ಮೋದಿ ಬಂದು ಟಾಟಾ ಮಾಡುತ್ತಾರೆ, ನೀವು ಟಾಟಾ ಮಾಡಿ ಕಳುಹಿಸಿ. ಸಂಸದ ಡಿ ಕೆ ಸುರೇಶ್ ವ್ಯಂಗ್ಯ

ಚನ್ನಪಟ್ಟಣ:ಏ-29: ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಗೊತ್ತಿರೋದು ಎರಡೇ, ಒಂದು ಟಾಟಾ ಮಾಡೋದು ಮತ್ತೊಂದು ಮನ್ ಕೀ ಬಾತ್ ನಲ್ಲಿ ಮಾತನಾಡೋದು. ವೇದಿಕೆ ಸಿಕ್ಕಾಗ ಒಬ್ಬರೇ ಮಾತನಾಡೋದು. ಹಾಗಾಗಿ ಟಾಟಾ ಮಾಡಲು ಬರುವ ಪ್ರಧಾನಿ ಮೋದಿರವರಿಗೆ ಮತ್ತು ಬಿಜೆಪಿ ಪಕ್ಷಕ್ಕೆ ಈ ರಾಜ್ಯದಿಂದಲೇ ಟಾಟಾ ಮಾಡಿ ಮನೆಗೆ ಕಳುಹಿಸಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಪ್ರಧಾನಿ ನರೇಂದ್ರ ಮೋದಿರವರ ಬಗ್ಗೆ ವ್ಯಂಗ್ಯ ಮಾಡಿದರು.
ಅವರು ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದ, ಚನ್ನಪಟ್ಟಣ ತಾಲ್ಲೂಕು ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಸ್.ಗಂಗಾಧರ್ ರವರ ಮತ ಪ್ರಚಾರದ ಸಂದರ್ಭದಲ್ಲಿ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಬರಲಿಲ್ಲ ನೆರೆ ಬಂದು ಹಾಳು ಮಾಡಿದಾಗ ಬರಲಿಲ್ಲ ಕೇವಲ ಚುನಾವಣೆ ಅಂದಾಕ್ಷಣ ಟಾಟಾ ಮಾಡಲು ಬರುತ್ತಿದ್ದಾರೆ ಇದು ಅವರಿಗೆ ಸರಿಯೇ ಎಂದು ಟೀಕಾ ಪ್ರಹಾರ ನಡೆಸಿದರು.
ಸ್ವಾಭಿಮಾನಿಗಳು ಅವರಲ್ಲಾ, ಕನ್ನಡಿಗರಾದ ನಾವು ಸ್ವಾಭಿಮಾನಿಗಳು. ನಮಗೆ ಅವರು ಮಾಡಿರುವ ಟಾಟಾ ಸಾಕುಸಾಕಾಗಿದೆ. ಇನ್ನು ಅವರ ಟಾಟಾ ಬೇಕಾಗಿಲ್ಲ, ಟಾಟಾ ಮಾಡಿಯೇ ರಾಜ್ಯದ ಸರ್ವಜನರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಬರೆ ಎಳೆದಿದ್ದು ಸಾಕು, ಜನರು ಈ ರಾಜ್ಯದಿಂದ ಬಿಜೆಪಿಯನ್ನು ಎಷ್ಟು ಹೊತ್ತಿಗೆ ಓಡಿಸಬೇಕು ಎಂದು ಕಾತುರತೆಯಿಂದ ಕಾಯುತ್ತಿದ್ದಾರೆ, ಈ ಭಾರಿ ಬಿಜೆಪಿ ಯ ಆಟ ಏನೂ ನಡೆಯುವುದಿಲ್ಲ. ಅಭಿವೃದ್ದಿಗೆ ಮತ್ತೊಂದು ಹೆಸರಾಗಿರುವ ಕಾಂಗ್ರೆಸ್ ಪಕ್ಷವನ್ನು ಅದರಲ್ಲೂ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್.ಗಂಗಾಧರ್ ವರನ್ನು ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಸಾಮಾನ್ಯ ಕಾರ್ಯಕರ್ತರಾದ ಎಸ್.ಗಂಗಾಧರ್ ರವರಿಗೆ ಕಾಂಗ್ರೆಸ್ ಹೈಕಾಮಾಂಡ್ ಚನ್ನಪಟ್ಟಣದ ಅಭ್ಯರ್ಥಿಯಾಗಿ ಬಿ ಪಾರಂ ನೀಡಿರುವುದು, ಕಾಂಗ್ರೆಸ್ ಪಕ್ಷದ ಹಿಂದುಳಿದವರ ಬಡವರ್ಗದವರ ಪಕ್ಷ ಎಂದು ಸಾಬೀತಾಗಿದೆ, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ವಿಧಾನಪರಿಷತ್ತು ಸದಸ್ಯರು ಇನ್ನು ನಾಲ್ಕುವರ್ಷಗಳು ಶಾಸಕರಾಗಿಯೇ ಅಧಿಕಾರ ನಡೆಸಬಹದು ಅವರಿಗೆ ಈ ಚುನಾವಣೆ ಅವಶ್ಯಕವಲ್ಲ ಅಲ್ಲದೆ ಕೇವಲ ಭರವಸೆಗಳನ್ನೇ ನೀಡಿ ಕ್ಷೇತ್ರದ ಜನರನ್ನು ದಿಕ್ಕು ತಪ್ಪಿಸಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿರವರಿಗೆ ಈ ಕ್ಷೇತ್ರದ ಜನರು ಯಾವುದೇ ಕಾರಣಕ್ಕೂ ಆಶೀರ್ವಾದ ಮಾಡುವುದಿಲ್ಲ ಅದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರ ಹಿಡಿಯಲಿದ್ದು ಕಾಂಗ್ರೆಸ್ ಅಭ್ಯರ್ಥಿಯಾದ ನಿಮ್ಮ ಮನೆ ಮಗ ಗಂಗಾಧರ್ ಗೆ ಒಂದು ಅವಕಾಶ ಮಾಡಿಕೊಡಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೊಂಗನೂರು ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ರಂಗನಾಥ್ ಕಳೆದ ಐದು ವರ್ಷಗಳಿಂದ ಅಧಿಕಾರ ನಡೆಸಿದ ಬಿಜೆಪಿ ಪ್ರತಿಯೊಂದು ಸಮುದಾಯದಲ್ಲಿನ ಸರ್ವಜನಾಂಗೀಯರಿಗೆ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಯನ್ನು ಮಾಡಿರುವುದರಿಂದ ಜನರು ರೋಸಿಹೋಗಿದ್ದು ಎದುರಾಗಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆಂದರು.
ಕಾಂಗ್ರೆಸ್ ಅಭ್ಯರ್ಥಿ ಎಸ್.ಗಂಗಾಧರ್ ಮಾತನಾಡಿ, ರಾಜ್ಯದಲ್ಲಿ ಜನಪರ ಆಡಳಿತ ನೀಡಲು ಸಮರ್ಥವಾದ ಪಕ್ಷ ಇದ್ದರೇ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ, ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಸಾಧನೆ ಏನೆಂದರೆ ಕೇವಲ ಬರಿ ಹಗರಣಗಳನ್ನು ಬಿಟ್ಟರೆ ರಾಜ್ಯದ ಜನರ ಕಷ್ಟಸುಖಗಳನ್ನು ಆಲಿಸದೆ ಕೇವಲ ದುಡ್ಡು ಮಾಡುವ ಸರ್ಕಾರವಾಗಿ ನಿರ್ಮಾಣವಾಯಿತು ಎಂದರು.
ಜನಸಾಮಾನ್ಯರ ದಿನಸಿ ಪದಾರ್ಥಗಳ ಮೇಲೆ ಜಿಎಸ್ಟಿ ಎಂಬ ಬರೆಯನ್ನು ಹಾಕಿ ಭಾರತ ದೇಶದಲ್ಲಿ ಇಲ್ಲಿಯವರೆಗೂ ಆಳಿದ ಯಾವ ಪಕ್ಷಗಳು ಎಸಗದ ಅನ್ಯಾಯವನ್ನು ಬಿಜೆಪಿಯವರು ಮಾಡಿದ್ದಾರೆಂದರೆ ಆಶ್ಚರ್ಯವಿಲ್ಲ, ತಿನ್ನುವ ಅನ್ನ, ಕುಡಿಯುವ ಕಾಫಿ-ಟೀ ಮೇಲೆ ಜಿಎಸ್ಟಿ ಹಾಕಿ ದೇಶದ ಜನರ ಮೇಲೆ ಸವಾರಿ ಮಾಡಿರುವ ಬಿಜೆಪಿಗೆ ಈ ಭಾರಿ ಸೋಲು ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗೃಹಜ್ಯೋತಿಯ ಮುಖಾಂತರ ಪ್ರತಿಮನೆಗೆ 200 ಯುನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆ ಮುಖಾಂರತರ ಪ್ರತಿಮನೆಗೆ 2,000 ರೂ ಹಣ, ಅನ್ನಭಾಗ್ಯ ಯೋಜನೆಯ ಮುಖಾಂತರ ಪ್ರತಿಮನೆಯ ಪ್ರತಿವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ, ಯುವನಿಧಿ ಯೋಜನೆಯ ಮುಖಾಂತರ ಪ್ರತಿಮನೆಯ ನಿರುದ್ಯೋಗಿ ಪದವೀಧರನಿಗೆ 3,000 ರೂ, ಡಿಪ್ಲೊಮಾ ಪದವೀಧರರಿಗೆ 1,500ರೂ ಉಚಿತ ಹಾಗೂ ಹಲವಾರು ಯೋಜನೆಗಳ ಭರವಸೆಯನ್ನು ನೀಡಿರುವ ಕಾಂಗ್ರೆಸ್ ಪಕ್ಷವನ್ನು ಅಂದರೆ ಪಕ್ಷದ ಅಭ್ಯರ್ಥಿಯಾದ ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಬೇಕೆಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ದಿಗ್ಗರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವರಿಗೆ ಶಕ್ತಿ ನೀಡಲು ಕಾಂಗ್ರೆಸ್ ಪಕ್ಷವನ್ನು ಈ ಭಾರಿ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಚಂದ್ರಸಾಗರ್, ಸುರೇಶ್, ಪಾಪು( ಯೋಗೇಶ್), ಎಲೆತೋಟದಹಳ್ಳಿ ಶಿವು, ಸುಣ್ಣಘಟ್ಟದ ಪಾಪಣ್ಣ, ಎ.ಸಿ.ವೀರೇಗೌಡ, ಶಿವಮಾದು, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್, ಮಹಿಳಾ ಮುಖಂಡರುಗಳಾದ ಕೊಕೀಲ. ಪದ್ಮ ಹಾಗೂ ಹಲವಾರು ಮಂದಿ ಮುಖಂಡರು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in arts »

ಮಹಾಪೌರ್ಣಿಮೆ ನಾಟಕ ಬಡಜನರ ದನಿಯಾಗಿದೆ, ಪ್ರೊ ಹೊನ್ನು ಸಿದ್ದಾರ್ಥ
ಬೆಂಗಳೂರು: ರಂಗ ನಿರ್ದೇಶಕ ಶಿವಲಿಂಗಯ್ಯ ನವರು ನಿರ್ದೇಶಿಸಿದ ಮಹಾಪೌರ್ಣಿಮೆ ನಾಟಕವು ಬಡಜನರ ದನಿಯಾಗಿದೆ, ಒಂದಲ್ಲಾ ಹತ್ತು ಬಾರಿ ನೋಡಿದರೂ ಮತ್ತೊಮ್ಮೆ ನೋಡಬ

ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಿದ ತಹಶಿಲ್ದಾರ್ ನಾಗೇಶ್
ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಗ್ರಾಮ ಟ್ರೈಕ್ವೆಟ್ರಾ ಅಡ್ವೆಂಚರ್ ಕ್ಯಾಂಪ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಗ

20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ ಶುಭಾಪುಂಜಾ
ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾಪುಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ದರಾಗಿದ್ದಾರೆ.

ಕಲಾವಿದರಿಗೆ ಪ್ಯಾಕೇಜ್: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ
ರಾಮನಗರ, 28ನೇ ಮೇ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾಗಶಃ ಲಾಕಡೌನ್ ಜಾರಿಯಲ್ಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರು/ ಕಲಾತಂಡಗಳಿಗೆ ಪ್ರತಿ ಫಲಾನುಭವಿಗಳಿಗೆ ತಲಾ ರೂ.3,000/- ಗಳಂ

ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್
ಸಂಗೀತ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಸಕಲ ಜೀವ ರಾಶಿಗಳಿಗೂ ಸಂಗೀತದ ಇಂಪು ಗೊತ್ತಿದೆ. ಪ್ರಾಣಿ ಪಕ್ಷಿಗಳೂ ಸಹ ಸಂಗೀತಕ್ಕೆ ತಲೆದೂಗುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸಾಕು ಪ್

ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ
ಚನ್ನಪಟ್ಟಣ:ಜ/05/21/ಮಂಗಳವಾರ. ಹದಿನೈದು ವರ್ಷದ ಬಾಲಕನಾಗಿದ್ದಾಗಲೇ ತಮಟೆ ವಾದನದಲ್ಲಿ ಸೈ ಎನಿಸಿಕೊಂಡು, ಕಳೆದ ಐವತ್ತೈದು ವರ್ಷಗಳಿಂದ ಮೈಸೂರು ದ

ಜಿಲ್ಲೆಯ ಕಲಾವಿದರಿಗೆ ಹಣ ನೀಡದೆ ವಾಪಸ್ಸು ಕಳುಹಿಸಿದ ಕಸಂ ಇಲಾಖೆ. ಕಲಾವಿದರ ನೋವಿನ ನುಡಿ
ರಾಮನಗರ:ಏ/೨೫/೨೦/ಶನಿವಾರ. ಕೊರೊನಾ (ಕೋವಿಡ್-೧೯) ವೈರಸ್ ದೇಶಕ್ಕೆ ಕಾಲಿಟ್ಟ ನಂತರ ದೇಶ ಮತ್ತು ರಾಜ್ಯದ ಆರ್ಥಿಕತೆಗೆ ಪೆಟ್ಟು ಬಿದ್ದಿರುವಂತೆಯೇ,

ಅಬ್ಬೂರು ರಾಜಶೇಖರ ರವರಿಗೆ ಎಚ್ ಕೆ ವೀರಣ್ಣಗೌಡ ಪ್ರಶಸ್ತಿ*
ರಾಮನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಎಚ್.ಕೆ.ವೀರಣ್ಣಗೌಡ ಪ್ರಶಸ್ತಿಗೆ ಹಿರಿಯ ಪರ್ತಕರ್ತರು ಆರಂಭ ಪತ್ರಿಕೆಯ ಸಂಸ್ಥಾಪಕ ಸಂ

ಬೊಂಬೆನಾಡಿನ ಡಾ.ಚಕ್ಕೆರೆ ಶಿವಶಂಕರ್ ರವರಿಗೆ ಒಲಿದು ಬಂದ ಜೀಶಂಪ ರಾಜ್ಯ ಪ್ರಶಸ್ತಿ
ಚನ್ನಪಟ್ಟಣ: ಸಂಗ್ರಹ, ಸಂಪಾದನೆ, ವಿಚಾರ, ವಿಮರ್ಶೆ ಮತ್ತು
ಸಂಶೋಧನೆ ಹೀಗೆ ಜಾನಪದ ಸಾಹಿತ್ಯದ ಎಲ್ಲಾ
ಪ್ರಕಾ

ದೇವಾನಾಂಪ್ರಿಯ ಶಿವಲಿಂಗಯ್ಯನವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ
ಚನ್ನಪಟ್ಟಣ: ತಾಲ್ಲೂಕಿನ ನೀಲಕಂಠನಹಳ್ಳಿ ಗ್ರಾಮದ ತಿರುಮಲಮ್ಮ, ಎನ್ ಟಿ ಕುನ್ನಯ್ಯ ರವರ ಸುಪುತ್ರ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನ ನಿವೃತ್ತ ಉದ್
ಪ್ರತಿಕ್ರಿಯೆಗಳು