ಪೋಲಿಸರೇ ಯರ್ರಾಬಿರ್ರಿ ಬೈಕ್ ರೈಡರ್ ತಡೆಗಟ್ಟಲು ಕ್ರಮ ಕೈಗೊಳ್ಳಿ
ಇತ್ತೀಚಿನ ದಿನಗಳಲ್ಲಿ ಹಲವಾರು ಯುವಕರು ನಗರವೂ ಸೇರಿದಂತೆ ತಾಲ್ಲೂಕಿದ್ಯಾಂತ ಬೈಕ್ ರೈಡಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ.
ಕೆಲ ಯುವಕರು ಅತಿ ಹೆಚ್ಚು ಶಬ್ದ ಬರುವ ಯಮಹಾ ಬೈಕ್ ನಲ್ಲಿ ರೈಡಿಂಗ್ ಮಾಡಿದರೇ ಮತ್ತೆ ಕೆಲ ಯುವಕರು ಅವರ ಬಳಿ ಇರುವ ಬೈಕ್ ನ ಸೈಲೆನ್ಸರ್ ಪೈಪ್ ನ ಫಿಲ್ಟರ್ ತೆಗೆಸಿ ಹೆಚ್ಚು ಶಬ್ದ ಬರುವಂತೆ ಮಾಡಿಸಿಕೊಂಡು ಕಿವಿಗಡಚಿಕ್ಕುವಂತೆ ಶಬ್ದ ಹೊರಡಿಸುತ್ತಾ ವ್ಹೀಲಿಂಗ್ ಮಾಡುತ್ತಿರುವುದು ಪ್ರತಿನಿತ್ಯದ ಚಾಳಿಯಾಗಿಬಿಟ್ಟಿದೆ.
ಈ ರೀತಿಯ ಬೈಕ್ ಚಾಲನೆಯಲ್ಲಿ ಕೆಲವು ಕಾಲೇಜಿನ ಮಕ್ಕಳಿದ್ದರೇ ಇನ್ನೂ ಕೆಲ ಯುವಕರು ಅಂಡಲೆಯುವ ಪೋಲಿಗಳಿದ್ದಾರೆ ಎಂದರೆ ತಪ್ಪಾಗಲಾರದು, ಜೊತೆಗೆ ಬಹುತೇಕ ಮಂದಿಗೆ ಚಾಲನ ಪರವಾನಗಿ ಇಲ್ಲವಾದರೆ ಹಲವಾರು ವಾಹನಗಳಿಗೆ ದಾಖಲಾತಿ ಸಹ ಇರುವುದಿಲ್ಲ, ಹಾಗೇ ಬಹುತೇಕ ಕಾಲೇಜು ವಿದ್ಯಾರ್ಥಿಗಳಿಗೆ ಹದಿನೆಂಟು ವರ್ಷಗಳು ಸಹ ತುಂಬಿರದವರೇ ಹೆಚ್ಚಿದ್ದು ಅವರ ಹುಚ್ಚಾಟದ ವ್ಹೀಲಿಂಗ್ ಮತ್ತು ಅತಿಯಾದ ಶಬ್ದದ ಬೈಕ್ ಗಳಿಂದ ರಸ್ತೆಯಲ್ಲಿ ಓಡಾಡುವ ಇನ್ನಿತರ ವಾಹನ ಸವಾರರು ಹಾಗೂ ನಿವಾಸಿಗಳ ಎದೆ ಬಡಿತ ಜೋರಾಗುತ್ತಿದೆ.
ಪ್ರತಿನಿತ್ಯ ಹತ್ತಾರು ಬೈಕ್ ಸವಾರರು ಈ ರೀತಿಯಲ್ಲಿ ಓಡಾಡುತ್ತಿದ್ದರೂ ಸಹ ಪೋಲಿಸರು ಕಂಡು ಕಾಣದಂತೆ ಕೇಳಿಯೂ ಕೇಳದಂತೆ ಸುಮ್ಮನಿರುವುದು ಸಾರ್ವಜನಿಕರಿಗೆ ಯಕ್ಷಪ್ರಶ್ನೆಯಾಗಿದೆ.
ಅದರಲ್ಲೂ ಸಾತನೂರು ಸರ್ಕಲ್ ನಲ್ಲಿ ಪ್ರತಿನಿತ್ಯ ಕನಿಷ್ಠ ಮೂರರಿಂದ ಐದು ಮಂದಿ ಪೋಲಿಸರಿದ್ದರೂ ಸಹ ಅವರೆದುರೇ ಓಡಾಡುವ ಈ ಯುವಕರನ್ನು ಹಿಡಿದು ಪ್ರಶ್ನಿಸದೇ ಇರುವುದು ಸಹ ಪುಂಡರಿಗೆ ವರದಾನವಾಗಿದೆ.
ನಮ್ಮೆಲ್ಲಾ ಪೋಲಿಸರು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ತಿರುವಿನಲ್ಲಿ ಅದರಲ್ಲೂ ತಿಂಗಳ ಕೊನೆಯ ಹತ್ತು ದಿವಸಗಳು ಮಾತ್ರ ಪ್ರಯಾಣಿಕರ ಮತ್ತು ಸರಕು ಸಾಗಣೆಯ ವಾಹನಗಳನ್ನು ಹಿಡಿದು ಕೆಲವಕ್ಕೆ ದಂಡ ಹಾಕಿ ಇನ್ನೂ ಕೆಲ ವಾಹನಗಳ ದುಡ್ಡು ಜೇಬಿಗಳಿಸಿ ಹೋಗುವ ಅನೇಕ ಪೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದೇ ರೀತಿ ಎಲ್ಲಾ ಕಡೆಯೂ ಇಂತಹ ಸವಾರರನ್ನು ಹಿಡಿದು ಒಂದು ದಿನದ ಮಟ್ಟಿಗಾದರೂ ಜೈಲಿಗಟ್ಟಿದರೇ ಬುದ್ದಿ ಕಲಿತಾರು.
ಪೋಲಿಸರೇ ಈ ವ್ಹೀಲಿಂಗ್ ಹಾಗೂ ಅತಿಯಾದ ಶಬ್ದವನ್ನು ಹೊಂದಿರುವ ಬೈಕ್ ರೈಡರ್ ಗಳನ್ನು ಹಿಡಿದು ಕಾನೂನು ರೀತ್ಯಾ ಕ್ರಮ ಕೈಗೊಂಡರೆ ಅವರ ಪ್ರಾಣ, ಸಾರ್ವಜನಿಕರ ಪ್ರಾಣ ಉಳಿಯುವುದರ ಜೊತೆಗೆ ಪೋಲಿಸರ ಮೇಲೆ ಸಾರ್ವಜನಿಕರ ಗೌರವ ಹೆಚ್ಚಾಗುವುದರ ಜೊತೆಯಲ್ಲಿ ಇನ್ನಿತರ ಸವಾರರು ಸಹ ಭಯಭಿತರಾಗುತ್ತಾರೆ.
ಇಂದಿನಿಂದಲೇ ಕ್ರಮಕೈಗೊಳ್ಳುತ್ತೀರೆಂಬ ಭರವಸೆಯಲ್ಲಿ ಸಾರ್ವಜನಿಕರಿದ್ದಾರೆ, ಅವರ ಆಸೆ ಹುಸಿಯಾಗದಿರಲಿ.
"ಕೆಲ ಯುವಕರು ವ್ಹೀಲ್ ಬ್ಯಾಲೆನ್ಸ್ ಮತ್ತು ಹೆಚ್ಚು ಶಬ್ದ ಬರುವ ಬೈಕ್ ರೈಡಿಂಗ್ ನ್ನು ಒಂದು ಶೋಕಿಯಾಗಿಸಿಕೊಂಡಿದ್ದಾರೆ, ಅವರ ಪ್ರಾಣದ ಜೊತೆಗೆ ಸಾರ್ವಜನಿಕರ ಪ್ರಾಣದ ಜೊತೆಗೂ ಆಟವಾಡುತ್ತಿದ್ದಾರೆ. ಶೀಘ್ರವಾಗಿ ಇದಕ್ಕೆಲ್ಲ ಕಡಿವಾಣ ಹಾಕಬೇಕಾಗಿದೆ.
ಸಿ ಪುಟ್ಟಸ್ವಾಮಿ. ಹಿರಿಯ ರೈತ ಮುಖಂಡರು."
" ಯಮಹಾ ಹಾಗೂ ಬುಲೆಟ್ ಬೈಕ್ ಗಳ ಕಿವಿಗಡಚಿಕ್ಕುವ ಶಬ್ದ ಮತ್ತು ಅವರ ಯದ್ವಾತದ್ವಾ ರೈಡಿಂಗ್ ನಿಂದ ಸಾರ್ವಜನಿಕರು ತಾಳ್ಮೆ ಕಳೆದುಕೊಳ್ಳುತಿದ್ದಾರೆ. ಅದರಲ್ಲೂ ಬಾಲಕರಿಗೆ ಪೋಷಕರು ಬೈಕ್ ಕೊಡದಂತೆ ಎಚ್ಚರಿಕೆ ವಹಿಸಬೇಕಾಗಿದೆ, ಪೋಲಿಸರ ಜೊತೆಗೆ ಪೋಷಕರು ಸಹ ಅವರಿಗೆ ತಿಳಿ ಹೇಳಬೇಕಾಗಿದೆ.
ಶಿವಶಂಕರ್ ವಕೀಲರು "
" ನಾವು ಈಗಾಗಲೇ ಕ್ರಮಕೈಗೊಂಡಿದ್ದು ಹಲವು ಪ್ರಕರಣಗಳನ್ನು ದಾಖಲಿಸಿದ್ದೇವೆ, ಕೆಲವರಿಗೆ ಎಚ್ಚರಿಕೆ ಕೊಟ್ಟಿದ್ದೇವೆ, ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಸ್ಟೇಷನ್ ಗಳ ಸಹಭಾಗಿತ್ವ ಹಾಗೂ ಡಿವೈಎಸ್ಪಿ ಯವರ ಮಾರ್ಗದರ್ಶನದಲ್ಲಿ ಹೆಚ್ಚಿನ ರೀತಿ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ.
ಶಿವಕುಮಾರ್ ಟ್ರಾಫಿಕ್ ಪಿ ಎಸ್ ಐ ಚನ್ನಪಟ್ಟಣ "
ಗೋ ರಾ ಶ್ರೀನಿವಾಸ...
ಮೊ: 9845856139.
Recent news in karnataka »
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ರಾಮನಗರ, ಫೆ. 02 : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ
ಸಂವಿಧಾನ ಜಾಗೃತಿ ಜಾಥಾ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ
ಪ್ರತಿಕ್ರಿಯೆಗಳು