ಬೊಂಬೆನಗರಿಯ ಕುಶಲಕರ್ಮಿಗಳಿಂದ ಫ್ರಾನ್ಸ್ ವಿದ್ಯಾರ್ಥಿಗಳಿಗೆ ಮರದ ಆಟಿಕೆ ತಯಾರಿಕೆಯ ಕಲಿಕೆ
ಬೆಂಗಳೂರು/ ಚನ್ನಪಟ್ಟಣ:ಫ್ರಾನ್ಸ್ ದೇಶದ ವಿದ್ಯಾಲಯದಿಂದ ಭಾರತಕ್ಕೆ ಅಧ್ಯಯನಕ್ಕಾಗಿ ೨೧ ವಿದ್ಯಾರ್ಥಿಗಳ ತಂಡ ಆಗಮಿಸಿದೆ. ಬೆಂಗಳೂರಿಗೆ ಭೇಟಿ ನೀಡಿ ನಂತರ ಅವರ ಭೇಟಿಯ ಒಂದು ಭಾಗವಾಗಿ ಬೊಂಬೆಗಳ ನಗರಅಥವಾ ಟಾಯ್ಸ್ ಟೌನ್ ಎಂದೇ ಕರೆಯಲ್ಪಡುವ ಚನ್ನಪಟ್ಟಣಕ್ಕೆಒಂದು ದಿನ ಪ್ರವಾಸವನ್ನು ಕೈಗೊಂಡಿದ್ದು, ವಿಶೇಷವಾಗಿ ಸ್ಥಳೀಯ ಕುಶಲಕರ್ಮಿಗಳಿಂದ ಮರದ ಆಟಿಕೆ ಮತ್ತು ಗೊಂಬೆಗಳ ತಯಾರಿಕೆಯ ಕಲೆಯನ್ನು ಕಲಿಯಲು ಅವರು ಪ್ರವಾಸ ಕೈಗೊಂಡಿದ್ದರು.
ಸಣ್ಣ ಮಿಷನರಿಗಳೊಂದಿಗೆ ಕರ ಬಳಸಿ ಮಾಡುವ ಹಾಗೂ ಆರೋಗ್ಯದ ದೃಷ್ಟಿಯಿಂದ ದೇಸಿ ಬಣ್ಣವನ್ನು ಬಳಿಯುವ ಕರಕುಶಲತೆಯ ದೃಶ್ಯ ಸೌಂದರ್ಯವನ್ನು ಹೆಚ್ಚಿಸಲುಮರವನ್ನು ತಿರುಗಿಸುವ ತಂತ್ರಗಳೊಂದಿಗೆ ವಿದ್ಯಾರ್ಥಿಗಳು ಅನುಭವವನ್ನು ಪಡೆದರು.
ಚನ್ನಪಟ್ಟಣಕ್ಕೆ ಆಗಮಿಸಿರುವ ಫ್ರೆಂಚ್ ವಿದ್ಯಾರ್ಥಿಗಳ ಭೇಟಿ ಒಂದು ಉತ್ತಮ ಕಲಿಕೆಯಾಗಿದ್ದು ಅವರು ಕರಕುಶಲಕರ್ಮಿಗಳೊಂದಿಗೆ ಸಾಕಷ್ಟು ಸಮಯವನ್ನು ಕಳೆಯಬಹುದು. ಮತ್ತು ಕರ್ನಾಟಕದ ಹಳೆಯ ಮತ್ತು ಸಾಂಪ್ರದಾಯಿಕ ಕರಕುಶಲತೆಯ ಅಭಿವೃದ್ಧಿ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬಹುದು. ವಿನ್ಯಾಸಗಳು, ವಿಡಿಯೋಗಳು ಮತ್ತು ಚಿತ್ರಣಗಳಂತಹ ಹಲವಾರುಯೋಜನೆಗಳ ಮೂಲಕ ತಮ್ಮ ವಿನ್ಯಾಸ ಪರಿಹಾರಗಳನ್ನು ಸಂವಹನ ಮಾಡುವ ಮೂಲಕ ಅವರು ತಮ್ಮ ಸಂಶೋಧನಾ ಕಾರ್ಯವನ್ನು ಪ್ರಸ್ತುತಪಡಿಸಿದ್ದಾರೆ ಎಂದು ಈ ಭೇಟಿಯನ್ನು ಆಯೋಜಿಸಿರುವ ಲೀಸಾ ಸ್ಕೂಲ್ ಆಫ್ ಡಿಸೈನ್ ನ ನಿರ್ದೇಶಕ ಅವಿ ಕೆಸ್ವಾನಿ ಹೇಳಿದರು.
ನಮ್ಮ ಚನ್ನಪಟ್ಟಣದ ಆಟಿಕೆಗಳ ವಿನ್ಯಾಸದ ಬಗ್ಗೆ ವಿಶೇಷವಾದ ಒಂದು ಅಂಶವಿದೆ. ಫ್ರೆಂಚ್ ವಿದ್ಯಾರ್ಥಿಗಳ ವಿನ್ಯಾಸ ಸಂವೇದನೆಗಳೊಂದಿಗೆ ಸ್ಥಳೀಯ ಕುಶಲಕರ್ಮಿಗಳ ಸ್ಥಳೀಯ ತಂತ್ರಗಳ ಅನ್ವೇಷಣೆಯನ್ನು ಈ ಪೂರ್ವವು ಪಶ್ಚಿಮಕ್ಕೆ ನೀಡುತ್ತದೆ ಎಂದು ಲಿಸಾ ಸ್ಕೂಲ್ ಆಪ್ ಡಿಸೈನ್ ನ ಸಹ ನಿರ್ದೇಶಕ ಗಿರೀಶ್ ಕೇಸ್ವಾನಿ ಹೇಳಿದರು.
ಮರದ ಆಟಿಕೆ ಮತ್ತು ಗೊಂಬೆ ತಯಾರಿಕೆಯ ವಿಶಿಷ್ಟ ಕರಕುಶಲತೆಯ ಬಗ್ಗೆ ನಮ್ಮ ಒಟ್ಟಾರೆ ತಿಳುವಳಿಕೆಯು ಕುಶಲಕರ್ಮಿಗಳು ಮತ್ತು ಅವರ ಜೀವನಶಲಿಯ ದೊಡ್ಡ ಚಿತ್ರಣವನ್ನು ನೀಡಿತು. ಅದು ಕರಕುಶಲ ಮತ್ತು ಕಚ್ಚಾ ವಸ್ತುಗಳ ಸುತ್ತ ಸುತ್ತುತ್ತದೆ. ಮತ್ತು ಮಾಹಿತಿಯ ಆಧಾರದ ,ಮೇಲೆ ನಾವು ನಮ್ಮ ಸಂಶೋಧನಾ ಯೋಜನೆಗಳನ್ನು ಓಡಿಸಬಹುದು ಎಂದು ಕಲೆಯ ಬಗ್ಗೆ ಸಂಪೂರ್ಣವಾಗಿ ಆಕರ್ಷಿತರಾದ ಫ್ರೆಂಚ್ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಮಾರ್ಗಾಕ್ಸ್ ಕಾರ್ಟಿನ್ ಹೇಳಿದರು.
ಕರ್ನಾಟಕದ ರಾಮನಗರ ಜಿಲ್ಲೆಯ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಸಣ್ಣ ಪಟ್ಟಣವಾದ ಚನ್ನಪಟ್ಟಣವು ಸಾಂಪ್ರದಾಯಿಕ ಮರದ ಆಟಿಕೆಗಳಿಗೆ ವಿಶ್ವಪ್ರಸಿದ್ಧವಾಗಿದೆ. ಚನ್ನಪಟ್ಟಣ ಆಟಿಕೆಗಳನ್ನು ಸಾಂಪ್ರದಾಯಿಕ ಮತ್ತು ಸುಧಾರಿತ ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ತಯಾರಿಸಲಾಗುತ್ತದೆ. ಈ ಕರಕುಶಲತೆಯು ಸಣ್ಣಪಟ್ಟಣವಾದ ಚನ್ನಪಟ್ಟಣಕ್ಕೆ ಸಾಕಷ್ಟು ಪ್ರಸಿದ್ಧಿಯನ್ನು ತಂದಿತು. ಈಗ ಹೆಚ್ಚು ಹೆಚ್ಚು ಉದ್ಯಮಗಳು ಪಟ್ಟಣದಲ್ಲಿ ಲಭ್ಯವಿರುವಂತಹ ಅಸಾಧಾರಣ ಸುರಕ್ಷಿತ ಆಟಿಕೆಗಳನ್ನು ಹುಡುಕುತ್ತಿವೆ.
ಫ್ರೆಂಚ್ ವಿದ್ಯಾರ್ಥಿಗಳು ಫೆಬ್ರವರಿ ೧೮, ೨೦೨೦ ರವರೆಗೆ ಬೆಂಗಳೂರಿನಲ್ಲಿರುತ್ತಾರೆ. ಮತ್ತು ಈ ಸಮಯದಲ್ಲಿ ಅನೇಕ ಕಾರ್ಯಾಗಾರಗಳು ಮತ್ತು ವಿವಿಧ ಪರಂಪರೆ ಮತ್ತು ಸಾಂಸ್ಕೃತಿಕ ಕೇಂದ್ರಗಳಿಗೆ ಭೇಟಿಗಳನ್ನು ಏರ್ಪಡಿಸಲಾಗಿದೆ.
ಲಿಸಾ ಸ್ಕೂಲ್ ಆಫ್ ಡಿಸೈನ್ ಫ್ರಾನ್ಸ್ ನಲ್ಲಿ ೩೫ ವರ್ಷಗಳಿಂದ ಅಸ್ತಿತ್ವದಲ್ಲಿದೆ. ಲಿಸಾ ಸ್ಕೂಲ್ ಆಪ್ ಡಿಸೈನನ್ ನ ಉದ್ದೇಶವು ತಮ್ಮ ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ವೃತ್ತಿಪರರನ್ನಾಗಿ ಬೆಳೆಸುವುದು ಮಾತ್ರವಲ್ಲದೇ, ಅವರು ವಿನ್ಯಾಸಗೊಳಿಸಿದ ಸಮಾಜದ ಸೌಂದರ್ಯ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ನೀತಿಗಳ ಬಗ್ಗೆ ಸೂಕ್ಷ್ಮವಾಗಿರಬೇಕು, ಜಾಗತಿಕವಾಗಿ ೧೧ ಸ್ಥಳಗಳಲ್ಲಿ ವ್ಯಾಪಿಸಿರುವ ಲಿಸಾ ಸ್ಕೂಲ್ ಆಪ್ ಡಿಸೈನ್ ಅನ್ನು ಪರಂಪರೆ, ಶ್ರೇಷ್ಟತೆ ಮತ್ತು ಅವಕಾಶಗಳ ಮೇಲೆ ನಿರ್ಮಿಸಲಾಗಿದೆ. ಬೆಂಗಳೂರಿನಲ್ಲಿ ಅತ್ಯಾಧುನಿಕ ಮೂಲಸೌಕರ್ಯ ಮತ್ತು ಕ್ಯಾಂಪಸ್ ನೊಂದಿಗೆ ಇದನ್ನು ೨೦೧೩ ರಲ್ಲಿ ಭಾರತದಲ್ಲಿ ಸ್ಥಾಪಿಸಲಾಯಿತು.
ಲೀಸಾ- ಬೆಂಗಳೂರು ಯುಕೆ ಮತ್ತು ಅರ್ಹತೆಗಳು ಹಾಗೂ ಮೌಲ್ಯಮಾಪನಗಳ ಅಂತರರಾಷ್ಟ್ರೀಯ (ಕ್ಯೂ ಎಐ) ಫೆಡರೇಶನ್ ಆಫ್ ಯುರೋಪಿಯನ್ ಸ್ಕೂಲ್ (ಎಫ್ ಇಡಿಇ) ಮತ್ತು ಜವಾಹರಲಾಲ್ ನೆಹರು ತಾಂತ್ರಿಕ ಶಿಕ್ಷಣ-ಕೌನ್ಸಿಲ್ ಆಫ್ ಸ್ಕಿಲ್ ಡೆವಲಪ್ ಮೆಂಟ್ (ಜೆಎನ್ ಟಿ ಇ) ನಿಂದ ಗುರುತಿಸಲ್ಪಟ್ಟ ಸೃಜನಶೀಲತೆ ಮತ್ತು ನಾವಿನ್ಯತೆಯ ಶಾಲೆಯಾದ ಕ್ರಯೂ ವ್ಯಾಲಿಯ ಒಡೆತನದಲ್ಲಿದೆ. ಲಿಸಾ ಸ್ಕೂಲ್ ಆಫ್ ಡಿಸೈನ್ ನ ಶಿಕ್ಷಣವನ್ನು ವಿನ್ಯಾಸಗೊಳಿಸಲು ಬಹುಶ ಶಿಸ್ತಿನ ವಿಧಾನವನ್ನು ಹೊಂದಿದ್ದು ಅದು ಸೃಜನಶೀಲತೆ ಮತ್ತು ಪ್ರಯೋಗ ಎರಡನ್ನೂ ಉತ್ತೇಜಿಸುತ್ತದೆ. ಈ ಪರಿಸರದಲ್ಲಿ ಅಧ್ಯಯನ ಮತ್ತು ಕಲಿಕೆ ವಿದ್ಯಾರ್ಥಿಗಳಿಗೆ ವಿಶಿಷ್ಟ ದೃಷ್ಟಿಕೋನವನ್ನು ಅಭಿವೃದ್ದಿಪಡಿಸಲು ಸಹಾಯ ಮಾಡುತ್ತದೆ. ಫ್ಯಾಷನ್ ಮತ್ತು ಜವಳಿ ವಿನ್ಯಾಸ ಒಳಾಂಗಣ ಮತ್ತು ಉತ್ಪನ್ನ ವಿನ್ಯಾಸ ಮತತು ಗ್ರಾಫಿಕ್ ಮತ್ತು ವೆಬ್ ವಿನ್ಯಾಸದಲ್ಲಿ ಪದವಿ ಕೋರ್ಸ್ ಗಳನ್ನು ನೀಡಲು ಲಿಸಾ ಬೆಂಗಳೂರನ್ನು ಬೆಂಗಳೂರಿನ ವಿಶ್ವವಿದ್ಯಾಲಯವು ಗುರುತಿಸಿದೆ. ಇದು ಫ್ರಾನ್ಸ್ ನ ೦೭ ಕ್ಕೂ ಹೆಚ್ಚು ಸ್ಥಳಗಳೊಂದಿಗೆ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮವನ್ನು ಸಹ ನೀಡುತ್ತದೆ.
ಫ್ರಾನ್ಸ್ ದೇಶದ ಶಿಕ್ಷಕರಾದ ಮಾರ್ಗ್ವಾಕ್ಸ್, ಮಾರ್ಥಾ, ಫ್ಲೋರಿಯಾ ಮತ್ತು ಎಲಿಸಾ ಹಾಗೂ ವಿದ್ಯಾರ್ಥಿಗಳು ತಂಡದಲ್ಲಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in karnataka »
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ರಾಮನಗರ, ಫೆ. 02 : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ
ಸಂವಿಧಾನ ಜಾಗೃತಿ ಜಾಥಾ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ
ಪ್ರತಿಕ್ರಿಯೆಗಳು