Tel: 7676775624 | Mail: info@yellowandred.in

Language: EN KAN

    Follow us :


“ಜಗತ್ತಿಗೆ ಜನರೇ ಆಭರಣ-ಆದರೂ ಆಗಬೇಕು ಜನ ನಿಯಂತ್ರಣ”     

Posted date: 18 Jul, 2018

Powered by:     Yellow and Red

“ಜಗತ್ತಿಗೆ ಜನರೇ ಆಭರಣ-ಆದರೂ ಆಗಬೇಕು ಜನ ನಿಯಂತ್ರಣ”     

ಜನಸಂಖ್ಯಾ ಸ್ಫೋಟ ಜಗತ್ತಿಗೆ ಮಾರಕ-ಆದರೆ ನಿಯಂತ್ರಣದ ಬಗೆ....? ವಿಶ್ವ ಜನಸಂಖ್ಯಾ ದಿನದ ಸಂಬಂಧವಾಗಿ ಓದುಗ ನಾಗರೀಕ ಬಂಧುಗಳಿಗೆ ಈ ಲೇಖನ. ಬಂಧುಗಳೇ ಜನರಿಂದ ಜಗತ್ತೋ ಅಥವಾ ಜನರಿಗಾಗಿ ಜಗತ್ತೋ? ಜಗತ್ತಿಗೆ ಜನರ ಅಗತ್ಯವೋ ಅಥವಾ ಜನರಿಗೆ ಜಗದ ಅಗತ್ಯವೋ? ಏನಿದು ರಹಸ್ಯ.
ಜನರಿದ್ದರೇನೇ ಜಗತ್ತು ನಿಜ. ಆದರೆ ಜಗತ್ತು/ಈ ಪ್ರಪಂಚ/ಈ ಭೂಮಂಡಲ/ವಿಶ್ವ ಎನ್ನುವುದು ಉಳಿಯಬೇಕಾದರೆ ಮಿತಿಮೀರಿ ಏರುತ್ತಿರುವ ಜನಸಂಖ್ಯೆ ಇಳಿದಾಗಲೇ, ಇಲ್ಲವಾದರೆ ಜಗತ್ತು ನರಕವಾಗುತ್ತದೆ. ಈ ಆಲೋಚನೆ ಎಲ್ಲರಲ್ಲೂ ಸಹಜವಾಗಿಯೇ ಮೂಡುತ್ತದೆ ಸರಿ. ಆದರೆ, ನಿಯಂತ್ರಿಸುವ ಬಗೆ ಹೇಗೆ? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಷ್ಟು ಘೋಷಣೆಗಳು, ಭಾಷಣಗಳು ಮಾಡಿದರೆ ತಡೆಯಬಹುದು. ಎಷ್ಟು ಭಿತ್ತಿ ಚಿತ್ರಗಳು ಗೋಡೆ ಬರಹಗಳು, ಜಾಹೀರಾತುಗಳು ನಡೆಸಿ ಜಾಗೃತಿ ಮೂಡಿಸಿಲ್ಲ. ಇದಕ್ಕಾಗಿಯೇ 1985ರ ದಶಕದಲ್ಲೇ ‘ಜನಸಂಖ್ಯಾ ಸ್ಫೋಟ’ ಎಂಬ ದೊಡ್ಡ ಆಂದೋಲನವೇ ನಡೆಯಿತು. ಸರ್ಕಾರ ಇದರ ಬಗ್ಗೆ ಬಹಳ ಎಚ್ಚರಿಕೆ ವಹಿಸಿ ಆರೋಗ್ಯ ಇಲಾಖೆಯಿಂದ ಜನಸಂಖ್ಯಾ ನಿಯಂತ್ರಣಕ್ಕಾಗಿ ಗರ್ಭ ನಿರೋಧಕ ಉಪಕರಣಗಳು, ಶಸ್ತ್ರ ಚಿಕಿತ್ಸೆಗಳು, ಕಲಾವಿದರುಗಳಿಂದ ಜಾಗೃತಿ ಬೀದಿ ನಾಟಕಗಳು ಹೀಗೆ ಹಲವಾರು ವಿಧಾನಗಳಿಂದ ವಿಶ್ವವೂ ಸೇರಿದಂತೆ ದೇಶದಾದ್ಯಂತ ಬಹುದೊಡ್ಡ ಆಂದೋಲನವೇ ನಡೆಯಿತು. ಆಗ ‘ಒಂದು ಮಗು ಬೇಕು ಎರಡು ಸಾಕು’ ‘ಆರತಿಗೊಂದು ಕೀರ್ತಿಗೊಂದು’ ‘ನಾವಿಬ್ಬರು-ನಮಗಿಬ್ಬರು’ ‘ಹೆಣ್ಣಾಗಲಿ-ಗಂಡಾಗಲಿ ಒಂದೇ ಮಗು ಸಾಕು’ ‘ಚಿಕ್ಕ ಸಂಸಾರ-ಚೊಕ್ಕ ಸಂಸಾರ’ ‘ಚಿಕ್ಕ ಸಂಸಾರ-ಸುಖಕ್ಕೆ ಆಧಾರ’ ಇಂತ ಅನೇಕ ಘೋಷಣೆಗಳೊಡನೆ ಜನಸಂಖ್ಯಾಸ್ಫೋಟದ ಆಂದೋಲನ ನಡೆದು ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಪ್ರತಿ ಹಳ್ಳಿ-ಹಳ್ಳಿಗಳು, ತಾಲ್ಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳಲ್ಲಿ ನಡೆಸಿ ಆ ಕಾಲಘಟ್ಟದಲ್ಲಿ (1985-90ರ ದಶಕದಲ್ಲಿ) ಹೆಚ್ಚಿನ ಮಟ್ಟದಲ್ಲಿ ಗರ್ಭ ನಿರೋಧಕ ಆಪರೇಶನ್, ಮಹಿಳೆಯರು-ಪುರುಷರಿಗೆ ಸೇರಿದಂತೆ ಶಸ್ತ್ರ ಚಿಕಿತ್ಸೆ ನಡೆಸಿ ಸ್ವಲ್ಪ ಮಟ್ಟಿಗೆ ಜನಸಂಖ್ಯೆ ನಿಯಂತ್ರಣಗೊಂಡಿತ್ತು ಎನ್ನುತ್ತಾ ಅದೇ ವೇಳೆಯಲ್ಲಿ 1989ರಲ್ಲಿ ಮೊದಲ ಬಾರಿಗೆ ‘ವಿಶ್ವ ಜನಸಂಖ್ಯಾ ದಿನ’ ಎಂದು ಆಚರಿಸಿ-ಆಚರಣೆಗೆ ತಂದು ಪ್ರತಿ ವರ್ಷವೂ ಆಚರಣೆಯಲ್ಲಿ ಸಾಗಿದೆ. ಆದರೆ ಜನಸಂಖ್ಯೆ ನಿಯಂತ್ರಣ ಅಥವಾ ಮಕ್ಕಳು ಜನಿಸುವ ಈ ಸೃಷ್ಠಿ ಕ್ರಿಯೆಯ ವ್ಯವಸ್ಥೆಗೆ ಕಡಿವಾಣ ಹಾಕುವ ಬಗೆ ಹೇಗೆ...? ಇದು ಜಟಿಲವಾದ ಸಮಸ್ಯೆ.
ಕಾರಣವಾದರೂ ಹೀಗಿದೆ. ಮಾನವ ಸಂಪನ್ಮೂಲವೇ ಜಗತ್ತು ಅಂದರೆ ಜನರು. ಆದರೆ ಮಕ್ಕಳು ಹುಟ್ಟುವಿಕೆಯಲ್ಲಿ/ಹಡೆಯುವ ಪ್ರಕ್ರಿಯೆಯಲ್ಲಿ ‘ಲಿಮಿಟ್’ ತಡೆ ಬೇಕು. ಮಕ್ಕಳನ್ನು ಪಡೆಯುವ ಪ್ರಮಾಣ ಕಡಿಮೆಯಾಗಬೇಕು, ಒಂದು ಕುಟುಂಬಕ್ಕೆ ಅಂದರೆ ಗಂಡ-ಹೆಂಡತಿಗೆ ಒಂದೇ ಮಗು ಸಾಕು. ಇದೇ ಈಗ ಎಲ್ಲರ ಮುಂದೆ ಇರುವ ಸವಾಲು. ಈಗಾಗಲೇ ನಮ್ಮ ಭಾರತದಲ್ಲಿ 130 ಕೋಟಿಗೆ ಜನಸಂಖ್ಯೆ ಇದೆ ಎನ್ನುವ ಕೂಗು ಕೇಳಿ ಬರುತ್ತಿದೆ. ಒಂದೇ ಒಂದು ಎಂದರೂ-ಇಬ್ಬರಿಗೊಬ್ಬರು ಎಂದರೂ ಪ್ರತೀ ವರ್ಷ ಎಷ್ಟಾಗಬಹುದು ಆಲೋಚನೆ ಮಾಡಿ. ಜೊತೆಗೆ ಸಮಾಜದಲ್ಲಿ ಬಹಳ ಮುಖ್ಯವಾಗಿರುವ ಸಮಸ್ಯೆಯ ಕಥೆ ಅಂದರೆ ಯಾರಿಗೆ ಮಕ್ಕಳು ಬೇಡ? ಯಾರ ಮಕ್ಕಳಿಗೆ ಮದುವೆ ಬೇಡ? ಯಾರಿಗೆ ತಮ್ಮ ಮನೆತನ ವಂಶ ಬೆಳೆಯೋದು ಬೇಡ? ಎಂಬ ಮನಸ್ಸಿದೆ, ಎಲ್ಲರಿಗೂ ಮಕ್ಕಳು ಬೇಕು. ಮದುವೆ ಮಾಡಬೇಕು, ಮತ್ತೆ ಮಕ್ಕಳು ಪಡೆಯಬೇಕು-ಇದೇ ಜಗತ್ತು. ಆದರೆ ಏರುತ್ತಿರುವ ಜನಸಂಖ್ಯೆ ಕಡಿಮೆ ಮಾಡಲೇಬೇಕು, ಇದಕ್ಕೆ ಜ್ಞಾನ ವಿಜ್ಞಾನದ ಈ ಆಧುನಿಕತೆಯ ತಂತ್ರಜ್ಞಾನದಿಂದ ಹೇಗಾದರೂ ಮಾಡಿ ಜನಸಂಖ್ಯೆ ಕಡಿಮೆ ಮಾಡಬೇಕು ಎನ್ನುವುದು ಸತ್ಯ-ಒಪ್ಪಬೇಕು. ಆದರೆ ಏನೇ ಕನಿಷ್ಠ ಅಂದರೂ ಒಂದೊಂದೇ ಅಂದರೂ ಸಂಖ್ಯೆ ಏರುತ್ತಲೇ ಹೋಗುತ್ತದೆ. ಇದು ಪ್ರಕೃತಿ/ಸೃಷ್ಠಿ, ಹೆಣ್ಣು-ಗಂಡಿನ ಸಂಗಮ ಸಮಸ್ಯೆ. ಆದರೂ ಒಂದೇ ಸಾಕು ಎಂದು ತಡೆಗೋಡೆ ಹಾಕಿದರೂ ಅದೇ ಕತೆ ಒಂದಾದರೂ ಮಗು ಹೆಣ್ಣಾಗಲಿ/ಗಂಡಾಗಲಿ ಬೇಕೇ ಬೇಕಲ್ಲ. ಆ ಮೇಲೆ ಇನ್ನೊಂದು ಸಮಸ್ಯೆ ಉದ್ಭವವಾಗುತ್ತದೆ. ಏನೋ ಮಾಡಲೋಗಿ ಏನೋ ಆಯಿತು ಅನ್ನೋ ಕಥೆ ಶುರುವಾಗುತ್ತದೆ. ಗಂಡಿನ ಸಮಸ್ಯೆ ಅಥವಾ ಹೆಣ್ಣಿನ ಸಮಸ್ಯೆ ಪ್ರಾರಂಭವಾಗುತ್ತದೆ. ಆ ಮೇಲೆ ಮತ್ತೊಂದು ಯೋಚಿಸಿ ಜಗತ್ತಿಗೆ ಜನ ಬೇಕೇ ಬೇಕಲ್ಲ. ಆದರೂ ನೀವು ಬರಹಗಾರನಾದ ನನಗೆ ಪ್ರಶ್ನೆ ಕೇಳಬಹುದು. ಅಲ್ಲಾ ರೀ ಜನ ಬೇಕು ಅಂತ ಹುಟ್ಟಿಸುತ್ತಾ ಇರಿ ಅನ್ನಬೇಕಾ ಎಂದು ನಿಮ್ಮ ಪ್ರಶ್ನೆ. ಇಲ್ಲ, ಒಂದೇ ಸಾಕು ಆದರೂ ಏರುತ್ತದಲ್ಲ ಇದೊಂದು ರೀತಿಯ ಕಗ್ಗಂಟಿನ ಸಮಸ್ಯೆ-ಜನ ಮಾತಾಡೋದು ಹೀಗೆ ಅಯ್ಯೋ, ಭೂಮಿ ತಾಯಿ ಭಾರ ಹೊರಲಾರಳು, ಜನಜಾಸ್ತಿ ಆದರು, ಎಲ್ಲರಿಗೂ ಅನ್ನ, ಬಟ್ಟೆ, ಕೆಲಸ, ಮನೆ-ಮಟ ಎಲ್ಲಿಂದ ತರೋದು ದೇವರೆ ಅಂತಾರೆ. ಆದರೆ ಮಾಡೋದು ಮಾಡ್ತಾ ಇರ್ತಾರೆ, ಬಾಯಲ್ಲಿ ಹೇಳೋದು ಸುಲಭ, ಆದರೆ ಆಚರಣೆಗೆ ತರೋದು ಕಷ್ಟ. ಸ್ವಾಮಿ ಹುಟ್ಟು-ಸಾವು ಈ ಎರಡು ವಿಷ್ಮಯಕಾರಿ ಗುಟ್ಟು ಮಾನವರಾದ ನಮ್ಮದಲ್ಲ, ನಮಗೆ ಕಾಣದಂತಿರುವ ಆ ಪ್ರಕೃತಿ/ಸೃಷ್ಠಿ/ದೈವ, ಹೆಣ್ಣು-ಗಂಡು ಎನ್ನುವ ಎರಡು ವಸ್ತುಗಳಲ್ಲಿ ಅವನೇ ಇಟ್ಟಿರುವ ಆಸೆ/ಆಕರ್ಷಣೆ ಎಲ್ಲಾ ಜೀವರಾಶಿಗಳಲ್ಲೂ ಇದೆ. ಆದರೆ ನಾವು ನಿಯಂತ್ರಣ ಮಾಡುವುದಕ್ಕಿಂತ ಸೃಷ್ಠಿಕರ್ತನೇ ನಿಯಂತ್ರಣ ಮಾಡಬೇಕು. ಈಗ ನೋಡುತ್ತಿದ್ದೇವಲ್ಲ ಯಾವುದ್ಯಾವುದೋ ರೀತಿಯಲ್ಲಿ ಜನರ ಮಾರಣಹೋಮ/ಸಾವು ಆಗುತ್ತಿದೆ ಇದೇ ನಿಯಂತ್ರಣ. ನಾವು ಮಾಡಿಕೊಳ್ಳುವ ನಿಯಂತ್ರಣ ತಾತ್ಕಾಲಿಕ, ವೈದ್ಯಕೀಯ ಚಿಕಿತ್ಸೆ ಬಳಸಿ ಮಾಡಲೋಗುತ್ತೇವೆ. ಅದು ನಿಯಂತ್ರಣವೂ ಆಗುತ್ತದೆ. ಅಪಾಯವೂ ಆಗುತ್ತದೆ. ಇದರ ಬಗ್ಗೆ ಬಿಡಿಸಲಾಗದ ಒಗಟು ಭಾರತದಲ್ಲಿ ಜಾತಿ ನಿರ್ಮೂಲನೆ-ಜನಸಂಖ್ಯಾ ನಿಯಂತ್ರಣ ಈ ಎರಡೂ ಕಾರ್ಯಕ್ರಮಗಳು ಕಷ್ಟ ಸಾಧ್ಯವೂ ಹೌದು, ಇದು ನನ್ನೊಬ್ಬನ ಆಲೋಚನೆಯಲ್ಲ, ಸಮಸ್ತರ ಮನಸ್ಸಿನಲ್ಲಿ ಹುಟ್ಟುವ ಆಲೋಚನೆಯೂ ಹೌದು. ಈಗ ಹುಟ್ಟು-ಸಾವು ಎನ್ನುವ ಎರಡು ಪದಗಳ ಜೊತೆಗೆ ‘ನಿಯಂತ್ರಣ’ ಎನ್ನುವ ಕೂಗು ಏಳಬೇಕು-ನಮಸ್ಕಾರ.

-ದೇವರಹಳ್ಳಿ ಚೌ.ಪು.ಸ್ವಾಮಿ
ಚನ್ನಪಟ್ಟಣ
 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ

ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.


<

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ

ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್

ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ  ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ

ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ

Top Stories »  


Top ↑