ತಾಲ್ಲೂಕಿನಲ್ಲಿ ಸಿರಿಧಾನ್ಯ ಬೆಳೆದು ಒಕ್ಕಣೆ ಮಾಡುತ್ತಿರುವ ಸಿರಿವಂತ ಯುವಕ ಯೋಗೇಶಗೌಡ
ಒಕ್ಕಣೆ ಯಂತ್ರಗಳೊಂದಿಗೆ ಯೋಗೇಶಗೌಡ
ಚನ್ನಪಟ್ಟಣ: ಸಿರಿಧಾನ್ಯ ಎಂದರೆ ಇತ್ತೀಚಿನವರೆಗೂ ಮೂಗು ಮುರಿಯುತ್ತಿದ್ದ ಜನರು ಸಿರಿಧಾನ್ಯ ಕ್ಕೆ ಮುಗಿ ಬೀಳುತ್ತಿರುವುದು ಕಂಡು ಬರುತ್ತಿದೆ. ಅಂದು ಬಡವರ ಧಾನ್ಯ ಎಂದೇ ಬಿಂಬಿತವಾಗಿದ್ದ ಸಿರಿಧಾನ್ಯಗಳು ಇಂದು ಸಿರಿವಂತರ ಮತ್ತು ರೋಗಿಗಳ ಧಾನ್ಯವಾಗಿ ಬದಲಾಗಿರುವುದು ನಿಜಕ್ಕೂ ಆಶ್ಚರ್ಯಕರವಾದರೂ ಸತ್ಯ.
ರಾಗಿ, ಆರ್ಕಾ, ನವಣೆ, ಸಾಮೆ, ಸಜ್ಜೆ, ಬರಗು, ಊದಲು, ಕೊರ್ಲೆ ಮತ್ತು ಬಿಳಿಜೋಳ ಎಂಬ ಒಂಭತ್ತು ಧಾನ್ಯಗಳೇ ಸಿರಿಧಾನ್ಯಗಳು.*
ಮಳೆಯಾಧಾರಿತ ಬೆಳೆಯಾದ್ದರಿಂದ ಈ ಧಾನ್ಯಗಳನ್ನು ಬೆಳೆಯಲು ನೀರಿನ ಅವಶ್ಯಕತೆ ಇಲ್ಲ, ನಾಟಿ ಮಾಡಿ, ಕಳೆ ಕೀಳುವ ಪ್ರಮೇಯವಿಲ್ಲ, ಕೊಟ್ಟಿಗೆ ಗೊಬ್ಬರ ಹೊರತುಪಡಿಸಿ ಬೇರೆ ಯಾವ ಗೊಬ್ಬರವನ್ನು ಹಾಕದೆ ಸಾವಯವ ಪದ್ಧತಿ ಯಲ್ಲಿ ಬೆಳೆಯುವ ಈ *ಸಿರಿಧಾನ್ಯಗಳಲ್ಲಿ ನಾರಿನಂಶದ ಜೊತೆಗೆ ಹೇರಳವಾದ ಪೌಷ್ಟಿಕಾಂಶಗಳು ಇರುವುದರಿಂದ ದೇಹದ ಎಲ್ಲಾ ಖಾಯಿಲೆಗಳಿಗೂ ಇದು ರಾಮಬಾಣವಾಗಿ ಕೆಲಸ ನಿರ್ವಹಿಸುತ್ತದೆ.*
ನಮ್ಮ ತಾಲ್ಲೂಕಿನಲ್ಲಿ ರಾಗಿ ಹೊಲದೊಳಗೆ ಸಾಲು ಬೆಳೆಯುತ್ತಿದ್ದು ಬಿಟ್ಟರೆ ಎಕರೆಗಟ್ಟಲೆ ಸಿರಿಧಾನ್ಯ ಬೆಳೆದಿದ್ದು ಬಹುತೇಕ ಕಡಿಮೆ.
ಆದರೆ ನಗರದಲ್ಲೇ ಹುಟ್ಟಿ ಬೆಳೆದ (ಮೂಲ ರೈತರ ಮಗ) ಎಂಬಿಎ ಪದವೀಧರ ಹಾಗೂ ವ್ಯಾಪಾರಸ್ಥ ಯುವಕ ಯೋಗೇಶಗೌಡ ತನ್ನ ಕುಟುಂಬದಿಂದ ಬಳುವಳಿಯಾಗಿ ಬಂದ ಜಮೀನು ಸೇರಿದಂತೆ *ತೊರೆಹೊಸೂರು ಗ್ರಾಮದ ಸ್ನೇಹಿತ ಟಿ ಸಿ ಅಚ್ಯುತಾನಂದ* ರವರ ಭೂಮಿಯನ್ನು ಮನವಿ ಮೇರೆಗೆ ಪಡೆದು ನವಣೆ, ಊದಲು ಮತ್ತು ಕೊರ್ಲೆಯನ್ನು ಹತ್ತಾರು ಎಕರೆ ಭೂಮಿಯಲ್ಲಿ ಬೆಳೆದು ಸಂತಷದಿಂದ ಬೀಗುತ್ತಿದ್ದಾರೆ. ಅಚ್ಯುತಾನಂದ ಭೂಮಿ ನೀಡಿದ್ದಲ್ಲದೆ ಸ್ವತಃ ಯೋಗೇಶಗೌಡ ನ ಜೊತೆ ನಿಂತು ಫಸಲು ತೆಗೆಯಲು ಸಹಕಾರ ನೀಡಿರುವುದು ನಿಜಕ್ಕೂ ಶ್ಲಾಘನೀಯ.
ಕಳೆದ ವರ್ಷ ಕಬ್ಬಾಳು ಗ್ರಾಮದ ಹೊಲದಲ್ಲಿ ಬೆಳೆದ ಕೊರ್ಲೆಯನ್ನು ಒಕ್ಕಣೆ ಮಾಡಿಸಲು ಬೇರೋಬ್ಬರ ಬಳಿ ತೆರಳಿದಾಗ ಅವರು ರೈತನ ಕಷ್ಟ ಪರಿಗಣಿಸದೇ ಬೇಕಾಬಿಟ್ಟಿಯಾಗಿ ನಡೆದುಕೊಂಡಿದ್ದರಿಂದ ನೊಂದುಕೊಂಡ ಯೋಗೇಶಗೌಡ ಸಿರಿಧಾನ್ಯಗಳನ್ನು ಒಕ್ಕಣೆ ಮಾಡುವ ಯಂತ್ರವನ್ನು ತಂದು ಅಳವಡಿಸಿಕೊಂಡು ನಂತರ ಬೆಳೆ ಬೆಳೆದಿದ್ದು ಅವರ ಛಲವನ್ನು ತೋರಿಸುತ್ತದೆ. *ನಗರದ ಕೋಟೆ ಯಲ್ಲಿರುವ ಶ್ರೀ ಕಾಳಿಕಾಂಭ ದೇವಾಲಯದ ಮುಂಭಾಗದಲ್ಲೇ ಒಕ್ಕಣೆ ಕೇಂದ್ರ, ಸಿರಿಧಾನ್ಯಗಳು ಮತ್ತು ಸಾವಯಯ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಹೊಂದಿರುವುದಲ್ಲದೆ, ರೈತರು ಬೆಳೆದು ತಂದ ಎಲ್ಲಾ ರೀತಿಯ ಎಣ್ಣೆ ಕಾಳುಗಳನ್ನು ರುಬ್ಬಿ ಎಣ್ಣೆ ಮತ್ತು ಹಿಂಡಿಯನ್ನು ತೆಗೆಯುವ ಯಂತ್ರಗಳನ್ನು ಜೋಡಿಸಿದ್ದು ಸ್ಥಳೀಯ ರೈತರಿಗೆ ನೆರವಾಗುತ್ತಿದ್ದಾರೆ.*
*ಯೋಗೇಶಗೌಡ ರ ಸಂಪರ್ಕಿಸಬಹುದಾದ ಮೊಬೈಲ್ ನಂಬರ್ 9739828888..
*ಸಿರಿಧಾನ್ಯ ಮತ್ತು ಎಣ್ಣೆ ಕಾಳುಗಳನ್ನು ಬೆಳೆದು ಒಕ್ಕಣೆ ಗೆ ತರುವ ರೈತರಿಗೆ ರಿಯಾಯಿತಿ ದರದಲ್ಲಿ ಒಕ್ಕಣೆ ಮಾಡಿಕೊಡುತ್ತೇನೆ. ನಾನೊಬ್ಬ ರೈತನ ಮಗನಾಗಿ ರೈತನ ಕಷ್ಟ ಏನೆಂದು ನನಗೆ ಗೊತ್ತಿದೆ. ರೈತ ದೇಶದ ಬೆನ್ನೆಲುಬು ಎಂಬುದು ಕೇವಲ ಘೋಷ ವಾಕ್ಯದ ಬದಲು ಬೆನ್ನು ಮೂಳೆಯೇ ಮುರಿದು ಹೋಗುವಂತಹ ಸ್ಥಿತಿಯಲ್ಲಿ ಇಂದು ರೈತನಿದ್ದಾನೆ. ಆಳುವ ಸರ್ಕಾರಗಳ ಕಣ್ಣೊರೆಸುವ ತಂತ್ರ ಬಿಟ್ಟು ರೈತರಿಗೆ ತಂತ್ರಜ್ಞಾನ ಹೇಳಿಕೊಡಲಿ.*
*ಯೋಗೇಶಗೌಡ.*
ಗೋ ರಾ ಶ್ರೀನಿವಾಸ...
ಮೊ:9845856139.
Recent news in agriculture »
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ
ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ
ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ
ಪ್ರತಿಕ್ರಿಯೆಗಳು