ದಲಿತರು ಹಿಂದುಳಿದವರು ಉಳಿಯಬೇಕಾದರೆ ಮೈತ್ರಿ ಅಭ್ಯರ್ಥಿ ಗೆ ಮತ ನೀಡಿ, ಜಯಂತ್ ಚಾಲುಕ್ಯ
ಸಂವಿಧಾನ ಉಳಿವಿಗೆ, ದೀನ ದಲಿತರು ಹಾಗೂ ಹಿಂದುಳಿದ ವರ್ಗ ದ ಜನ ಮುಂದುವರಿಯಬೇಕಾದರೆ ಕಾಂಗ್ರೆಸ್ ಪಕ್ಷ ಮತ್ತು ಅದರ ಮೈತ್ರಿ ಪಕ್ಷಗಳಿಂದ ಮಾತ್ರ ಸಾಧ್ಯ, ಬಿಜೆಪಿ ಪಕ್ಷಕ್ಕೆ ಮತ ನೀಡಿದರೆ ಸಂವಿಧಾನಕ್ಕಾಗಲಿ ನಮಗಾಗಲಿ ಉಳಿಗಾಲವಿಲ್ಲವಾದ್ದರಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾದ ಡಿ ಕೆ ಸುರೇಶ್ ರವರಿಗೆ ನನ್ನೆಲ್ಲಾ ಸಮುದಾಯದವರು ಮತ ನೀಡಬೇಕೆಂದು ರಾಮನಗರ ಜಿಲ್ಲಾ ಜೆಡಿಎಸ್ ಎಸ್ಸಿ ಎಸ್ಟಿ ಅಧ್ಯಕ್ಷ ಜಯಕಾಂತ್ ಚಾಲುಕ್ಯ ಪತ್ರಿಕಾಗೋಷ್ಠಿ ಮೂಲಕ ಮನವಿ ಮಾಡಿದರು.
ಅವರು ಇಂದು ನಗರದ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈಗಾಗಲೇ ಸ್ಥಳೀಯವಾಗಿ ಬಿಜೆಪಿ ಸಂಸದರಾದ ಅನಂತಕುಮಾರ ಹೆಗ್ಗಡೆ, ಬೆಂಗಳೂರು ನಗರ ಅಭ್ಯರ್ಥಿ ತೇಜಸ್ ಸೂರ್ಯ ಸೇರಿದಂತೆ ಅನೇಕರು ನಾವು ಬಂದಿರುವುದೇ ಸಂವಿಧಾನ ಬದಲಿಸಲು ಎಂದು ಹೇಳಿಕೆ ನೀಡಿದ್ದಾರೆ, ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ನಮಗೆ ಉಳಿಗಾಲವಿಲ್ಲ, ಸ್ವಾತಂತ್ರ್ಯ ಬಂದಂದಿನಿಂದಲೂ ಹಲವಾರು ಮೀಸಲಾತಿ ಗಳನ್ನು ನಮಗೆ ಒದಗಿಸಿ ಮೇಲೇರಲು ಅನುಕೂಲ ಮಾಡಿಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಆದ್ದರಿಂದ ನಮ್ಮ ಸಮುದಾಯದ ಬಂಧುಗಳು ಡಿ ಕೆ ಸುರೇಶ್ ರವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಹನುಮಂತಯ್ಯ ಮಾತನಾಡಿ ಅಂಬೇಡ್ಕರ್ ರಚಿಸಿದ ಸಂವಿಧಾನ ದಿಂದಲೇ ಒಬ್ಬ ಚಾಯ್ ವಾಲಾ ಮೋದಿಯವರು ಪ್ರಧಾನಮಂತ್ರಿ ಆಗಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಮಾತನಾಡಬೇಕು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನಮ್ಮನ್ನು ಮೇಲ್ಮಟ್ಟಕ್ಕೆ ತಂದಿದ್ದು ಕಾಂಗ್ರೆಸ್ ಪಕ್ಷ.
ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸುವ ಮೂಲಕ ಸಂವಿಧಾನವನ್ನು ಉಳಿಸಬೇಕು ಎಂದರು.
ಕೋಟೆ ಸಿದ್ದರಾಮಯ್ಯ ಮಾತನಾಡಿ ಕ್ಷೇತ್ರದಲ್ಲಿ ನಮ್ಮ ಸಮುದಾಯದ ಮತಗಳೇ ನಿರ್ಣಾಯಕ ಹಾಗಾಗಿ ಪ್ರತಿಯೊಬ್ಬರೂ ಡಿ ಕೆ ಸುರೇಶ್ ರವರಿಗೆ ಮತ ನೀಡಬೇಕೆಂದು ಮಾಧ್ಯಮದ ಮೂಲಕ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯ ವಿಷಕಂಠ, ನೀಲಕಂಠನಹಳ್ಳಿ ಭರತ್, ಸುಣ್ಣಘಟ್ಟ ಪಾಪಣ್ಣ, ಕೇಶವಮೂರ್ತಿ, ಕೋಟೆ ಶ್ರೀನಿವಾಸ, ಕೂಡ್ಲೂರು ಸಿದ್ದರಾಮು ಸೇರಿದಂತೆ ಮೈತ್ರಿ ಪಕ್ಷದ ಅನೇಕ ಪದಾಧಿಕಾರಿಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು