ಪುರಾತನ ಭಾರತದ ಮಹಿಳೆಯರ ಸಂಸ್ಕೃತಿ ಅಮರ, ಜಾನಪದ ವಿದ್ವಾಂಸ ಡಾ ಕುರುವ ಬಸವರಾಜು
ಪುರಾತನ ಭಾರತದ ಮಹಿಳೆಯರ ಸಂಸ್ಕೃತಿ ಎಂದೆಂದಿಗೂ ಅಮರವಾದದ್ದು, ಎಲ್ಲಾ ಪದಗಳು ಮತ್ತು ಸಂಸ್ಕಾರಗಳಿಗೆ ಮೂಲ ಜಾನಪದ, ಜಾನಪದಕ್ಕೆ ಮೂಲ ಭಾರತದ ಪುರಾತನ ಮಹಿಳೆಯರು ಎಂದು ಜಾನಪದ ವಿದ್ವಾಂಸ, ಜಾನಪದ ಲೋಕದ ಆಡಳಿತ ಅಧಿಕಾರಿ ಡಾ ಕುರುವ ಬಸವರಾಜು ತಿಳಿಸಿಕೊಟ್ಟರು.
ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ವತಿಯಿಂದ ರಾಮನಗರ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ೨೨ ನೇ ಮಹಿಳಾ ಜನ ಜಾಗೃತಿ ತರಬೇತಿ ಶಿಬಿರದಲ್ಲಿ ಜಾನಪದ ಉಳಿವಿನಲ್ಲಿ ಮಹಿಳೆಯರ ಪಾತ್ರ ಕುರಿತು ಉಪನ್ಯಾಸ ನೀಡಿದರು.
ಅಂದಿನ ಕಾಲದಲ್ಲಿ ದಿನನಿತ್ಯ ಬಳಸುತಿದ್ದ ಪರಿಕರಗಳು, ವ್ಯವಸಾಯದ ಉಪಕರಣಗಳು, ರಸಗೊಬ್ಬರ ಇಲ್ಲದೆ ಬೆಳೆಯುತ್ತಿದ್ದ ಆಹಾರ ಪದಾರ್ಥಗಳು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು, ಇಂದಿಗೂ ಸಹ ಜಾನಪದ ವೈದ್ಯ ಚಾಲ್ತಿಯಲ್ಲಿದೆ.
ಮಕ್ಕಳು ಕೇವಲ ಪುಸ್ತಕದ ಓದು, ಕಂಪ್ಯೂಟರ್ ಗಷ್ಟೇ ಸೀಮಿತವಾಗದೆ ಪರಿಸರದ ಬಗ್ಗೆ ತಿಳಿದುಕೊಳ್ಳಬೇಕು, ಕತೆ ಕಟ್ಟುವ, ಹೇಳುವ ಪರಿಪಾಠ ಬೆಳೆಸಿಕೊಳ್ಳಬೇಕು, ಎಲ್ಲದಕ್ಕೂ ಮೂಲವಾದ ಜಾನಪದವನ್ನು ಓದಿಕೊಂಡು ಜೀವನ ಶೈಲಿಯನ್ನು ಬದಬದಲಿಸಿಕೊಳ್ಳಬೇಕೆಂದು ಶಿಬಿರದ ಮಕ್ಕಳಿಗೆ ಕರೆ ನೀಡಿದರು.
ಸಾಯಿ ಕೀರ್ತಿನಾಥ ಸ್ವಾಮೀಜಿ ಸಾನಿಧ್ಯವಹಿಸಿದರು, ವಿಶೇಷ ಆಹ್ವಾನಿತರಾಗಿ ಉದಯವಾಣಿ ಪತ್ರಿಕೆಯ ವರದಿಗಾರ ಸೂರ್ಯಪ್ರಕಾಶ್, ಕಲಾಪ್ರಿಯ ಪತ್ರಿಕೆಯ ಸಂಪಾದಕರಾದ ಸುಧಾರಾಣಿ, ರಾಮನಗರ ವಾರ್ತೆ ಪತ್ರಿಕೆಯ ಸಂಪಾದಕ ಚಲುವರಾಜು, ಕನ್ನಡಪ್ರಭ ಪತ್ರಿಕೆಯ ಜಿಲ್ಲಾ ವರದಿಗಾರ ಆಫ್ರೋಜ್ ಖಾನ್ ಮತ್ತು ಮಾಸ್ತಮ್ಮವಾಣಿ ಪತ್ರಿಕೆಯ ಸಂಪಾದಕ ಡಿ ಎಂ ಮಂಜುನಾಥ ಭಾಗವಹಿಸಿದ್ದರು.
ಬೆಳಿಗ್ಗೆ ಶಿಬಿರದ ಹೆಣ್ಣು ಮಕ್ಕಳಿಗೆ ಲಕ್ಷ್ಮಿ ಗೋ ರಾ ಶ್ರೀನಿವಾಸ ರವರು ವಿಶೇಷವಾಗಿ ಕರಾಟೆ ತರಬೇತಿ ನೀಡಿದರು, ಸಂಜೆ ಭಜನೆ ಇತ್ಯಾದಿ ಕಾರ್ಯಕ್ರಮಗಳು ಜರುಗಿದವು.
ಸಂಜೆ ವೇಳೆ ಜಾದೂ ಗಂಗಾಧರ ರವರಿಂದ ಜಾದು ಏರ್ಪಡಿಸಲಾಗಿತ್ತು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು