Recent news »
-
ರಾಮನಗರದಲ್ಲಿ ರಾರಾಜಿಸಿದ ಭಗವಾನ ಬಿರಸಾ ಮುಂಡಾ
ಸಾರ್ಥಕಾಯಿತು ಗಿರಿಜನ ಸ್ವಾಭಿಮಾನ ದಿನ : ವನವಾಸಿ ಕಲ್ಯಾಣ, ಕರ್ನಾಟಕದ ವತಿಯಿಂದ ರಾಮನಗರ ಜಿಲ್ಲೆಯಲ್ಲೊಂದು ವಿಶೆಷ ರೀತಿಯಲ್ಲಿ ಗಿರಿಜನ ಸ್ವಾಭಿಮಾನ ದಿನ (ಭಗವಾನ್ ಬಿರಸಾ ಮುಂಡಾ ಜಯಂತಿ) ವನ್ನು ದಿನಾಂಕ 21/11/2019 ರಂದು ಆಚರಿಸಲಾಯಿತು.
ರಾಮನಗರ , ಕನಕಪುರ, ಮಾಗಡಿ ತಾಲೂಕುಗಳಲ್ಲಿ ಬುಡಕಟ್ಟು ಜನಾಂಗದ ಈರುಳಿಗರನ್ನು ಒಳಗೊಂಡ ರಾಮನಗರ ಜಿಲ್ಲೆಯು ಅದ್ಭುತವಾದ ವನವಾಸಿಗರ ಶೊಭಾಯಾತ್ರೆಗೆ ಸಾಕ್ಷಿಯಾಯಿತು.
ಸಾವಿರಾರು ಸಂಖ್ಯೆಯಲ್ಲಿ ತಮ್ಮ ಸಾಂಪ್ರದಾಯಿಕ ವೇಷಭೂಷಣವನ್ನು ಧರಿಸಿ ಸಾಂಪ್ರದಾಯಿಕ ಹಾಡು , ನೃತ್ಯ, ವಾದ್ಯ , ಕುಣಿತದ ಮೂಲಕ ವನವಾಸಿ ಬಂಧುಗಳು, ಪುಟಾಣಿ ಮಕ್ಕಳು, ಯುವಕರು, ಮಾತೆಯರು ಸಮುದಾಯದ ಹಿರಿಯರು ಮತ್ತು ವನವಾಸಿ ಕಲ್ಯಾಣದ ಹಿರಿಯರನ್ನು ಒಳಗೊಂಡ ಶೋಭಾಯಾತ್ರೆಯು ...
ಭಗವಾನ್ ಬಿರಸಾ ಮುಂಡಾ ಕೀ ಜೈ.. ಭಾರತ್ ಮಾತಾ ಕೀ ಜೈ.. ವನವಾಸಿ ನಗರವಾಸಿ ಗ್ರಾಮವಾಸಿ ನಾವೆಲ್ಲರೂ ಭಾರತವಾಸಿ.. ಮುಂತಾದ ಘೊಷಣೆಗಳನ್ನು ಮೊಳಗಿಸುತ್ತಾ 1ಕಿಮಿ ದೂರದವರೆಗೂ ಸುಭದ್ರವಾದ ಆರಕ್ಷಕ (ಪೊಲಿಸ್) ಪಡೆಯೊಂದಿಗೆ ಹೊರಟ ಶೊಭಾಯಾತ್ರೆಯು.. ರಾಮನಗರದ ಗಲ್ಲಿ ಗಲ್ಲಿಗಳಲ್ಲಿ ಬುಡಕಟ್ಟು ಜನರ ಒಗ್ಗಟ್ಟು, ಸಾಂಪ್ರದಾಯಿಕ ಕಲೆ , ಮತ್ತು ಶಿಸ್ತಿನಮೂಲಕ ಭಗವಾನ್ ಬಿರಸಾ ಮುಂಡಾ ರವರನ್ನು ಪರಿಚಯಿಸುವ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಪ್ರೆಕ್ಷಕರಿಗೆ ಮನರಂಜನೆ ನೀಡುವಲ್ಲಿ ಸಾಕ್ಷಿಯಾಯಿತು.ವೇದಿಕೆ ಕಾರ್ಯಕ್ರಮ :
ಶೊಭಾಯಾತ್ರೆಯ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲೂ ಕೂಡ ಸಾವಿರಾರು ಸಂಖ್ಯೆಯಲ್ಲಿ ವನವಾಸಿ ಬಂಧುಗಳು ಮತ್ತು ನಗರದ ಜನರು ಭಾಗವಹಿಸಿ ಸಭಾಂಗಣ ಪೂರ್ತಿ ತುಂಬಿ ತುಳುಕಿತು.ವೇದಿಕೆಯನ್ನು ಅಲಂಕರಿಸಿದ
ವನವಾಸಿ ಕಲ್ಯಾಣದ ಹಿರಿಯರಾದ ಶ್ರೀ ಶ್ರೀಪಾದ್ ( ಕ್ಷೆತ್ರಿಯ ಸಂಘಟನಾ ಕಾರ್ಯದರ್ಶಿ) ಬಿರಸಾ ಮುಂಡಾರವರ ಕುರಿತು ಮುಖ್ಯ ವಕ್ತಾರರಾಗಿ ಮಾತನಾಡಿದರು.
ಶ್ರೀ ವೆಂಕಟೇಶ್ ಸಾಗರ್ ( ರಾಜ್ಯಧ್ಯಕ್ಷರು) ಪ್ರಸ್ತಾವಣಾ ಭಾಷಣವನ್ನು ಮಾಡಿದರು.
ಶ್ರೀ ಸತ್ಯಕಿರ್ತೀ ( ಪ್ರಾಂತದ ಸಹ ಕಾರ್ಯದರ್ಶಿಗಳು) ಕಾರ್ಯಕ್ರಮ ಪೂರ್ತಿ ಉಪಸ್ತಿತರಿದ್ದರು.
ಹಾಗು ಅಧಿಕಾರಿಗಳಾದ
ಶ್ರೀಮತಿ ಎಂ ಎಸ್ ಅರ್ಚನಾ ( ರಾಮನಗರ ಜಿಲ್ಲಾಧಿಕಾರಿಗಳು)
ಪ್ರೋ ಟಿ ಬಿ ಬಸವನಗೋಡ ( ನಿರ್ದೇಶಕರು, ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು)
ಶ್ರೀ ಕೃಷ್ಣಮೂರ್ತಿ ( ರಾಮನಗರ ಜಿಲ್ಲಾಧ್ಯಕ್ಷರು , ವನವಾಸಿ ಕಲ್ಯಾಣ)
ಇವರೆಲ್ಲರೂ..
ಮಾತನಾಡಿ ಸಮೂದಾಯದ ಸಮಸ್ಯೆಗಳನ್ನು ಮತ್ತು ಮುಂದಿನ ದಿನಗಳಲ್ಲಿ ವನವಾಸಿ ಕಲ್ಯಾಣದ ಜೊತೆಯಲ್ಲಿ ಮಾಡಬಹುದಾದ ಕೆಲವು ಕಾರ್ಯಗಳನ್ನು ಪ್ರಸ್ತುತಪಡಿಸಲಾಯಿತು.
ಶ್ರೀ ರಾಜು (ಕಾರ್ಯಕ್ರಮದ ನಿರ್ವಹಣೆ ಮಾಡಿದರು)
ಶ್ರೀ ಸತೀಶ್ ( ಸ್ವಾಗತ ಪರಿಚಯ ನಡೆಸಿಕೊಟ್ಟರು.)
ಶ್ರೀ ಮಂಜುನಾಥ ( ರಾಮನಗರ ಜಿಲ್ಲಾ ಸಂಘಟನಾ ಕಾರ್ಯದರ್ಶಿ.) ವಂದನಾರ್ಪನೆ ನಡೆಸಿಕೊಟ್ಟರು.
ಶ್ರೀ ದೊಂಡು ಪಾಟೀಲ ( ರಾಜ್ಯ ಹಿತರಕ್ಷಾ ಪ್ರಮುಖರು, ವನವಾಸಿ ಕಲ್ಯಾಣ) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. -
ನವಂಬರ್ 15 ಬುಡಕಟ್ಟು ವನವಾಸಿ ನಾಯಕ ಬಿರ್ಸಾ ಮುಂಡಾ ಜಯಂತಿ ಹಾಗೂ ರಾಷ್ಟ್ರೀಯ ಗಿರಿಜನ ದಿನೋತ್ಸವ.
ತನ್ನ ಯವ್ವನದ ವಯಸ್ಸಿನಲ್ಲಿಯೇ ಬಿರ್ಸಾ ಮುಂಡಾ ತನ್ನ ಜನಾಂಗವಾದ ವನವಾಸಿಗಳ ಪರ ನಿಲ್ಲಲು ಕಾರಣ ಬ್ರಿಟೀಷ್ ವಸಾಹತುಸಾಹಿ ಆಡಳಿತದ ವಿರುದ್ಧ ಜೊತೆಗೆ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದ ತಮ್ಮ ಭೂಮಿ ತಮ್ಮ ಹಕ್ಕುಗಳನ್ನು ಕಸಿದುಕೊಂಡ ತನ್ನ ಜನರ ಪರ ಅಂತಿಮವಾಗಿ ಹೋರಾಟದ ಕಣಕ್ಕೆ ಇಳಿದ ಬಿರ್ಸಾ ಹೋರಾಟ ಅಜರಾಮರ. ಬಿಹಾರ ಮತ್ತು ಜಾರ್ಖಂಡ್ ಪ್ರಾಂತ್ಯ 19 ನೇ ಶತಮಾನದ ಆರಂಭದಲ್ಲಿ ವಸಾಹತುಶಾಹಿ ಆಗಿತ್ತು ಬ್ರಿಟಿಷ್ ಸರ್ಕಾರ ತನ್ನ ಅಮಾನವೀಯ ಕಾನೂನುಗಳ ಮೂಲಕ ವನವಾಸಿಗಳ ಭೂಮಿಯ ಹಕ್ಕನ್ನು ಕಸಿದುಕೊಂಡಿತು, ಇಂಡಿಗೋ ಪ್ಲಾಂಟೇಷನ್ ಹಾಗೂ ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದ ವನವಾಸಿ ಕಾರ್ಮಿಕರನ್ನು ಕೀಳಾಗಿ ಜೀತದಾಳುಗಳಂತೆ ಯುರೋಪಿನ್ನರು ನಡೆಸಿಕೊಳ್ಳುತ್ತಿದ್ದರು ಜೊತೆಗೆ ವನವಾಸಿಗಳ ಕಿತ್ತು ತಿನ್ನವ ಬಡತನ ಬಹಳ ನಿಕೃಷ್ಟ ಪರಿಸ್ಥಿತಿಗೆ ತಳ್ಳಿತ್ತು. 'ದರ್ಥಿ ಅಬ್ಬಾ' ಅಥವಾ ಭೂಮಿಯೇ ತಂದೆ, ಎಂಬ ಘೋಷಣೆಯನ್ನು ಬಿರ್ಸಾ ತನ್ನ ಜನರಲ್ಲಿ ತುಂಬಿದರು ಮತ್ತು ಬ್ರಿಟಿಷ್ ಹಾಗೂ ಯುರೋಪಿಯನ್ನರ ವಿರುದ್ಧ ತನ್ನ ಹೋರಟ ರೂಪಿಸಿದರು. ತನ್ನ ಜನರಿಗೆ ನೀವು ಯಾರೇ ನಿಮ್ಮ ಮೇಲೆ ಪ್ರಭಾವ ಬೀರಿದರು ನಮ್ಮ ಧರ್ಮ ಸಂಸ್ಕೃತಿ ಬಿಡಬೇಡಿ ಮರೆಯಬೇಡಿ ಅವು ನಮ್ಮ ಸಾಂಸ್ಕೃತಿಕ ಬೇರುಗಳು ಎಂದು ತನ್ನ ಜನರಿಗೆ ತಿಳಿಸಿದರು. ಜೊತೆಗೆ ಭೂಮಿಯು ಹೃದಯ ಮತ್ತು ಅದನ್ನು ಉಳಿಸಿಕೊಳ್ಳುವುದು ನಮ್ಮ ಹಕ್ಕು ಎಂದರು.
*ವನವಾಸಿಗಳ ಪ್ರಕಾರ ಬಿರ್ಸಾ ಮುಂಡಾ ವನವಾಸಿಗಳ ಪ್ರವಾದಿ*
ಒಬ್ಬ ಸನ್ಯಾಸಿ ಬಳಿಯಲ್ಲಿ ಬಿರ್ಸಾ ದೀಕ್ಷೆ ಪಡೆದು ಹಿಂದೂ ಧಾರ್ಮಿಕ ಬೋಧನೆಗಳು ಮತ್ತು ಅದರ ಸಾರದ ಬಗ್ಗೆ ಅಧ್ಯಯನ ಮಾಡಿ ಪುರಾಣ ಗ್ರಂಥಗಳ ಜೊತೆಗೆ ರಾಮಾಯಣ ಮತ್ತು ಮಹಾಭಾರತ ಅಧ್ಯಾಯನ ಮಾಡಿದರು. ಅವರು ಮಧ್ಯಪಾನ ಮತ್ತು ಧೂಮಪಾನವನ್ನು ವೀರೋಧಿಸಿದರು ಇದರಿಂದ ಸಂಪೂರ್ಣ ಹೊರಬರಬೇಕೆಂದು ವನವಾಸಿಗಳಿಗೆ ಕರೆಕೊಟ್ಟರು.
ಸಮಾಜ ಸುಧಾರಣೆಗೆ ಬುಡಕಟ್ಟು ಸಮಾಜದವರು ವಾಮಾಚಾರ ಮತ್ತು ಮೂಡನಂಬಿಕೆ ಇತರೆ ವಿಷಯಗಳಿಂದ ದೂರವಿರಬೇಕು ಎಂದು ಒತ್ತಾಯಿಸಿದರು, ಅಂದಿನ ಯುರೋಪಿನ ಕ್ರಿಶ್ಚಿಯನ್ ಮಿಷನರಿಗಳು ತಮ್ಮ ಮಿಷನರಿ ಶಾಲೆಗಳಲ್ಲಿ ಬಿರ್ಸಿಯನ್ ಎಂಬ ಹೆಸರಿನಲ್ಲಿ ಕ್ರಿಶ್ಚಿಯನ್ ಸಮೂದಾಯವನ್ನು ಹುಟ್ಟು ಹಾಕಿತ್ತು ಇದನ್ನು ಬಿರ್ಸಾ ವಿರೋಧಿಸಿದರು.
ಬಿರ್ಸಾ ಆರಂಭಿಸಿದ ಚಳುವಳಿ 'ಉಲ್ಗೂನ್', ಅಂದರೆ 'ಮಹಾನ್ ಗೊಂದಲಮಯ'. ಬ್ರಿಟಿಷ್ ವಿರುದ್ಧ ಹೋರಾಟಕ್ಕೆ ಕಾರಣ ಬ್ರಿಟಿಷ್ ಸರ್ಕಾರ ವನವಾಸಿಗಳ ವಿರುದ್ದದ ಷಡ್ಯಂತ್ರ ಶೋಷಣೆ ಮತ್ತು ತಾರತಮ್ಯ ವಿರುದ್ಧ ಎಂದು ಬಿರ್ಸಾ ಘೋಸಿಸಿದರು ಬ್ರಿಟಿಷ್ ಸರ್ಕಾರ ಚೋಟನಾಗ್ಪುರ್ ಪ್ರದೇಶದಲ್ಲಿ ಭೂ ಕಾಯಿದೆ ಪ್ರಕಾರ ವನವಾಸಿಗಳನ್ನು ಅಲ್ಲಿಂದ ಒಕ್ಕಲೆಬ್ಬಿಸಿತು ಇದರಿಂದ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ತಾಳ್ಮೆಯ ಕಟ್ಟಿ ಒಡೆಯಿತು. ಅವರು ವನವಾಸಿಗಳ ಒಂದು ಗೆರಿಲ್ಲಾ ಸೈನಿಕರ ಗುಂಪನ್ನು ಕಟ್ಟಿ ಬ್ರಿಟಿಷ್ ವಿರುದ್ಧ ಉಗ್ರ ಹೋರಾಟ ಪ್ರಾರಂಭ ಮಾಡಿದರು. ಬಿರ್ಸಾ ಅವರನ್ನು ಜೂನ್ 9, 1900ರಂದು ಬಂಧಿಸಲಾಯಿತು ಉತ್ತರ ಭಾರತದ ಅನೇಕ ಭಾಷೆಗಳ ಜನಪದ ಹಾಡುಗಳಲ್ಲಿ ಅದರಲ್ಲೂ ವನವಾಸಿಗಳ ಜನಪದ ಹಾಡುಗಳಲ್ಲಿ ಬಿರ್ಸಾ ಅವರು ಒಬ್ಬ ವೀರ ಯೋಧ, ಅವರು ಒಬ್ಬ ಭಗವಂತ, ಅವರು ಒಬ್ಬ ಪ್ರವಾದಿ ಅವರು ವನವಾಸಿಗಳ ಸೂರ್ಯ ಹೀಗೆ ಅನೇಕ ಉಪಮೇಯಗಳನ್ನು ಬಳಸಿ ಹೊಗಳಲಾಗಿದೆ.
ಬಿರ್ಸಾ ಅವರು ಕ್ರಿಶ್ಚಿಯನ್ ಧರ್ಮ ಪರಿವರ್ತನೆಯಾಗಲು ಜರ್ಮನ್ ಮಿಷನ್ ಶಾಲೆ ಕಾರಣ ಯುರೋಪಿನ ವಸಾಹತು ಆಡಳಿತದಲ್ಲಿ ಮಿಷನರಿ ಶಾಲೆ ಸೇರಲು ಕಡ್ಡಾಯ ಕ್ರಿಶ್ಚಿಯನ್ ಧರ್ಮ ಮತಾಂತರಗೊಂಡು ಸೇರಬೇಕಿತ್ತು ಹಾಗೆಯೇ ಶಾಲೆಗೆ ಸೇರಿದ ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು ಮರುನಾಮಕರಣ ಮಾಡಿಕೊಳ್ಳಬೇಕಿತ್ತು ಬಿರ್ಸಾ ಮುಂಡಾ ಅವರ ಹೆಸರನ್ನು ಬಿರ್ಸಾ ಡೇವಿಡ್ ಎಂದು ಬದಲಾಯಿಸಿಬಿಟ್ಟಿದ್ದರು. ಆಗ
ಜರ್ಮನ್ ಮತ್ತು ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಮೀಷನರಿಗಳ ಶಾಲೆಗಳು ಕಿರಿಕಿರಿ ಉತ್ತುಂಗದಲ್ಲಿದ್ದ ಕಾಲ. ಇದನ್ನು ಮನಗಂಡ ಬಿರ್ಸಾ ತಂದೆ ಸುಗುಣ ಮುಂಡಾ ಮಗನನ್ನು ಶಾಲೆಯಿಂದ ಬಿಡಿಸಿದರು. ಬಿರ್ಸಾ ಅವರು ವನವಾಸಿಗಳು ಹಿಂದೂ ಧರ್ಮದ ಮೂಲ ಪುರುಷರೆಂದು ಪ್ರತಿಪಾದಿಸಿದರು. ವನವಾಸಿಗಳ ಜೀವನಶೈಲಿ ಮತ್ತು ಧರ್ಮಾಚರಣೆ ವಿಶಿಷ್ಟ ಮತ್ತು ಅದೇ ಮಾನವ ಮೂಲ ಸಂಸ್ಕೃತಿಯ ಬೇರು ಎಂದು ತಿಳಿಸಿದರು.
ಭಾರತ ಸರ್ಕಾರ ಅವರ ಹೆಸರಿನಲ್ಲಿ ಮತ್ತು ಅವರ ಸ್ಮರಣಾರ್ಥ 1988 ಸ್ಟಾಂಪ್ ಬಿಡುಗಡೆ ಮಾಡಿದೆ.
ಅವರ ಜನ್ಮ ವಾರ್ಷಿಕೋತ್ಸವವು ನವೆಂಬರ್ 15ರಂದು ನಡೆಯುತ್ತದೆ ಮತ್ತು ಈ ದಿನವನ್ನು ರಾಷ್ಟ್ರೀಯ ಗಿರಿಜನ ದಿನ ಎಂದು ಕರೆಯಲಾಗುತ್ತದೆ. ಅವರ ಸಮಾಧಿ ಜಾರ್ಖಂಡ್ ರಾಜ್ಯದ ರಾಜಧಾನಿಯಲ್ಲಿದೆ.
ಅವರ ಹೆಸರಿನಲ್ಲಿ ಅನೇಕ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಅವೆಂದರೆ ಬಿರ್ಸಾ ಮುಂಡಾ ವಿಮಾನನಿಲ್ದಾಣ ರಾಂಚಿ, ಬಿರ್ಸಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಿಂದ್ರಿ, ಬಿರ್ಸಾ ಮುಂಡಾ ವನವಾಸಿ ಚತ್ರವಾಸ್, ಸಿದ್ದೋ ಕನ್ಹೋ ಬಿರ್ಸಾ ವಿಶ್ವವಿದ್ಯಾಲಯ ಪುರೂಳಿಯ, ಮತ್ತು ಬಿರ್ಸಾ ಕೃಷಿ ವಿಶ್ವವಿದ್ಯಾಲಯ
ಅವರೊಬ್ಬರೇ ಗಿರಿಜನರ ನಾಯಕ ಅವರ ಭಾವಚಿತ್ರವನ್ನು ಭಾರತೀಯ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಗೌರವದ ಗುರುತಾಗಿ ಪ್ರತಿಷ್ಠಾಪಿಸಲಾಗಿದೆ.
ಬಿರ್ಸಾ ಅವರು ತಮ್ಮ 25ನೇ ವಯಸ್ಸಿನಲ್ಲಿ ನಮ್ಮನ್ನು ಹಗಲಿದ್ದಾರೆ ಜೂನ್ 9, 1900ರಂದು ಇಹಲೋಕ ತ್ಯಜಿಸಿ ಭಾರತೀಯ ವನವಾಸಿಗಳ ಹೆಮ್ಮೆಯ ಪ್ರತೀಕವಾಗಿ ಅವರ ಹೃದಯಂತರಾಳದಲ್ಲಿ ಅಮರರಾಗಿದ್ದಾರೆ ಬ್ರಿಟಿಷ್ ಸರ್ಕಾರ ಜೈಲಿನಲ್ಲಿದ್ದ ಬಿರ್ಸಾ ಅವರು ಕಾಲರ ಬಂದು ಅನಾರೋಗ್ಯದಿಂದ ಹಸುನೀಗಿದರೆಂದು ಪ್ರಕಟಣೆ ಹೊರಡಿಸಿತು ಕೊನೆಗು ಬ್ರಿಟಿಷ್ ವಸಾಹತುಶಾಹಿ ನೀತಿಗೆ ಸ್ವಾತಂತ್ರ್ಯ ಕೊಂಡಿಯೋಂದು ಕಳಚಿದರು, ಕಡಿಮೆ ವಯಸ್ಸಿನಲ್ಲಿ ಅವರು ಮಾಡಿದ ಸಾಧನೆ ಹೋರಾಟ ಸೂರ್ಯ ಚಂದ್ರರಿರುವವರೆಗು ಅಮರ.
ಚನ್ನವೀರಪ್ಪ ಎಂ.ಎಸ್. (ಚಮಾಶಿ)
ಮಾಯಗಾನಹಳ್ಳಿ (ಅಭಾಸಾಪ).
-
ಅಂಬೇಡ್ಕರರ ಆಕ್ರಂಧನ
ಬೇಡಿ ತೊಡಿಸಿ ಕೂಡಿಹಾಕುತಿರುವ ನನ್ನವರೇ
ಬಿಟ್ಟುಬಿಡಿ ಭೀಮರಾವ ಜಗದ ಜನರ ಆಸ್ತಿಯು
ದಲಿತನೆಂಬ ಹಣೆಯಪಟ್ಟಿ ಜಾತಿಗಲ್ಲ ಸೀಮಿತ
ನೊಂದವರು ದಮನಿತರು ಎಲ್ಲರಿಗೂ ಅನ್ವಯ
ಬಾಬಣ್ಣನ ಮನದೊಳು ಜಾತಿಭೂತವಿರಲಿಲ್ಲ
ಏಕೆ ಬಂಧಿಸಿರುವಿರೋ ಅವ ನಮ್ಮವ ನಮ್ಮವ
ಅದೋ ಆಕ್ರಂದನಗೈಯುತಿದೆ ಅಲ್ಲಿ ಸ್ವರ್ಗದಲ್ಲಿ ಆತ್ಮ
ಬಂಧಮುಕ್ತಗೊಳಿಸಿರೆನ್ನ ಒಂದು ಕುಲದ ಜನರಿಂದ
ಕಲಿತವರೇ ಕಳವಳದಿ ಕೊಂದುಹಾಕುತಿರುವರು
ಉಳಿಸಿರೆನ್ನ ಸಾರ್ವತ್ರಿಕರ ಸಂಘಜೀವಿಯಾಗಿಸಿ
ಲಾಭಕೋರತನದಿ ಎನಗೆ ದ್ರೋಹಬಗೆವ ಕೇಡಿಗಳೆ
ಅವಸಾನಕೆ ಆಸ್ಪದವೀಯದೆ ಉಳಿಸಿರೆನ್ನ ಧ್ಯೇಯವ
ರೋಷ ಎದೆಯ ಬೆಂಕಿಯಿಂದು ದಹಿಸುತಿದೆ ನನ್ನನು
ಪಾರುಗೊಳಿಸಿ ಪಾಪಿಗಳ ಸಂಕೋಲೆಯ ಕತ್ತರಿಸಿಒಂದೆ ಮಂತ್ರ ನನ್ನದು ಸಮಬಾಳು ಸರ್ವರಿಗೆ
ಬೀಜಮಂತ್ರ ಕೇಳಿರೋ ಸರ್ವರಿಗೆ ಸಮಪಾಲು
ಮೂಲಭೂತವಾದಿಗಳ ಮೂಲೋತ್ಪಾಟನೆ
ಮನುಜ ಮತವು ವಿಶ್ವಪಥದ ಜೀವಂತ ಸ್ಥಾಪನೆ
ಸುಟ್ಟುಹೋದ ದೇಹಗಳಿಗೆ ಮರುಜೀವದ ಮಜ್ಜನ
ಮಲಿನ ಮನದ ಹೊಲಸುಗಳಿಗೆ ಶಸ್ತ್ರವೈ ಈ ಜೀವನದಲಿತಸೂರ್ಯನಾಗಲಾರೆ ಬಲಿತರೆದೆಗೆ ಶೂಲನಾನು
ಒಲಿದ ಹೃದಯವಂತರೆದೆಗೆ ಹರಿವ ನೀರತಾಣವೂ
ಬರಿದೆ ಮಾತು ಸಾಕುಮಾಡಿ ಪಾಷಂಡಿ ಮನಗಳೇ
ಮಲಿನ ಮನವ ತಿಳಿಗೊಳಿಪ ಹಿರಿಮೆ ನಿಮ್ಮದಾಗಲಿ