Tel: 7676775624 | Mail: info@yellowandred.in

Language: EN KAN

    Follow us :


ಅಜಾತಶತ್ರು ಒಂದು ಮೆಲುಕು

Posted date: 21 Aug, 2018

Powered by:     Yellow and Red

ಅಜಾತಶತ್ರು ಒಂದು ಮೆಲುಕು

ಅಜಾತಶತ್ರು ವ್ಹಾವ್ ಎಂತ ಅತ್ಯದ್ಭುತ ಪದ.
ಈ ಬಿರುದಾಂಕಿತ ಅಟಲ್ ಬಿಹಾರಿ ವಾಜಪೇಯಿ ಯವರ ಬಗ್ಗೆ ಬರೆಯುವಂತ ವಿದ್ವಾಂಸನೂ ಅಲ್ಲಾ, ಹಿರಿಯ ಮುಖಂಡ, ಒಡನಾಡಿ, ಸಂಬಂದಿಯೂ ಅಲ್ಲಾ ಬಹಳ ಮುಖ್ಯವಾಗಿ ಆ ಯೋಗ್ಯತೆಯೂ ನನಗಿಲ್ಲ ಎಂದು ನನಗೆ ಗೊತ್ತಿದೆ. ಆದಾಗ್ಯೂ ಅದೆಕೋ ಒಂದೆರಡು ಸಾಲು ಬರೆಯಬೇಕೆನ್ನಿಸಿತು ಅದಕ್ಕಾಗಿ ಬರೆಯುತ್ತಿದ್ದೇನೆ.


ಭಾರತದ ಅತಿ ದೊಡ್ಡ ಶತೃ ಎಂದರೆ ಅದು ಪಾಕಿಸ್ತಾನ ಅಂದಿಗೂ ಇಂದಿಗೂ ಇದು ಸಾರ್ವತ್ರಿಕ ಸತ್ಯ ಇಂತಹ ದೇಶದ ಜೊತೆಗೂ ರಾಜತಾಂತ್ರಿಕ ಸಂಬಂಧವನ್ನು ಬೆಸೆದ ಏಕೈಕ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಬಹುಶಃ "ಅಜಾತಶತ್ರು" ಎಂಬ ಬಿರುದು ಅಂದೇ ಬಂದಿದೆ.


ಇದೇ ಪಾಕಿಸ್ತಾನದಲ್ಲಿ ನವಾಜ್ ಷರೀಫ್ ಪ್ರಧಾನಮಂತ್ರಿಯಾಗಿದ್ದ ಸಂದರ್ಭ ಸೇನೆಯ ಮುಖಸ್ಥರಾಗಿದ್ದ ಪರ್ವೇಜ್ ಮುಷರಫ್ ನವಾಜ್ ಷರೀಫ್ ರನ್ನು ಬಂಧಿಸಿ ಪ್ರಧಾನ ಮಂತ್ರಿಯಾದ ನಂತರ ನವಾಜ್ ಷರೀಫ್ ರ ಪುತ್ರ ನಮ್ಮ ತಂದೆಯನ್ನು ಉಳಿಸಿಕೊಡಿ ಎಂದು ಅಂದಿನ ಪ್ರಧಾನಮಂತ್ರಿ ವಾಜಪೇಯಿ ಯವರನ್ನು ಅಂಗಲಾಚಿದ ಸಂದರ್ಭದಲ್ಲಿ ನೆರವಿಗೆ ಧಾವಿಸಿದ ಜಗತ್ತಿನ ಏಕೈಕ ನಾಯಕ ನಮ್ಮ ಈ ಅಜಾತಶತ್ರು.


ಭಾರತದ ರಾಜಧಾನಿ ದೆಹಲಿಯಿಂದ ಪಾಕಿಸ್ತಾನದ ರಾಜಧಾನಿ ಲಾಹೋರ್ ಗೆ ರಾಜತಾಂತ್ರಿಕ ಸಂಬಂಧಕ್ಕಾಗಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ್ದಲ್ಲದೇ ಪ್ರಥಮ ಬಾರಿಗೆ ಅವರೇ ಅದೇ ಬಸ್ ನಲ್ಲಿ ಪ್ರಯಾಣಿಸಿದ್ದು ಚಾರಿತ್ರಿಕ ದಾಖಲೆಯಾಗಿ ಉಳಿದಿದೆ.


ಕೇವಲ ಇಪ್ಪತ್ತೇಳನೇ ವಯಸ್ಸಿಗೆ ಸಕ್ರಿಯ ರಾಜಕಾರಣಕ್ಕೆ ಬಂದು ಸೊನ್ನೆ ಯಿಂದ ದಶಕೋಟಿ ಜನಗಳವರೆಗೆ ಬಿಜೆಪಿ ಪಕ್ಷವನ್ನು ಕಟ್ಟಿದ ವಾಜಪೇಯಿಯವರು ಸಂಸದರಾಗಿ, ವಿದೇಶಾಂಗ ಸಚಿವರಾಗಿ ಪ್ರಧಾನಮಂತ್ರಿ ಯಾಗಿ ಅತ್ಯುತ್ತಮ ಆಡಳಿತವನ್ನು ಈ ದೇಶಕ್ಕೆ ಕೊಟ್ಟ ಏಕೈಕ ಪ್ರಧಾನಿ ಈ ನಮ್ಮ ವಾಜಪೇಯಿ ಯವರು.


ವಿರೋಧ ಪಕ್ಷಗಳಿಂದಲೂ ಅತಿ ಹೆಚ್ಚು ಹೊಗಳಿಸಿಕೊಂಡ, ಗಾಂಭೀರ್ಯ, ಹಾಸ್ಯ ಧಾಟಿಯ ತಮ್ಮ ಕವನಗಳ ಮೂಲಕ ರಾಜಕೀಯ ವಿರೋಧಿ ನಾಯಕರನ್ನು ಸೂಕ್ಷ್ಮವಾಗಿ ತಿವಿದೆಬ್ಬರಿಸುತ್ತಾ  ಉತ್ತಮ ಸಂಸದೀಯ ಪಟುವಾಗಿ ಗುರುತಿಸಿಕೊಂಡ ಭಾರತರತ್ನ ಬಿರುದಾಂಕಿತ ಈ ನಮ್ಮ ಅಜಾತಶತ್ರು ವಾಜಪೇಯಿಯವರು.


ಬಹುಶಃ ಭಾರತದ ರಾಜಕಾರಣಿಗಳಲ್ಲಿ ಶತೃಗಳೇ ಇಲ್ಲದ, ಉತ್ತಮ ಆಡಳಿತ ಕೊಟ್ಟ, (ಲಾಲ್ ಬಹದ್ದೂರ್ ಶಾಸ್ತ್ರಿ ಹೊರತಾಗಿ) ಒಬ್ಬ ಮಹತ್ತರವಾದ ನಾಯಕನಿದ್ದ ಎಂದರೆ ಅದು ವಾಜಪೇಯಿ ಯೊಬ್ಬರೇ, 


ಕಾಂಗ್ರೆಸ್ ನ ವ್ಯಕ್ತಿಗತ ಹೆಸರಿನ ಯೋಜನೆಗಳಿಗೆ ಸಡ್ಡುಹೊಡೆದು ಹುದ್ದೆಯ ಹೆಸರನ್ನು ಬಳಸಿ (ಪ್ರಧಾನಮಂತ್ರಿ ಆವಾಸ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಇನ್ನೂ ಮುಂತಾದವು) ಯೋಜನೆಗಳನ್ನು ರೂಪಿಸಿದ ಮಹಾನ್ ಮಾನವತಾವಾದಿ ಅಜನ್ಮ ಬ್ರಹ್ಮಚಾರಿ ಅಟಲ್ ಬಿಹಾರಿ ವಾಜಪೇಯಿಯವರು.


ಇಂದು ಅವರು ನಮ್ಮ ಭಾರತ ಅಷ್ಟೇ ಅಲ್ಲ ಇಡೀ ವಿಶ್ವವನ್ನೇ ಅಗಲಿದ್ದಾರೆ, ಅವರು ನಮ್ಮನ್ನು ಬಿಟ್ಟು ಹೋಗಿಲ್ಲಾ, ನಾವುಗಳು ಅವರನ್ನು ಕಳೆದುಕೊಂಡಿದ್ದೇವೆ, ಸರ್ ಜೀ ಮತ್ತೊಂದು ಬಾರಿ ಮಾನವ ಜನ್ಮ ಎಂಬುದೊಂದಿದ್ದರೇ ಮತ್ತೇ ನಮ್ಮ ದೇಶದಲ್ಲೇ ಜನ್ಮ ತಳೆದು ಬರಲೆಂದು ಪ್ರಾರ್ಥಿಸೋಣ ಬನ್ನಿರಿ.

 

ಗೋ ರಾ ಶ್ರೀನಿವಾಸ...

 ಮೊ; !9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑