ಹೈನುರಾಸುಗಳಲ್ಲಿ ಸಮೂಹ ಬೆದೆ ಮತ್ತು ಲಿಂಗ ನಿರ್ಧಾರಿತ ವೀರ್ಯ ಬಳಸಿ ಸಮಯ ನಿರ್ಧಾರಿತ ಕೃತಕ ಗರ್ಭಧಾರಣೆ ಕಾರ್ಯಕ್ರಮ
ರಾಮನಗರ : ಲಿಂಗ ನಿರ್ಧಾರಿತ ವೀರ್ಯವನ್ನು ಬಳಸಿ ಹೆಣ್ಣು ಕರುಗಳನ್ನು ಪಡೆಯುವ ತಂತ್ರಜ್ಞಾನದ ಉತ್ತಮ ಕಾರ್ಯಕ್ರಮವಾಗಿದ್ದು, ಇದರ ಬಗ್ಗೆ ತಿಳಿದುಕೊಂಡು, ತಮ್ಮ ಪಶುಗಳಿಗೆ ಅಳವಡಿಸುವತ್ತ ಆಲೋಚನೆ ಮಾಡಿ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಎನ್.ಡಿ.ಆರ್.ಎ. ದಕ್ಷಿಣ ವಲಯ ಕೇಂದ್ರ (ಆಡುಗೋಡಿ), ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಕಾರದಲ್ಲಿ ನಡೆದ ಹೈನುರಾಸುಗಳಲ್ಲಿ ಸಮೂಹ ಬೆದೆ ಮತ್ತು ಲಿಂಗ ನಿರ್ಧಾರಿತ ವೀರ್ಯ ಬಳಸಿ ಸಮಯ ನಿರ್ಧಾರಿತ ಕೃತಕ ಗರ್ಭಧಾರಣೆÉ ಕಾರ್ಯಕ್ರಮದ ದಿವ್ಯ ಸಾನಿಧÀ್ಯ ವಹಿಸಿ ಅವರು ಮಾತನಾಡಿದರು.
ಹೈನುಗಾರ ಪಶುಗಳಿಗೆ ಕೃತಕ ಗರ್ಭಧಾರಣೆÉ ಮೂಲಕ ಬಯಸಿದ ಕರು ಪಡೆಯುವ ಕಾರ್ಯಕ್ರಮಕ್ಕೆ ಲಿಂಗ ನಿರ್ಧಾರಿತ ವೀರ್ಯದ ನಳಿಕೆಗಳನ್ನು ಸರ್ಕಾರ ಸಂಪೂರ್ಣ ಉಚಿತವಾಗಿ ನೀಡಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸರ್ಕಾರಕ್ಕೆ ಸಲಹೆ ನೀಡಿದರು.
ರೈತ ಶಕ್ತಿ ಕೃಷಿ ಪ್ರಧಾನ ಭಾರತದ ಉಸಿರಾಗಿದೆ. ಆದರೆ ಇಲ್ಲಿ ಬೆಳೆಗಳಿಗೆ ತಕ್ಕ ಬೆಲೆ ಸಿಗುತ್ತಿಲ್ಲ, ಇನ್ನೊಂದೆಡೆ ಮಳೆ ಕೊರತೆ ಹೀಗಾಗಿ ರೈತರು ಕೃಷಿ ಕಾಯಕದಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ರೈತ ಪರ ಯೋಜನೆಗಳು, ಸಂಶೋಧನೆಗಳು ತೀರಾ ಅಗತ್ಯವಿದೆ. ಜಲ ನೀತಿಯಂತೆ ಹಾಲು ನೀತಿಯು ಜಾರಿಯಾಗಬೇಕಾಗಿದೆ. ಎಲ್ಲಿ ಸಂಶೋಧನೆಗಳು ಹೆಚ್ಚುತ್ತವೆಯೂ ಅಲ್ಲಿ ರೈತನ ಬದುಕು ಹಸನಾಗಿರುತ್ತದೆ. ಆದ್ದರಿಂದ ಪ್ರತಿ ಲೀಟರ್ ಹಾಲಿಗೆ ಸರ್ಕಾರ ನೀಡುತ್ತಿರುವ ಪೆÇ್ರೀತ್ಸಾಹ ಧನವನ್ನು 5 ರೂ.ನಿಂದ 7 ರೂ.ಗೆ ಏರಿಸುವ ಮತ್ತು ಇತರ ಬೇಡಿಕೆಗಳ ಬಗ್ಗೆ ಸರ್ಕಾರ ಪರಿಗಣಿಸಬೇಕು ಎಂದು ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದರು.
ಭಾರತ ಸರ್ಕಾರದ ಪಶುಸಂಗೋಪನೆ ಆಯುಕ್ತ ಡಾ.ಸುರೇಶ್ ಹೊನ್ನಪ್ಪಗೋಳ್ ಮಾತನಾಡಿ, ಬೆಂಗಳೂರಿನ ಹೆಸರುಘಟ್ಟದಲ್ಲಿ ಲಿಂಗ ನಿರ್ಧಾರಿತ ವೀರ್ಯ ಸಂಶೋಧÀನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸದ್ಯ ಅಮೇರಿಕಾ ಮೂಲದ ತಳಿಯನ್ನು ಲಿಂಗ ನಿರ್ಧಾರಿತ ವೀರ್ಯದಲ್ಲಿ ಬಳಕೆಯಾಗುತ್ತಿದೆ, ಮುಂದಿನ ದಿನಗಳಲ್ಲಿ ದೇಶಿ ತಳಿಗಳ ವೀರ್ಯ ಬಳಕೆಗೆ ಕ್ರಮ ವಹಿಸಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ಎಂ.ಎಫ್ ಅಧ್ಯಕ್ಷ ಪಿ.ನಾಗರಾಜು, ಹಸುಗಳಲ್ಲಿ ಹೆಣ್ಣು ಕರುಗಳನ್ನೇ ಪಡೆಯಲು ವೀರ್ಯ ನಳಿಕೆಯಂತಹ ಕಾರ್ಯಕ್ರಮ ರಾಮನಗರದಲ್ಲಿ ಅನುಷ್ಟಾನವಾಗುತ್ತಿದೆ. ಇದರಿಂದ ಶೇ.95ರಷ್ಟು ಯಶಸ್ಸು ಪ್ರಯೋಗಗಳಲ್ಲಿ ಕಂಡು ಬಂದಿದೆ ಎಂದರು. 1 ನಳಿಕೆ ವೀರ್ಯಕ್ಕೆ 900 ರೂ. ವೆಚ್ಚವಾಗುತ್ತಿದೆ. ಸರ್ಕಾರ 450 ರೂ. ಸಬ್ಸಿಡಿ ನೀಡಿದೆ. ರಾಮನಗರ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯಕ್ರಮ ಆರಂಭವಾಗಿದ್ದು, ತಾವು ವೈಯಕ್ತಿಕವಾಗಿ ಉಳಿದ 450 ರೂ. ಭÀರಿಸುತ್ತಿರುವುದಾಗಿ, ರೈತರಿಗೆ ನಯಾ ಪೈಸೆ ಹೊರೆಯಾಗಿಲ್ಲ ಎಂದರು.
ಜಿಲ್ಲೆಯಲ್ಲಿ ರೈತರ ಹಣದಿಂದ ಒಂದು ಸಾವಿರ ಕೋಟಿ ಹಣದಲ್ಲಿ ಹಾಲಿನ ಉತ್ಪನ್ನಗಳ ಪ್ಯಾಕಿಂಗ್ ಘಟಕ ಮತ್ತು ಹಾಲಿನ ಪುಡಿ ಮಾಡುವ ಘಟಕ ನಿರ್ಮಾಣವಾಗುತ್ತಿರುವುದು ನಿಮ್ಮ ಬೆವರ ಹನಿಯೆ ಹೊರತು ಯಾವುದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣವಲ್ಲ, ಒಂದು ಹಾಲು ಒಕ್ಕೂಟದ ವತಿಯಿಂದ ರೈತ ಮೃತಪಟ್ಟರೆ 2 ಲಕ್ಷ ಕೊಡುವುದಾದರೆ ಸರ್ಕಾರ ಏಕೆ ಕೊಡಬಾರದು. ರೈತರ ಬಗ್ಗೆ ಇಚ್ಚಾಶಕ್ತಿಯಿದ್ದವರಿಗೆ ಮಾತ್ರ ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡಲು ಸಾಧ್ಯ ಎಂದರು.
ಸಾಹಿವಾಲ ತಳಿ ಸಂಘದ ಅಧÀ್ಯಕ್ಷ ಹಾಗೂ ಪಂಜಾಬ್ ಸರ್ಕಾರದ ಸಲಹೆಗಾರರಾಗಿರುವ ಪೆÇ್ರ.ಪಿ.ಕೆ.ಉಪ್ಪಲ್ ಮಾತನಾಡಿ, ಗೋಸೇವೆ ಬಗ್ಗೆ ವೇದಗಳಲ್ಲೂ ಉಲ್ಲೇಖವಿದೆ. ರಾಸುಗಳಲ್ಲಿ ಅನುವಂಶಿಯತೆಯನ್ನು ಅಭಿವೃದ್ದಿ ಪಡಿಸುವ ತಂತ್ರಜ್ಞಾನದ ಬಗ್ಗೆ ನಿರಂತರ ಸಂಶೋಧನೆ ನಡೆಯುತ್ತಿದೆ. ಲಿಂಗ ನಿರ್ಧಾರಿತ ವೀರ್ಯ ಬಳಸಿ ಹೆಣ್ಣು ಕರುಗಳನ್ನು ಪಡೆಯುವ ತಂತ್ರಜ್ಞಾನ ಕರ್ನಾಟಕ ಇದೀಗ ತೆರೆದುಕೊಳ್ಳುತ್ತಿದೆ. ಪಂಜಾಬ್ ರಾಜ್ಯದಲ್ಲಿ ಈಗಾಗಲೆ ಜಾರಿಯಲ್ಲಿರುವ ಈ ಪದ್ದತಿಯನ್ನು ರಾಜ್ಯದ ರೈತರು ವಿಶ್ವಾಸದಿಂದ ಸ್ವೀಕರಿಸುತ್ತಾರೆ ಎಂಬ ನಂಬಿಕೆ ತಮಗಿದ್ದು ಪಿ.ನಾಗರಾಜು ಅವರ ಹೈನುಗಾರ ರೈತನ ಬದುಕು ಹಸನಾಗಿಸುವ ಕನಸು ನನಸಾಗಲಿ ಎಂದರು.
ವೇದಿಕೆಯಲ್ಲಿ ಅಂಧರಶಾಲೆ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ, ಬೇವೂರು ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಎನ್.ಡಿ.ಆರ್.ಎ ದಕ್ಷಿಣ ವಲಯ ಕೇಂದ್ರದ ಮುಖ್ಯಸ್ಥ ಡಾ.ಕೆ.ಪಿ.ರಮೇಶ್, ಬಮೂಲ್ನ ರಾಮನಗರ ಶಿಬಿರ ವ್ಯವಸ್ಥಾಪಕ ಡಾ.ಶಿವಶಂಕರ್, ರೈತ ಮುಖಂಡ ಪುಟ್ಟಸ್ವಾಮಿ, ನಗರಸಭಾ ಸದಸ್ಯ ಡಿ.ಕೆ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ರಮೇಶ್, ಮುಖಂಡ ವೆಂಕಟಸ್ವಾಮಿ ಉಪಸ್ಥಿತರಿದ್ದರು.
Recent news in agriculture »
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ
ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ
ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ
ಪ್ರತಿಕ್ರಿಯೆಗಳು