ಟ್ಯುಬೆರ್ ಕ್ಯುಲೋಸಿಸ್ ಇದ್ದರೆ ಅಣಬೆ ತಿಂದು ಗುಣ ಪಡಿಸಿಕೊಳ್ಳಿ
ಮಳೆಗಾಲ ಶುರುವಾಯಿತೆಂದರೆ ಹಣಬೆಗಳದ್ದೇ ಕಾರುಬಾರು . ರಸ್ತೆಯ ಇಕ್ಕೆಲಗಳಲ್ಲಿ ಎತ್ತ ನೋಡಿದರೂ ಅತ್ತ ಮಣ್ಣಿನ ಮೇಲೆ ಸಣ್ಣ ಸಣ್ಣ ಕೊಡೆಯಾಕಾರದಲ್ಲಿ ನೋಡಲು ಸುಂದರವಾಗಿ ಕಾಣುವ ಅಣಬೆ ವಿವಿಧ ಗಾತ್ರದಲ್ಲಿ ಬೆಳೆದಿರುತ್ತವೆ . ಇವು ತಿನ್ನಲು ಸಹ ಬಲು ರುಚಿ . ಬಗೆ ಬಗೆಯ ಖಾದ್ಯಗಳಿಗೆ ಅಣಬೆ ಸಾಕ್ಷಿಯಾಗುತ್ತದೆ . ಕರಿದ ಮಶ್ರೂಮ್ ಮಂಚೂರಿ ಕೂಡ ಇದಕ್ಕೆ ಒಳ್ಳೆಯ ಉದಾಹರಣೆ .
ಅಣಬೆ ಮತ್ತು ಟಿ . ಬಿ
ಅಣಬೆ ಕೇವಲ ತಿನ್ನಲು ರುಚಿ ಎಂದು ತಿನ್ನುವುದರ ಜೊತೆಗೆ ಅದರಲ್ಲಿರುವ ಆರೋಗ್ಯಕ್ಕೆ ಉಪಯುಕ್ತವಾದ ಮಾಹಿತಿಯನ್ನು ಕಲೆ ಹಾಕೋಣ . ಹಣಬೆಯಲ್ಲಿರುವ ಕೆಲವು ಅಂಶಗಳು ಆರೋಗ್ಯಕ್ಕೆ ಬಹಳ ಸಹಕಾರಿ . ಅದರಲ್ಲೂ ಬಿಸಿಲಲ್ಲಿ ಒಣಗಿಸಿದ ಒಯ್ಸ್ಟರ್ ಮಶ್ರೂಮ್ ಟ್ಯೂಬರ್ಕ್ಯುಲೋಸಿಸ್ ಗೆ ರಾಮ ಬಾಣ ಎಂದು ನಂಬಲಾಗಿದೆ . ಇದೆಲ್ಲಾ ಹೇಗೆ ಏನು ಎಂದು ತಿಳಿಯುವ ಮೊದಲು ಟ್ಯೂಬರ್ಕ್ಯುಲೋಸಿಸ್ ( ಟಿ . ಬಿ . ) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ .
ಟ್ಯುಬೆರ್ ಕ್ಯುಲೋಸಿಸ್ ಅಂದರೆ ಟಿ . ಬಿ . ಯ ಬಗ್ಗೆ ಒಂದು ಕಿರು ನೋಟ
ಟ್ಯೂಬರ್ಕ್ಯುಲೋಸಿಸ್ ಒಂದು ದೀರ್ಘಕಾಲಿಕ ಕಾಯಿಲೆ ಯಾಗಿದ್ದು , ಶ್ವಾಸಕೋಶಗಳಿಗೆ ಮೊದಲು ತೊಂದರೆ ಉಂಟು ಮಾಡುತ್ತದೆ . " ಮೈಕೋ ಬ್ಯಾಕ್ಟೇರಿಯಂ ಟ್ಯುಬೆರ್ ಕ್ಯುಲೋಸಿಸ್ ಬ್ಯಾಕ್ಟೇರಿಯಂ " ಎಂಬ ಬ್ಯಾಕ್ಟೇರಿಯಾ ಟ್ಯುಬೆರ್ ಕ್ಯುಲೋಸಿಸ್ ಗೆ ಕಾರಣವಾಗುತ್ತದೆ . ಟಿ . ಬಿ . ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಗಾಳಿಯ ಮುಖಾಂತರ ತನ್ನ ಸುತ್ತಮುತ್ತ ಇರುವ ಇತರರಿಗೂ ಹರಡುತ್ತದೆ . ವಿಪರೀತ ಕೆಮ್ಮು ಬಹಳ ಕಾಲದಿಂದ ಆ ವ್ಯಕ್ತಿಯನ್ನು ಬಳಲಿಸುತ್ತಿದ್ದರೆ ಜೊತೆಗೆ ಕಫ ಹೆಚ್ಚಾಗಿದ್ದರೆ ಅದು ಟಿ . ಬಿ . ಇದ್ದರೂ ಇರಬಹುದು ಎಂದು ವೈದ್ಯರು ಕಫ ಪರೀಕ್ಷೆಗೆ ಬರೆದು ಕೊಡುತ್ತಾರೆ . ಈಗ ಅನೇಕ ಸರ್ಕಾರೀ ಆಸ್ಪತ್ರೆಗಳಲ್ಲಿ ಉಚಿತವಾಗಿ ಟಿ . ಬಿ . ಕಾಯಿಲೆ ಗೆಂದು ಉಚಿತವಾಗಿ ಕಫ ಪರೀಕ್ಷೆ ಮಾಡುತ್ತಾರೆ . ಹಾಗೆ ಇದಕ್ಕೆ ಉಚಿತವಾಗಿ ಚಿಕಿತ್ಸೆ ಕೂಡ ಕೊಡುತ್ತಾರೆ . ಆದರೆ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಕೊಡದೇ ಹೋದರೆ ಆ ವ್ಯಕ್ತಿ ಬಹಳ ಕಠಿಣವಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ . ಟಿ . ಬಿ . ಕಾಯಿಲೆ ಗೆ ಗುಣ ಕಾಣಲು ಆಂಟಿ ಬೈಯೋಟಿಕ್ಸ್ ನ ಅವಶ್ಯಕತೆ ಬಹಳ ಮುಖ್ಯವಾಗಿದ್ದು , ತಪ್ಪದೆ ಮತ್ತು ಯಾವುದೇ ನಿರ್ಲಕ್ಷ್ಯವಿಲ್ಲದೆ ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳ ಬೇಕಾಗುತ್ತದೆ . ಇದರ ಜೊತೆಗೆ ಕೆಲವು ನೈಸರ್ಗಿಕ ಪರಿಹಾರಗಳು ಮತ್ತು ಕೆಲವು ಆಹಾರ ಪದ್ದತಿಗಳು ಟಿ . ಬಿ . ರೋಗಿಯನ್ನು ಆದಷ್ಟು ಬೇಗನೆ ಗುಣ ಕಾಣುವಂತೆ ಮಾಡುತ್ತವೆ .
ವಿಟಮಿನ್ ' ಡಿ ' v/s ಟ್ಯುಬೆರ್ ಕ್ಯುಲೋಸಿಸ್
ಟಿ . ಬಿ . ಕಾಯಿಲೆ ಗೆ ಹಲವಾರು ನೈಸರ್ಗಿಕ ಮನೆ ಮದ್ದುಗಳು ತಯಾರಿದ್ದು ಅದರಲ್ಲಿ ಅಣಬೆ ಬಹಳ ಪ್ರಮುಖ ಆಹಾರ ಎಂದು ನಂಬಲಾಗಿದೆ . ಇದು ಧೀರ್ಘ ಕಾಲದ ಟಿ. ಬಿ. ಕಾಯಿಲೆ ಯಿಂದ ಬಳಲುತ್ತಿರುವ ಮನುಷ್ಯನನ್ನು ಬಹಳ ಬೇಗನೆ ಮ್ಯಾಜಿಕ್ ನ ರೀತಿಯಲ್ಲಿ ಹುಷಾರಾಗುವಂತೆ ಮಾಡುತ್ತದೆ . ಅದರಲ್ಲೂ ಸೂರ್ಯನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದ ಒಯ್ಸ್ಟರ್ ಮಶ್ರೂಮ್ ಟಿ . ಬಿ . ಗೆ ಬಹಳ ಉಪಯುಕ್ತ . ಏಕೆಂದರೆ ಭೂಮಿಯ ಮೇಲಿನ ಅಣಬೆ ಯಾವ ವಿಟಮಿನ್ ' ಡಿ ' ಅಂಶವನ್ನೂ ಹೊಂದಿರುವುದಿಲ್ಲ . ಅದೇ ಹಣಬೆಯನ್ನು ಬಿಸಿಲಿನಲ್ಲಿ ಒಣಗಿಸಿದರೆ ಸೂರ್ಯನ ಕಿರಣಗಳು ತಾಗಿ ವಿಟಮಿನ್ ' ಡಿ ' ತಾನಾಗಿಯೇ ಹಣಬೆಯೊಳಗೆ ಸೇರುತ್ತದೆ . ಸಾಮಾನ್ಯವಾಗಿ ವಿಟಮಿನ್ ' ಡಿ ' ಟಿ . ಬಿ . ರೋಗಿಗಳಿಗೆ ಅತ್ಯಂತ ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ . ಇದು ಆಂಟಿ ಟಿ .ಬಿ . ಡ್ರಗ್ ನ ವಿರುದ್ಧ ಬಹಳ ಚೆನ್ನಾಗಿ ಹೋರಾಡುತ್ತದೆ .
ಹಣಬೆಗೂ ಜರ್ಮನಿ ಗೂ ಇರುವ ನಂಟು
ಈ ರೀತಿಯ ಸೂರ್ಯನ ಬಿಸಿಲಿನಲ್ಲಿ ಒಣಗಿಸಿದ ಒಯ್ಸ್ಟರ್ ಅಣಬೆ ಗಳು ಟಿ . ಬಿ . ಕಾಯಿಲೆ ಹೊಂದಿರುವ ರೋಗಿಗೆ ಒಳ್ಳೆಯ ಮದ್ದು ಎಂಬುದನ್ನು ಮೊದಲು ಜರ್ಮನ್ ವಿಜ್ಞಾನಿಗಳು ಪ್ರಯೋಗ ನಡೆಸಿದರು . ಏಕೆಂದರೆ ಆಗಿನ ಕಾಲದಲ್ಲಿ ಟಿ . ಬಿ . ಕಾಯಿಲೆ ಬಂದು ವರ್ಷಕ್ಕೆ ಸುಮಾರು 1.6 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದರು . ಇದಕ್ಕೆ ಕಾರಣ ಆ ದೇಶದ ಆದಾಯ . ಆದಾಯ ಕಡಿಮೆ ಇರುವ ರಾಷ್ಟ್ರಗಳಲ್ಲಿ ಸಹಜವಾಗಿಯೇ ವಿಟಮಿನ್ ಸಪ್ಲಿಮೆಂಟ್ ಗಳ ಕೊರತೆ ಎದ್ದು ಕಾಣುತ್ತದೆ . ಪ್ರತಿ ಕುಟುಂಬದ ಆದಾಯ ಕೂಡ ಕಡಿಮೆ ಇರುವುದರಿಂದ ದುಬಾರಿ ಔಷಧಿಗಳನ್ನು ಕೊಳ್ಳುವುದಿರಲೀ ಅದರ ಕುರಿತು ಯೋಚನೆ ಕೂಡ ಮಾಡುವ ಹಾಗಿಲ್ಲ . ಇಂತಹ ಸಮಯದಲ್ಲಿ ವಿಜ್ಞಾನಿಗಳ ಗಮನ ಸೆಳೆದಿದ್ದು ರಸ್ತೆ ಬದಿಯಲ್ಲಿ ಸುಂದರವಾಗಿ ಬೆಳೆದಿದ್ದಂತಹ ಪುಟ್ಟ ಪುಟ್ಟ ಹಣಬೆಗಳು . ಅಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ವಿಜ್ಞಾನಿಗಳು ಧೈರ್ಯ ಮಾಡಿ ಅಲ್ಲಿನ ಸರ್ಕಾರದ ಜೊತೆ ಮಾತನಾಡಿ ಇಂತಹದೊಂದು ಸಾಹಸಕ್ಕೆ ಕೈ ಹಾಕಿಯೇ ಬಿಟ್ಟರು . ರಸ್ತೆ ಬದಿಯಲ್ಲಿದ್ದ ಹಣಬೆಗಳನ್ನು ಸಂಗ್ರಹಿಸಿದರು . ನಂತರ ಅವುಗಳನ್ನು ಚೆನ್ನಾಗಿ ಒಣಗಿಸಿ ಟಿ . ಬಿ . ರೋಗಿಗಳಿಗೆ ಕೊಡಲು ಪ್ರಾರಂಭ ಮಾಡಿದರು . ಅವರ ನಿರೀಕ್ಷೆಗೂ ಮೀರಿ ಟಿ . ಬಿ . ರೋಗಿಗಳು ಬಹಳ ಬೇಗನೆ ಚೇತರಿಕೆ ಕಂಡು ಕೊಂಡರು . ಇದರಿಂದ ವಿಜ್ಞಾನಿಗಳು ಸಂತೋಷದಿಂದ ಮತ್ತು ದೃಢ ನಿರ್ಧಾರ ಮಾಡಿ ಟಿ . ಬಿ . ಕಾಯಿಲೆ ಗೆ ಬಿಸಿಲಿನಲ್ಲಿ ಒಣಗಿಸಿದ ಒಯ್ಸ್ಟರ್ ಅಣಬೆ ನಿಜಕ್ಕೂ ಒಳ್ಳೆಯ ಔಷಧಿ ಎಂದು ತಮ್ಮ ವರದಿ ಸಿದ್ದ ಪಡಿಸಿದರು .
ಒಯ್ಸ್ಟರ್ ಹಣಬೆಯಿಂದ ನಾಪತ್ತೆಯಾಯಿತು ಟ್ಯುಬೆರ್ ಕ್ಯುಲೋಸಿಸ್
ಬಿಸಿಲಿನಲ್ಲಿ ಒಣಗಿಸಿದ ಒಯ್ಸ್ಟರ್ ಹಣಬೆಯನ್ನು ಟಿ . ಬಿ . ರೋಗಿಗಳು ಟಿ . ಬಿ . ಕಾಯಿಲೆ ಗೆ ಔಷಧಿ ತೆಗೆದುಕೊಳ್ಳುತ್ತಿರುವ ಸಂಧರ್ಭದಲ್ಲಿ ಕೇವಲ ಹಾಗೆ ತಿನ್ನುವ ಬದಲು ಸ್ಯಾಂಡ್ವಿಚ್ ಬ್ರೆಡ್ ನ ಜೊತೆಗೆ ಸ್ಟಫ್ ಮಾಡಿ ಬೆಳಗಿನ ತಿಂಡಿಯಲ್ಲಿ ಇದನ್ನು ಸೇರಿಸಿ ತಿಂದರೆ ಬಹಳ ಒಳ್ಳೆಯದು . ಕೇವಲ ಮೊದಲ 4 ತಿಂಗಳಲ್ಲೇ ಟಿ . ಬಿ . ರೋಗಿಯ ರೋಗ ನಿರೋಧಕ ಶಕ್ತಿಯಲ್ಲಿ ಚೇತರಿಕೆ ಕಂಡು ಬರುವುದನ್ನು ಗಮನಿಸಬಹುದು . ಇದಕ್ಕೆ ಕಾರಣ ಬಿಸಿಲಿನಲ್ಲಿ ಒಣಗಿಸಿದ ಅಣಬೆ ಆದ್ದರಿಂದ ಅದರಲ್ಲಿರುವ ವಿಟಮಿನ್ ' ಡಿ ' ಮನುಷ್ಯನ ದೇಹವನ್ನು ಆಂಟಿ ಮೈಕ್ರೋ ಬಿಯಲ್ ಕಾಂಪೌಂಡ್ ಅನ್ನು ತಯಾರಿಸಲು ಸಿದ್ದಗೊಳಿಸಿ , ಟಿ . ಬಿ . ಕಾಯಿಲೆ ಉಂಟು ಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವಂತೆ ಮಾಡುತ್ತದೆ .
ಮಾಹಿತಿ ಜಾಲತಾಣ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in health »
ವ್ಯವಹಾರಕ್ಕಾಗಿ ಆಸ್ಪತ್ರೆಯಲ್ಲಾ, ಸೇವೆಗಾಗಿ ನಮ್ಮ ಆಸ್ಪತ್ರೆ. ಕಾಂಗರೂ ಆಸ್ಪತ್ರೆಯ ಸಂಸ್ಥಾಪಕ ಡಾ ಶೇಖರ್ ಸುಬ್ಬಯ್ಯ
ರಾಮನಗರ: ನಾವು ಹಣಕ್ಕಾಗಿ ಆಸ್ಪತ್ರೆ ನಡೆಸುವುದಿಲ್ಲ, ಇದೊಂದು ಸೇವೆ ಎಂದು ಪರಿಗಣಿಸಿ ಆಸ್ಪತ್ರೆ ನಡೆಸುತ್ತಿದ್ದೇವೆ. ಬೆಂಗಳೂರು ಮೈಸೂರು ಸೇರಿದಂತೆ ನಾಲ್ಕು
೪೬ ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ೧೦ ಕಿಲೋ ಕ್ಯಾನ್ಸರ್ ಗಡ್ಡೆ ಹೊರತೆಗೆದ ಬಾಲು ಆಸ್ಪತ್ರೆಯ ವೈದ್ಯರು
ಚನ್ನಪಟ್ಟಣ: ತಾಲ್ಲೂಕಿನ ಗ್ರಾಮವೊಂದರ ೪೬ ವರ್ಷದ ಮಹಿಳೆಯೊಬ್ಬರ ಗರ್ಭ (ಅಂಡಾಶಯ) ದಲ್ಲಿದ್ದ ಬರೋಬ್ಬರಿ ೧೦ ಕಿಲೋ ೩೦೦ ಗ್ರಾಂ ತೂಕದ ಕ್ಯಾನ್ಸರ್ ಗಡ್ಡೆ ಯನ್ನ
ಹೊಂಗನೂರು, ಕೋಡಂಬಳ್ಳಿ ಗ್ರಾಮದಲ್ಲಿ ಪರವಾನಗಿ ಇಲ್ಲದ ಖಾಸಗಿ ಆಸ್ಪತ್ರೆಗಳಿಗೆ ಬೀಗ ಜಡಿದ ಟಿಹೆಚ್ಓ
ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಗೋಪಿ ಕ್ಲಿನಿಕ್ ಎಂಬ ಖಾಸಗಿ ಆಸ್ಪತ್ರೆ ಇದ್ದು, ಗೋಪಿ ಎಂಬುವವರು ವೈದ್ಯರಾಗಿ ಸೇವೆ ನಿರ್ವಹಿಸುತ್ತಿದ್ದಾರ
ಉತ್ತಮ ಆರೋಗ್ಯಕ್ಕೆ ಆಯುರ್ವೇದವೇ ದಿವ್ಯ ಔಷಧ ಡಾ ಸಹನಾ ಕೃಷ್ಣ
ಚನ್ನಪಟ್ಟಣ: ಪುರಾಣೇತೀಹಾಸದಿಂದಲೂ ಪ್ರಖ್ಯಾತವಾಗಿರುವ ಔಷಧ ಎಂದರೆ ಅದು ಆಯುರ್ವೇದ ಔಷಧ, ಜಗತ್ತಿನ ಅತ್ಯಂತ ಪ್ರಾಚೀನ ಔಷಧವೂ ಹೌದು, ನಮ್ಮ ಪ್ರಕೃತಿ ಹೇಗೆ ಸಮ
ದೊಡ್ಡಮಳೂರು ಗ್ರಾಮದಲ್ಲಿ ದೀರ್ಘಾಯು ವೆಲ್ ನೆಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ
ಚನ್ನಪಟ್ಟಣ: ತಾಲ್ಲೂಕಿನ ದೊಡ್ಡಮಳೂರು ಗ್ರಾಮದ ದೇವಸ್ಥಾನದ ಬೀದಿಯಲ್ಲಿರುವ ದೀರ್ಘಾಯು ವೆಲ್ ನೆಸ್ ಸೆಂಟರ್ ಇವರ ವತಿಯಿಂದ ನಾಳೆ (ಭಾನುವಾರ) ಬೆಳಿ
ಕ್ರಿಯೇಟಿವ್ ಅಸೋಸಿಯೇಷನ್ ಹಾಗೂ ಸೊಸೈಟಿ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ
ಚನ್ನಪಟ್ಟಣ : ತಾಲ್ಲೂಕಿನಿಂದ ಬೆಂಗಳೂರಿಗೆ ಹೋಗಿ, ಜೀವನ ಕಟ್ಟಿಕೊಂಡು ತಾಲ್ಲೂಕಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ ಕ್ರಿಯೇಟಿವ್ ಅಸೋಸಿಯೇಷನ್ ಮತ್ತ
ದುಶ್ಚಟದಿಂದ ದೂರವಿರಿ, ಆರೋಗ್ಯ ಕಾಪಾಡಿಕೊಳ್ಳಿ : ಪ್ರತಿಮಾ ಕೆ.ವಿ
ರಾಮನಗರ, ಜೂ. 17: ಇತ್ತೀಚೆಗೆ ಅತಿ ಹೆಚ್ಚು ಹಲವಾರು ದುಶ್ಚಟಗಳು ಮನುಷ್ಯನನ್ನು ಆವರಸಿಕೊಂಡಿವೆ. ಇದರಿಂದಾಗಿ ನೂರಾರು ಖಾಯಿಲೆಗಳು ದೇಹ ಹೊಕ್ಕು ನಿತ್ಯ ಸಾ
ಫ್ಲೋರೋಸಿಸ್ ನಿಯಂತ್ರಿಸಿ ಉತ್ತಮ ಜೀವನ ನಡೆಸುವಂತೆ ಸಲಹೆ - ಡಾ.ಅನಿಲ್
ರಾಮನಗರ, ಜೂ. 15: ಫ್ಲೋರೈಡ್ ನಮ್ಮ ದೇಹಕ್ಕೆ ಬೇಕಾದ ಒಂದು ಖನಿಜಾಂಶ ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಫ್ಲೋರೈಡ
ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೇವೆಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದ ಬಿ.ಎಸ್.ಗಂಗಾಧರ್.
ರಾಮನಗರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆ.ಕರೇನಹಳ್ಳಿ ಇವರ ಸಂಯುಕ್ತ ಆಶ್ರ
ಶ್ರೀಗಿರಿಪುರ ಗ್ರಾಪಂ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರ
ರಾಮನಗರ, ಜೂ. 07: ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾತ್ಮಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆ ಹಾಗೂ ಕುದೂರು ಪ್ರ
ಪ್ರತಿಕ್ರಿಯೆಗಳು