ಮುಖ್ಯಮಂತ್ರಿ ಕ್ಷೇತ್ರದಲ್ಲೇ ರೈತರಿಗೆ ಕೋರ್ಟ್ ನಿಂದ ನೋಟೀಸ್
ಸಾಲ ಬಾಕಿ ಉಳಿಸಿಕೊಂಡ ಮಹಿಳೆಗೆ ಬ್ಯಾಂಕ್ ನವರು ನ್ಯಾಯಾಲಯದ ಮೂಲಕ ನೋಟೀಸ್ಜಾರಿ ಮಾಡಿದ್ದರಿಂದ ರೈತಸಂಘದ ಪದಾಧಿಕಾರಿಗಳು ಆಕ್ರೊಶ ವ್ಯಕ್ತಪಡಿಸಿದರು. ಅತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಹಾತ್ವಾಕಾಂಕ್ಷಿ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತಂದು ರೈತರಿಗೆ ಋಣಮುಕ್ತ ಪತ್ರ ನೀಡಲು ಸಿದ್ದತೆ ನಡೆಸುತ್ತಿದ್ದರೆ, ಇತ್ತ ಸಿಎಂ ಸ್ವಕ್ಷೇತ್ರದಲ್ಲಿ ಸಾಲ ಮರುಪಾವತಿ ಮಾಡದ ರೈತರಿಗೆ ನ್ಯಾಯಾಲಯದಿಂದ ನೋಟೀಸ್ ಜಾರಿ ಮಾಡಿರುವ ಸಂಗತಿಯನ್ನು ರಾಜ್ಯ ರೈತಸಂಘ ಬಹಿರಂಗ ಗೊಳಿ
ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿ ಗರಿ, ಲಾವಣಿಗೊಂದು ಸಹಕ್ಕಾರಕೊಂದು
ಅರವತ್ಮೂರನೇ ಕನ್ನಡ ರಾಜ್ಯೋತ್ಸವ ಸಾಲಿನಲ್ಲಿ ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿಗಳು ಬಂದಿವೆ. ಚನ್ನಪಟ್ಟಣ ತಾಲ್ಲೂಕಿನ ಲಾವಣಿ ಹಾಡುಗಾರ ಮತ್ತು ರಂಗಭೂಮಿ ನಟರಾದ ಮಳೂರು ಪುಟ್ಟಸ್ವಾಮಿಗೌಡರಿಗೆ ಸಂದರೆ ಸಹಕಾರಿ ಕ್ಷೇತ್ರದಲ್ಲಿ ಮಾಗಡಿ ತಾಲೂಕಿನ ಕುದೂರು ಹೋಬಳಿ ಯ ಕುಪ್ಪೇಪಾಳ್ಯದ ಸಿ ರಾಮು ರವರಿಗೆ ಸಂದಿದೆ. ಮಳೂರು ಪುಟ್ಟಸ್ವಾಮಿಗೌಡ ಹುಣಸೆ ಮರಕ್ಕೆ ಮುಪ್ಪಾದರೂ ಹುಳಿಗೆ ಮುಪ್ಪೆ ಎನ್ನುವ ಗಾದೆಯಂತೆ ಇಳಿ ವಯಸ್ಸಿನಲ್ಲೂ ತನ್ನ ಕಲೆಯನ್ನು ನಿರಂತರವಾಗಿ ರಾ
ಮೇಕೆದಾಟು ಯೋಜನೆ ಕೇಂದ್ರ ಒಪ್ಪಿಗೆ, ಇಚ್ಛಾಶಕ್ತಿ ಪ್ರದರ್ಶಿಸುತ್ತಾ ರಾಜ್ಯ ಸರ್ಕಾರ
ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಪ್ರಾಥಮಿಕ ಹಂತದ ಅನುಮತಿ ದೊರಕಿದ್ದು, ಯೋಜನೆಯ ರೂಪುರೇಷೆಗಳನ್ನು ಶೀಘ್ರವಾಗಿ ತಲುಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಮೇಕೆದಾಟು ಯೋಜನೆ ಕುರಿತ ರಾಜ್ಯದ ಪ್ರಿ-ಫೀಸಿಬಿಲಿಟಿ ವರದಿಗೆ ಕೇಂದ್ರದ ಜಲ ಸಂಪನ್ಮೂಲ ಇಲಾಖೆ ಒಪ್ಪಿಗೆ ನೀಡಿದ್ದು, ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಕೇಂದ್ರ ನಿರ್ದೇಶನ ನೀಡಿದೆ. ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಬೇಡಿ ಎಂದು ಅಂದಿನಿಂದಲೂ ಪ್ರಧಾ
ನಿನ್ನೆಯಿಂದಾದ ಸಾವಿನ ಸುರಿಮಳೆಗೆ ಅಶ್ರುತರ್ಪಣ
ಯಾಕೋ ಗೊತ್ತಿಲ್ಲ ಕಣ್ಣಂಚಲ್ಲಿ ನೀರು ಉಕ್ಕುಕ್ಕಿ ಬರುತ್ತಿದೆ, ಸಾವಿನ ಕಥೆ ಕೇಳಿ, ಎದೆ ಬಡಿದು ಅತ್ತು ಬಿಡಲೇ ಎನಿಸುತ್ತಿದೆ. ಅವರಾರು ನೆಂಟರಿಸ್ಟರಲ್ಲಾ, ಬಂಧು ಬಳಗವೂ ಅಲ್ಲಾ, ಆದರೂ ಮನ ಕೇಳುತ್ತಿಲ್ಲ, ಒಳಗಿನ ವೇದನೆ ತಡೆಯಲಾಗುತ್ತಿಲ್ಲ. ಅಯ್ಯೋ ವಿಧಿಯೇ ನೀನೆಂಥ ಕ್ರೂರಿ ಆ ಹಸುಗಂದಗಳೇನು ತಪ್ಪು ಮಾಡಿದೋ ! ಮೋಸ ದಗಾ ವಂಚನೆ ಏನೆಂಬುದನ್ನೇ ಅರಿಯದ ಮಕ್ಕಳ ಮೇಲೇಕೆ ಈ ನಿನ್ನ ಆಟಾಟೋಪ ? ನಿನ್ನದೇಕೋ ಅತಿಯಾಯ್ತು ವಿಧ
ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ; ಆದಿಶ್ರೀ ಜತೆ ಭಿನ್ನಾಭಿಪ್ರಾಯ ಇತ್ತು ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಹಳೆಯ ನೆನಪು ಮೆಲಕು ಹಾಕಿದ ದೇವೇಗೌಡ
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ, ಅದಕ್ಕಾಗಿ ನಾನು ನೀರಾವರಿ ಸಚಿವನಾಗಿದ್ದಾಗ ನನ್ನ ಖಾತೆಗೆ ಸರಿಯಾಗಿ ಅನುದಾನ ನೀಡಲಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು. ತಾಲೂಕಿನ ಸಾಮಂದಿಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಮ್ಮ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯಕ್ಕೆ ಸಂಬಂಧಿಸಿದಂತೆ ಆಭಾಗದ ಜನತೆ ಇಂದಿರಾಗಾಂಧಿ ಅವರನ್ನು ಚಿನ್ನದಲ್ಲಿ ತೂಗಿದರೂ ಅನುದಾನ ಬಿಡುಗಡೆ ಮಾಡಲಿಲ್ಲ. ನಾನು ನೀ
ಏನೋ ಮಾಡಲು ಹೋಗಿ ಏನು ಮಾಡಿದೆ ನೀನು...!?! ಅಂಬರೀಶಣ್ಣ
ಅಂಬಿ ಎರಡಕ್ಷರದಲ್ಲೇ ಅಡಗಿತ್ತು ಆ ಅಭಿಮಾನ, ಮಳವಳ್ಳಿ ಹುಚ್ಚೇಗೌಡ ಅಮರನಾಥ್, ಅಂಬರೀಶ್ ಆಗಿ, ಜಲೀಲನಾಗಿ, ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಕನ್ನಡಿಗರ ಮನಗೆದ್ದ ಈ ಅಂಬಿ ಈ ಜಗತ್ತಿನೊಳಗಿಲ್ಲ, ನಿಜವೇ... ಊಹೂ ನಂಬಲಸಾಧ್ಯ ಎಂದೇ ಹೇಳುತ್ತಾರೆ ಎಲ್ಲರೂ, ಆದರೂ ಸತ್ಯ ಸತ್ಯವೇ, ಸಾವು ಸಾವೇ ಜಗತ್ತಿನಲ್ಲಿ ಏನು ಬೇಕಾದರೂ ಕಾಸು ಕೊಟ್ಟು ಕೊಂಡುಕೊಳ್ಳಬಹುದು ಆದರೇ ಈ ಉಸಿರು ? ಕಣ್ಣಿಗೆ ಕಾಣದ ಗಾಳಿ ಜಗತ್ತಿನ ತುಂಬೆಲ್ಲಾ ಹರಿದಾಡುತ್ತಿದೆಯಾದರೂ ದೇಹಕ್ಕೆ ಬೇಕಾದ ಗಾಳಿಯನ್
ಅಗಲಿದ ಅನಂತಕುಮಾರ್ ಗೆ ಅಂತಿಮ ನಮನ
ಬಿಜೆಪಿ ಯ ಅಗ್ರಗಣ್ಯ ನಾಯಕ, ಕೇಂದ್ರ ಸಚಿವ, ಅಪ್ಪಟ ಕನ್ನಡಿಗ ಅನಂತಕುಮಾರ್ ರವರ ನಿಧನಕ್ಕೆ ಇಂದು ಸಂತಾಪ ಸಭೆ ಏರ್ಪಡಿಸಲಾಗಿತ್ತು. ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ರವರ ನಗರದ ನಿವಾಸದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿ ಅಗಲಿದ ಚೇತನಕ್ಕೆ ಸಂತಾಪ ಸೂಚಿಸಿದರು. ಸಂತಾಪ ಸಭೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆರ್ ಎಂ.ಮಲವೇಗೌಡ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ ಎನ್.ಆನಂದಸ್ವಾಮಿ, ವಿಷಕಂಠು, ತಾ.ಪಂ.ಸದಸ
ತಗಚಗೆರೆ ಮಾಸ್ತಮ್ಮ ಮಂದಿರದಲ್ಲಿ ಚಿತ್ರೀಕರಣಕ್ಕೆ ಚಾಲನೆ
ಅಮೃತ ಪ್ರೊಡಕ್ಷನ್ಸ್ ರವರ ಚೊಚ್ಚಲ ಕಾಣಿಕೆಯಾಗಿ ಪ್ರೊಡಕ್ಷನ್ ನಂ ೧ ಎಂಬ ಕನ್ನಡ ಚಿತ್ರದ ಚಿತ್ರೀಕರಣಕ್ಕೆ ತಾಲ್ಲೂಕಿನ ತಗಚಗೆರೆ ಗ್ರಾಮದ ಶ್ರೀ ಮಾಸ್ತಮ್ಮ ದೇವಿಯ ಸನ್ನಿಧಿಯಲ್ಲಿ ಗಣ್ಯರು ಚಾಲನೆ ನೀಡಿದರು. ಅನೇಕ ಹೊಸ ನಟ ನಟಿಯರ ಜೊತೆಗೆ ಹಿರಿಯ ಸಿನಿಮಾ ಕಲಾವಿದರನ್ನು ಸೇರಿಸಿ ವಿಭಿನ್ನವಾದ ಸಾಮಾಜಿಕ ಕಳಕಳಿಯ ಕಾಳಜಿಯುಳ್ಳ ಕಥೆಯನ್ನು ರಚಿಸಿದ್ದೇನೆ, ಮಾಸ್ತಮ್ಮ ದೇವಿಯ ಕೃಪೆಯಿಂದ ಯಾವುದೇ ವಿಘ್ಗಗಳು ಬಾರದೆ ಚಿತ್ರೀಕರಣ ಸಾಗಲಿದೆ, ಅದಕ್ಕೆ ತಮ್ಮೆಲ್ಲರ ಸಹಕಾರದ ಅಗತ್ಯವಿದೆ
ರಾಮನಗರದ ಹುಡುಗರ ಕನ್ನಡ ಕಿರು ಚಿತ್ರ ಪ್ರೇಮ
ಈಗಿನ ಯುವಕರಲ್ಲಿ ಕೆಲವರಲ್ಲಿ ಒಂದೊಂದು ತರನಾದ ಹವ್ಯಾಸಗಳಿರುತ್ತದೆ. ಹಾಗೇಯೆ ರಾಮನಗರದ ಒಂದು ಯುವಕರ ತಂಡ ಕನ್ನಡ ಕಿರುಚಿತ್ರ ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ. ಯಾವುದೇ ತರಬೇತಿಗಳಿಲ್ಲದೇ. ಕೇವಲ ಸಿನಿಮಾ ಮೇಲಿನ ಪ್ರೀತಿಯಿಂದ ಹಾಗೂ ಸಮಾಜಕ್ಕೆ ಸಂದೇಶಗಳನ್ನು ರವಾನಿಸುವ ಸಲುವಾಗಿ ಕಿರುಚಿತ್ರಗಳನ್ನು ನಿರ್ಮಿಸಲು ಈ ತಂಡ ಸಜ್ಜಾಗಿದೆ. ಈಗಾಗಲೇ ಮಿನರ್ವ ಎಂಬ ಹೆಸರಿನ ಕಿರುಚಿತ್ರ ನಿರ್ಮಿಸಿ ಯಶಸ್ಸು ಕಂಡಿರುವ ಈ ತಂಡ, ಸಾಹಿತ್ಯ ಎಂಬ ಎರಡನೇ ಕಿರುಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು ಚಿತ
ಜಿಲ್ಲಾಡಳಿತ ನೆಟ್ಟ ಕೋಟಿ ಗಿಡಗಳೇನಾದವು ? ಬಹುತೇಕ ಗಿಡಗಳು ವಿದ್ಯುತ್ ತಂತಿಗಳ ಕೆಳಗೇ ಏಕೆ ನೆಡುತ್ತಾರೆ ? ಗಿಡಗಳ ಅರಣ್ಯರೋಧನ
ಕಳೆದ ಬಾರಿ ರಾಮನಗರ ಜಿಲ್ಲಾಡಳಿತವೂ ಜಿಲ್ಲಾದ್ಯಂತ ಕೋಟಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಿ ಚಾಲನೆ ನೀಡಿ ಖಾಲಿ ಇರುವ ಅರಣ್ಯ, ಗೋಮಾಳ, ಸರ್ಕಾರಿ ಬಂಜರು ಭೂಮಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಕೋಟಿ ಗಿಡಗಳ ಹೆಸರಿನಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಡಳಿತ ಲಕ್ಷಾಂತರ ಗಿಡಗಳನ್ನು ನೆಟ್ಟು ಕೈ ತೊಳೆದುಕೊಂಡಿತ್ತು. "ಉಳಿದಿರುವ ಗಿಡಗಳ ಲೆಕ್ಕ ಕೊಡಲಿ" ಜಿಲ್ಲಾದ್ಯಂತ ಎತ್ತ ಹೋಗಿ ಲೆಕ್ಕ ತಂದರು ಸಹ ಕೇವಲ ಒಂದು ವರ್ಷ