Tel: 7676775624 | Mail: info@yellowandred.in

Language: EN KAN

    Follow us :


ಅನ್ನಭಾಗ್ಯ ಅಕ್ಕಿ ಕಳವು, ಆಡಳಿತ ಮಂಡಳಿ ಸದಸ್ಯರನ್ನು ಬಂಧಿಸಬೇಕು, ಕುಮಾರಸ್ವಾಮಿ ಹೊಣೆ ಹೊರಬೇಕು ಗಂಗಾಧರ್

Posted date: 23 Nov, 2023

Powered by:     Yellow and Red

ಅನ್ನಭಾಗ್ಯ ಅಕ್ಕಿ ಕಳವು, ಆಡಳಿತ ಮಂಡಳಿ ಸದಸ್ಯರನ್ನು ಬಂಧಿಸಬೇಕು, ಕುಮಾರಸ್ವಾಮಿ ಹೊಣೆ ಹೊರಬೇಕು ಗಂಗಾಧರ್

ಚನ್ನಪಟ್ಟಣ: ನಗರದ ಟಿಎಪಿಸಿಎಂಎಸ್ ಗೋದಾಮಿನಲ್ಲಿ ೧,೬೦೦ ಕ್ವಿಂಟಾಲ್ ಅನ್ನಭಾಗ್ಯ ದ ಅಕ್ಕಿ ಕಳವು ಆಗಿದ್ದು, ಇದಕ್ಕೆ ಯಾರೋ ಒಬ್ಬ ಗುಮಾಸ್ತನನ್ನು ಬಂಧಿಸುವುದರಲ್ಲಿ ಅರ್ಥವಿಲ್ಲಾ. ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳನ್ನು ಬಂಧಿಸಿ, ವಿಚಾರಣೆಗೊಳಪಡಿಸಬೇಕು. ಇದರ ಸಂಪೂರ್ಣ ಹೊಣೆಯನ್ನು ಮಾಜಿ ಮುಖ್ಯಮಂತ್ರಿ, ಹಾಲಿ ಕ್ಷೇತ್ರದ ಶಾಸಕರಾದ ಹೆಚ್ ಡಿ ಕುಮಾರಸ್ವಾಮಿ ಯವರು ಹೊರಬೇಕು ಎಂದು ರಾಮನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಸ್ ಗಂಗಾಧರ್ ಹೇಳಿದರು. ಅವರು ಗುರುವಾರ ಸಂಜೆ ನಗರದ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.


ಅನ್ನಭಾಗ್ಯ ಯೋಜನೆಯನ್ನು ಸರ್ಕಾರ ಬಡವರಿಗಾಗಿ ತಂದಿದೆ. ಬಡವರ ಅಕ್ಕಿಯನ್ನು ಬಿಡದೆ ಕಬಳಿಸಿರುವುದು ಹೇಯ ಕೃತ್ಯ. ಇದು ಒಂದು ದಿನದ ಅಥವಾ ಒಬ್ಬರ ಕೆಲಸವಲ್ಲ. ಆರು ತಿಂಗಳಿನಿಂದಲೂ ನಡೆಯುತ್ತಿದೆ ಎಂಬ ಮಾಹಿತಿ ನಮಗೆ ದೊರೆತಿದೆ. ಜೆಡಿಎಸ್ ಪಕ್ಷದ ಬೆಂಬಲಿತ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ಅವರಿಗೆ ಇದು ಗೊತ್ತಿರಲಿಲ್ಲವೇ ? ಅಥವಾ ಅವರು ಶಾಮೀಲಾಗಿರಬಹುದೇ, ಆರು ತಿಂಗಳಿನಿಂದ ನಡೆಯುತ್ತಿದೆ ಎಂಬ ಮಾಹಿತಿ ಇದ್ದು, ಶಾಸಕರ ಗಮನಕ್ಕೆ ಬಂದಿಲ್ಲವೇ ! ಬಂದಿದ್ದರೆ ಅವರು ಯಾಕೆ ಕ್ರಮ ಕೈಗೊಂಡಿಲ್ಲ. ಇದಕ್ಕೆ ಕುಮಾರಸ್ವಾಮಿ ಯವರೇ ಉತ್ತರಿಸಬೇಕು ಎಂದರು.


ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸುತ್ತಿರಲಿಲ್ಲವೇ, ದಾಖಲೆಗಳಲ್ಲಿ ಸರಿಯಾಗಿದ್ದು, ದಾಸ್ತಾನು ಮಾತ್ರ ಹೇಗೆ ಕಡಿಮೆಯಾಗಲು ಸಾಧ್ಯ !? ಅದು ಐವತ್ತು ಲಕ್ಷ ಮೊತ್ತದ ಅಕ್ಕಿ ಕಳವು ಅಥವಾ ಕಾಣೆ ಆಗುವವರೆಗೂ ಅಧಿಕಾರಿಗಳು ಸುಮ್ಮನೆ ಕುಳಿತಿದ್ದದ್ದು ಯಾಕೆ, ಅಧಿಕಾರಿಗಳು ಸಹ ಈ ಕಳವು ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಅವರೆಲ್ಲರನ್ನು ಅಮಾನತ್ತಿನಲ್ಲಿಟ್ಟು ವಿಚಾರಣೆಗೊಳಪಡಿಸಬೇಕು. ಕಳೆದ ಆರು ತಿಂಗಳ ಮೊದಲೇ ಅಧಿಕಾರಿಗಳಿಗೆ ಗೊತ್ತಿದ್ದು, ಬೇರೆ ಕಡೆಯಿಂದ ಒಂದಷ್ಟು ತಂದಿಡಲಾಗಿದೆ ಎಂಬ ಮಾಹಿತಿಯೂ ನಮಗಿದೆ. ಆದ್ದರಿಂದ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಬೇಕೆಂದರು.


ಶಾಸಕ ಕುಮಾರಸ್ವಾಮಿ ಯವರು ದೇಶ-ವಿದೇಶದ ಸುದ್ದಿಯನ್ನೆಲ್ಲಾ ಮಾತನಾಡುತ್ತಾರೆ, ಆಡಳಿತ ಸರ್ಕಾರ ಮತ್ತು ನಮ್ಮ ನಾಯಕ ಡಿ ಕೆ ಶಿವಕುಮಾರ್ ರವರ ವಿರುದ್ಧ ಸುಖಾಸುಮ್ಮನೆ ಮಾತನಾಡುತ್ತಾರೆ. ಗ್ಯಾರಂಟಿ ಯೋಜನೆ ಬಗ್ಗೆ ಕುಹಕವಾಡುತ್ತಾರೆ. ನಮ್ಮ ಗ್ಯಾರಂಟಿ ಯೋಜನೆಗಳು ಶೇಕಡಾ ೯೫ ರಷ್ಟು ಫಲಾನುಭವಿಗಳಿಗೆ ತಲುಪಿವೆ. ಅದನ್ನು ಅವರ ಕ್ಷೇತ್ರದಲ್ಲಿ ಶಾಸಕರು ಜವಾಬ್ದಾರಿ ತೆಗೆದುಕೊಳ್ಳಬೇಕು. ಅದನ್ನೂ ಮಾಡದೆ ಕೇವಲ ವಿರುದ್ಧವಾಗಿ ಮಾತನಾಡುತ್ತಾರೆ. ಇಷ್ಟೆಲ್ಲಾ ಮಾತನಾಡುವ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಹಾಗೂ ಆಡಳಿತ ಕೈತಪ್ಪಿದಾಗ ಮಾತನಾಡದೆ ಮೌನ ವಹಿಸಿರುವುದು ಸರಿಯಲ್ಲಾ ಎಂದರು. ಇನ್ನೂ ಕೆಡಿಪಿ ಸಭೆಯನ್ನೂ ಸಹ ಕಾಟಚಾರಕ್ಕೆ ಮಾಡಿದ್ದು, ಅಲ್ಲಿಯೂ ಸಹ ಅಭಿವೃದ್ಧಿ ಕುರಿತು ಮಾತನಾಡಿಲ್ಲಾ ಎಂದರು.


ಟಿಎಪಿಸಿಎಂಎಸ್ ನ ಮಾಜಿ ಅಧ್ಯಕ್ಷ ಹೊಡಿಕೆಹೊಸಹಳ್ಳಿ ಚಂದ್ರು ಮಾತನಾಡಿ, ಇದು ಆಡಳಿತ ಮಂಡಳಿಯ ವೈಫಲ್ಯವಾಗಿದೆ. ಇದಕ್ಕೆ ಅಧಿಕಾರಿಗಳು ಸಹ ಸಾಥ್ ನೀಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇವರೆಲ್ಲರನ್ನು ತನಿಖೆಗೊಳಪಡಿಸಬೇಕು ಎಂದರು. ಈಗಾಗಲೇ ಟಿಎಪಿಸಿಎಂಎಸ್ ಚುನಾವಣೆ ಕಾವು ಪಡೆದುಕೊಂಡಿದೆ. ಮತದಾರರ ಪಟ್ಟಿಯೂ ಗೊಂದಲಮಯವಾಗಿದೆ. ಅಧಿಕಾರಿಗಳು ಪುನರ್ ಪರಿಶೀಲನೆ ನಡೆಸಿ ಚುನಾವಣೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಕುಕ್ಕುಟ ಮಹಾಮಂಡಳದ ಅಧ್ಯಕ್ಷ ಹಾಗೂ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಡಿ ಕೆ ಕಾಂತರಾಜು, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ನಗರ ಘಟಕದ ಅಧ್ಯಕ್ಷ ಸುನೀಲ್, ಮಾಜಿ ಅಧ್ಯಕ್ಷ ರಮೇಶ್, ಮುಖಂಡರಾದ ಎಂ ಸಿ ಕರಿಯಪ್ಪ, ಪಿ ಡಿ ರಾಜು, ಚೇತನ್ ಕೀಕರ್, ನಗರಸಭೆ ಸದಸ್ಯ ಸಾಬೀರ್, ಪಾಪಯ್ಯ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in crime »

ಹುಣಸೂರು ಮೂಲದ ಕಳ್ಳನನ್ನು ಬಂಧಿಸಿ ಏಳು ದ್ವಿಚಕ್ರ ವಾಹನ ವಶಪಡಿಸಿಕೊಂಡ ಪುರ ಪೋಲಿಸರು
ಹುಣಸೂರು ಮೂಲದ ಕಳ್ಳನನ್ನು ಬಂಧಿಸಿ ಏಳು ದ್ವಿಚಕ್ರ ವಾಹನ ವಶಪಡಿಸಿಕೊಂಡ ಪುರ ಪೋಲಿಸರು

ಚನ್ನಪಟ್ಟಣ: ನಗರದಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿಯೋರ್ವನನ್ನು ವಿಚಾರಣೆ ಮಾಡಲಾಗಿ ಆತ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪೋಲಿಸರ ಕ

ಸಾಕುನಾಯಿಯ ಮೇಲೆ ಎರಡು ವರ್ಷ ನಿರಂತರ ಅತ್ಯಾಚಾರಗೈದ ಭೂಪ:
ಸಾಕುನಾಯಿಯ ಮೇಲೆ ಎರಡು ವರ್ಷ ನಿರಂತರ ಅತ್ಯಾಚಾರಗೈದ ಭೂಪ:


ಕೋಲ್ಕತ್ತಾ; 60 ವರ್ಷದ ವೃದ್ದನೋರ್ವ ಸತತ ಎರಡು ವರ್ಷಗಳ ಕಾಲ ತನ್ನ ಮನೆಯ ಸಾಕು ನಾಯಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಸ್ಥಳೀಯರಿಂದ ವೀಡಿಯೋ ವೈರಲ್ ಆದ ನಂತರ ಪ್ರಾಣಿದಯಾಸಂಘದವರ ದೂರಿ

Top Stories »  


Top ↑