ಶಾನುಭೋಗನಹಳ್ಳಿ ಹಸುಗಳ ಹಾಲು ಪಕ್ಕದೂರಿನ ಡೈರಿಯಲ್ಲಿ ಮಾರಾಟ ! ಸೋಂಕಿನ ಭೀತಿಯಲ್ಲಿ ಗ್ರಾಮಸ್ಥರು
ಸಾಂದರ್ಭಿಕ ಚಿತ್ರ
ಚನ್ನಪಟ್ಟಣ:ಜೂ/೧೩/೨೦/ಶನಿವಾರ. OKತಾಲ್ಲೂಕಿನ ಶಾನುಭೋಗನಹಳ್ಳಿ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದ್ದು, ಹೈನುಗಾರಿಕೆಯನ್ನೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದ ಗ್ರಾಮದಲ್ಲಿ ಸೂಚಕ ಛಾಯೆ ಅಮರಿಕೊಂಡಿದೆ. ಈ ಗ್ರಾಮದ ಜನರು ಈಗ ಸುಲಭೋಪಾಯವೊಂದನ್ನು ಕಂಡುಕೊಂಡಿದ್ದು, ಅಕ್ಕಪಕ್ಕದೂರಿನ ತಮ್ಮ ನೆಂಟರಿಸ್ಟರ ಮನೆಗಳಿಗೆ ತಮ್ಮ ಹಾಲು ಕರೆಯುವ ಹಸುಗಳನ್ನು ಸಾಗಿಸಿ ಅವರ ಮೂಲಕ ವ್ಯಾಪಾರದಲ್ಲಿ ತೊಡಗಿರುವುದರಿಂದ ಆ ಗ್ರಾಮದ ಜನರಿಗೆ ಆತಂಕ ಮೂಡಿರುವುದರ ಜೊತೆಗೆ ಜಗಳಗಳು ಪ್ರಾರಂಭವಾಗಿವೆ.
ಸೋಂಕಿತರ ಮನೆಗಳಿಂದ ೫೦ ಮೀಟರ್ ದೂರವನ್ನು ನಿಯಂತ್ರಣ ವಲಯ (ಕಂಟೋನ್ಮೆಂಟ್ ಝೋನ್) ಎಂದು ಉಳಿದ ಭಾಗವನ್ನು ಬಫರ್ ಝೋನ್ ಎಂದು ಘೋಷಣೆ ಮಾಡಿದ್ದು ಕೃಷಿಗೆ ಆದ್ಯತೆ ನೀಡಿದ್ದರೂ ಸಹ ಬಮೂಲ್ ನವರು ಹಾಲು ಖರೀದಿಸದಿರುವುದರಿಂದ ಹೈನೋದ್ಯಮಿಗಳು ಸಂಕಷ್ಟಕ್ಕೀಡಾಗಿದ್ದರು. ಇದನ್ನು ಮನಗಂಡ ಸ್ಥಳೀಯ ಬಮೂಲ್ ನಿರ್ದೇಶಕ ಜಯಮುತ್ತು ಬಮೂಲ್ ವತಿಯಿಂದ ಶೇಕಡಾ ೫೦ ರಷ್ಟು ಹಣವನ್ನು ಹಾಗೂ ಗ್ರಾಮದ ಹಾಲು ಉತ್ಪಾದಕರ ಸಂಘದಿಂದ ಶೇಕಡಾ ೨೫ ರಷ್ಟು ಹಣವನ್ನು ಗ್ರಾಹಕರಿಗೆ ತುಂಬಿಕೊಡುವ ಭರವಸೆ ನೀಡಿದ್ದರೂ ಸಹ ಹಾಲನ್ನು ಭೂಮಿಗೆ ಚೆಲ್ಲುವ ಬದಲು ನೆಂಟರ ಮೂಲಕ ಹಾಲನ್ನು ಡೈರಿಗೆ ಹಾಕಲು ಪ್ರಯತ್ನಿಸಿದ್ದು ಇದು ಆತಂಕ ಮತ್ತು ವಿವಾದಕ್ಕೆ ಕಾರಣವಾಗಿದೆ.
ನಿನ್ನೆ (ಶುಕ್ರವಾರ) ಸಂಜೆ ಕೊಂಡಾಪುರ ಗ್ರಾಮಕ್ಕೆ ಶಾನುಭೋಗನಹಳ್ಳಿ ಯ ಗ್ರಾಮದ ಮೂರು ಹಸುಗಳನ್ನು ಕೊಂಡಾಪುರ ಗ್ರಾಮದ ನೆಂಟರು ತಂದು, ಅವುಗಳ ಹಾಲನ್ನು ಡೈರಿ ಗೆ ಹಾಕಬೇಕಾದರೆ ಸಣ್ಣ ಗಲಾಟೆಯು ನಡೆದಿದೆ. ಇದರಿಂದ ಜಿದ್ದಿಗೆ ಬಿದ್ದ ಕೆಲವರು ನಮಗೂ ನೆಂಟರಿದ್ದಾರೆ, ನಾವೂ ಅಲ್ಲಿಂದ ಹಸುಗಳನ್ನು ತಂದು ಹಾಲನ್ನು ಮಾರಾಟ ಮಾಡುತ್ತೇವೆ ಎಂಬ ವಾಗ್ವಾದಗಳು ನಡೆದಿದ್ದು, ಕೊರೊನಾ ಜೊತೆಗೆ ಸಂಬಂಧಗಳಲ್ಲಿಯೂ ಬಿರುಕು ಮೂಡುವ ಮುನ್ಸೂಚನೆಯಾಗಿದೆ.
ನಿಯಂತ್ರಣ ವಲಯದಿಂದ ಹಸುಗಳನ್ನು ಕೊಂಡು ತಂದು ಹಾಲನ್ನು ಕರೆಯಬಹುದು. ಪ್ರಾಣಿಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ವೈರಸ್ ಬರುವುದು ತೀರಾ ಕಡಿಮೆ. ತರುವ ಮುನ್ನಾ ಮತ್ತು ತಂದ ನಂತರ ಡೆಟಾಲ್ ಮತ್ತು ಬಿಸಿನೀರಿನಿಂದ ಹಸುವಿನ ಮೈ ತೊಳೆದು, ಅವರೂ ಸಹ ಮುಂಜಾಗ್ರತಾ ಕ್ರಮವನ್ನು ಕೈಗೊಂಡರೆ ಯಾವುದೇ ವೈರಸ್ ಹರಡುವುದಿಲ್ಲ. ಸುಖಾಸುಮ್ಮನೆ ಚರಂಡಿಗೆ ಚಲ್ಲುವ ಬದಲಿಗೆ ಈ ರೀತಿಯಾಗಿ ಉಪಯೋಗವಾಗುದು ಒಳ್ಳೆಯದು.
*ಡಾ ಜಯರಾಮು. ಪಶು ವೈದ್ಯಕೀಯ ಸಂಘದ ಅಧ್ಯಕ್ಷರು. ರಾಮನಗರ.*
ನಿಯಂತ್ರಣ ವಲಯದಲ್ಲೂ ಸಹ ಕೃಷಿ ಚಟುವಟಿಕೆಗೆ ಆದ್ಯತೆ ಇದ್ದು, ಹೈನುಗಾರಿಕೆಯೂ ಸಹ ಕೃಷಿ ಗೆ ಬರುವುದರಿಂದ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಹಸುವನ್ನು ಬೇರೆಯವರು ಕೊಂಡೊಯ್ದರೆ ಸಮಸ್ಯೆ ಆಗುವುದಿಲ್ಲ. ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಹಸುಗಳನ್ನು ಕರೆದೊಯ್ಯುವುದು ಸೂಕ್ತವಾಗಿದ್ದು ಇದರಿಂದ ಪೋಲಾಗುವ ಹಾಲನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ರೈತರಿಗೆ ವರದಾನವಾಗಲಿದೆ. ಸಂಬಂಧಿಸಿದ ಅಧಿಕಾರಿಗಳ ಜೊತೆ ಸಮಾಲೋಚಿಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ.
*ಬಿ ಕೆ ಸುದರ್ಶನ್. ತಹಶಿಲ್ದಾರರು. ಚನ್ನಪಟ್ಟಣ.*
ಗೋ ರಾ ಶ್ರೀನಿವಾಸ...
ಮೊ:9845856139.
Recent news in agriculture »
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ
ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ
ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ
ಪ್ರತಿಕ್ರಿಯೆಗಳು