ರೈತನಿಗೆ ರೀಲರ್ಸ್ ನಿಂದ ದೌರ್ಜನ್ಯ. ಕಾನೂನು ಕ್ರಮ ಕೈಗೊಳ್ಳುವಂತೆ ಮದ್ದೂರು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ನ ಲಿ ಕೃಷ್ಣ ಒತ್ತಾಯ
ಮದ್ದೂರು: ರಾಮನಗರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೀಲರ್ ರಿಂದ ನಡೆದ ದೌರ್ಜನ್ಯ ಖಂಡಿಸಿ ರೀಲರ್ ನನ್ನು ತಕ್ಷಣ ಬಂಧಿಸಬೇಕು ಹಾಗೂ ಲೈಸನ್ಸ್ ರದ್ದತಿಗೆ ಮಾಡಬೇಕು ಎಂದು ಮದ್ದೂರು ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ನ.ಲಿ.ಕೃಷ್ಣ ಒತ್ತಾಯಿಸಿದರು. ಅವರು ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು.
ರಾಮನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ದಿ 12-1-2022 ರಂದು ಹಾವೇರಿ ತಾಲ್ಲೂಕಿನ ಗುತ್ತಲು ಗ್ರಾಮದ ವಿರೂಪಾಕ್ಷಪ್ಪ ಬಿನ್ ಮಲ್ಲಪ್ಪ ಅವರ ಮೇಲೆ ರೀಲರ್ ಮುನೀರ್ ಆಹ್ಮದ್ ಬಿನ್ ಗಪಾರ್ ಸಾಬ್ ಇವರು ದೌರ್ಜನ್ಯ ಎಸಗಿದ ಕ್ರಮ ಖಂಡನೀಯ ಎಂದು ಪ್ರಗತಿ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ ಎಂದು ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು. ರೀಲರ್ ಮುನೀರ್ ಅವರು ರೇಷ್ಮೆ ಗೂಡು ಹರಾಜಿನ ನಂತರ ಅಕ್ರಮವಾಗಿ ಗುಂಪು ಕಟ್ಟಿಕೊಂಡು ನಿಯಮ ಬಾಹಿರವಾಗಿ ಗೂಡಿನ ವಿಂಗಡಣೆ
ಬೇರ್ಪಡಿಸುವಿಕೆ, ಅಕ್ರಮವಾಗಿ ಗೂಡನ್ನು ಸಾಗಿಸುವ ಪ್ರಯತ್ನ ಮತ್ತು ಗೂಡು ಕದಿಯುವ ಯತ್ನ ಮಾಡಿರುವುದು ಕಾನುನು ಬಾಹಿರ ಕ್ರಮವಾಗಿರುತ್ತದೆ ಎಂದ ಅವರು
ರೈತ ವಿರೂಪಕ್ಷಪ್ಪ ಇಂತಹ ಕ್ರಮ ಸರಿಯಲ್ಲಾ ಎಂದು ತಿಳಿಸಿ ಗೂಡಿನ ಲಾಟು ಅಕ್ರಮವಾಗಿ ಪಲ್ಲಟ ಮಾಡುವ ಕ್ರಮ ಸರಿಯಲ್ಲಾ ಎಂದಿದ್ದಕ್ಕೆ ಅವ್ಯಾಚ್ಯ ಶಬ್ದಗಳ ಮೂಲಕ ನಿಂದಿಸಿ, ಅತನ ಸಹಚರರೊಟ್ಟಿಗೆ ಸೇರಿ ಹಲ್ಲೆಗೂ ಯತ್ನಿಸಿದ್ದಾರೆ.
ರೀಲರ್ ನ ಇಂತಹ ನಿಯಮಬಾಹಿರ ಕ್ರಮ ಖಂಡನೀಯವಾದದ್ದು
ರೈತ ವಿರುಪಾಕ್ಷಪ್ಪನ ಮೇಲೆ ರೀಲರ್ ಮುನೀರ್ ಅಹ್ಮದ್ ಅಕ್ರಮಮವಾಗಿ ಗುಂಪು ಕಟ್ಟಿಕ್ಕೊಂಡು ದೌರ್ಜ್ಯನ್ಯ ಎಸಗುತ್ತಿದ್ದರು ಯಾವೊಬ್ಬ ಅಧಿಕಾರಿಯು ರೈತನ ನೆರವಿಗೆ ಧಾವಿಸಿ ರಕ್ಷಣೆ ನೀಡದಿದ್ದದ್ದು ಅಶ್ಚರ್ಯ ಮತ್ತು ಅಘಾತಕಾರಿಯಾದದ್ದು ಎಂದು ಆತಂಕ ವ್ಯಕ್ತಪಡಿಸಿದರು.
ಇಂತಹ ಘಟನೆಗಳು ಮಾರುಕಟ್ಟೆಯಲ್ಲಿ ಪ್ರತಿದಿನ ನಡೆಯುತ್ತಿದ್ದು, ಕೆಲವು ಹೊರಗೆ ಬಾರದಂತೆ ಮುಚ್ಚಿ ಹಾಕುತ್ತಿದ್ದಾರೆ. ಅಧಿಕಾರಿಗಳು ಮಾರುಕಟ್ಟೆಯಲ್ಲಿ ನಡೆಯುವ ಗೂಡು ಕದಿಯುವ ಮಾಫಿಯಾ ಮತ್ತು ದೌರ್ಜ್ಯನ್ಯ ಎಸಗುವ ರೀಲರ್ ಗಳೊಂದಿಗೆ ಮಾರುಕಟ್ಟೆ ಅಧಿಕಾರಿಗಳು ಶಾಮಿಲಾಗಿರುವ ಮತ್ತು ಇಂತಹ ಕೃತ್ಯ ಪೊಷಣೆಮಾಡುತ್ತಿರುವ ಕುರಿತು ಪುಷ್ಠಿ ನೀಡುತ್ತದೆ ಎಂದು ಆರೋಪಿಸಿದರು.
12-1-2022 ರಂದು ನಡೆದ ಘಟನೆ ಬಗ್ಗೆ ಯಾವುದೆ ಪೊಲೀಸ್ ದೂರು ನೀಡದ ಮಾರುಕಟ್ಟೆ ಅಧಿಕಾರಿ
ರೀಲರ್ ದೌರ್ಜನ್ಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆದ ನಂತರ ಮರುದಿನ ಸಾಂಕೇತಿಕವಾಗಿ ದೂರು ನೀಡಿದ್ದಾರೆ. ಇದು ಅಧಿಕಾರಿಗಳ ನಡೆಯನ್ನು ಪ್ರಶ್ನಿಸುವಂತಿದೆ ಎಂದು ಕಿಡಿಕಾರಿದರು. ಈ ದೂರನ್ನು ಪಡೆದ ಪೊಲೀಸರು ಎಪ್ ಐ ಆರ್ ದಾಖಲಿಸದೆ ಎನ್ ಸಿ ಆರ್ ಮಾಡಿರುವ ಕ್ರಮ ಸಂಪೂರ್ಣವಾಗಿ ವ್ಯವಸ್ಥಿತ ಸಂಚು ಮತ್ತು ಮಾರುಕಟ್ಟೆ ಅಧಿಕಾರಿ ತನ್ನಹುದ್ದೆಯ ರಕ್ಷಣೆಗಾಗಿ ಮಾಡಿದ ನಾಟಕ ಎಂಬುದು ಸ್ಪಷ್ಠ.
ಆ ಕಾರಣ ಕೂಡಲೆ ರೀಲರ್ ಮುನೀರ್ ಅಹ್ಮದ್ ನ ಬಂಧನ ಆಗಬೇಕು ರೀಲರ್ ಲೈಸನ್ಸ್ - 2599 ಶಾಶ್ವತವಾಗಿ ರದ್ದುಗೊಳಿಸಬೇಕು ಈತನ ಹೆಸರು ಕಪ್ಪು ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರ ಸಂಘದ ಅಧ್ಯಕ್ಷ ಜಿ ಎನ್ ಸತ್ಯ, ಕಕಜವೇ ಜಿಲ್ಲಾಧ್ಯಕ್ಷ
ಉಮಾ ಶಂಕರ್ ಉಪಸ್ಥಿತದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in agriculture »
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ
ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ
ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ
ಪ್ರತಿಕ್ರಿಯೆಗಳು