Tel: 7676775624 | Mail: info@yellowandred.in

Language: EN KAN

    Follow us :


ಟ್ಯುಬೆರ್ ಕ್ಯುಲೋಸಿಸ್ ಇದ್ದರೆ ಅಣಬೆ ತಿಂದು ಗುಣ ಪಡಿಸಿಕೊಳ್ಳಿ

Posted date: 28 Jun, 2019

Powered by:     Yellow and Red

ಟ್ಯುಬೆರ್ ಕ್ಯುಲೋಸಿಸ್ ಇದ್ದರೆ ಅಣಬೆ ತಿಂದು ಗುಣ ಪಡಿಸಿಕೊಳ್ಳಿ

ಮಳೆಗಾಲ ಶುರುವಾಯಿತೆಂದರೆ ಹಣಬೆಗಳದ್ದೇ ಕಾರುಬಾರು . ರಸ್ತೆಯ ಇಕ್ಕೆಲಗಳಲ್ಲಿ ಎತ್ತ ನೋಡಿದರೂ ಅತ್ತ ಮಣ್ಣಿನ ಮೇಲೆ ಸಣ್ಣ ಸಣ್ಣ ಕೊಡೆಯಾಕಾರದಲ್ಲಿ ನೋಡಲು ಸುಂದರವಾಗಿ ಕಾಣುವ ಅಣಬೆ ವಿವಿಧ ಗಾತ್ರದಲ್ಲಿ ಬೆಳೆದಿರುತ್ತವೆ . ಇವು ತಿನ್ನಲು ಸಹ ಬಲು ರುಚಿ . ಬಗೆ ಬಗೆಯ ಖಾದ್ಯಗಳಿಗೆ ಅಣಬೆ ಸಾಕ್ಷಿಯಾಗುತ್ತದೆ . ಕರಿದ ಮಶ್ರೂಮ್ ಮಂಚೂರಿ ಕೂಡ ಇದಕ್ಕೆ ಒಳ್ಳೆಯ ಉದಾಹರಣೆ .


ಅಣಬೆ ಮತ್ತು ಟಿ . ಬಿ

ಅಣಬೆ ಕೇವಲ ತಿನ್ನಲು ರುಚಿ ಎಂದು ತಿನ್ನುವುದರ ಜೊತೆಗೆ ಅದರಲ್ಲಿರುವ ಆರೋಗ್ಯಕ್ಕೆ ಉಪಯುಕ್ತವಾದ ಮಾಹಿತಿಯನ್ನು ಕಲೆ ಹಾಕೋಣ . ಹಣಬೆಯಲ್ಲಿರುವ ಕೆಲವು ಅಂಶಗಳು ಆರೋಗ್ಯಕ್ಕೆ ಬಹಳ ಸಹಕಾರಿ . ಅದರಲ್ಲೂ ಬಿಸಿಲಲ್ಲಿ ಒಣಗಿಸಿದ ಒಯ್ಸ್ಟರ್ ಮಶ್ರೂಮ್ ಟ್ಯೂಬರ್ಕ್ಯುಲೋಸಿಸ್ ಗೆ ರಾಮ ಬಾಣ ಎಂದು ನಂಬಲಾಗಿದೆ . ಇದೆಲ್ಲಾ ಹೇಗೆ ಏನು ಎಂದು ತಿಳಿಯುವ ಮೊದಲು ಟ್ಯೂಬರ್ಕ್ಯುಲೋಸಿಸ್ ( ಟಿ . ಬಿ . ) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ .



ಟ್ಯುಬೆರ್ ಕ್ಯುಲೋಸಿಸ್ ಅಂದರೆ ಟಿ . ಬಿ . ಯ ಬಗ್ಗೆ ಒಂದು ಕಿರು ನೋಟ

ಟ್ಯೂಬರ್ಕ್ಯುಲೋಸಿಸ್ ಒಂದು ದೀರ್ಘಕಾಲಿಕ ಕಾಯಿಲೆ ಯಾಗಿದ್ದು , ಶ್ವಾಸಕೋಶಗಳಿಗೆ ಮೊದಲು ತೊಂದರೆ ಉಂಟು ಮಾಡುತ್ತದೆ . " ಮೈಕೋ ಬ್ಯಾಕ್ಟೇರಿಯಂ ಟ್ಯುಬೆರ್ ಕ್ಯುಲೋಸಿಸ್ ಬ್ಯಾಕ್ಟೇರಿಯಂ " ಎಂಬ ಬ್ಯಾಕ್ಟೇರಿಯಾ ಟ್ಯುಬೆರ್ ಕ್ಯುಲೋಸಿಸ್ ಗೆ ಕಾರಣವಾಗುತ್ತದೆ . ಟಿ . ಬಿ . ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಗಾಳಿಯ ಮುಖಾಂತರ ತನ್ನ ಸುತ್ತಮುತ್ತ ಇರುವ ಇತರರಿಗೂ ಹರಡುತ್ತದೆ . ವಿಪರೀತ ಕೆಮ್ಮು ಬಹಳ ಕಾಲದಿಂದ ಆ ವ್ಯಕ್ತಿಯನ್ನು ಬಳಲಿಸುತ್ತಿದ್ದರೆ ಜೊತೆಗೆ ಕಫ ಹೆಚ್ಚಾಗಿದ್ದರೆ ಅದು ಟಿ . ಬಿ . ಇದ್ದರೂ ಇರಬಹುದು ಎಂದು ವೈದ್ಯರು ಕಫ ಪರೀಕ್ಷೆಗೆ ಬರೆದು ಕೊಡುತ್ತಾರೆ . ಈಗ ಅನೇಕ ಸರ್ಕಾರೀ ಆಸ್ಪತ್ರೆಗಳಲ್ಲಿ ಉಚಿತವಾಗಿ ಟಿ . ಬಿ . ಕಾಯಿಲೆ ಗೆಂದು ಉಚಿತವಾಗಿ ಕಫ ಪರೀಕ್ಷೆ ಮಾಡುತ್ತಾರೆ . ಹಾಗೆ ಇದಕ್ಕೆ ಉಚಿತವಾಗಿ ಚಿಕಿತ್ಸೆ ಕೂಡ ಕೊಡುತ್ತಾರೆ . ಆದರೆ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಕೊಡದೇ ಹೋದರೆ ಆ ವ್ಯಕ್ತಿ ಬಹಳ ಕಠಿಣವಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ . ಟಿ . ಬಿ . ಕಾಯಿಲೆ ಗೆ ಗುಣ ಕಾಣಲು ಆಂಟಿ ಬೈಯೋಟಿಕ್ಸ್ ನ ಅವಶ್ಯಕತೆ ಬಹಳ ಮುಖ್ಯವಾಗಿದ್ದು , ತಪ್ಪದೆ ಮತ್ತು ಯಾವುದೇ ನಿರ್ಲಕ್ಷ್ಯವಿಲ್ಲದೆ ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳ ಬೇಕಾಗುತ್ತದೆ . ಇದರ ಜೊತೆಗೆ ಕೆಲವು ನೈಸರ್ಗಿಕ ಪರಿಹಾರಗಳು ಮತ್ತು ಕೆಲವು ಆಹಾರ ಪದ್ದತಿಗಳು ಟಿ . ಬಿ . ರೋಗಿಯನ್ನು ಆದಷ್ಟು ಬೇಗನೆ ಗುಣ ಕಾಣುವಂತೆ ಮಾಡುತ್ತವೆ .

ವಿಟಮಿನ್ ' ಡಿ ' v/s ಟ್ಯುಬೆರ್ ಕ್ಯುಲೋಸಿಸ್

ಟಿ . ಬಿ . ಕಾಯಿಲೆ ಗೆ ಹಲವಾರು ನೈಸರ್ಗಿಕ ಮನೆ ಮದ್ದುಗಳು ತಯಾರಿದ್ದು ಅದರಲ್ಲಿ ಅಣಬೆ ಬಹಳ ಪ್ರಮುಖ ಆಹಾರ ಎಂದು ನಂಬಲಾಗಿದೆ . ಇದು ಧೀರ್ಘ ಕಾಲದ ಟಿ. ಬಿ. ಕಾಯಿಲೆ ಯಿಂದ ಬಳಲುತ್ತಿರುವ ಮನುಷ್ಯನನ್ನು ಬಹಳ ಬೇಗನೆ ಮ್ಯಾಜಿಕ್ ನ ರೀತಿಯಲ್ಲಿ ಹುಷಾರಾಗುವಂತೆ ಮಾಡುತ್ತದೆ . ಅದರಲ್ಲೂ ಸೂರ್ಯನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದ ಒಯ್ಸ್ಟರ್ ಮಶ್ರೂಮ್ ಟಿ . ಬಿ . ಗೆ ಬಹಳ ಉಪಯುಕ್ತ . ಏಕೆಂದರೆ ಭೂಮಿಯ ಮೇಲಿನ ಅಣಬೆ ಯಾವ ವಿಟಮಿನ್ ' ಡಿ ' ಅಂಶವನ್ನೂ ಹೊಂದಿರುವುದಿಲ್ಲ . ಅದೇ ಹಣಬೆಯನ್ನು ಬಿಸಿಲಿನಲ್ಲಿ ಒಣಗಿಸಿದರೆ ಸೂರ್ಯನ ಕಿರಣಗಳು ತಾಗಿ ವಿಟಮಿನ್ ' ಡಿ ' ತಾನಾಗಿಯೇ ಹಣಬೆಯೊಳಗೆ ಸೇರುತ್ತದೆ . ಸಾಮಾನ್ಯವಾಗಿ ವಿಟಮಿನ್ ' ಡಿ ' ಟಿ . ಬಿ . ರೋಗಿಗಳಿಗೆ ಅತ್ಯಂತ ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ . ಇದು ಆಂಟಿ ಟಿ .ಬಿ . ಡ್ರಗ್ ನ ವಿರುದ್ಧ ಬಹಳ ಚೆನ್ನಾಗಿ ಹೋರಾಡುತ್ತದೆ .





ಹಣಬೆಗೂ ಜರ್ಮನಿ ಗೂ ಇರುವ ನಂಟು

ಈ ರೀತಿಯ ಸೂರ್ಯನ ಬಿಸಿಲಿನಲ್ಲಿ ಒಣಗಿಸಿದ ಒಯ್ಸ್ಟರ್ ಅಣಬೆ ಗಳು ಟಿ . ಬಿ . ಕಾಯಿಲೆ ಹೊಂದಿರುವ ರೋಗಿಗೆ ಒಳ್ಳೆಯ ಮದ್ದು ಎಂಬುದನ್ನು ಮೊದಲು ಜರ್ಮನ್ ವಿಜ್ಞಾನಿಗಳು ಪ್ರಯೋಗ ನಡೆಸಿದರು . ಏಕೆಂದರೆ ಆಗಿನ ಕಾಲದಲ್ಲಿ ಟಿ . ಬಿ . ಕಾಯಿಲೆ ಬಂದು ವರ್ಷಕ್ಕೆ ಸುಮಾರು 1.6 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದರು . ಇದಕ್ಕೆ ಕಾರಣ ಆ ದೇಶದ ಆದಾಯ . ಆದಾಯ ಕಡಿಮೆ ಇರುವ ರಾಷ್ಟ್ರಗಳಲ್ಲಿ ಸಹಜವಾಗಿಯೇ ವಿಟಮಿನ್ ಸಪ್ಲಿಮೆಂಟ್ ಗಳ ಕೊರತೆ ಎದ್ದು ಕಾಣುತ್ತದೆ . ಪ್ರತಿ ಕುಟುಂಬದ ಆದಾಯ ಕೂಡ ಕಡಿಮೆ ಇರುವುದರಿಂದ ದುಬಾರಿ ಔಷಧಿಗಳನ್ನು ಕೊಳ್ಳುವುದಿರಲೀ ಅದರ ಕುರಿತು ಯೋಚನೆ ಕೂಡ ಮಾಡುವ ಹಾಗಿಲ್ಲ . ಇಂತಹ ಸಮಯದಲ್ಲಿ ವಿಜ್ಞಾನಿಗಳ ಗಮನ ಸೆಳೆದಿದ್ದು ರಸ್ತೆ ಬದಿಯಲ್ಲಿ ಸುಂದರವಾಗಿ ಬೆಳೆದಿದ್ದಂತಹ ಪುಟ್ಟ ಪುಟ್ಟ ಹಣಬೆಗಳು . ಅಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ವಿಜ್ಞಾನಿಗಳು ಧೈರ್ಯ ಮಾಡಿ ಅಲ್ಲಿನ ಸರ್ಕಾರದ ಜೊತೆ ಮಾತನಾಡಿ ಇಂತಹದೊಂದು ಸಾಹಸಕ್ಕೆ ಕೈ ಹಾಕಿಯೇ ಬಿಟ್ಟರು . ರಸ್ತೆ ಬದಿಯಲ್ಲಿದ್ದ ಹಣಬೆಗಳನ್ನು ಸಂಗ್ರಹಿಸಿದರು . ನಂತರ ಅವುಗಳನ್ನು ಚೆನ್ನಾಗಿ ಒಣಗಿಸಿ ಟಿ . ಬಿ . ರೋಗಿಗಳಿಗೆ ಕೊಡಲು ಪ್ರಾರಂಭ ಮಾಡಿದರು . ಅವರ ನಿರೀಕ್ಷೆಗೂ ಮೀರಿ ಟಿ . ಬಿ . ರೋಗಿಗಳು ಬಹಳ ಬೇಗನೆ ಚೇತರಿಕೆ ಕಂಡು ಕೊಂಡರು . ಇದರಿಂದ ವಿಜ್ಞಾನಿಗಳು ಸಂತೋಷದಿಂದ ಮತ್ತು ದೃಢ ನಿರ್ಧಾರ ಮಾಡಿ ಟಿ . ಬಿ . ಕಾಯಿಲೆ ಗೆ ಬಿಸಿಲಿನಲ್ಲಿ ಒಣಗಿಸಿದ ಒಯ್ಸ್ಟರ್ ಅಣಬೆ ನಿಜಕ್ಕೂ ಒಳ್ಳೆಯ ಔಷಧಿ ಎಂದು ತಮ್ಮ ವರದಿ ಸಿದ್ದ ಪಡಿಸಿದರು .



ಒಯ್ಸ್ಟರ್ ಹಣಬೆಯಿಂದ ನಾಪತ್ತೆಯಾಯಿತು ಟ್ಯುಬೆರ್ ಕ್ಯುಲೋಸಿಸ್

ಬಿಸಿಲಿನಲ್ಲಿ ಒಣಗಿಸಿದ ಒಯ್ಸ್ಟರ್ ಹಣಬೆಯನ್ನು ಟಿ . ಬಿ . ರೋಗಿಗಳು ಟಿ . ಬಿ . ಕಾಯಿಲೆ ಗೆ ಔಷಧಿ ತೆಗೆದುಕೊಳ್ಳುತ್ತಿರುವ ಸಂಧರ್ಭದಲ್ಲಿ ಕೇವಲ ಹಾಗೆ ತಿನ್ನುವ ಬದಲು ಸ್ಯಾಂಡ್ವಿಚ್ ಬ್ರೆಡ್ ನ ಜೊತೆಗೆ ಸ್ಟಫ್ ಮಾಡಿ ಬೆಳಗಿನ ತಿಂಡಿಯಲ್ಲಿ ಇದನ್ನು ಸೇರಿಸಿ ತಿಂದರೆ ಬಹಳ ಒಳ್ಳೆಯದು . ಕೇವಲ ಮೊದಲ 4 ತಿಂಗಳಲ್ಲೇ ಟಿ . ಬಿ . ರೋಗಿಯ ರೋಗ ನಿರೋಧಕ ಶಕ್ತಿಯಲ್ಲಿ ಚೇತರಿಕೆ ಕಂಡು ಬರುವುದನ್ನು ಗಮನಿಸಬಹುದು . ಇದಕ್ಕೆ ಕಾರಣ ಬಿಸಿಲಿನಲ್ಲಿ ಒಣಗಿಸಿದ ಅಣಬೆ ಆದ್ದರಿಂದ ಅದರಲ್ಲಿರುವ ವಿಟಮಿನ್ ' ಡಿ ' ಮನುಷ್ಯನ ದೇಹವನ್ನು ಆಂಟಿ ಮೈಕ್ರೋ ಬಿಯಲ್ ಕಾಂಪೌಂಡ್ ಅನ್ನು ತಯಾರಿಸಲು ಸಿದ್ದಗೊಳಿಸಿ , ಟಿ . ಬಿ . ಕಾಯಿಲೆ ಉಂಟು ಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವಂತೆ ಮಾಡುತ್ತದೆ .


ಮಾಹಿತಿ ಜಾಲತಾಣ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in health »

ವ್ಯವಹಾರಕ್ಕಾಗಿ ಆಸ್ಪತ್ರೆಯಲ್ಲಾ, ಸೇವೆಗಾಗಿ ನಮ್ಮ ಆಸ್ಪತ್ರೆ. ಕಾಂಗರೂ ಆಸ್ಪತ್ರೆಯ ಸಂಸ್ಥಾಪಕ ಡಾ ಶೇಖರ್ ಸುಬ್ಬಯ್ಯ
ವ್ಯವಹಾರಕ್ಕಾಗಿ ಆಸ್ಪತ್ರೆಯಲ್ಲಾ, ಸೇವೆಗಾಗಿ ನಮ್ಮ ಆಸ್ಪತ್ರೆ. ಕಾಂಗರೂ ಆಸ್ಪತ್ರೆಯ ಸಂಸ್ಥಾಪಕ ಡಾ ಶೇಖರ್ ಸುಬ್ಬಯ್ಯ

ರಾಮನಗರ: ನಾವು ಹಣಕ್ಕಾಗಿ ಆಸ್ಪತ್ರೆ ನಡೆಸುವುದಿಲ್ಲ, ಇದೊಂದು ಸೇವೆ ಎಂದು ಪರಿಗಣಿಸಿ ಆಸ್ಪತ್ರೆ ನಡೆಸುತ್ತಿದ್ದೇವೆ. ಬೆಂಗಳೂರು ಮೈಸೂರು ಸೇರಿದಂತೆ ನಾಲ್ಕು

೪೬ ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ೧೦ ಕಿಲೋ ಕ್ಯಾನ್ಸರ್ ಗಡ್ಡೆ ಹೊರತೆಗೆದ ಬಾಲು ಆಸ್ಪತ್ರೆಯ ವೈದ್ಯರು
೪೬ ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ೧೦ ಕಿಲೋ ಕ್ಯಾನ್ಸರ್ ಗಡ್ಡೆ ಹೊರತೆಗೆದ ಬಾಲು ಆಸ್ಪತ್ರೆಯ ವೈದ್ಯರು

ಚನ್ನಪಟ್ಟಣ: ತಾಲ್ಲೂಕಿನ ಗ್ರಾಮವೊಂದರ ೪೬ ವರ್ಷದ ಮಹಿಳೆಯೊಬ್ಬರ ಗರ್ಭ (ಅಂಡಾಶಯ) ದಲ್ಲಿದ್ದ ಬರೋಬ್ಬರಿ ೧೦ ಕಿಲೋ ೩೦೦ ಗ್ರಾಂ ತೂಕದ ಕ್ಯಾನ್ಸರ್ ಗಡ್ಡೆ ಯನ್ನ

ಹೊಂಗನೂರು, ಕೋಡಂಬಳ್ಳಿ ಗ್ರಾಮದಲ್ಲಿ ಪರವಾನಗಿ ಇಲ್ಲದ ಖಾಸಗಿ ಆಸ್ಪತ್ರೆಗಳಿಗೆ ಬೀಗ ಜಡಿದ ಟಿಹೆಚ್‌ಓ
ಹೊಂಗನೂರು, ಕೋಡಂಬಳ್ಳಿ ಗ್ರಾಮದಲ್ಲಿ ಪರವಾನಗಿ ಇಲ್ಲದ ಖಾಸಗಿ ಆಸ್ಪತ್ರೆಗಳಿಗೆ ಬೀಗ ಜಡಿದ ಟಿಹೆಚ್‌ಓ

ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಗೋಪಿ ಕ್ಲಿನಿಕ್ ಎಂಬ ಖಾಸಗಿ ಆಸ್ಪತ್ರೆ ಇದ್ದು, ಗೋಪಿ ಎಂಬುವವರು ವೈದ್ಯರಾಗಿ ಸೇವೆ ನಿರ್ವಹಿಸುತ್ತಿದ್ದಾರ

ಉತ್ತಮ ಆರೋಗ್ಯಕ್ಕೆ ಆಯುರ್ವೇದವೇ ದಿವ್ಯ ಔಷಧ ಡಾ ಸಹನಾ ಕೃಷ್ಣ
ಉತ್ತಮ ಆರೋಗ್ಯಕ್ಕೆ ಆಯುರ್ವೇದವೇ ದಿವ್ಯ ಔಷಧ ಡಾ ಸಹನಾ ಕೃಷ್ಣ

ಚನ್ನಪಟ್ಟಣ: ಪುರಾಣೇತೀಹಾಸದಿಂದಲೂ ಪ್ರಖ್ಯಾತವಾಗಿರುವ ಔಷಧ ಎಂದರೆ ಅದು ಆಯುರ್ವೇದ ಔಷಧ, ಜಗತ್ತಿನ ಅತ್ಯಂತ ಪ್ರಾಚೀನ ಔಷಧವೂ ಹೌದು, ನಮ್ಮ ಪ್ರಕೃತಿ ಹೇಗೆ ಸಮ

ದೊಡ್ಡಮಳೂರು ಗ್ರಾಮದಲ್ಲಿ ದೀರ್ಘಾಯು ವೆಲ್ ನೆಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ
ದೊಡ್ಡಮಳೂರು ಗ್ರಾಮದಲ್ಲಿ ದೀರ್ಘಾಯು ವೆಲ್ ನೆಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ

ಚನ್ನಪಟ್ಟಣ: ತಾಲ್ಲೂಕಿನ ದೊಡ್ಡಮಳೂರು ಗ್ರಾಮದ ದೇವಸ್ಥಾನದ ಬೀದಿಯಲ್ಲಿರುವ ದೀರ್ಘಾಯು ವೆಲ್ ನೆಸ್ ಸೆಂಟರ್ ಇವರ ವತಿಯಿಂದ ನಾಳೆ (ಭಾನುವಾರ) ಬೆಳಿ

ಕ್ರಿಯೇಟಿವ್ ಅಸೋಸಿಯೇಷನ್ ಹಾಗೂ ಸೊಸೈಟಿ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ
ಕ್ರಿಯೇಟಿವ್ ಅಸೋಸಿಯೇಷನ್ ಹಾಗೂ ಸೊಸೈಟಿ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ

ಚನ್ನಪಟ್ಟಣ : ತಾಲ್ಲೂಕಿನಿಂದ ಬೆಂಗಳೂರಿಗೆ ಹೋಗಿ, ಜೀವನ ಕಟ್ಟಿಕೊಂಡು ತಾಲ್ಲೂಕಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ ಕ್ರಿಯೇಟಿವ್ ಅಸೋಸಿಯೇಷನ್ ಮತ್ತ

ದುಶ್ಚಟದಿಂದ ದೂರವಿರಿ, ಆರೋಗ್ಯ ಕಾಪಾಡಿಕೊಳ್ಳಿ : ಪ್ರತಿಮಾ ಕೆ.ವಿ
ದುಶ್ಚಟದಿಂದ ದೂರವಿರಿ, ಆರೋಗ್ಯ ಕಾಪಾಡಿಕೊಳ್ಳಿ : ಪ್ರತಿಮಾ ಕೆ.ವಿ

ರಾಮನಗರ, ಜೂ. 17:   ಇತ್ತೀಚೆಗೆ ಅತಿ ಹೆಚ್ಚು ಹಲವಾರು ದುಶ್ಚಟಗಳು ಮನುಷ್ಯನನ್ನು ಆವರಸಿಕೊಂಡಿವೆ. ಇದರಿಂದಾಗಿ ನೂರಾರು ಖಾಯಿಲೆಗಳು ದೇಹ ಹೊಕ್ಕು ನಿತ್ಯ ಸಾ

ಫ್ಲೋರೋಸಿಸ್ ನಿಯಂತ್ರಿಸಿ ಉತ್ತಮ ಜೀವನ ನಡೆಸುವಂತೆ ಸಲಹೆ - ಡಾ.ಅನಿಲ್
ಫ್ಲೋರೋಸಿಸ್ ನಿಯಂತ್ರಿಸಿ ಉತ್ತಮ ಜೀವನ ನಡೆಸುವಂತೆ ಸಲಹೆ - ಡಾ.ಅನಿಲ್

ರಾಮನಗರ, ಜೂ. 15:   ಫ್ಲೋರೈಡ್ ನಮ್ಮ ದೇಹಕ್ಕೆ ಬೇಕಾದ ಒಂದು ಖನಿಜಾಂಶ ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಫ್ಲೋರೈಡ

ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೇವೆಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದ ಬಿ.ಎಸ್.ಗಂಗಾಧರ್.
ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೇವೆಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದ ಬಿ.ಎಸ್.ಗಂಗಾಧರ್.

ರಾಮನಗರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆ.ಕರೇನಹಳ್ಳಿ ಇವರ ಸಂಯುಕ್ತ ಆಶ್ರ

ಶ್ರೀಗಿರಿಪುರ ಗ್ರಾಪಂ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರ
ಶ್ರೀಗಿರಿಪುರ ಗ್ರಾಪಂ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರ

ರಾಮನಗರ, ಜೂ. 07:   ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾತ್ಮಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆ ಹಾಗೂ ಕುದೂರು ಪ್ರ

Top Stories »  


Top ↑