ಲಾಕ್ಡೌನ್ ಹಿನ್ನೆಲೆ; ನಲುಗಿದ ರೈತ. ರೈತನ ಗೋಳು ಕೇಳೋರ್ ಯಾರು ?
ಕೊರೊನಾ ಎಂಬ ಮಹಾಮಾರಿಯಿಂದ ಅನ್ನದಾತನ ಕೈ ಕಟ್ಟಿದೆ. ಅನ್ನದಾತನ ಕೈ ಕಟ್ಟಿದ ನಂತರ ದೇಶದ ಇರೆಂಭತ್ತೇಳು ಕೋಟಿ ಜೀವರಾಶಿಗಳಿಗೂ ತಕ್ಷಣ ಅರಿವಾಗದಿದ್ದರೂ ಶೀಘ್ರವಾಗಿ ಮುಂದಿನ ದಿನಗಳಲ್ಲಿ ಆಹಾರದ ಕೊರತೆ ಎದ್ದು ಕಾಣಲಿದೆ. ಈ ಕೊರೊನಾ ಸಂದರ್ಭದಲ್ಲಿ ರೈತನಿಗೆ ನೆರವಾಗಬೇಕಾಗಿದ್ದ ಸರ್ಕಾರಗಳು ಕೇವಲ ಅಂಕಿಅಂಶಗಳಲ್ಲಿ, ಪ್ಯಾಕೇಜ್ ಘೋಷಣೆಯಲ್ಲಿ, ಅಧಿಕಾರಿಗಳ ಮತ್ತು ಸಚಿವರ ಸಭೆಯಲ್ಲಿ ಪುಂಖಾನುಪುಂಖವಾಗಿ ಹೇಳಿಕೆಗಳಾಗಿ ಬರುತ್ತಿವೆಯೇ ವಿನಹ ರೈತನಿಗೆ ಮಾತ್ರ ತಲುಪುತ್ತಿಲ್ಲ.
ತಾಲ್ಲೂಕಿನ ಇಗ್ಗಲೂರು ಬಳಿಯ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದ ಸಿದ್ದೇಶ್ ಎಂಬ ರೈತ ನಾಲ್ಕು ಎಕರೆಯಲ್ಲಿ, ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ, ಏಲಕ್ಕಿ ಬಾಳೆ ಬೆಳೆದಿದ್ದು, ಬಹುತೇಕ ಎಲ್ಲವೂ ಗೊನೆ ಬಿಟ್ಟಿದ್ದವು. ಮಾರುಕಟ್ಟೆಯಲ್ಲಿ ಯಾವಾಗ ಏಲಕ್ಕಿ ಬಾಳೆಯ ಬೆಲೆ ಕಿಲೋಗೆ ಹದಿನೈದರಿಂದ ಹದಿನೆಂಟು ರೂಪಾಯಿಗೆ ಕುಸಿಯಿತೋ, ಆಗಲೇ ಆತ ಇಡೀ ಬಾಳೆ ತೋಟವನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ. ಆತನಿಗೆ ಲಾಭ, ಬಂಡವಾಳದ ಮಾತಿರಲಿ, ನೆಲಸಮ ಮಾಡಲು ಕೊಡುವ ಕೂಲಿಯೂ ದೊರೆಯದಿರುವುದು, ಕೃಷಿ ನೀತಿಗಳನ್ನು ಅಣಕಿಸುತ್ತಿದೆ.
ಗರಕಹಳ್ಳಿ ಗ್ರಾಮದ ಪ್ರಗತಿಪರ ರೈತ ಎನಿಸಿಕೊಂಡ ಜಿಲ್ಲಾ ಮಟ್ಟದ ಕೃಷಿ ರತ್ನ ಪ್ರಶಸ್ತಿ ಪಡೆದ ಪುಟ್ಟಸ್ವಾಮಿಗೌಡ ರದು ಮತ್ತೊಂದು ಕಥೆ. ಎರಡೂ ಕಡೆ ಒಟ್ಟು ನಾಲ್ಕು ಎಕರೆಗಳಿಗೂ ಹೆಚ್ಚು ಜಮೀನಿನಲ್ಲಿ ಬೆಳೆದ ಟೊಮ್ಯಾಟೊ ಹಣ್ಣುಗಳು, ಭೂಮಿಗೆ ಬೀಳುತ್ತಿವೆ. ಹನಿ ನೀರಾವರಿ ಸೇರಿದಂತೆ ಒಟ್ಟು ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿರುವ ಇವರು ಒಂದು ಕೊಯ್ಲನ್ನೂ ಸಹ ಮಾಡಿಲ್ಲ. ಎರಡು ಎಕರೆಯಲ್ಲಿ ಬೆಳೆದ ಸೌತೆಕಾಯಿಗಳು ಹಂಬುಗಳಲ್ಲಿ ಒಣಗಿ ನೇತಾಡುತ್ತಿವೆ. ಟೊಮ್ಯಾಟೊ ಹಣ್ಣುಗಳು, ಇತ್ತ ಭೂಮಿಗೂ ಗೊಬ್ಬರವಾಗುವುದಿಲ್ಲ. ಮಾರುಕಟ್ಟೆಯಲ್ಲಿ ನಾಲ್ಕು ರೂಪಾಯಿಗೆ ಕೇಳಿದರೆ, ಸೌತೆಕಾಯಿಗಳನ್ನು ಎರಡರಿಂದ ಮೂರು ರೂಪಾಯಿಗಳಿಗೆ ಕೇಳುತ್ತಾರೆ.
ರೈತರಿಗೆ ಸರ್ಕಾರ ಘೋಷಿಸಿರುವ ಪ್ಯಾಕೇಜ್ ಬಗ್ಗೆ ಅಧಿಕಾರಿಗಳ ಬಳಿ ಸ್ಪಷ್ಟತೆ ಇಲ್ಲ. ಕೃಷಿ ಅಧಿಕಾರಿಗಳು, ತೋಟಗಾರಿಕೆ ಇಲಾಖೆಯ ಕಡೆ ಬೊಟ್ಟು ಮಾಡಿದರೆ, ತೋಟಗಾರಿಕೆ ಇಲಾಖೆಯವರು, ಗ್ರಾಮ ಪಂಚಾಯತಿ ಕಡೆ ಕೈ ತೋರಿಸುತ್ತಾರೆ. ಬೆಳೆ ಸಮೀಕ್ಷೆ ಎಂಬುದು ಕೇವಲ ಬೂಟಾಟಿಕೆ. ಈಗಲಾದರೂ ಅಧಿಕಾರಿಗಳು ಮತ್ತು ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ನಮಗೆ ಪರಿಹಾರ ದೊರಕುವಂತೆ ಹಾಗೂ ಮಾರುಕಟ್ಟೆ ಭದ್ರತೆ ಒದಗಿಸುವಂತೆ ಅವರು ಆಗ್ರಹ ಪಡಿಸುತ್ತಾರೆ.
ತಾಲ್ಲೂಕಿನ ದಕ್ಷಿಣ ಭಾಗದ ರೈತರ ಗೋಳು ಈ ರೀತಿಯದ್ದಾದರೆ, ತಾಲ್ಲೂಕಿನ ಉತ್ತರ ಭಾಗದ ರೈತರದ್ದು ಮತ್ತೊಂದು ಸಂಕಷ್ಟ. ಈ ಭಾಗದ ರೈತರು ಕಷ್ಟಪಟ್ಟು, ಹಗಲಿರುಳೆನ್ನದೆ, ಅಭಾವದ ವಿದ್ಯುಚ್ಛಕ್ತಿ ಮತ್ತು ನೀರಿನ ನಡುವೆಯೂ, ಬೆಳೆದ ಬೆಳೆಗಳನ್ನು ಕಾಡಾನೆಗಳು ಮತ್ತು ಕಾಡು ಹಂದಿಗಳು ಲೂಟಿಗೈಯ್ಯುತ್ತಿವೆ. ಮುತ್ತತ್ತಿ ಮತ್ತು ತೆಂಗಿನಕಲ್ಲು ಅರಣ್ಯದಿಂದ ದಾಂಗುಡಿ ಇಡುವ ಈ ಆನೆಗಳು ರೈತ ಬೆಳೆದ ಬೆಳೆಗಳನ್ನು ತಿಂದು ಹಾಕುವುದಲ್ಲದೆ, ತುಳಿದು ಹಾಳುಗೆಡವುತ್ತಿವೆ. ಕೃಷಿ ಪರಿಕರಗಳನ್ನು ನಾಶಪಡಿಸಿ, ರೈತನನ್ನು ಸಾಲಗಾರರನ್ನಾಗಿ ಮಾಡುತ್ತಿವೆ.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರವಾಗಿ ಎಚ್ಚೆತ್ತು, ರೈತರ ಸಂಕಷ್ಟಗಳಿಗೆ ಸ್ಪಂದಿಸಲಿ ಎಂದು ನೊಂದ ರೈತರ ಆಗ್ರಹವಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in agriculture »
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ
ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ
ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ
ಪ್ರತಿಕ್ರಿಯೆಗಳು