ಹಿರಿಯ ವಿದ್ಯಾರ್ಥಿಗಳನ್ನು ಶ್ರೀ ಮಠದಲ್ಲಿ ನೋಡಿ ಸಂತೋಷವಾಗಿದೆ: ಮುಮ್ಮಡಿ ನಿರ್ವಾಣ ಶ್ರೀಗಳು

ಕನಕಪುರ: ಶ್ರೀ ದೇಗುಲ ಮಠದ ಹಿರಿಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಸರ್ವ ಸದಸ್ಯರ ಮಹಾಧಿವೇಶ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪರಮಪೂಜ್ಯ ಡಾ: ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರ ಹಿರಿಯ ವಿದ್ಯಾರ್ಥಿಗಳು ಸಂಘವನ್ನು 1975ರಲ್ಲಿ ಲಿಂಗೈಕ್ಯ ಶ್ರೀಶ್ರೀ ಇಮ್ಮಡಿ ಮಹಾಲಿಂಗಸ್ವಾಮಿಗಳವರು ಸಂಘವನ್ನು ಸ್ಥಾಪಿಸಿದ್ದು ಅವರ ಆಶಯದಂತೆ ಇಂದಿನವರೆಗೆ ನಡೆಸಿಕೊಂಡು ಬರಲಾಗಿದೆ. ನಾನು ಸಹ ಅನಾರೋಗ್ಯದಿಂದ ಎರಡು ವರ್ಷಗಳಿಂದ ನಮ್ಮ ಹಿರಿಯ ವಿದ್ಯಾರ್ಥಿಗಳು ಹಿತೈಷಿಗಳು ಭಕ್ತರನ್ನು ಯಾರನ್ನು ಸಹ ನೋಡಲು ಆಗಿರಲಿಲ್ಲ ಈ ಕಾರ್ಯಕ್ರಮದಲ್ಲಿ ಎಲ್ಲರನ್ನು ಒಟ್ಟಿಗೆ ನೋಡಿ ಮನಸ್ಸಿಗೆ ಸಂತೋಷ ವಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಕಿರಿಯ ಪರಮಪೂಜ್ಯ ಶ್ರೀ ಶ್ರೀ ಚನ್ನಬಸವ ಮಹಾಸ್ವಾಮಿಗಳವರು ಬಹಳ ವರ್ಷಗಳಿಂದ ಸತತವಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಶ್ರೀಮಠದಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳು ಇಂದು ಐಪಿಎಸ್, ಐಎಎಸ್ ಸರ್ಕಾರಿ ನೌಕರ ಶಿಕ್ಷಕ ಕೃಷಿಕ ಹೀಗೆ ಅನೇಕ ನೌಕರಿಗಳನ್ನು ಮಾಡುತ್ತಿದ್ದಾರೆ. ಅವರೆಲ್ಲರನ್ನು ಶ್ರೀಮಠದಲ್ಲಿ ನೋಡುವುದೇ ಒಂದು ಹಬ್ಬ. ಅದು ನಮ್ಮ ಹಿರಿಯ ಪೂಜ್ಯರ ಅಪೇಕ್ಷೆ ಅವರೆಲ್ಲರೂ ವರ್ಷಕ್ಕೆ ಒಮ್ಮೆಯಾದರೂ ಶ್ರೀಮಠಕ್ಕೆ ಬಂದು ಪೂಜ್ಯರ ದರ್ಶನ ಮಾಡಬೇಕು. ಶ್ರೀಮಠದ ಅಭಿವೃದ್ಧಿ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಶ್ರೀ ಮಠ ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಶ್ರೀ ಬಿ.ಆರ್.ಉಮಾಕಾಂತ್ ರವರು ಮಾತನಾಡಿ, ಶ್ರೀ ಮಠದ ಐಟಿಐ ಕಾಲೇಜಿಗೆ ಒಂದು ಜಾಗ ಕೊಡಿಸಿದ್ದೆ, ಆ ಜಾಗದಲ್ಲಿ ಈಗ ಸುಂದರ ಕಾಲೇಜು ನೋಡಿ ಸಂತೋಷವಾಯಿತು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಶ್ರೀ ಬಿಜ್ಜಳ್ಳಿ ಮಂಜುನಾಥ್ ರವರು ಮಾತನಾಡಿ, ನಮ್ಮ ಮನೆತನದ ಹಿರಿಯರು ಮಠದ ಆಸುಪಾಸಿನಲ್ಲಿ ಜಮೀನುಗಳನ್ನು ಹೊಂದಿದ್ದು ಆಗಿನಿಂದಲೂ ಶ್ರೀ ಮಠಕ್ಕೆ ಬರುವುದನ್ನು ರೂಢಿಸಿಕೊಂಡಿದ್ದರು. ಅವರ ಮೇಲ್ಪಂಕ್ತಿಯನ್ನು ನಾವೂ ಕೂಡ ಇಂದಿಗೂ ನಡೆಸಿಕೊಂಡು ಬರುತ್ತಿದ್ದೇವೆ. ಒಂದು ಬಾರಿ ಗದ್ದುಗೆ ಪೂಜೆಗೆ ಬಂದಾಗ ಅಮೇರಿಕಾ ದೇಶದಿಂದ ಸಂಸಾರ ಸಮೇತ ಬಂದಿದ್ದ ಹಿರಿಯ ವೈದ್ಯರೊಬ್ಬರು ಗದ್ದುಗೆ ಪೂಜೆ ಸಮಯದಲ್ಲಿ ತಮ್ಮ ಕುಟುಂಬಸ್ಥರಿಗೆ ಹೇಳುತ್ತಿದ್ದ ಮಾತು ನಮಗೆ ಆಶ್ಚ್ಚರ್ಯವಾಯಿತು, ಎನೆಂದರೆ ಅವರು ಶ್ರೀ ಮಠದಲ್ಲಿ ಆಶ್ರಯ ಪಡೆದು ವಿದ್ಯಾಭ್ಯಾಸ ನಡೆಸಿ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಿದ್ದು ಒಂದು ಮರೆಯಲಾಗದ ನೆನಪು. ಆಗ ಬಹಳ ಬಡತನವಿತ್ತು. ಮಠದಲ್ಲಿ ನಮಗೆ ಊಟಕ್ಕೆ ಮುದ್ದೆ ನೀಡುತ್ತಿದ್ದರು, ಒಂದು ಮುದ್ದೆ ಊಟಮಾಡಿ ಮತ್ತೆರಡು ಮುದ್ದೆಗಳನ್ನು ರೂಮಿಗೆ ತೆಗೆದುಕೊಂಡು ಹೋಗಿ ಅದನ್ನೇ ತಿಂದು ಹಸಿವೆ ನೀಗಿಸಿಕೊಳ್ಳುತ್ತಿದ್ದೆ ಎಂದು ಆಗಿನ ತಮ್ಮ ಅನುಭವವನ್ನು ಹಂಚಿಕೊಡರು. ಶ್ರೀ ಮಠದ ತ್ರಿವಿಧ ದಾಸೋಹ ಸೇವೆ ಹಿಂದುಳಿದ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಆಶ್ರಯ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಮುಖ್ಯ ಸಮಾಜ ಸೇವೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಆನೇಕಲ್ನ ಸಮಾಜ ಸೇವಕರಾದ ಕೆ.ಬಸವರಾಜಯ್ಯನವರು 2023ನೇ ಇಸವಿಯ ಕ್ಯಾಲೆಂಡರ್ ಬಿಡುಗಡೆ ಮಾಡಿದರು, ಉದ್ಯಮಿಗಳಾದ ಬಿಳಿದಾಳೆ ಶ್ರೀ ಬಿ.ಜಿ.ಸದಾಶಿವ್ ರವರು ದೇಗುಲ ಪ್ರಭೆ ಮಾಸ ಪತ್ರಿಕೆ ಬಿಡುಗಡೆ ಮಾಡಿದರು.
ಶ್ರೀ ಮಠದ ವಿದ್ಯಾ ಸಂಸ್ಥೆಗಳಲ್ಲಿ ಹಿರಿಯ ಉಪಾಧ್ಯಾಯರಾಗಿ ನಿವೃತ್ತಿ ನಂತರವೂ ಸತತವಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಎಸ್.ರೇವಣ್ಣ ಮಾಸ್ಟರ್ ರವರಿಗೆ ಶ್ರೀ ಮಠದಿಂದ ಭಿನ್ನವತ್ತಳೆ ಸಮರ್ಪಿಸಿ ಗೌರವಿಸಲಾಯಿತು. ಶ್ರೀ ಮಠದ ವಿದ್ಯಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದವರಿಗೆ ಸನ್ಮಾನ ಹಾಗೂ ಶ್ರೀ ನಿರ್ವಾಣಸ್ವಾಮಿ ಕೃಪಾ ವಿದ್ಯಾಪೀಠ ಶಾಲಾ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರಗಳನ್ನು ನೀಡಲಾಯಿತು. ಸಂಘದ 2023-24ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in kanakapura »

ಕನಕಪುರದ ಮರಳೆಗವಿ ಮಠಕ್ಕೆ ರಾಜ್ಯಪಾಲರ ಭೇಟಿ ಪ್ರತಿಭಾನ್ವಿತ ಪುಟಾಣಿಗಳನ್ನು ಸನ್ಮಾನಿಸಿದ ರಾಜ್ಯಪಾಲರು
ಕನಕಪುರ:16.01.2023:
ಭರತ ಖಂಡವು ಇಡೀ ವಿಶ್ವದಲ್ಲೇ ತನ್ನ ಸಂಸ್ಕೃತಿ ಮತ್ತು ಸಂಸ್ಕಾರಗಳಿಂದ ವಿಶಿಷ್ಟ ಸ್ಥಾನವನ್ನು ಗಳಿಸಿದ ಕಾರಣ ಇಲ್ಲಿ ಸಾಧು ಸಂತರು ಸತ್ಪುರುಷರು ಮತ್ತು ಋಷಿಮುನಿಗಳ

ಮಕ್ಕಳಿಂದ ಮಕ್ಕಳಿಗಾಗಿ ನಡೆದ ಬ್ಲಾಸಮ್ ಸಾಂಸ್ಕೃತಿಕ ಹಬ್ಬ
ಕನಕಪುರ: ಡಾ ಬಿ.ಶಶಿಧರ್ ರವರ ಬ್ಲಾಸಮ್ ಶಾಲೆಯು ವಿಶಿಷ್ಟವಾದ ಮೂವತ್ತೊಂದನೇ ವರ್ಷದ ಸಾಂಸ್ಕೃತಿಕ ಹಬ್ಬವನ್ನು ಬಹಳ ಸಂಭ್ರಮದಿಂದ ನಗರದ ಅಂಬೇಡ್ಕರ್

ಜೂನಿಯರ್ ನೆಟ್ ಬಾಲ್ ತಂಡ ಮುನ್ನಡೆಸುವ ಸಚೇತ್ ಗೆ ಅಭಿನಂದನೆ
ಕನಕಪುರ: ರಾಮನಗರ ಜಿಲ್ಲೆಯ ಕನಕಪುರದ ಸಚೇತ್ ಎಂಬ ಕ್ರೀಡಾಪಟುವು ಜೂನಿಯರ್ ನೆಟ್ ಬಾಲ್ ನ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ವಿಷ

ಹಿರಿಯ ವಿದ್ಯಾರ್ಥಿಗಳನ್ನು ಶ್ರೀ ಮಠದಲ್ಲಿ ನೋಡಿ ಸಂತೋಷವಾಗಿದೆ: ಮುಮ್ಮಡಿ ನಿರ್ವಾಣ ಶ್ರೀಗಳು
ಕನಕಪುರ: ಶ್ರೀ ದೇಗುಲ ಮಠದ ಹಿರಿಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಸರ್ವ ಸದಸ್ಯರ ಮಹಾಧಿವೇಶ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪ

ಸುತ್ತೂರಿನಲ್ಲಿ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ನಡೆಯಲಿದೆ ಮುಮ್ಮಡಿ ನಿರ್ವಾಣ ಶ್ರೀ
ಕನಕಪುರ: ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಮುಮ್ಮಡಿ ನಿರ್ವಾಣ ಶ್ರೀಗಳು ತಿಳಿಸಿದರು. ಅವರು ದೇಗುಲ

ಭಕ್ತರ ಕಣ್ಮನ ಸೆಳೆದ ದೇಗುಲಮಠದ ಲಕ್ಷದೀಪೋತ್ಸವ
ಕನಕಪುರ ): ನಗರದ ಶ್ರೀ ದೇಗುಲಮಠದಲ್ಲಿ ಕಡೆ ಕಾರ್ತಿಕ ಮಾಸ ಅಮಾವಾಸ್ಯೆ ಪ್ರಯುಕ್ತ ಲಕ್ಷದೀಪೋತ್ಸದ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲ

ನರೇಗಾ ದಲ್ಲಿ ವೈಯುಕ್ತಿಕ ಕಾಮಗಾರಿಗಳಿಗೆ ಒತ್ತು ನೀಡಿ ಜಿಪಂ ಸಿಇಓ
ಕನಕಪುರ: ನರೇಗಾ ಯೋಜನೆಯಡಿ ನಿಗದಿಪಡಿಸಿರುವ ಮಾನವ ದಿನಗಳ ಗುರಿ ಸಾದಿಸಿ, \"ನಮ್ಮ ಹೊಲ ನಮ್ಮ ದಾರಿಗೆ\" ಹೆಚ್ಚಿನ ಒತ್ತು ನೀಡಿ, ಹೆಚ್ಚು-ಹೆಚ್ಚು

ಕೇರಳದಲ್ಲಿ ನಡೆಯುವ ಅನುಭಾವ ಸಂಗಮದಲ್ಲಿ ಪ್ರಭುಕಿರೀಟ ಸ್ವಾಮೀಜಿ ಭಾಗಿ
ಕನಕಪುರ: ತಾಲೂಕಿನ ದೊಡ್ಡ ಮರಳವಾಡಿ ಶಿವಮಠದ ಕಿರಿಯ ಪರಮಪೂಜ್ಯ ಶ್ರೀ ಶ್ರೀ ಪ್ರಭು ಕಿರೀಟ ಮಹಾಸ್ವಾಮಿಗಳವರು ಕೇರಳ ರಾಜ್ಯದ ತಿರುವಂತನಪುರದ

ಶಮಿವೃಕ್ಷ ಪೂಜಿಸುವ ಮೂಲಕ ವಿಜಯದಶಮಿ ಆಚರಿಸಿದ ದೇಗುಲ ಮಠದ ಶ್ರೀಗಳು
ಕನಕಪುರ: ಈ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ವಿಜಯ ದಶಮಿಯಂದು ದೇಗುಲಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವಮಹಾಸ್ವಾಮಿಗಳು ಶಮೀವೃಕ

ವಿದ್ಯಾರ್ಥಿ ಮತ್ತು ನೌಕರರ ಸಹಕಾರಿ ಸಂಸ್ಥೆಯ ವಾರ್ಷಿಕ ಸಭೆ ಉದ್ಘಾಟಿಸಿದ ಸ್ವಾಮೀಜಿ
ಕನಕಪುರ: ಶ್ರೀ ದೇಗುಲಮಠದ ಶ್ರೀ ನಿರ್ವಾಣೇಶ್ವರ ಹಿರಿಯ ವಿದ್ಯಾರ್ಥಿಗಳ ಮತ್ತು ನೌಕರರ ಸೌಹಾರ್ದ ಸಹಕಾರಿ ಸಂಘ ನಿಯಮಿತ ದ 16ನೇ ವರ್ಷದ ವಾರ್ಷಿಕ
ಪ್ರತಿಕ್ರಿಯೆಗಳು