ಹೀಗಿರಲಿ ನಿಮ್ಮ ಹಾಲುಗಂದಮ್ಮನ ಹಾರೈಕೆ.......
ಲತಳಿಗೆ ಮದುವೆಯಾಗಿ ವರ್ಷ ತುಂಬುವಷ್ಟರಲ್ಲಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಳು.
ಲತಾಳ ಕುಟುಂಬದವರಿಗೆಲ್ಲಾ ತಡೆಯಾಲಾಗದಷ್ಟು ಸಂತೋಷ. ಲತಾಳ ಕುಟುಂಬಕ್ಕೆ ಸಂತೋಷ ಪಡಲು ಕಾರಣವಾದ ಆ ಕಂದಮ್ಮನ ಹಾರೈಕೆಯು ಒಂದು ಜವಬ್ದಾರಿಯುತ ಕೆಲಸವಾಗಿರುತ್ತದೆ.
ಪಾಪುವಾದ ನಂತರ ತಾಯಿ ಮತ್ತು ಮಗುವಿನ ಆರೋಗ್ಯ ವಿಚಾರಿಸಲು (ತಪಾಸಣೆಗೆಂದು) ಬಂದ ಡಾಕ್ಟರ್ ಮಾತುಗಳನ್ನು ಕೇಳುತ್ತಾ ಅಲ್ಲೆ ಕುಳಿತಿದ್ದ ಲತಾಳ ಅಜ್ಜಿ ಗೊಣಗಲು ಆರಂಭಿಸಿದರು. ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪ....ಎಂದು
ಹಾಗಾದರೆ ಡಾಕ್ಟರ್ ಏನೆಲ್ಲಾ ಹೇಳಿರಬಹಹುದು ಎಂದು ನಾವೇ ಊಹಿಸಬಹುದು... Latha, r u allright. Now you can take all liquid foods like fruit juice, hot soup and alll ಎಂದು ಹೇಳಿದರು.
U can feed baby now Latha ಎಂದು ಹೇಳಿ ಹೊರಟರು.
ಲತಾಳ ಅಜ್ಜಿ ಹಣ್ಣಿನ ಜ್ಯೂಸು ಕುಡಿದರೆ ಮಗುವಿಗೆ ಶೀತ ಆಗೋದಿಲ್ವೆ, ಇದು ಈಗ ಹಸುಗೂಸು ಎಂದು ಅಜ್ಜಿ ಗೊಣಗಿದರು.
ಹಾಗಾದರೆ ಡಾಕ್ಟರ್ ಹೇಳಿದ್ದು ತಪ್ಪಾ?
ಬನ್ನಿ ತಿಳಿಯೋಣ. ನಮ್ಮ ಕಂದಮ್ಮನ ಹಾರೈಕೆ ಹೇಗಿರಬೇಕೆಂದು.
* ನವಜಾತ ಶಿಶುವಿಗೆ ಹುಟ್ಟಿದ 24 ಗಂಟೆಗೊಳಗೆ ತಾಯಿಯ ಗಿಣ್ಣು ಹಾಲನ್ನು ಹೊರತು ಪಡಿಸಿ ಬೇರೆ ಏನನ್ನು ನೀಡಬಾರದು.
* ತಾಯಿಯ ಗಿಣ್ಣಲಿನಲ್ಲಿ ಮಗುವಿಗೆ ಬೇಕಾದ ಪ್ರೋಟೀನ್ಸ್, ವಿಟಮಿನ್ಸ್ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ.
* ಮಗುವನ್ನು ನೋಡಲು ನೆಂಟರಿಷ್ಟರು ಬರುವುದು ಸರ್ವೆ ಸಾಮಾನ್ಯ ಮಗುವನ್ನು ಮುಟ್ಟುವ ಮುನ್ನ ಕೈ ಕಾಲು ತೊಳೆದು ಮುಟ್ಟುವುದು ಒಳಿತು.
ಏಕೆಂದರೆ, ಮಗು ತುಂಬಾ ಸೂಕ್ಷ್ಮ ಇಂತಹ ಸಮಯದಲ್ಲಿ ರೋಗಗಳು ಬಹುಬೇಗನೆ ಮಗುವಿಗೆ ಹರಡುತ್ತವೆ.
* ಮಗುವಿಗೆ ಪ್ರತಿ ಎರಡು ಗಂಟೆಗೊಮ್ಮೆ ಹಾಲುಣಿಸಿ (ದಿನಕ್ಕೆ 10 ರಿಂದ 12 ಬಾರಿ )
* ಮಗುವನ್ನು ಹತ್ತಿ ಬಟ್ಟೆಯಿಂದ ಸುತ್ತಿ ಬೆಚ್ಚಗಿಡಿ.
* ಮಗುವನ್ನು ಪ್ರತಿ ದಿನ ಎಳೆ ಬಿಸಿಲಿಗೆ 15 ರಿಂದ 20 ನಿಮಿಷ ಹಿಡಿದುಕೊಳ್ಳಿ
* ಕಂದಮ್ಮನ ಎಳೆ ಮೈಗೆ ಎಣ್ಣೆ ಸ್ನಾನ ಉತ್ತಮವಾಗುತ್ತದೆ ಮಗುವಿನ ಸ್ನಾಯು ಹಾಗೂ ಚರ್ಮದ ಉತ್ತಮ ಬೆಳವಣಿಗೆಗೆ ಇದು ಸಹಾಯಕಾರಿಯಾಗುತ್ತದೆ.
* ಕಂದಮ್ಮನ ಸ್ನಾನಕ್ಕೆ ತುಂಬಾ ಬಿಸಿಯಾದ ನೀರು ಬೇಡ.
* ಡಾಕ್ಟರ್ ಸಲಹೆಯಂತೆ Vaccination ಮಾಡಿಸಿ.
* ಒಂದು ವರ್ಷದವರೆಗೆ ಜೇನುತುಪ್ಪ ತಿನ್ನಿಸುವುದು ಬೇಡ.
* ಮಗುವು ಆರಾಮವಾಗಿ ನಿದ್ರಿಸಲು 19 ಗಂಟೆ ಯಾವುದೇ ಗಲಾಟೆ ಇಲ್ಲದೆ ಪ್ರಸಾಂತ ವಾತಾವರಣ ಇರುವಂತೆ ನೋಡಿಕೊಳ್ಳಿ.
* ತಾಯಿಗೆ ಕೊಡುವ ಆಹಾರದಿಂದ ಮಗುವಿಗೆ ಬೇಕಾದ ಕೊಬ್ಬು, ಕಬ್ಬಿಣದ ಅಂಶ - ಕ್ಯಾಲ್ಸಿಯಂ ಸೇರಿರುತ್ತದೆ ಎಂಬುದನ್ನು ಗಮನದಲ್ಲಿಡಿ.
* ಮಗುವಿಗೆ 6 ತಿಂಗಳ ತನಕ ತಾಯಿ ಹಾಲನ್ನು ಹೊರತು ಪಡಿಸಿ ಬೇರೆ ಏನನ್ನು ನೀಡದಿರಿ.
* ಮಗುವಿನ ಹಾರೈಕೆಗಾಗಿ ಸಮಯ ಮೀಸಲಿಡಿ.
* ಮಗುವು ದಿನಕ್ಕೆ 7 ರಿಂದ ೯ ಬಾರಿ ಮೂತ್ರ ವಿಸರ್ಜಿಸುತ್ತಿದ್ದರೆ, ತಾಯಿಯ ಹಾಲು ಸಾಕಾಗುತ್ತಿದೆ ಎಂದರ್ಥ.
ನಿಮ್ಮ ಮಗುವಿನ ಲಾಲನೆ ಪಾಲನೆ ಸರಿಯಾಗಿದ್ದರೆ ನಿಮ್ಮ ಮಗುವಿನ ಆರೋಗ್ಯ ನಿಮ್ಮ ಕೈಯಲ್ಲಿ. ನಗುವು ನಿಮ್ಮ ಮಗುವಿನ ಮುಖದಲ್ಲಿ.
-ಅನುಷಾ ಆನಂದ ಶಿವ
Recent news in health »
ವ್ಯವಹಾರಕ್ಕಾಗಿ ಆಸ್ಪತ್ರೆಯಲ್ಲಾ, ಸೇವೆಗಾಗಿ ನಮ್ಮ ಆಸ್ಪತ್ರೆ. ಕಾಂಗರೂ ಆಸ್ಪತ್ರೆಯ ಸಂಸ್ಥಾಪಕ ಡಾ ಶೇಖರ್ ಸುಬ್ಬಯ್ಯ
ರಾಮನಗರ: ನಾವು ಹಣಕ್ಕಾಗಿ ಆಸ್ಪತ್ರೆ ನಡೆಸುವುದಿಲ್ಲ, ಇದೊಂದು ಸೇವೆ ಎಂದು ಪರಿಗಣಿಸಿ ಆಸ್ಪತ್ರೆ ನಡೆಸುತ್ತಿದ್ದೇವೆ. ಬೆಂಗಳೂರು ಮೈಸೂರು ಸೇರಿದಂತೆ ನಾಲ್ಕು
೪೬ ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ೧೦ ಕಿಲೋ ಕ್ಯಾನ್ಸರ್ ಗಡ್ಡೆ ಹೊರತೆಗೆದ ಬಾಲು ಆಸ್ಪತ್ರೆಯ ವೈದ್ಯರು
ಚನ್ನಪಟ್ಟಣ: ತಾಲ್ಲೂಕಿನ ಗ್ರಾಮವೊಂದರ ೪೬ ವರ್ಷದ ಮಹಿಳೆಯೊಬ್ಬರ ಗರ್ಭ (ಅಂಡಾಶಯ) ದಲ್ಲಿದ್ದ ಬರೋಬ್ಬರಿ ೧೦ ಕಿಲೋ ೩೦೦ ಗ್ರಾಂ ತೂಕದ ಕ್ಯಾನ್ಸರ್ ಗಡ್ಡೆ ಯನ್ನ
ಹೊಂಗನೂರು, ಕೋಡಂಬಳ್ಳಿ ಗ್ರಾಮದಲ್ಲಿ ಪರವಾನಗಿ ಇಲ್ಲದ ಖಾಸಗಿ ಆಸ್ಪತ್ರೆಗಳಿಗೆ ಬೀಗ ಜಡಿದ ಟಿಹೆಚ್ಓ
ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಗೋಪಿ ಕ್ಲಿನಿಕ್ ಎಂಬ ಖಾಸಗಿ ಆಸ್ಪತ್ರೆ ಇದ್ದು, ಗೋಪಿ ಎಂಬುವವರು ವೈದ್ಯರಾಗಿ ಸೇವೆ ನಿರ್ವಹಿಸುತ್ತಿದ್ದಾರ
ಉತ್ತಮ ಆರೋಗ್ಯಕ್ಕೆ ಆಯುರ್ವೇದವೇ ದಿವ್ಯ ಔಷಧ ಡಾ ಸಹನಾ ಕೃಷ್ಣ
ಚನ್ನಪಟ್ಟಣ: ಪುರಾಣೇತೀಹಾಸದಿಂದಲೂ ಪ್ರಖ್ಯಾತವಾಗಿರುವ ಔಷಧ ಎಂದರೆ ಅದು ಆಯುರ್ವೇದ ಔಷಧ, ಜಗತ್ತಿನ ಅತ್ಯಂತ ಪ್ರಾಚೀನ ಔಷಧವೂ ಹೌದು, ನಮ್ಮ ಪ್ರಕೃತಿ ಹೇಗೆ ಸಮ
ದೊಡ್ಡಮಳೂರು ಗ್ರಾಮದಲ್ಲಿ ದೀರ್ಘಾಯು ವೆಲ್ ನೆಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ
ಚನ್ನಪಟ್ಟಣ: ತಾಲ್ಲೂಕಿನ ದೊಡ್ಡಮಳೂರು ಗ್ರಾಮದ ದೇವಸ್ಥಾನದ ಬೀದಿಯಲ್ಲಿರುವ ದೀರ್ಘಾಯು ವೆಲ್ ನೆಸ್ ಸೆಂಟರ್ ಇವರ ವತಿಯಿಂದ ನಾಳೆ (ಭಾನುವಾರ) ಬೆಳಿ
ಕ್ರಿಯೇಟಿವ್ ಅಸೋಸಿಯೇಷನ್ ಹಾಗೂ ಸೊಸೈಟಿ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ
ಚನ್ನಪಟ್ಟಣ : ತಾಲ್ಲೂಕಿನಿಂದ ಬೆಂಗಳೂರಿಗೆ ಹೋಗಿ, ಜೀವನ ಕಟ್ಟಿಕೊಂಡು ತಾಲ್ಲೂಕಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ ಕ್ರಿಯೇಟಿವ್ ಅಸೋಸಿಯೇಷನ್ ಮತ್ತ
ದುಶ್ಚಟದಿಂದ ದೂರವಿರಿ, ಆರೋಗ್ಯ ಕಾಪಾಡಿಕೊಳ್ಳಿ : ಪ್ರತಿಮಾ ಕೆ.ವಿ
ರಾಮನಗರ, ಜೂ. 17: ಇತ್ತೀಚೆಗೆ ಅತಿ ಹೆಚ್ಚು ಹಲವಾರು ದುಶ್ಚಟಗಳು ಮನುಷ್ಯನನ್ನು ಆವರಸಿಕೊಂಡಿವೆ. ಇದರಿಂದಾಗಿ ನೂರಾರು ಖಾಯಿಲೆಗಳು ದೇಹ ಹೊಕ್ಕು ನಿತ್ಯ ಸಾ
ಫ್ಲೋರೋಸಿಸ್ ನಿಯಂತ್ರಿಸಿ ಉತ್ತಮ ಜೀವನ ನಡೆಸುವಂತೆ ಸಲಹೆ - ಡಾ.ಅನಿಲ್
ರಾಮನಗರ, ಜೂ. 15: ಫ್ಲೋರೈಡ್ ನಮ್ಮ ದೇಹಕ್ಕೆ ಬೇಕಾದ ಒಂದು ಖನಿಜಾಂಶ ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಫ್ಲೋರೈಡ
ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೇವೆಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದ ಬಿ.ಎಸ್.ಗಂಗಾಧರ್.
ರಾಮನಗರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆ.ಕರೇನಹಳ್ಳಿ ಇವರ ಸಂಯುಕ್ತ ಆಶ್ರ
ಶ್ರೀಗಿರಿಪುರ ಗ್ರಾಪಂ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರ
ರಾಮನಗರ, ಜೂ. 07: ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾತ್ಮಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆ ಹಾಗೂ ಕುದೂರು ಪ್ರ
ಪ್ರತಿಕ್ರಿಯೆಗಳು