆ ನಿಯಂತ್ರಣ ವಿಚಾರವಾಗಿ ಈ ಹಿಂದೆ 1985ರ ಕಾಲಘಟ್ಟದಲ್ಲಿ ಇರಬಹುದು, ಇಡೀ ದೇಶದಲ್ಲೇ ‘ಜನಸಂಖ್ಯಾ ಸ್ಫೋಟ’ ಎಂಬ ಒಂದು ದೊಡ್ಡ ಆಂದೋಲನವೇ ನಡೆದು ಸರ್ಕಾರದ ವತಿಯಿಂದಲೇ ಆರೋಗ್ಯ ಇಲಾಖೆಯಿಂದ ಘೋಷಣೆಗಳು ಕರಪತ್ರ-ಭಿತ್ತಿ ಪತ್ರಗಳು ಹಂಚಿ ಇಡೀ ದೇಶದಾದ್ಯಂತ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರುಗಳು, ಆರೋಗ್ಯ ಸಹಾಯಕಿಯರುಗಳು ಪ್ರತೀ ಜಿಲ್ಲೆ, ತಾಲ್ಲೂಕು, ಗ್ರಾಮಗಳಲ್ಲಿ ಸಭೆಗಳನ್ನು ಮಾಡಿ, ಜಾಗೃತಿ ಬೀದಿ ನಾಟಕಗಳನ್ನು ಮಾಡಿ ಜನರಿಗೆ ತಿಳುವಳಿಕೆ ಮಾಡಿಸಿ ‘ಆರತಿಗೊಂದು-ಕೀರ್ತಿಗೊಂದು ಎರಡೇ ಸಾಕು ಎನ್ನುವ ಘೋಷಣೆ ಎಬ್ಬಿಸಿ ಒಂದು ಬೇಕು-ಎರಡು ಸಾಕು ಎಂದು ಸಾವಿರಾರು ಜನರಿಗೆ ಹೆಂಗಸರಿಗೆ-ಗಂಡಸರಿಗೆ, ಟುಬಿಕ್ಟಿಮಿಯೋ-ವಾಸೆಕ್ಟಮಿಯೋ ಎಂಬ ನಿಯಂತ್ರಣ ಆಪರೇಷನ್ (ಶಸ್ತ್ರ ಚಿಕಿತ್ಸೆ) ಮಾಡಿ ಜನಸಂಖ್ಯಾ ಸ್ಫೋಟ ನಿಯಂತ್ರಣ ಕಾಯಿದೆ ಹೊರಡಿಸಿ ಸ್ವಲ್ಪ ಮಟ್ಟಿಗೆ ಜನಸಂಖ್ಯೆ ತಡೆಗಟ್ಟಲಾಗಿತ್ತು. ಆ ಕಾಲಘಟ್ಟದಲ್ಲಿ ಯಾವ ಆಸ್ಪತ್ರೆಗಳಲ್ಲಿ ನೋಡಿ ಸಾವಿರಾರು ಮಂದಿ ಬಾಣಂತಿಯರಿಗೆ, ಹೆಂಗಸರುಗಳಿಗೆ ಬಹಳಷ್ಟು ಮಂದಿ ಗಂಡಸರಿಗೆ ಆಪರೇಷನ್ ಕಾರ್ಯದ ಜೊತೆಗೆ, ಹಣ, ಲಾಟರಿ ಟಿಕೆಟ್ ಮತ್ತೆ ಇನ್ನು ಏನೇನೋ ಗಿಫ್ಟ್ ಕೊಡುವ ಮೂಲಕ ಜನಸಂಖ್ಯೆ ನಿಯಂತ್ರಣ ಕಾರ್ಯ ಹೆಗ್ಗಿಲ್ಲದೇ ನಡೆದಿತ್ತು. ಆ ವೇಳೆಯಲ್ಲಿ ‘ಚಿಕ್ಕ ಸಂಸಾರ ಚೊಕ್ಕ ಸಂಸಾರ’, ‘ನಾವಿಬ್ಬರೆ-ನಮಗೆ ಇಬ್ಬರು’ ಎಂಬ ಗೋಡೆ ಬರಹಗಳು ಎಲ್ಲೆಲ್ಲಿಯೂ ಕಾಣುತ್ತಿದ್ದವು. ಆ ನಂತರ ದಿನಗಳಲ್ಲಿ ಹೆಣ್ಣಾಗಲಿ/ಗಂಡಾಗಲಿ ಒಂದೇ ಸಾಕು ಎನ್ನುವ ಘೋಷಣೆಯು ಮೊಳಗಿತು. ಇದರ ಸದುಪಯೋಗ ಇಡೀ ದೇಶದಲ್ಲೇ ಬಹಳಷ್ಟು ಮಂದಿ ಪಡೆದರು. ಮನೆಯ ಯಜಮಾನರುಗಳು ಕೂಡ ಒಂದು ಗಂಡು, ಒಂದು ಹೆಣ್ಣು ಆದರೆ ಅದಕ್ಕೆ ಸಮ್ಮತಿ ನೀಡಿ ಆಪರೇಷನ್‍ಗೆ ಒಪ್ಪಿಗೆ ನೀಡಿ ನಿಯಂತ್ರಣ ಕಾರ್ಯ ನಡೆಯಿತು. ಇದರ ಬಗ್ಗೆ ನಾನೂ ಕೂಡ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ವಿಭಾಗ ಮಾಲಿಕೆಯಲ್ಲಿ ಲಾವಣಿ-ಜನಪದ-ಕಲಾವಿದನಾಗಿ-ಜಾಗೃತಿ ಬೀದಿನಾಟಕ ನಿರ್ದೇಶಕನಾಗಿ ಇಡೀ ಬೆಂಗಳೂರು ಗ್ರಾಮಾಂತರ 08 ಜಿಲ್ಲೆಗಳಲ್ಲೂ ಪ್ರದರ್ಶನ ನೀಡಿದ್ದೆ. ಆಗ ಆರೋಗ್ಯ ಇಲಾಖೆಯ ಕಾರ್ಯ ಚಟುವಟಿಕೆ ಇಡೀ ದೇಶವ್ಯಾಪ್ತಿ ನಡೆಯಿತು. ಇದು ಎಲ್ಲಾ ಜನಸಾಮಾನ್ಯರಿಗೆ ಗೊತ್ತಿರುವ ವಿಚಾರ ಎಂದುಕೊಂಡಿದ್ದೇನೆ. ಆದರೂ ಅತಿಯಾದದ್ದು ಮಿತಿಯಾಗಲೇಬೇಕು, ಎಲ್ಲಾ ವಿಚಾರದಲ್ಲೂ ಆರೋಗ್ಯಕರ.
ಆದರೆ ಈಗ ಬಂಧುಗಳೇ ಇದೇ ಜನಸಂಖ್ಯೆಯ ಏರಿಕೆ ಮತ್ತೆ ದೇಶವ್ಯಾಪ್ತಿ ನಾನಾ ರೂಪದಲ್ಲಿ ಕಾಡುತ್ತಿದೆ. ಏರಿದ ಜನಸಂಖ್ಯೆಯನ್ನು ಕಾಪಾಡಲು ಪರಿಸರ/ಕಾಡು ಮೇಡುಗಳು ಹಾಳು, ಕೃಷಿ ಭೂಮಿಗಳು ಹಾಳು, ಆಹಾರ ಸಮಸ್ಯೆ, ಉದ್ಯೋಗ ಸಮಸ್ಯೆ, ಸೂರು/ವಸತಿ ಸಮಸ್ಯೆ, ಸಾರಿಗೆ ವ್ಯವಸ್ಥೆ ಸಮಸ್ಯೆ, ಶಿಕ್ಷಣ ಸಮಸ್ಯೆ, ಏರಿದ ಜನಸಂಖ್ಯೆಯಿಂದಾಗಿ ಆರೋಗ್ಯ ಸಮಸ್ಯೆ ದಟ್ಟಣೆ ವಾಹನಗಳ ಅಪಘಾತ ಸಮಸ್ಯೆ, ಇತಿಮಿತಿ ಇಲ್ಲದ ಜನಸಂಖ್ಯೆಯ ಅವಾಂತರ ಹಳ್ಳಿಗಳಿಂದ ಹಿಡಿದು ದಿಲ್ಲಿಗಳ ವರೆಗೂ ನೋಡಲಾಗದ ಕಸದ ರಾಶಿ ಸಮಸ್ಯೆ, ನೀರಿಗೂ ಸಮಸ್ಯೆ-ಹೀಗೆ ಬಂಧುಗಳೇ ಇಡೀ ದೇಶವೇ ಮಿತಿಮೀರಿ ಏರಿದ ಜನಸಂಖ್ಯೆಯಿಂದ ನಮ್ಮನ್ನಾಳುವ ಸರ್ಕಾರಗಳು ಕೂಡ ಕಣ್ಣು ಕಣ್ಣು ಬಿಡುವ ಹಾಗಿದೆ. ಇಡೀ ದೇಶದಲ್ಲಿ ಅನ್ನದಾತ ರೈತರ ಸಮಸ್ಯೆ ಬಗೆಹರಿಯದ ಸಮಸ್ಯೆ, ಆಧುನಿಕತೆಯ ಈ ತಂತ್ರಜ್ಞಾನ ವ್ಯವಸ್ಥೆ ಒಂದು ಪರ್ಸೆಂಟ್ ಸುಖ ನೀಡಿ ಪೂರಕವಾದರೆ ಇನ್ನು ಉಳಿದಂತೆ ಒಂಭ್ತು ಪರ್ಸೆಂಟ್ ಮಾರಕವಾಗುತ್ತಿದೆ. ತಂತ್ರಜ್ಞಾನ ವಿಜ್ಞಾನ ಮಾನವನ ಬದುಕಿಗೆ ವಿನಾಶಕಾರಿಯೇ ಹೊರತು ಬದುಕುಳಿಸುವ ಉಪಯೋಕಾರಿ ಅಲ್ಲ. ಸದ್ಯಕ್ಕೆ ಈ ತಂತ್ರಜ್ಞಾನ ಜನತೆಗೆ ಉಪಯೋಗ ಕಾಣುತ್ತಿದೆ. ಆದರೆ ಅದರ ಮತ್ತೊಂದು ಮುಖ ವಿನಾಶವೇ ಹೌದು. ನಮ್ಮ ದೇಶದ ಭವಿಷ್ಯದ ಮಕ್ಕಳು ಯುವ ಪೀಳಿಗೆ ದೀರ್ಘಕಾಲ ಬದುಕಿ ಬಾಳುವ ನಿರೀಕ್ಷೆ ಹುಸಿ ಎಂದು ಕಾಣಿಸುತ್ತದೆ. ಒಟ್ಟಾರೆ ಹೇಳುವುದಾದರೆ ಮನುಕುಲ ಮುಂದೆ ಮುಂದೆ ವಿನಾಶಕಾರಿಯತ್ತ ಸಾಗುತ್ತಿದೆಯೇ ಹೊರತು ಬದುಕುಳಿಯುವ ನಡೆ ಕಾಣುತ್ತಿಲ್ಲ. ನಮ್ಮ ಪ್ರಜಾಪ್ರಭುತ್ವ ರಾಜಕೀಯವು ಹದಗೆಡುತ್ತಿದೆ. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಕ್ಕಿತು ಎನ್ನುವಂತೆ ನಮ್ಮನ್ನಾಳುವ ರಾಜಕೀಯ ನಾಯಕರುಗಳು ಸೇಡಿನ ರಾಜಕಾರಣ ಮಾಡಿ ದೇಶವನ್ನು ಸುಡುವುದರ ಜೊತೆಗೆ ತಾವು ಸುಟ್ಟು ಹೋಗುತ್ತಾರೆ. ಇದಕ್ಕೊಂದು ಕಥೆ ಉದಾ:- ಹಾವಿನ ಸ್ನೇಹ ಮಾಡಿ ಸುಟ್ಟು ಹೋದ ಮರ ಎಂಬ ಪಾಠ ಹೀಗಾಗಿ ದೇಶ ವಿನಾಶದತ್ತ ಸಾಗುತ್ತಿದೆ. ಜನಸಂಖ್ಯೆ ನಿಯಂತ್ರಣದ ಬಗ್ಗೆ ಮತ್ತೊಮ್ಮೆ ಚಿಂತನೆ ನಡೆಸಬೇಕಿದೆ.

-ದೇವರಹಳ್ಳಿ ಚೌ.ಪು.ಸ್ವಾಮಿ
ಎಂ.ಎ., ಬಿ.ಇಡಿ.,
ಚನ್ನಪಟ್ಟಣ

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ

ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.


<

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ

ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್

ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ  ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ

ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ

Top Stories »  


Top ↑