Tel: 7676775624 | Mail: info@yellowandred.in

Language: EN KAN

    Follow us :


ಅಂಬೇಡ್ಕರರ ಆಕ್ರಂಧನ

Posted date: 15 Apr, 2018

Powered by:     Yellow and Red

ಅಂಬೇಡ್ಕರರ ಆಕ್ರಂಧನ

ಬೇಡಿ ತೊಡಿಸಿ ಕೂಡಿಹಾಕುತಿರುವ ನನ್ನವರೇ
ಬಿಟ್ಟುಬಿಡಿ ಭೀಮರಾವ ಜಗದ ಜನರ ಆಸ್ತಿಯು
ದಲಿತನೆಂಬ ಹಣೆಯಪಟ್ಟಿ ಜಾತಿಗಲ್ಲ ಸೀಮಿತ
ನೊಂದವರು ದಮನಿತರು ಎಲ್ಲರಿಗೂ ಅನ್ವಯ
ಬಾಬಣ್ಣನ ಮನದೊಳು ಜಾತಿಭೂತವಿರಲಿಲ್ಲ
ಏಕೆ ಬಂಧಿಸಿರುವಿರೋ ಅವ ನಮ್ಮವ ನಮ್ಮವ
ಅದೋ ಆಕ್ರಂದನಗೈಯುತಿದೆ ಅಲ್ಲಿ ಸ್ವರ್ಗದಲ್ಲಿ ಆತ್ಮ
ಬಂಧಮುಕ್ತಗೊಳಿಸಿರೆನ್ನ ಒಂದು ಕುಲದ ಜನರಿಂದ
ಕಲಿತವರೇ ಕಳವಳದಿ ಕೊಂದುಹಾಕುತಿರುವರು
ಉಳಿಸಿರೆನ್ನ ಸಾರ್ವತ್ರಿಕರ ಸಂಘಜೀವಿಯಾಗಿಸಿ
ಲಾಭಕೋರತನದಿ ಎನಗೆ ದ್ರೋಹಬಗೆವ ಕೇಡಿಗಳೆ
ಅವಸಾನಕೆ ಆಸ್ಪದವೀಯದೆ ಉಳಿಸಿರೆನ್ನ ಧ್ಯೇಯವ
ರೋಷ ಎದೆಯ ಬೆಂಕಿಯಿಂದು ದಹಿಸುತಿದೆ ನನ್ನನು
ಪಾರುಗೊಳಿಸಿ ಪಾಪಿಗಳ ಸಂಕೋಲೆಯ ಕತ್ತರಿಸಿ

ಒಂದೆ ಮಂತ್ರ ನನ್ನದು ಸಮಬಾಳು ಸರ್ವರಿಗೆ
ಬೀಜಮಂತ್ರ ಕೇಳಿರೋ ಸರ್ವರಿಗೆ ಸಮಪಾಲು
ಮೂಲಭೂತವಾದಿಗಳ ಮೂಲೋತ್ಪಾಟನೆ
ಮನುಜ ಮತವು ವಿಶ್ವಪಥದ ಜೀವಂತ ಸ್ಥಾಪನೆ
ಸುಟ್ಟುಹೋದ ದೇಹಗಳಿಗೆ ಮರುಜೀವದ ಮಜ್ಜನ
ಮಲಿನ ಮನದ ಹೊಲಸುಗಳಿಗೆ ಶಸ್ತ್ರವೈ ಈ ಜೀವನ

ದಲಿತಸೂರ್ಯನಾಗಲಾರೆ ಬಲಿತರೆದೆಗೆ ಶೂಲನಾನು
ಒಲಿದ ಹೃದಯವಂತರೆದೆಗೆ ಹರಿವ ನೀರತಾಣವೂ
ಬರಿದೆ ಮಾತು ಸಾಕುಮಾಡಿ ಪಾಷಂಡಿ ಮನಗಳೇ
ಮಲಿನ ಮನವ ತಿಳಿಗೊಳಿಪ ಹಿರಿಮೆ ನಿಮ್ಮದಾಗಲಿ

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑