Tel: 7676775624 | Mail: info@yellowandred.in

Language: EN KAN

    Follow us :


ಮುಪ್ಪಿನಲ್ಲೂ ಮಾದರಿ ಜೀವನದ ಮುನ್ನುಡಿಯಲ್ಲಿ ಮಂಡ್ಯದ ನರಸಮ್ಮ

Posted date: 11 Feb, 2020

Powered by:     Yellow and Red

ಮುಪ್ಪಿನಲ್ಲೂ ಮಾದರಿ ಜೀವನದ ಮುನ್ನುಡಿಯಲ್ಲಿ ಮಂಡ್ಯದ ನರಸಮ್ಮ

ಚನ್ನಪಟ್ಟಣ: ಸಣ್ಣಪುಟ್ಟ ಗಾಯಗಳಾದವರು, ಕೆಲ ಪೋಲಿಯೊ ಪೀಡಿತರು, ಕೆಲ ವಿಕಲಚೇತನರು, ವೃದ್ಧವೃದ್ದೆಯರು, ಒಟ್ಟಾರೆ ಸೋಮಾರಿಗಳು ಭಿಕ್ಷೆ ಬೇಡುವುದರಲ್ಲಿ ನಿಸ್ಸೀಮರು. ಇಂತಹ ಸೋಂಬೇರಿಗಳಿಗೆಲ್ಲ ಸಡ್ಡು ಹೊಡೆದು ಎಂಭತ್ತರ ಆಸುಪಾಸಿನ ವಯಸ್ಸಿನಲ್ಲಿಯೂ ಸ್ವಾಭಿಮಾನದಿಂದ ಊರೂರು ತಿರುಗಿ *ರಂಗೋಲಿ ಪುಡಿ (ಹುಡಿ) ಮಾರಿ ಜೀವನ ಸಾಗಿಸುತ್ತಿರುವ* ಈ ವೃದ್ದೆಯನ್ನು ತಮ್ಮ ಜೀವನದ ರೋಲ್ ಮಾಡೆಲ್ ಆಗಿ ತೆಗೆದುಕೊಳ್ಳಬೇಕೆ ವಿನಹ ಯಾವುದೋ ಚಿತ್ರ ನಟನನ್ನೋ, ಉದ್ಯಮಿಯನ್ನೋ ಅಥವಾ ಹೊಲಸು ರಾಜಕಾರಣಿಯನ್ನೋ‌ ಅಲ್ಲಾ ಎಂಬುದು ಈ ವೃದ್ದೆಯ ಬದುಕನ್ನು ನೋಡಿದಾಗ ಅನ್ನಿಸುವುದರಲ್ಲಿ ಅನುಮಾನವೇ ಇಲ್ಲ.


ಈ ವೃದ್ದೆಯ ಹೆಸರು ನರಸಮ್ಮ. ಈಕೆ ಮಂಡ್ಯದ ಬಳಿ ಇರುವ ಚಿಕ್ಕಮಂಡ್ಯದ ಬಳಿಯ ಸಾತನೂರು (ಬೆಟ್ಟದ ಸಾತನೂರು) ಗ್ರಾಮದವರು.


ಈಕೆಯ ಗಂಡ ಮರಣ ಹೊಂದಿದ್ದು ನಲವತ್ತು ವರ್ಷಗಳ ಹಿಂದೆ. ಇದ್ದೊಬ್ಬ ಮಗನೂ ಸತ್ತು ಇಪ್ಪತ್ತನಾಲ್ಕು ವರ್ಷಗಳು ಸಂದಿವೆ, ಅವನ ಪುತ್ರನೂ ಸಹ ಎಂಟು ವರ್ಷದವನಿದ್ದಾಗಲೇ ಮರಣ ಹೊಂದಿದ್ದಾನೆ. ಇದ್ದೊಬ್ಬ ಸೊಸೆಯೂ‌ ತನ್ನ ಅತ್ತೆಯ ಬಿಟ್ಟು ಅಪ್ಪನ ಮನೆ ಸೇರಿಕೊಂಡಿದ್ದಾಳೆ.


ಇಂತಹ ಸಂದರ್ಭದಲ್ಲಿಯೂ ಸಹ ಈ ವೃದ್ದೆಯೂ ಎದೆ ಗುಂದದೆ, ಭಿಕ್ಷೆ ಬೇಡದೆ, ಸ್ವಾಭಿಮಾನಕ್ಕಾಗಿ ದುಡಿದು ತಿನ್ನುತ್ತಿರುವುದು ಇಂದಿನ ಯುವಕರಿಗೆ, ನಿರುದ್ಯೋಗಿಗಳಿಗೆ, ಡಿಗ್ರಿ ಪಡೆದಿದ್ದೇನೆಂಬ ಅಹಂಕಾರದಿಂದ ಇಂತಹದೇ ಕೆಲಸ ಬೇಕೆಂದು‌, ಯಾವ ಕೆಲಸವೂ ಮಾಡದಿರುವವರಿಗೆಲ್ಲರಿಗೂ ಈ ಅಮ್ಮ ಮಾದರಿಯಾಗಿದ್ದಾರೆ.


ಮಂಡ್ಯದ ತನ್ನ ಊರಿನ ಬೆಟ್ಟದ ತಪ್ಪಲಿನಲ್ಲಿ ರಂಗೋಲಿ ಕಲ್ಲನ್ನು ಪುಡಿ ಮಾಡಿಸಿಕೊಂಡು ಊರು‌ಕೇರಿ ತಿರುಗಿ ಸಂಪ್ರದಾಯ ಗೃಹಿಣಿಯರ ಮನವೊಲಿಸಿ ರಂಗೋಲಿ ಮಾರಿ‌ ತನ್ನ ಜೀವನವನ್ನು ಯಾರ ಹಂಗಿಲ್ಲದೆಯೂ ಈ ಇಳಿವಯಸ್ಸಿನಲ್ಲೂ ಸ್ವಾಭಿಮಾನದಿಂದ ಸಾಗಿಸುತ್ತಿರುವುದು ಇಂದಿನ ಪೀಳಿಗೆಗೆ ಹಾಗೂ ಸೋಂಬೇರಿಗಳಿಗೆ ಮಾದರಿಯಾಗಿದ್ದಾರೆ.


ಇವರನ್ನು ಕಂಡು ಪೋಟೋ ತೆಗೆದು, ಮಾತನಾಡಿ ಮಾಹಿತಿ ಕಲೆ ಹಾಕಿ, ಸಹಾಯ ಹಸ್ತ ಚಾಚಿದ ವಿಜಯಕುಮಾರ್ ಗುಲೇಚಾ (ವನಿತಾ ಸ್ಯಾರಿ) ಅವರಿಗೂ‌ ಯುವಕರಿಗೆ ಮಾದರಿಯಾದ ಮಂಡ್ಯದ ನರಸಮ್ಮನವರಿಗೂ ಮನಸಾರೆ ವಂದಿಸುವುದರ ಜೊತೆಗೆ ಇಂತಹ ವಯೋವೃದ್ದರು ಬದುಕಿಗಾಗಿ ಹೋರಾಟ ಮಾಡಿ ಜೀವನಕ್ಕಾಗಿ‌ ವ್ಯಾಪಾರ ಮಾಡುತ್ತಾ ತಮ್ಮ ಬಳಿಗೆ ಬಂದಾಗ ಚೌಕಾಸಿ ಮಾಡದೇ ಖರೀದಿಸಿ ಅವರ ಸ್ವಾಭಿಮಾನದ ಜೀವನಕ್ಕೆ ಸ್ಪಂದಿಸಿರಿ ಎನ್ನುವ...


*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ

ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

ರಾಮನಗರ, ಫೆ. 02  :  ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು

ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ

ಸಂವಿಧಾನ ಜಾಗೃತಿ ಜಾಥಾ

ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ

ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ

ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,

ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ರಾಮನಗರ:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ  ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ

೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ  ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ

ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್

ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ

Top Stories »  


Top ↑