ಗಿಡ್ಡನ ತಾಕತ್ತು ತೋರಿಸುತ್ತೇನೆ : ಜಮೀರ್ ಅಹ್ಮದ್
ರಾಣೆಬೆನ್ನೂರು: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ನನ್ನನ್ನು ‘ಗಿಡ್ಡ’ ಎಂದು ಲೇವಡಿ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ‘ಗಿಡ್ಡ’ನ ತಾಕತ್ತು ಏನೆಂದು ತೋರಿಸಿಕೊಡುತ್ತೇನೆ’ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದರು. ಇಲ್ಲಿನ ಸಿದ್ದೇಶ್ವರನಗರ, ಕೋಟೆ ಪ್ರದೇಶದಲ್ಲಿ ಸೋಮವಾರ ಸಂಜೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ ಪರ ಪ್ರಚಾರ ಮಾಡಿದ ಅವರ
ಪ್ರೊ.ಕೆ. ಪ್ರಭುಶಂಕರ್ ನಿಧನ
ಮೈಸೂರು: ರಾಷ್ಟ್ರಕವಿ ಕುವೆಂಪು ಅವರ ಪರಮ ಶಿಷ್ಯ ರಾಗಿದ್ದ ಸಾಹಿತಿ ಪ್ರೊ.ಕೆ.ಪ್ರಭುಶಂಕರ್ (89) ಭಾನುವಾರ ರಾತ್ರಿ ನಿಧನರಾಗಿದ್ದಾರೆ. ನಗರದ ಒಂಟಿಕೊಪ್ಪಲಿನ ಶ್ರೀರಾಮಕೃಷ್ಣ ಆಶ್ರಮ ಸಮೀಪದ ಶ್ರೀವರ ವಸತಿ ಗೃಹದಲ್ಲಿ ವಾಸವಿದ್ದ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. 1929ರ ಫೆಬ್ರವರಿ 15ರಂದು ಜನಿಸಿದ ಅವರು, ಪ್ರಥಮ ರ್ಯಾಂಕ್ ಮತ್ತು ಚಿನ್ನದ ಪದಕ ದೊಂದಿಗೆ ಬಿ.ಎ ಆನರ್ಸ್ ಪಡೆದಿದ್ದರ
ನಾನೇ ಕಿಂಗ್ : ಎಚ್.ಡಿ. ಕುಮಾರಸ್ವಾಮಿ
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ಕುಮಾರಸ್ವಾಮಿ ಅಪ್ಪಣಾಣೆಗೂ ಸಿಎಂ ಆಗಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಈಗ ನಾನು ಹೇಳುತ್ತಿದ್ದೇನೆ ಅವರಪ್ಪನಾಣೆಗೂ ಚಾಮುಂಡಿ ಕ್ಷೇತ್ರದಲ್ಲಿ ಅವರು ಗೆಲ್ಲಲಾರರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಮಾತನಾಡಿ, ಕುತಂತ್ರ ಹಾಗೂ ಅಸಂಬದ್ಧ ರಾಜಕೀಯ ಮಾಡುವುದರಲ್ಲಿಯೇ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರಿಗೆ ಸಾರ್ವಜನಿಕ ಜೀವನದಲ್ಲಿ ಹೇಗ
ಕಾಂಗ್ರೆಸ್ ಸರ್ಕಾರ ಬಂದರೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ: ರಾಹುಲ್ ಗಾಂಧಿ
ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಹಾಗೆಯೇ ಸಿದ್ದರಾಮ ಯ್ಯ ಇನ್ನೈದು ವರ್ಷ ಆಡಳಿತ ನೀಡಲಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಎಐ ಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್, ಮುಂದಿನ ಸಿಎಂ ಅಭ್ಯರ್ಥಿ ಸಿದ್ದರಾಮಯ್ಯ, ಅಧಿಕಾರಕ್ಕೆ ಬಂದರೆ ಅವರೇ ಸಿಎಂ ಎಂದು ಇನ್ನೊಮ್ಮೆ ಸ್ಪಷ್ಟಪಡಿಸಿದರು. ಎರಡು ಕ್ಷೇತ್ರದಲ್ಲಿ ಸ
ಈ ಬಾರಿ ಜೆಡಿಎಸ್ ಸರ್ಕಾರ : ಎಚ್.ಡಿ. ದೇವೇಗೌಡ
ಬೆಂಗಳೂರು: ಕೇಂದ್ರ ಸರಕಾರದ ಜನ ವಿರೋಧಿ ನಡೆ ಮತ್ತು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ವಿರೋಧ ಅಲೆಯಿಂದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ಗೆ ಜನರು ಆಶೀರ್ವಾದ ಮಾಡಲಿದ್ದಾರೆ. ಬಹುಮತದೊಂದಿಗೆ ಈ ಬಾರಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬರುವ ಭರವಸೆ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು. ಬಸವನಗುಡಿ ವಿಧಾನಸಭಾ ಕ್ಷೇತ್ರದ ಅವಧಾನಿ ಸಭಾಂಗಣದಲ್ಲಿ ಭಾನುವಾರ ಜೈನ್ ಮೈನಾರಿಟಿ ಟ್ರಸ್ಟ್ ಹಮ್ಮಿಕೊಂಡ
ಬಿಜೆಪಿ ಸಂಭವನೀಯ ಅಭ್ಯರ್ಥಿಗಳು ?
ಬೆಂಗಳೂರು : ರಾಜ್ಯದಲ್ಲಿ 80 ಕ್ಷೇತ್ರಗಳ ಪಟ್ಟಿ ಅಂತಿಮವಾಗಿದ್ದು, ಶಿಕಾರಿಪುರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸ್ಪರ್ಧಿಸುವುದು ಖಚಿತವಾಗಿದೆ. ಆದರೆ ಬಿಎಸ್ವೈ ಪುತ್ರ ರಾಘವೇಂದ್ರ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿದೆ. ಸಂಭವನೀಯ ಅಭ್ಯರ್ಥಿಗಳ ಮೊದಲ ಪಟ್ಟಿ ಇಲ್ಲಿದೆ. 1. ಶಿಕಾರಿಪುರ- ಯಡಿಯೂರಪ್ಪ 2. ಹುಬ್ಬಳಿ ಧಾರವಾಡ ಸೆಂಟ್ರಲ್ – ಜಗದೀಶ್ ಶೆಟ್ಟರ್
ಡಾ. ಬಾಬು ಜಗಜೀವನ್ ರಾಮ್ ಅವರಿಗೆ ಭಾರತ ರತ್ನ ನೀಡಿ : ಎಚ್.ಡಿ. ದೇವೇಗೌಡ
ಬೆಂಗಳೂರು: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ರಾಮ್ ಅವರಿಗೆ ಭಾರತ ರತ್ನ ನೀಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ. ರಾಜ್ಯ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಗುರುವಾರ ಪಕ್ಷದ ಎಸ್ಸಿ, ಎಸ್ಟಿ ಘಟಕ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರಿಯ ನಟಿ ಜಯಂತಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರು: ಅಸ್ತಮಾದಿಂದ ಬಳಲುತ್ತಿದ್ದ ಹಿರಿಯ ನಟಿ ಜಯಂತಿ ಆರೋಗ್ಯದಲ್ಲಿ ಚೇತರಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹತ್ತು ದಿನಗಳಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಭಿನಯ ಶಾರದೆಯ ಆರೋಗ್ಯ ವೃದ್ಧಿಸಲಿ ಎಂದು ನಾಡಿನ ಜನತೆ ಪ್ರಾರ್ಥಿಸಿದ್ದರು. ಅಂತೂ ನಾಡಿನ ಜನತೆಯ ಪ್ರಾರ್ಥನೆ ಫಲಿಸಿದೆ. ಜಯಂತಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ವೈದ್ಯರ ಸಲಹೆಯಂತೆ, ಸರಳ ನಡಿಗೆ
ನಾನು ಬೇನಾಮಿ ಆಸ್ತಿ ಮಾಡಿರುವುದು ಸಾಬೀತಾದರೆ ಅದನ್ನು ರೈತರಿಗೆ ಬರೆದು ಕೊಡುತ್ತೇನೆ : ಕು
ಹುಬ್ಬಳ್ಳಿ :ಚನ್ನಪಟ್ಟಣ ಬಿಜೆಪಿ ಅಭ್ಯರ್ಥಿ ನನಗೆ ಸಲಹೆ ನೀಡುತ್ತಿದ್ದಾರೆ, ಅವರು ಹಿಂದಿನ ಇತಿಹಾಸವನ್ನ ನೆನಪಿಸಿಕೊಳ್ಳಲಿ. ನನಗೆ ಸಲಹೆ ಕೊಡುವುದನ್ನ ಬಿಟ್ಟು ನಾನು ಹೊರದೇಶಗಳಲ್ಲಿ ಆಸ್ತಿ ಮಾಡಿದ್ದೇನೆ ಅಂತಾ ಹೇಳಿಕೆ ನೀಡುತ್ತಿದ್ದಾರೆ. ಆ ಬೆನಾಮಿ ಆಸ್ತಿ ಬಗ್ಗೆ ದಾಖಲೆಗಳ ಕೊಡಲಿ, ಹೊರದೇಶಗಳಲ್ಲಿ ಅಲ್ಲಾ ಕರ್ನಾಟಕದಲ್ಲಿ ಬೆನಾಮಿ ಆಸ್ತಿ ಮಾಡಿದ್ದರೆ, ನರೇಂದ್ರ ಮೋದಿ ಹತ್ತಿರ ಹೋಗಿ ತನಿಖೆ ಮಾಡಿಸಲಿ. ಎಲ್ಲಾ ಆಸ್ತಿಯನ್ನ ನಮ್ಮ ರೈತರಿಗೆ ಬಿಟ್ಟು ಕೊಡುತ್ತೇನೆ ಎಂದು ಜೆಡ
ಎಸ್ಎಂಎಸ್ ಮಾಡಿ ಮತಗಟ್ಟೆ ತಿಳಿಯಿರಿ
ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದರೆ ಅಗತ್ಯ ಪರಿಶೀಲನೆ ಬಳಿಕ ಚುನಾವಣಾ ಆಯೋಗದ ಅನುಮೋದನೆ ಸಿಕ್ಕ ಬಳಿಕ ಮತದಾರ ಗುರುತಿನ ಚೀಟಿ ಸಿದ್ಧಗೊಳ್ಳುತ್ತದೆ. ಅದನ್ನು ಸಂಬಂಧಪಟ್ಟ ಮತಗಟ್ಟೆ ಅಧಿಕಾರಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ. ಈಗಲೂ ಗುರುತಿನ ಚೀಟಿ ನಿಮಗೆ ಸಿಗದಿದ್ದರೆ ಕೂಡಲೇ ನಿಮ್ಮ ಮತಗಟ್ಟೆ ಅಧಿಕಾರಿಯನ್ನು ಸಂಪರ್ಕಿಸಬಹುದು. ಗುರುತಿನ ಚೀಟಿ ವಿಚಾರದಲ್ಲಿ ರಾಜಕೀಯ ಪಕ್ಷಗಳ ಪ್ರತ