ಇಪ್ಪತ್ತು ಗಂಟೆಗಳಲ್ಲಿಯೇ ಅದೇ ಜಾಗದಲ್ಲಿ ಡಿಕೆಶಿಗೆ ಪ್ರತ್ಯುತ್ತರಿಸಿ ಶಿವಕುಮಾರ್ ದುಡ್ಡು ಬಿಜೆಪಿಗೆ ಓಟು ಎಂದ ಸಿಪಿವೈ
ನನ್ನನ್ನು ಗಂಡಸಾ ! ಎಂದು ಕೇಳಿದ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ನಿಜವಾದ ಗಂಡಸಾಗಿದ್ರೆ ನಮ್ಮ ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ನಾನು ಬರಗಾಲ ದಲ್ಲಿ ತುಂಬಿಸಿದ ಹಾಗೆ ನೀರು ತುಂಬಿಸಲಿ, ಆಗ ಅವರನ್ನು ನಾನು ಗಂಡಸು ಎಂದು ಒಪ್ಪಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಸವಾಲು ಹಾಕಿದರು, ನಿನ್ನೆ ದಿನ ಸಂಜೆ ೦೬:೩೦ ರಲ್ಲಿ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ನಗರದ ಅಂಬೇಡ್ಕರ್ ನಗರದಲ್ಲಿ ಹಾಕಿದ ಸವಾಲಿಗೆ ಇಂದು ಮಧ್ಯಾಹ್ನ ೦೩:೦೦ ಗಂಟೆಯ ವೇಳೆಗೆ ಇದೇ ಅಂಬೇಡ್ಕರ್ ನಗರದಲ್ಲಿ (ವೀರೇಗೌಡನದೊಡ್ಡಿ) ಪ್ರತಿ ಸವಾಲು ಹಾಕಿದರು.
ಯಾರೋ ಒಬ್ಬ ತಲೆ ಕೆಟ್ಟವನು (ಕೇಂದ್ರ ಸಚಿವ ಅನಂತಕುಮಾರ್ ಹೆಗ್ಗಡೆ) ಸಂವಿಧಾನ ಬದಲಾಯಿಸ್ತಿನಿ ಎಂದ ಮಾತ್ರಕ್ಕೆ ಸಂವಿಧಾನ ಬದಲಾಗುವುದಿಲ್ಲ, ಡಾ ಬಿ ಆರ್ ಅಂಬೇಡ್ಕರ್ ಒಬ್ಬ ಮಹಾ ಮಾನವತವಾದಿ, ಅವರ ಹೆಸರಿನಲ್ಲಿ ಬಿಜೆಪಿ ಸರ್ಕಾರ ದಲಿತರಿಗೆ ಏನೇನೂ ಕೊಡುಗೆ ನೀಡಿದೆಯೋ ಅದನ್ನೆಲ್ಲಾ ಈ ಸಂಸದರು ಈ ಕ್ಷೇತ್ರದ ದಲಿತರಿಗೆ ತಲುಪಿಸಿದ್ದಾರೆಯೇ ಎಂದು ಪ್ರಶ್ನಿಸಿದರು.
ಅಧಿಕಾರಕ್ಕೆ ಬಂದ ಇಪ್ಪತ್ನಾಲ್ಕು ಗಂಟೆಗಳಲ್ಲಿ ರೈತರ ಮತ್ತು ಸ್ತ್ರೀ ಶಕ್ತಿ ಗುಂಪುಗಳ ಸಾಲ ಮನ್ನಾ ಮಾಡ್ತೀವಿ ಎಂದ ಮುಖ್ಯಮಂತ್ರಿ ಹತ್ತು ತಿಂಗಳಾದರೂ ಇನ್ನೂ ಮಾಡಿಲ್ಲ, ಯಾಕೆ ? ಮುಖ್ಯಮಂತ್ರಿ ಮತ್ತು ಸಂಸದರ ಹಣ ವರ್ಷ ವರ್ಷವೂ ಏರುತ್ತಲೆ ಇದೆ ಹೇಗೆ ? ಒಬ್ಬ ಸಂಸದನ ಆದಾಯ ಕೇವಲ ಐದು ವರ್ಷದಲ್ಲಿ ೩೫೦ ಕೋಟಿ ಹೇಗೆ ಏರಿಕೆ ಆಯ್ತು ಎಂದು ಸಾರ್ವಜನಿಕವಾಗಿ ತಿಳಿಸಬೇಕು ಎಂದರು.
ನನ್ನ ಗಂಡಸುತನದ ಬಗ್ಗೆ ಮಾತನಾಡುವ ಡಿ ಕೆ ಶಿವಕುಮಾರ್ ವಿಠಲೇನಹಳ್ಳಿ ಗೋಲಿಬಾರ್ ನಲ್ಲಿ ಎಲ್ಲಿ ಅವಿತು ಕುಳಿತಿದ್ದರು ಎಂದು ಕೇಳಿ, ನಾನು ಕರೆದುಕೊಂಡು ಹೋಗಿ ಮನೆಗೆ ಬಿಟ್ಟಿದ್ದೇನೆ,
ಅವರ ತಮ್ಮನನ್ನು ಗೆಲ್ಲಿಸಲು ಈ ಗಂಡಸಿನ ಕಾಲಿಗೆ ಬಂದು ಬಿದ್ದರು ಎಂದರು, ತಾಲ್ಲೂಕು ಈಗ ನಾಯಕರಿಲ್ಲದೆ ಅನಾಥವಾಗಿದೆ, ನಮ್ಮ ತಾಲ್ಲೂಕಿಗೆ ಒಬ್ಬ ಉತ್ತಮ ನಾಯಕ ಬೇಕಾಗಿದ್ದಾನೆ, ಹಾಗಾಗಿ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ ರವರಿಗೆ ಮತ ನೀಡಿ ಗೆಲ್ಲಿಸುವ ಮೂಲಕ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಭಾರತದಲ್ಲಿ ಕಾಂಗ್ರೆಸ್ ಪಕ್ಷ ಇರುವವರೆಗೂ ದಲಿತರಿಗೆ ನ್ಯಾಯ ಸಿಗುವುದಿಲ್ಲ ಎಂದು ಸ್ವತಃ ಅಂಬೇಡ್ಕರ್ ರವರೇ ಹೇಳಿದರು ಎಂದು ಸ್ಮರಿಸಿದರು.
*ಇದೇ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ದುಡ್ಡು ಬಿಜೆಪಿ ಗೆ ಓಟು* ಎಂದು ಹಲವಾರು ಬಾರಿ ಕೂಗಿ ಜನರ ಬಾಯಲ್ಲೂ ಹೇಳಿಸುವ ಮೂಲಕ ಸಫಲರಾದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ ಮಾತನಾಡಿ ಬಿಜೆಪಿ ಸರ್ಕಾರ ದಲಿತರಿಗೆ ಪ್ರಧಾನಮಂತ್ರಿ ಆವಾಸ ಯೋಜನೆಯಲ್ಲಿ ಮನೆಗಳನ್ನು ಕೊಟ್ಟಿದೆ, ಆದರೆ ಈ ಸಂಸದರು ಈ ಕ್ಷೇತ್ರಕ್ಕೆ ಕೊಡದೆ ತಮ್ಮ ಸ್ವಂತ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿದ್ದಾರೆ, ಪ್ರತಿಯೊಂದಕ್ಕೂ ಸಂವಿಧಾನ ಬದಲಾವಣೆ ಎಂಬ ಉಡಾಫೆ ಉತ್ತರ ನೀಡುತ್ತಾರೆ, ಡಾ ಬಿ ಆರ್ ಅಂಬೇಡ್ಕರ್ ರವರನ್ನು ಕಾಂಗ್ರೆಸ್ ಕುತಂತ್ರದಿಂದ ಸೋಲಿಸಿದ ಸಂದರ್ಭದಲ್ಲಿ ಅಂದಿನ ಜನಸಂಘ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿತ್ತು.
ಮಧ್ಯ ಪ್ರದೇಶದಲ್ಲಿ ಅವರ ಸ್ಮಾರಕವನ್ನು ನಿರ್ಮಾಣ ಮಾಡಿದ್ದು ಬಿಜೆಪಿ ಸರ್ಕಾರ, ಲಂಡನ್ ನಲ್ಲಿ ಅವರು ಉಳಿದುಕೊಂಡಿದ್ದ ಮನೆಯನ್ನು ಖರೀದಿಸಿ ಭಾರತೀಯ ವಿದ್ಯಾರ್ಥಿಗಳಿಗೆ ವಸತಿ ನಿಲಯ ಮಾಡಿಕೊಟ್ಟಿದ್ದು ನಮ್ಮ ಬಿಜೆಪಿ ಸರ್ಕಾರ, ನಾಗಪುರದಲ್ಲಿ ಸ್ಮಾರಕ ಮತ್ತು ದೆಹಲಿಯಲ್ಲಿ ಚೈತನ್ಯ ಭವನ ನಿರ್ಮಾಣ ಮಾಡಿದ್ದು ಸಹ ಬಿಜೆಪಿ ಸರ್ಕಾರವೇ ವಿನ ಕಾಂಗ್ರೆಸ್ ಸರ್ಕಾರ ಅಲ್ಲಾ, ಹಾಗಾಗಿ ಡಾ ಬಿ ಆರ್ ಅಂಬೇಡ್ಕರ್ ಮತ್ತು ದಲಿತರಿಗೆ ಹೆಚ್ಚು ಹತ್ತಿರವಾಗಿರುವ ಬಿಜೆಪಿ ಅಧಿಕಾರಕ್ಕೆ ಬರಲು ನಿಮ್ಮ ಮತ ನಮಗೆ ಅತ್ಯವಶ್ಯಕ, ನೀವೆಲ್ಲರೂ ತಪ್ಪದೇ ನನಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಬಿಜೆಪಿ ಮುಖಂಡ ಸದಾನಂದ, ಜಯರಾಮು, ಮಹಿಳಾ ಮುಖಂಡೆ ವೀಣಾ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಮತಯಾಚನೆ ಸಂದರ್ಭದಲ್ಲಿ ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು