ಸೋಂಕಿತರಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಿದ ಜಿಲ್ಲಾ ಪಂಚಾಯತಿ.
ರಾಮನಗರ ಜಿಲ್ಲಾ ಪಂಚಾಯತ್ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿ ಹೋಮ್ ಐಸೊಲೇಷನ್ ನಲ್ಲಿರುವ ಕೋವಿಡ್ ಸೋಂಕಿತರಿಗೆ ಎನ್ 95 ಮಾಸ್ಕ್-2 ಸಂಖ್ಯೆ, 100 Ml ಸ್ಯಾನಿಟೈಜರ್ ಒಂದು ಬಾಟಲ್ ಹಾಗೂ ಸರ್ಜಿಕಲ್ ಮಾಸ್ಕ್-10 ಸಂಖ್ಯೆ ಒಂದು ಕವರ್ ನಲ್ಲಿ ಪ್ಯಾಕೆಟ್ ಮಾಡಿ ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತದ ವಿನೂತನ ಹೆಜ್ಜೆ: ಸೋಂಕಿತರಿಗೆ ಹೆಲ್ತ್ ಕಿಟ್ ವಿತರಣೆ
ಮಂಡ್ಯ.ಮೇ.11(ಕರ್ನಾಟಕ ವಾರ್ತೆ):- ಮಂಡ್ಯ ತಾಲ್ಲೂಕಿನ ಉಮ್ಮಡಹಳ್ಳಿ ಒಕ್ಕಲಿಗರ ಸಮುದಾಯ ಭವನ,ಒಕ್ಕಲಿಗರ ವಿದ್ಯಾರ್ಥಿನಿಲಯ,ಕೋವಿಡ್ ಕೇರ್ ಸೆಂಟರ್ -1 ಇಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವತಿಯಿಂದ ಕೋವಿಡ್ ಸೋಂಕಿತರಿಗೆ ಹೆಲ್ತ್ ಕಿಟ್ ನ್ನು ವಿತರಿಸಲಾಯಿತು. ಇದೊಂದು ರಾಜ್ಯಕ್ಕೆ ಮಾದರಿಯಾಗಬಲ್ಲ ವಿನೂತನ ಹೆಜ್ಜೆ ಎಂಬ ಭರವಸೆ ಜಿಲ್ಲಾಡಳಿತದ್ದು, ಈ ಮೂಲಕ ಸೋಂಕಿತರಲ್ಲಿ ಕೋವಿಡ್ ನ್ನು ಹಿಮ್ಮೆಟಿಸುವ ಚೈತನ್ಯ ತುಂಬಿದೆ.ಈ ಮೂಲಕ ಜಿಲ್ಲ
ಎಲ್ಲಿ ಬೇಕಾದರೂ ಲಸಿಕೆ ಪಡೆಯಬಹುದು ಎಂಬುದೇ ಜಿಲ್ಲೆಗೆ ಶಾಪವಾಯಿತೇ !?
ರಾಮನಗರ: ರಾಜಧಾನಿ ಬೆಂಗಳೂರು ರಾಮನಗರ ಜಿಲ್ಲೆಗೆ ಮಗ್ಗಲಲ್ಲಿರುವುದೇ ಶಾಪವಾಗಿ ಪರಿಣಮಿಸಿದಂತಿದೆ! ಬೆಂಗಳೂರು ನಗರದ ತ್ಯಾಜ್ಯದಿಂದ ಒಂದು ಕಡೆ ಜಿಲ್ಲೆ ಕಲುಷಿತಗೊಳ್ಳುತ್ತಿದ್ದರೇ, ಇದೀಗ ಬೆಂಗಳೂರು ನಗರವಾಸಿಗಳಿಂದಾಗಿ ಜಿಲ್ಲೆಯ ಜನರು ಕೋವಿಡ್ ಲಸಿಕೆ ಮತ್ತು ಚಿಕಿತ್ಸೆಯಿಂದಲೂ ವಂಚಿತರಾಗುತ್ತಿದ್ದಾರೆ.ಜಿಲ್ಲಾ ಕೇಂದ್ರ ರಾಮನಗರದ ಜಿಲ್ಲಾಸ್ಪತ್ರೆ, ರಾಯರದೊಡ್ಡಿ ಮತ್ತು ಮಹೆಬೂಬ್ನಗರ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಜ
ಕೋವಿಡ್ ಹಿನ್ನಲೆಯಲ್ಲಿ ಗ್ರಾಮ ಕಾರ್ಯಪಡೆ ಪರಿಶೀಲನೆ ಮಾಡಿದ ಸಿಇಓ ಇಕ್ರಂ
ಚನ್ನಪಟ್ಟಣ ತಾಲ್ಲೂಕಿನ ನೀಲಸಂದ್ರ, ಹೊಂಗನೂರು, ವಿರುಪಾಕ್ಷಿಪುರ, ಕೊಡಂಬಳ್ಳಿ, ಬಿ ವಿ ಹಳ್ಳಿ, ಜೆ ಬ್ಯಾಡರಹಳ್ಳಿ, ಗ್ರಾಮ ಪಂಚಾಯತಿಗಳಿಗೆ ಬೇಟಿ ನೀಡಿ ವಿಶೇಷವಾಗಿ ಕೋವಿಡ್-19 ಹಿನ್ನೆಲೆಯಲ್ಲಿ ರಚಿಸಲಾಗಿರುವ ಗ್ರಾಮಪಡೆ, ಆಯ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜೊತೆಗೆ ಸಂವಾದ ಮಾಡುವ ಮೂಲಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ಅನೇಕ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ಜಿಲ್ಲೆಯ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲೊಂದು ಒಳ್ಳೆಯ ಜಾಗ. ಪಾಳುಬಿದ್ದ ಮನೆಗಳಿಗೆ ಹೊಸರೂಪ ನೀಡಿ ಹಂಚಲು ಸಕಾಲ
ಕೊಳಚೆ ನಿರ್ಮೂಲನಾ ಮಂಡಳಿ ಇಲಾಖೆ ವತಿಯಿಂದ ರಾಮನಗರ ತಾಲ್ಲೂಕಿನ ಚನ್ನಪಟ್ಟಣ ಕೆಂಗಲ್ ದೇವಾಲಯದ ಕೂಗಳತೆ ದೂರಿನ ಜಯಪುರ ಗ್ರಾಮದ ಬಳಿ ಸುಸಜ್ಜಿತ ಎರಡು ಅಂತಸ್ತಿನ, ನಾಲ್ಕು ಸಂಸಾರಗಳು ವಾಸಿಸುವ, ಸರಿಸುಮಾರು ನೂರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದು ಹತ್ತಿರಹತ್ತಿರ ದಶಕಗಳೇ ಕಳೆಯುತ್ತಿವೆ. ಈ ಎಲ್ಲಾ ಮನೆಗಳ ಸುತ್ತಾ ಗಿಡಗಂಟಿಗಳು ಬೆಳೆದುನಿಂತಿದ್ದು, ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಜಿಲ್ಲಾದ್ಯಂತ ಕೊರೊನಾ ಸೋಂಕಿತರು ಹೆಚ್ಚ
ಕೊರೊನಾ ಲಸಿಕೆ ವಿಚಾರದಲ್ಲಿ ವಿರೋಧ ಪಕ್ಷಗಳಿಗೆ ಛೀಮಾರಿ ಹಾಕುತ್ತೇನೆ ಎಂದ ಸಚಿವ ಸಿ ಪಿ ಯೋಗೇಶ್ವರ್
ವ್ಯಾಕ್ಸಿನೇಷನ್ ಬಗ್ಗೆ ಅಪಪ್ರಚಾರ ಮಾಡಿದ ವಿರೋಧ ಪಕ್ಷಗಳಿಗೆ ನಾನು ಛೀಮಾರಿ ಹಾಕುತ್ತೇನೆ. ಅವರೇ ಜನರನ್ನು ದಿಕ್ಕು ತಪ್ಪಿಸಿದ್ದು ಎಂದು ಸಿ ಪಿ ಯೋಗೇಶ್ವರ್ ವಿರೋಧ ಪಕ್ಷದವರ ವಿರುದ್ಧ ಹರಿಹಾಯ್ದರು. ಅವರು ಇಂದು ಚನ್ನಪಟ್ಟಣ ನಗರದ ಎಲ್ ಎನ್ ಕಲ್ಯಾಣ ಮಂಟಪದಲ್ಲಿ *ಸಂಕಷ್ಟ ಸಮಯ, ಬಿಜೆಪಿ ಸಹಾಯ* ಎಂಬ ಧ್ಯೇಯೋದ್ದೇಶದೊಂದಿಗೆ ನಗರದ ನಿರಾಶ್ರಿತರಿಗೆ, ಭಿಕ್ಷುಕರಿಗೆ ಆಹಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
6 ರಿಂದ 10 ಫುಲ್ ಫ್ರೀ, 10 ರಿಂದ ನಾಳೆ 6 ರ ತನಕ ಫುಲ್ ಸ್ಟ್ರಿಕ್ಟ್
ಇಂದಿನಿಂದ 14 ದಿನಗಳ ಕಟ್ಟುನಿಟ್ಟಿನ ಲಾಕ್ಡೌನ್ ಘೋಷಣೆಯಾಗಿದ್ದು ಈ ಸಮಯದಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆಯ ವರೆಗೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ವಾಹನಗಳಿಲ್ಲದೆ, ಬರಲು ಅನುಮತಿ ನೀಡಿದ್ದರೂ ಸಹ ನಗರದಲ್ಲಿ ಬಹುತೇಕ ಎಲ್ಲಾ ಗ್ರಾಹಕರು ತಮ್ಮ ವಾಹನಗಳ ಮೂಲಕವೇ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿದರು.
ಕೋವಿಡ್ ಲಸಿಕೆ ವೈದ್ಯರ ಜೊತೆ ವಾಗ್ವಾದಕ್ಕಿಳಿದ ಜನತೆ
ಚನ್ನಪಟ್ಟಣದಲ್ಲಿ ಕಳೆದ ನಾಲ್ಕಾರು ದಿನಗಳಿಂದ ಕೋವಿಡ್ ಲಸಿಕೆ ಮಿತಿಯಾಗಿಯೇ ಬರುತ್ತಿರುವುದರಿಂದ ಆಕಾಂಕ್ಷಿಗಳಿಗೆ ಲಸಿಕೆ ದೊರೆಯುತ್ತಿಲ್ಲ. ಈ ಸಂಬಂಧ ಲಸಿಕೆ ನೀಡುತ್ತಿರುವ ಕುಶಲಕರ್ಮಿ ತರಬೇತಿ ಕೇಂದ್ರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ವಿಜಯನರಸಿಂಹ ಹಾಗು ಸಾರ್ವಜನಿಕರ ಮಧ್ಯೆ ವಾಗ್ವಾದ ನಡೆಯಿತು.ಕುಶಲಕರ್ಮಿ ತರಬೇತಿ ಕೇಂದ್ರದಲ್ಲಿ ನೀಡುತ್ತಿರುವ ಲಸಿಕೆಗಾಗಿ ಇಂದು ಮುಂಜಾನೆಯಿಂದಲೇ ನೂರಕ್ಕೂ ಹೆಚ್ಚು ಮಂದ
ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ ಆಕ್ಸಿಜನ್ ಸಿಲಿಂಡರ್ ಹೊತ್ತೊಯ್ದ ಆರೋಪಿಗಳು. ಪ್ರಕರಣ ದಾಖಲು. ಡಾ ವಿಜಯನರಸಿಂಹ ಪಾತ್ರ ಏನು ?
ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ನೆನ್ನೆ ರಾತ್ರಿ ಸೈಯದ್ ನವಾಜ್, ಮುದಾಸಿರ್ ಮತ್ತು 15 ರಿಂದ 20 ಮಂದಿ ಆಸ್ಪತ್ರೆಯ ಒಳಗೆ ನುಗ್ಗಿ, ಸಿಬ್ಬಂದಿಗಳ ಜೊತೆ ಜಗಳ ಮಾಡಿ ಆಕ್ಸಿಜನ್ ಸಿಲಿಂಡರ್ ಸೇರಿದಂತೆ ಮತ್ತಿತ್ತರ ವಸ್ತುಗಳನ್ನು ರಾಜಾರೋಷವಾಗಿ ತೆಗೆದುಕೊಂಡು ಹೋಗಿರುವುದಾಗಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವಿಜಯನರಸಿಂಹ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ನೆನ್ನೆ ರಾತ್ರಿಯೇ ಎಫ್ಐಆರ್ ದಾಖಲಿಸಿ ಕೊಂಡಿರುವ ನಗ
ವಾರದೊಳಗೆ ರಾಮನಗರದಲ್ಲಿ 240 ಆಕ್ಸಿಜನ್ ಬೆಡ್; ಜಿಲ್ಲೆಯಲ್ಲಿ 62 ಕೋವಿಡ್ ಕೇರ್ ಸೆಂಟರ್ಗಳ ಆರಂಭ: ಡಾ.ಸಿ.ಎನ್.ಅಶ್ವತ್ಥನಾರಾಯಣ
ಬೆಂಗಳೂರು: ಮುಂದಿನ ಒಂದು ವಾರದೊಳಗೆ ರಾಮನಗರ ಜಿಲ್ಲಾ ಕೇಂದ್ರದಲ್ಲಿ 240 ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಮಾಡಲಾಗುವುದು ಹಾಗೂ ಜಿಲ್ಲೆಯ ಒಟ್ಟು 62 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ತಲಾ ಒಂದೊಂದು ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು. *ಬೆಂಗಳೂರಿನಲ್ಲಿ ಶುಕ್ರವಾರ ಸಂಸದ ಡಿ.ಕೆ.ಸುರೇಶ್