Tel: 7676775624 | Mail: info@yellowandred.in

Language: EN KAN

    Follow us :


ರೈತ ಯುವಕರಿಗೆ ಮಾದರಿಯಾದ ಮಾಗಡಿಯ ಜೈನ ಸಮುದಾಯದ ಯುವಕ ಭರತ್ ಜೈನ್

Posted date: 06 Oct, 2020

Powered by:     Yellow and Red

ರೈತ ಯುವಕರಿಗೆ ಮಾದರಿಯಾದ ಮಾಗಡಿಯ ಜೈನ ಸಮುದಾಯದ ಯುವಕ ಭರತ್ ಜೈನ್

ಮಾಗಡಿ:ಅ/05/20/ಸೋಮವಾರ. ಶೇಟು ಅಥವಾ ಮಾರ್ವಾಡಿ ಅಂದ್ರೆ ಅವರೊಬ್ಬ ಲಾಭ ಮಾಡುವ ವ್ಯಾಪಾರಸ್ಥ ಎಂದೇ ಎಲ್ಲರೂ ಬಣ್ಣಿಸುತ್ತಾರೆ. ಇದನ್ನೂ ಅಲ್ಲಗಳೆಯಲೂ ಆಗುವುದಿಲ್ಲ. ಆದರೆ ಅದೇ ವ್ಯವಹಾರ ಮತ್ತು ವ್ಯಾಪಾರ ದೃಷ್ಟಿಯಿಂದಲೇ ಹಣ ಬರುವ ಗಿಡಗಳನ್ನು (ಕಮರ್ಷಿಯಲ್ ಕಾರ್ಪ್) ಬೆಳೆಸುವ ಜೊತೆಗೆ ಸಾವಯವ ಕೃಷಿ ಮಾಡುವ ಮೂಲಕ ವಾತಾವರಣದ ಸಮತೋಲನವನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯವಸಾಯ ಮಾಡುವ ಮೂಲಕ ಜಮೀನು ಹೊಂದಿದ್ದು ಪಾಳು ಬಿಟ್ಟಿರುವ ಇಂದಿನ ಕೆಲ ರೈತರಿಗೆ ಮಾದರಿ ವ್ಯವ(ಹಾರ)ಸಾಯಗಾರನಾಗಿ ಮಾದರಿಯಾಗಿದ್ದಾರೆ ಮಾಗಡಿ ನಗರದ ಭರತ್ ಜೈನ್.


ಕಳೆದ ಐವತ್ತು ವರ್ಷಗಳಿಂದ ಮಾಗಡಿಯಲ್ಲಿ ನೆಲೆಯೂರಿದ್ದು, ರಾಜಶ್ರೀ ಜ್ಯುವೆಲ್ಲರಿ ಅಂಗಡಿ ಹೊಂದಿರುವ ಇವರು ನಗರವಲ್ಲದೆ ತಾಲ್ಲೂಕು ಮತ್ತು ಜಿಲ್ಲಾದ್ಯಂತ ಚಿರಪರಿಚಿತರು. ಸ್ವವ್ಯವಹಾರಕ್ಕಷ್ಟೇ ಸೀಮಿತವಾಗದೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡ ಭರತ್ ಗೆ ವ್ಯವಸಾಯ ಮಾಡಬೇಕೆಂಬ ಹಂಬಲ ಚಿಗುರೊಡೆದ ತಕ್ಷಣವೇ ಭೂಮಿಯನ್ನು ಕೊಂಡು ವ್ಯವಸಾಯವನ್ನು ಆರಂಭಿಸಿಯೇ ಬಿಟ್ಟರು.


ಹನ್ನೊಂದು ಎಕರೆ ಭೂಮಿಯನ್ನು ಹಂತಹಂತವಾಗಿ ಒಂದೇ ಕಡೆ ಖರೀದಿಸಿದ ಇವರು ಬೋರ್ ವೆಲ್ ಕೊರೆಸಿ, ತೊಟ್ಟಿ ನಿರ್ಮಿಸಿಕೊಂಡು ಮೊಲಿಗೆ 500 ಹೆಬ್ಬೇವು (ತುರುಕು ಬೇವು) ಗಿಡಗಳನ್ನು ನೆಟ್ಟು ಪೋಷಿಸಿದರು. ಕೇವಲ ಆರು ವರ್ಷಗಳ ಈ ಮರಗಳು ಹತ್ತು ವರ್ಷಗಳ ಕಾಲ‌ ಬೆಳೆದಿರುವ ಮರಗಳಂತೆ ಬೃಹದಾಕಾರವಾಗಿ ಬೆಳೆದು‌ ನಿಂತಿವೆ.

ಇನ್ನು ಐದರಿಂದ ಆರು ವರ್ಷಗಳೊಳಗೆ ಕಟಾವು ಮಾಡುವ ಮುನ್ನಾ ಎದೆ ಮಟ್ಟಕ್ಕೆ ಮತ್ತಷ್ಟು ಗಿಡಗಳು ಬೆಳೆಯಬೇಕೆಂಬ ವ್ಯವಹಾರದ ಬುದ್ದಿಯನ್ನು ಉಪಯೋಗಿಸಿದ ಭರತ್ ಹೆಬ್ಬೇವು ಮರದ ನಡುವೆ ಶ್ರೀಗಂಧ ಸೇರಿದಂತೆ ಅನೇಕ ಕಮರ್ಷಿಯಲ್ ಗಿಡಗಳನ್ನು ನೆಟ್ಟಿದ್ದಾರೆ.


*ಒಂದು ಎಕರೆ ಭೂಮಿಯಲ್ಲಿ 600 ಮಾವಿನ ಸಸಿ*

ಮೊದಲು ಒಂದು ಎಕರೆ ಭೂಮಿಗೆ 40 ರಿಂದ 50 ಮಾವಿನ ಸಸಿಗಳನ್ನು ಮಾತ್ರ ನೆಡುತ್ತಿದ್ದರು. ಅವು ದೊಡ್ಡ ಮರಗಳಾಗಿ ಬೆಳೆಯುವುದಲ್ಲದೆ ಔಷಧ ಸಿಂಪಡಣೆ ಮತ್ತು ಹಣ್ಣು ಕೊಯ್ಲಿನ ಸಮಯದಲ್ಲಿ ಮಾನವ ಶ್ರಮವನ್ನು ಹೆಚ್ಚು ಬೇಡುತ್ತವೆ. ಹಾಗಾಗಿ ಇಸ್ರೇಲ್ ದೇಶದ ಕ್ರಮದಲ್ಲಿ ಒತ್ತು ಸಸಿ ನೆಟ್ಟು ಪೋಷಿಸಿ ಈಗಾಗಲೇ ಒಂದು ಬೆಳೆಯನ್ನು ತೆಗೆದಿದ್ದಾರೆ. ಪ್ರತಿ ಕೊಯ್ಲಿನ ನಂತರ ತಲಾ ಮೂರರಂತೆ ಕಡ್ಡಿಗಳನ್ನು ಬಿಟ್ಟು ರೆಂಬೆಗಳನ್ನು (ಟ್ರಿಮ್) ಕತ್ತರಿಸುತ್ತಾರೆ. ಬಹುತೇಕ ಔಷಧ ಸಿಂಪಡಣೆ ಮಾಡಲೇ ಬಾರದು ಎಂಬ ದೃಷ್ಟಿಯಿಂದ ಹುಳುಗಳು ಮುತ್ತಿಕ್ಕದಂತೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮಾವಿನ ಸಸಿಗಳ ನಡುವೆ ತರಕಾರಿ ಬೆಳೆಯುವ ಮೂಲಕ ದ್ವಿಬೆಳೆ ಪದ್ದತಿಯನ್ನು ಅನುಸರಿಸುತ್ತಿದ್ದಾರೆ.


*ದಾಳಿಂಬೆ, ನಾಟಿ ಶುಂಠಿ ಸಾಸಿವೆ ಮತ್ತು ವಿವಿಧ ಮಾವು*

ಒಂದು ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದಾರೆ. ಈ ದಾಳಿಂಬೆಯ ನಡುವೆ ಸಾಸಿವೆ ಸೇರಿದಂತೆ ಅನೇಕ ರೀತಿಯ ಕಾಳಿನ ಗಿಡಗಳನ್ನು ನೆಟ್ಟು ತಮ್ಮ ಮನೆ ಬಳಕೆಗೆ ಬೇಕಾದ ತರಕಾರಿ ಮತ್ತು ಕಾಳುಗಳನ್ನು ಬೆಳೆದುಕೊಳ್ಳುತ್ತಿದ್ದಾರೆ. ರಾಮಫಲ, ಸೀತಾಫಲ, ಲಕ್ಷ್ಮಣಫಲ ಮತ್ತು ಹನುಮನಫಲ ದ ಗಿಡಗಳು, ಕೆಂಪುಮಾವು, ಕಪ್ಪು ಮಾವು ಸೇರಿದಂತೆ 30 ಕ್ಕೂ ಹೆಚ್ಚು ವಿವಿಧ ತಳಿಯ ಮಾವಿನ ಗಿಡಗಳು, ವಿದೇಶಿ ತಳಿಗಳ ಅನೇಕ ಹಣ್ಣಿನ ಗಿಡಗಳು. ಬಿಳಿ ನೇರಳೆ, ದಪ್ಪ ಶುಂಠಿ, ವಿವಿಧ ರೀತಿಯ ಹಲಸು ಸೇರಿದಂತೆ 100 ಕ್ಕೂ ಹೆಚ್ಚು ರೀತಿಯ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಅಲ್ಲದೆ ಅನೇಕ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಯನ್ನು ಬೆಳೆಸಿದ್ದಾರೆ. ಸ್ವತಃ ಅನೇಕ ಕಾಯಿಲೆಗಳಿಗೆ ಆಯುರ್ವೇದ ಔಷಧಿಯನ್ನು ನೀಡಿ ಗುಣಪಡಿಸುತ್ತಾರೆ.


*ನೋವು ತಂದ ಬೆಂಕಿ*

ಹನ್ನೊಂದು ಎಕರೆ ಭೂಮಿಯಲ್ಲದೆ ಮೂರು ಎಕರೆ ಭೂಮಿಯಲ್ಲಿ ತೇಗ (ಟೀಕ್) ದ ಗಿಡಗಳನ್ನು ಬೆಳೆಸಿ, ಉದ್ಯಾನ ನಿರ್ಮಿಸಿ, ಆಟವಾಡಲು ಅನೇಕ ಮಾದರಿಯ ಸಾಮಾಗ್ರಿಗಳನ್ನು ಅಳವಡಿಸಿ ಪ್ರವಾಸಿ ತಾಣದಂತೆ ನಿರ್ಮಿಸಿದ್ದರು. ಆದರೆ ಯಾರೋ ‌ಕಿಡಿಗೇಡಿಗಳು ಇಡೀ ಪ್ಲಾಂಟ್ ಗೆ ಬೆಂಕಿ‌ ಹಚ್ಚಿಬಿಟ್ಟರು. ಇದರಿಂದ ಮನನೊಂದರೂ ಸಹ ಕುಗ್ಗದ ಛಲಬಿಡದ ಭರತ್ ಕೃಷಿಯನ್ನು ಮುಂದುವರೆಸಿರುವುದು ವ್ಯವಸಾಯದ ಮೇಲಿರುವ ಅವರ ಅಭಿಮಾನ ಮತ್ತು ಇಚ್ಛಾಶಕ್ತಿಯನ್ನು ತೋರಿಸುತ್ತದೆ.


ಇಂದಿಗೂ ಸಹ ಬೆಂಗಳೂರು ಸೇರಿದಂತೆ ಅವರ ಎಲ್ಲಾ ಬಂಧು ಬಳಗಗಳು ತೋಟವನ್ನು ಕಣ್ತುಂಬಿಕೊಳ್ಳಲೇ ಬಂದು ಹೋಗುತ್ತಿದ್ದಾರೆ. ಸದ್ಯ ಭರತ್ ಜೈನ್ ರವರು ತಮ್ಮ ಒಡವೆ ಅಂಗಡಿಯ ವ್ಯವಹಾರದ ಜೊತೆಗೆ ವ್ಯವಸಾಯ ಮಾಡುತ್ತಿದ್ದು ಜಮೀನು ಇದ್ದು ವ್ಯವಸಾಯ ಮಾಡದೆ ಪಾಳು ಬಿಟ್ಟಿರುವ ರೈತರಿಗೆ ಮಾದರಿಯಾಗಿದ್ದಾರೆ. ಅನೇಕ ಮಿತ್ರರು ಸಹ ಅವರನ್ನು ಅಭಿನಂದಿಸಿ ಹವ್ಯಾಸಿ ಮಾದರಿ ಯುವ ರೈತ ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ. ಇಂತಹ ಯುವ ಮಾದರಿ ರೈತರನ್ನು ಸ್ಥಳೀಯ ಆಡಳಿತ, ಸಂಘಸಂಸ್ಥೆಗಳು ಮತ್ತು ಸರ್ಕಾರ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ.


ಭರತ್ ಜೈನ್ ರವರ ಸಂಪರ್ಕಕ್ಕಾಗಿ ಅವರ ಮೊ:9880856664.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ

ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ

ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

Top Stories »  


Top ↑