ತೆರನಾದ ರಾಮನಗರಕ್ಕೆ ಅನಿತಾ, ರಾಜ್ಯಾಧಕ್ಷರಾಗಿ ಡಿಕೆಶಿ ಆಯ್ಕೆಯಾಗುವ ಸಾಧ್ಯತೆ !?
ರಾಜ್ಯ ರಾಜಕಾರಣದಲ್ಲಿ ಏನಾದರು ಆಗಬಹುದು ಎನ್ನುವುದಕ್ಕೊಂದು ಉದಾಹರಣೆ ಕಾಂಗ್ರೆಸ್ ಜೆಡಿ(ಎಸ್) ಮೈತ್ರಿ, ಚುನಾವಣೆಗೂ ಮುನ್ನ ಆ ಪಕ್ಷದವರು ಸರಿ ಇಲ್ಲಾ ? ಈ ಪಕ್ಷದವರು ಸರಿ ಇಲ್ಲಾ ಅಂತಿದ್ದ ರಾಜಕಾರಣಿಗಳೆಲ್ಲಾ ಇಂದು ಒಂದಾಗೋಗವ್ರೇ !
ಈ ಬಾರಿ ನಮ್ದೇ ಸರ್ಕಾರ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಅವನನ್ನು ಜೈಲಿಗೆ ಕಳುಸ್ತಿನಿ ! ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಇವನನ್ನು ಜೈಲಿಗೆ ಕಳುಸ್ತಿನಿ ಅಂತಿದ್ದ ನಾಯಕರೆಲ್ಲಾ ಈಗ ಗಪ್ ಚುಪ್, ಎಲ್ಲರೂ ಒಂದೇ ತಟ್ಟೆಯಲ್ಲಿ ಉಂಡು ಒಂದೇ ಚಾಪೆಯಲ್ಲಿ ಮಲ್ಕೊಳ್ಳೋಕೆ ಶುರುವಿಟ್ಟಿದ್ದಾರೆ !?.
ಪರಮಾಶ್ಚರ್ಯವೆಂದರೆ ಮತ ಹಾಕಿದ ಪ್ರಭುವಿನ ಗೋಳು ಒಂದೆಡೆಯಾದರೆ ನಮ್ಮೂರಿನಲ್ಲಿ ಲೀಡ್ ಕೊಡ್ಬೇಕು, ನಮ್ಮಣ್ಣ ನಾ ಗೆಲ್ಲಿಸ್ಬೇಕು, ನಮ್ಮ ಜಾತಿಯವನನ್ನು ಗೆಲ್ಲಿಸ್ಬೇಕು ಅಂತ ಸಂಬಂಧಿಕರ ಜೊತೆ, ಸ್ನೇಹಿತರ ಜೊತೆ, ಊರಿನವರ ಜೊತೆ ಅದರಲ್ಲೂ ಸಾಮಾಜಿಕ ಜಾಲತಾಣಗಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಜಗಳವಾಡಿಕೊಂಡಿದ್ದವರು ಎದುರುಬದುರು ಸಿಕ್ಕಿದಾಗ ಮಾತನಾಡಲು, ಸುಮ್ಮನಿರಲೂ ಆಗದೆ ಕೈ ಕೈ ಹಿಸುಕಿಕೊಳ್ಳುತಿದ್ದಾರೆ.
ಅದೇನೆ ಇರಲಿ ರಾಜ್ಯದಲ್ಲೀಗ ವೈಯುಕ್ತಿಕ ನಿಂದನೆಗೂ ಇಳಿದಿದ್ದ (ಇದನ್ನು ಡಿಕೆಶಿ ಒಪ್ಕೊಂಡಿದ್ದಾರೆ) ಬದ್ದ ವೈರಿಗಳಾದ ಎರಡು ಪಕ್ಷಗಳು ಕೋಮುವಾದಿ ಎಂಬ ಹಣೆಪಟ್ಟಿ ಕಟ್ಟಿ ಬಿಜೆಪಿ ಯನ್ನು ದೂರವಿಟ್ಟು ಅಧಿಕಾರಕ್ಕೆ ಬರುತಿದ್ದಾರೆ, ವೈಯುಕ್ತಿಕ ಅಧಿಕಾರದ ಲಾಲಸೆ ಬಿಟ್ಟು ರಾಜ್ಯದ ಹಿತದೃಷ್ಟಿಯಿಂದ ಐದು ವರ್ಷ ಅಧಿಕಾರ ನಡೆಸಿದರೆ ಇವರ ಇಂದಿನ ಹೊಂದಾಣಿಕೆ ಸಾರ್ಥಕವಾಗುತ್ತದೆ, ಆದರೆ ಇದು ಬಹಳ ಕಷ್ಟ ಮುಂದಿನ ಲೋಕಸಭಾ ಚುನಾವಣೆಯ ವರೆಗೂ ಉಳಿದರೆ ಹೆಚ್ಚು ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.
ಜೆಡಿ(ಎಸ್) ವರಿಷ್ಠರಾದ ಹೆಚ್ ಡಿ ದೇವೇಗೌಡರು ಈಗಾಗಲೇ ಧರ್ಮ ಒಡೆದ ಎಂ ಬಿ ಪಾಟೀಲರನ್ನು ಹಾಗೂ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿರುವ ಡಿ ಕೆ ಶಿವಕುಮಾರ್ ರವರನ್ನು ಸಂಪುಟದಿಂದ ದೂರವಿಡಬೇಕು ಎಂಬ ಷರತ್ತನ್ನು ಕಾಂಗ್ರೆಸ್ ನ ಮುಂದಿಟ್ಟಿದ್ದಾರೆ, ಆದರೆ ಇದನ್ನು ಕಾಂಗ್ರೆಸ್ ನವರು ಅರಗಿಸಿಕೊಳ್ಳುವುದು ತುಸು ಕಷ್ಟ, ಎಂ ಬಿ ಪಾಟೀಲ್ ರನ್ನು ಹೊರಗಿಡುವುದು ಲಿಂಗಾಯತ ವೀರಶೈವ ಸಮುದಾಯದಲ್ಲೇ ಗೊಂದಲವಿರುವುದರಿಂದ ಸಾಧ್ಯವಾಗಬಹುದು.
ಡಿ ಕೆ ಶಿವಕುಮಾರ್ ಈ ಬಾರಿಯ ಸಮ್ಮಿಶ್ರ ಸರ್ಕಾರ ರಚನೆ ಮಾಡಲು ಬಹುತೇಕ ಶ್ರಮ ಅವರದ್ದೇ, ಹಾಗಾಗಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಅನಿವಾರ್ಯವಾಗಲಿದೆ.
ದೇವೇಗೌಡರ ಇನ್ನೊಂದು ತಂತ್ರಗಾರಿಕೆಯನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ !
ಅದೇನೆಂದರೆ ಗೌಡರ ಇನ್ನೊಂದು ಗುಣವೆಂದರೆ ಕಷ್ಟಕಾಲದಲ್ಲಿ ನೆರವಾದವರನ್ನು ಕೈ ಬಿಡುವುದಿಲ್ಲ.
ಹಾಗಾಗಿ ಡಿ ಕೆ ಶಿವಕುಮಾರ್ ರವರನ್ನು ಸಂಪುಟದಿಂದ ಹೊರಗಿಟ್ಟು ಕಾಂಗ್ರೆಸ್ ನ ರಾಜ್ಯಾಧಕ್ಷರನ್ನಾಗಿ ಮಾಡುವ ಹಂಬಲವಿರುವುದನ್ನು ಅಲ್ಲಗೆಳೆಯುವಂತಿಲ್ಲ, ಇಲ್ಲಿ ಜಾತಿ ಅಭಿಮಾನವು ಕೆಲಸ ಮಾಡುವುದು ಸಹ ಅಷ್ಟೇ ಸತ್ಯ.
ಡಿ ಕೆ ಶಿವಕುಮಾರ್ ರವರೇ ಹೇಳಿರುವಂತೆ ಹೆಚ್ ಡಿ ಕುಮಾರಸ್ವಾಮಿ ಯವರಿಂದ ತೆರನಾದ ರಾಮನಗರ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿಯವರು ಸ್ಪರ್ಧಿಸಲಿದ್ದಾರೆ, ಅಂದರೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯನ್ನು ಹಾಕುವುದಿಲ್ಲ ಎಂದಾಯಿತು, ರಾಮನಗರದಲ್ಲಿ ಬಿಜೆಪಿ ಗೆ ನೆಲೆ ಇಲ್ಲಾ, ಸಿ ಪಿ ಯೋಗೇಶ್ವರ್ ಈ ಹಿಂದೆ ಹೇಳಿರುವಂತೆ ಅವರೇನಾದರು ಸ್ಪರ್ಧಿಸಿದರೆ ವೈಯುಕ್ತಿಕ ವರ್ಚಸ್ಸಿನಿಂದ ಹಾಗೂ ಕಾಂಗ್ರೆಸ್ ಮತ್ತು ಜೆಡಿ(ಎಸ್) ಹೊಂದಾಣಿಕೆಯಿಂದ ಮುನಿದಿರುವ ಕೆಲ ನಾಯಕರ ಸಹಾಯದಿಂದ ಪೈಪೋಟಿ ನೀಡಬಹುದು.
ಈ ಮೊದಲು ಹೆಚ್ ಡಿ ಕುಮಾರಸ್ವಾಮಿ ಯವರಿಂದ ತೆರನಾದ ರಾಮನಗರಕ್ಕೆ ನಿಷ್ಠಾವಂತ ಕಾರ್ಯಕರ್ತ ರಾಜು ರವರನ್ನು ಅಂದು ಗೆಲ್ಲಿಸಿಕೊಂಡು ಬರಲಾಗಿತ್ತು, ಈ ಬಾರಿಯೂ ಸ್ಥಳೀಯ ಮುಖಂಡರೊಬ್ಬರು ಸ್ಪರ್ಧಿಸಲು ಅನುವುಮಾಡಿಕೊಡುತ್ತಾರೆ ಎನ್ನುವುದು ಬಹುತೇಕ ಸುಳ್ಳಾಗಲಿದೆ, ಮತ್ತೊಮ್ಮೆ ಕುಟುಂಬ ರಾಜಕಾರಣದ ಕೆಸರು ಮೆತ್ತಿಕೊಳ್ಳುವ ಸಾಧ್ಯತೆ ಎದುರಾಗಲಿದೆ.
ಪದವೀಧರರ ಚುನಾವಣೆ ಮುಗಿದು ಲೋಕಸಭಾ ಚುನಾವಣೆ ಬರುವ ವೇಳೆಗೆ ಏನೇನಾಗಲಿದೆ ಎಂದು ಕಾದು ನೋಡೋಣಾ.
ಗೋ ರಾ ಶ್ರೀನಿವಾಸ...
ಮೊ: 9845856139.
Recent news in karnataka »
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ರಾಮನಗರ, ಫೆ. 02 : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ
ಸಂವಿಧಾನ ಜಾಗೃತಿ ಜಾಥಾ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ
ಪ್ರತಿಕ್ರಿಯೆಗಳು