Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನಾದ್ಯಂತ ಶ್ರೀ ರಾಮನವಮಿ ಆಚರಣೆ ಪ್ರಯುಕ್ತ ಮಜ್ಜಿಗೆ, ಪಾನಕ ವಿತರಣೆ

Posted date: 13 Apr, 2019

Powered by:     Yellow and Red

ತಾಲ್ಲೂಕಿನಾದ್ಯಂತ ಶ್ರೀ ರಾಮನವಮಿ ಆಚರಣೆ ಪ್ರಯುಕ್ತ ಮಜ್ಜಿಗೆ, ಪಾನಕ ವಿತರಣೆ

ನಗರದ ಕೋದಂಡರಾಮ ಬಡಾವಣೆಯ ಮಾರುತಿ ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಬೆಣ್ಣೆ ಅಲಂಕಾರ

ನಗರದ ದೇವಾಲಯಗಳು ಸೇರಿದಂತೆ ತಾಲ್ಲೂಕಿನ ಬಹುತೇಕ ದೇವಾಲಯಗಳಲ್ಲಿ ಅದರಲ್ಲೂ ರಾಮಮಂದಿರಗಳು, ಶ್ರೀ ರಾಮ ದೇವಾಲಯ ಹಾಗೂ ರಾಮ ಭಕ್ತ ಆಂಜನೇಯ ದೇಗುಲಗಳ ಬಳಿ ಶ್ರೀ ರಾಮನವಮಿ ಯ ಪ್ರಯುಕ್ತ ನೀರು ಮಜ್ಜಿಗೆ, ಬೆಲ್ಲದ ಪಾನಕ ಮತ್ತು ಹೆಸರುಬೇಳೆಯ ಕೋಸಂಬರಿಯನ್ನು ಭಕ್ತಾಧಿಗಳಿಗೆ ವಿತರಿಸಲಾಯಿತು.

ಹಲವಾರು ದೇವಾಲಯಗಳ ಮೂಲ ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು, ದೇವಾಲಯಗಳನ್ನು ಸಹ ತಳಿರು ತೋರಣಗಳಿಂದ ಸಿಂಗರಿಸಿ ಸ್ಥಳೀಯ ಸಂಘಟನೆಯವರು ಹಾಗೂ ಗ್ರಾಮಸ್ಥರು ಸೇರಿ ಪಾನಕವನ್ನು ವಿತರಿಸಿದರು.

ನಗರದ ಕೋದಂಡರಾಮ ಬಡಾವಣೆಯ ಮಾರುತಿ ದೇವಾಲಯ, ಕೋಟೆ ಯ ಆಂಜನೇಯ ದೇವಾಲಯ, ಹೊಂಗನೂರು ಮತ್ತು ಕೂಡ್ಲೂರು ಗ್ರಾಮದ ಶ್ರೀ ರಾಮ ದೇವಾಲಯಗಳು ಸೇರಿದಂತೆ ಅನೇಕ ದೇವಾಲಯಗಳಲ್ಲಿ ಪಾನಕ ಮತ್ತು ಮಜ್ಜಿಗೆ ಯನ್ನು ವಿತರಿಸಲಾಯಿತು.


ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑