Tel: 7676775624 | Mail: info@yellowandred.in

Language: EN KAN

    Follow us :


ಎಸ್. ರುದ್ರೇಶ್ವರ

rudresh.444@gmail.com


ಜಾತ್ಯಾತೀತ ಮನೋಧರ್ಮ, ಸಾಮಾಜಿಕ ಕಳಕಳಿ ಮತ್ತು ಸಾಂಸ್ಕøತಿಕ ಅಭಿರುಚಿಯ ಸಮ್ಮಿಳಿತದ ವ್ಯಕ್ತಿತ್ವ ಹೊಂದಿರುವ ಎಸ್. ರುದ್ರೇಶ್ವರ ಅವರು ರಾಮನಗರದಲ್ಲಿ ಜನಿಸಿದವರು. ಕನ್ನಡ ಸಾಹಿತ್ಯದಲ್ಲಿ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಜೊತೆಗೆ “ರಾಮನಗರ ಜಿಲ್ಲೆಯ ಸ್ಥಳನಾಮಗಳು” ಎಂಬ ವಿಯಷದ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿ ಆಂದ್ರಪ್ರದೇಶದ ಕುಪ್ಪಂನಲ್ಲಿರುವ ದ್ರಾವಿಡ ವಿಶ್ವವಿದ್ಯಾನಿಲಯದಿಂದ ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ. ಈಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ “ರಾಮನಗರ ಜಿಲ್ಲೆಯ ಬುಡಕಟ್ಟುಗಳ ಸಾಂಸ್ಕøತಿಕ ಸ್ಥಿತ್ಯಂತರಗಳು” ಎಂಬ ವಿಷಯವನ್ನು ಕುರಿತು ಸಂಶೋಧನೆ (ಪಿಎಚ್‍.ಡಿ) ಕೈಗೊಂಡಿದ್ದಾರೆ.  ಶೈಕ್ಷಣಿಕ ಸಾಧನೆಯ ಜೊತೆಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ, ಜೊತೆಗೆ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುತ್ತಾರೆ. ‘ಸನ್ಮಿತ್ರ’ ದಿನಪತ್ರಿಕೆಯನ್ನು ಪ್ರಾರಂಭಿಸಿ ಅದರ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಂಜೆಸಮಾಚಾರ, ಬೆಂಗಳೂರು ಖಡ್ಗ, ವಾರ್ತಾಭಾರತಿ ದಿನಪತ್ರಿಕೆಗಳ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪತ್ರಿಕೋದ್ಯಮದ ಜೊತೆಜೊತೆಗೆ ಸಮಾಜವನ್ನು ತಿದ್ದುವ ಕವನಗಳನ್ನು, ಸಮಾಜದ ಪ್ರತಿಬಿಂಬವಾದ ಕತೆಗಳನ್ನು, ಅಷ್ಟೆ ಅರಿತವಾದ ಲೇಖನಗಳನ್ನು ಬರೆದು ಯುವಸಾಹಿತಿ ಎಂದು ಗುರುತಿಸಲ್ಪಟ್ಟಿದ್ದಾರೆ. ತಾನೊಬ್ಬನೆ ಬೆಳೆದರೆ ಸಾಲದು ಎಂದು ಉದಯೋನ್ಮುಖ ಬರಹಗಾರರಿಗೆ, ಚಳುವಳಿಗಾರರಿಗೆ, ಹೋರಾಟಗಾರರಿಗೆ, ಸಾಮಾಜಿಕ ಕಳಕಳಿ ಇರುವವರಿಗೆ ಸ್ಪೂರ್ತಿ ತುಂಬುತ್ತಾ, ಜನರಲ್ಲಿ ಸಾಹಿತ್ಯ ಪ್ರಜ್ಞೆಯನ್ನು ಹೆಚ್ಚಿಸುವುದರಲ್ಲಿ ತಮ್ಮದೇ ಆದ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ. ಇವೆಲ್ಲದರ ಜೊತೆಗೆ ಸಮಾಜದ ಅಸಮಾನತೆ ವಿರುದ್ಧ ಸಮರ ಸಾರುವ ಆಗೆ ದೀನದುರ್ಬಲರ ನೋವು, ಸಂಕಟಗಳಿಗೆ ಪ್ರಾಮಾಣಿಕ ದನಿಯಾಗಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 


Top ↑