Tel: 7676775624 | Mail: info@yellowandred.in

Language: EN KAN

    Follow us :


ಸಾಲಬಾಧೆ ರೈತ ಆತ್ಮಹತ್ಯೆ

Posted date: 14 Dec, 2018

Powered by:     Yellow and Red

ಸಾಲಬಾಧೆ ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೇ ತಾಲ್ಲೂಕಿನ ಹನುಮಾಪುರ ದೊಡ್ಡಿ ಗ್ರಾಮದ ಹೆಚ್ ಎಂ ಕೆಂಪೇಗೌಡ ಎಂಬುವವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮೃತ ಕೆಂಪೇಗೌಡ ರಿಗೆ ಒಂದು ಎಕರೆ ಐದು ಗುಂಟೆ ಜಮೀನಿದ್ದು ಅದರಲ್ಲಿ ಬೋರ್ ವೆಲ್ ಹಾಕಿಸಿ ಭತ್ತ ಬೆಳೆದಿದ್ದಾರೆ, ಬೋರ್ ವೆಲ್ ಹಾಕಿಸಲು ಮಾಡಿದ ಸಾಲ ದುಪ್ಪಟ್ಟಾಗಿದ್ದು, ಮನೆಯಲ್ಲಿದ್ದ ಒಡವೆಗಳನ್ನು ಸೊಸೈಟಿಯಲ್ಲಿ ಅಡವಿಟ್ಟಿದ್ದು ಸಾಲ ಮರುಪಾವತಿ ಮಾಡಲಾಗದೇ ಮನ ನೊಂದಿದ್ದರು ಎನ್ನಲಾಗಿದೆ.


ನಾಟಿ ಮಾಡಿದ ಭತ್ತದ ತಳಿಯು ಸಹ ಸರಿ ಇಲ್ಲದೆ ವಡೆ ಬರುವ ಮುನ್ನವೇ ರೋಗಕ್ಕೀಡಾಗಿದ್ದು ಅವರನ್ನು ಚಿಂತೆಗೀಡುಮಾಡಿದುದರಿಂದ ನೇಣಿಗೆ ಕೊರಳೊಡ್ಡಿದ್ದಾರೆ.


ಮೃತರು ಪತ್ನಿ ಮತ್ತು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದು ಕುಟುಂಬದವರ ರೋದನ ನೆರೆದಿದ್ದವರ ಕಣ್ಣು ತೇವಗೊಳ್ಳುವಂತೆ ಮಾಡಿತ್ತು.


ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರರಿಗೆ ಒಪ್ಪಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.



ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑