ಜಿಲ್ಲಾಡಳಿತ ನೆಟ್ಟ ಕೋಟಿ ಗಿಡಗಳೇನಾದವು ? ಬಹುತೇಕ ಗಿಡಗಳು ವಿದ್ಯುತ್ ತಂತಿಗಳ ಕೆಳಗೇ ಏಕೆ ನೆಡುತ್ತಾರೆ ? ಗಿಡಗಳ ಅರಣ್ಯರೋಧನ
ಕಳೆದ ಬಾರಿ ರಾಮನಗರ ಜಿಲ್ಲಾಡಳಿತವೂ ಜಿಲ್ಲಾದ್ಯಂತ ಕೋಟಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಿ ಚಾಲನೆ ನೀಡಿ ಖಾಲಿ ಇರುವ ಅರಣ್ಯ, ಗೋಮಾಳ, ಸರ್ಕಾರಿ ಬಂಜರು ಭೂಮಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಕೋಟಿ ಗಿಡಗಳ ಹೆಸರಿನಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಡಳಿತ ಲಕ್ಷಾಂತರ ಗಿಡಗಳನ್ನು ನೆಟ್ಟು ಕೈ ತೊಳೆದುಕೊಂಡಿತ್ತು.
"ಉಳಿದಿರುವ ಗಿಡಗಳ ಲೆಕ್ಕ ಕೊಡಲಿ"
ಜಿಲ್ಲಾದ್ಯಂತ ಎತ್ತ ಹೋಗಿ ಲೆಕ್ಕ ತಂದರು ಸಹ ಕೇವಲ ಒಂದು ವರ್ಷದಲ್ಲಿ ನೆಟ್ಟ ಕೋಟಿ ಗಿಡಗಳು ಲಕ್ಷ ಲೆಕ್ಕದಲ್ಲೂ ಸಿಗದಂತಾಗಿವೆ, ಅಂದು ನೆಟ್ಟ ಗಿಡಗಳೆಲ್ಲಾ ಏನಾದವೂ ? ಕಾಡು ಮತ್ತು ಸಾಕು ಪ್ರಾಣಿಗಳು ಭಕ್ಷಿಸಿದವೇ ? ಅಥವಾ ಕೆಲವು ದುಷ್ಟ ಮನುಷ್ಯರು ಕಿತ್ತೊಗೆದರಾ ? ನೆಟ್ಟ ಗಿಡಗಳೆಲ್ಲವೂ ನೀರುಣಿಸದೇ ಒಣಗಿ ಹೋದವಾ ? ಇಲ್ಲಾ ಗುತ್ತಿಗೆದಾರರು ಗಿಡಗಳನ್ನು ನೆಡಲೇ ಇಲ್ಲವಾ ? ಸಂಬಂಧಿಸಿದ ಎಲ್ಲರೂ ನೆಟ್ಟ ಗಿಡಗಳು ಹಾಗೂ ಉಳಿದಿರುವ ಗಿಡಗಳ ಲೆಕ್ಕದೊಂದಿಗೆ ಪ್ರಾಮಾಣಿಕ ಉತ್ತರ ನೀಡಲಿ.
"ಖರ್ಚು ಮಾಡಿರುವ ಹಣ ಸಾರ್ವಜನಿಕರದ್ದು"
ಸಾರ್ವಜನಿಕರ ತೆರಿಗೆ ಹಣ ಈ ಮಟ್ಟದಲ್ಲಿ ದುರುಪಯೋಗವಾಗುವುದು ಎಷ್ಟು ಸರಿ, ಪೈಸೆ ಪೈಸೆಯನ್ನು ಕೂಡಿಟ್ಟು ತನ್ನ ಪಾಲಿನ ತೆರಿಗೆಯನ್ನು ಕಟ್ಟುತ್ತಾನೆ, ಅದನ್ನು ಸಂಬಂಧ ಪಟ್ಟ ಇಲಾಖಾಧಿಕಾರಗಳು ಸಮರ್ಪಕವಾಗಿ ಬಳಸುವುದರ ಜೊತೆಗೆ ಶಾಶ್ವತವಾಗಿ ಸಾರ್ವಜನಿಕರಿಗೆ ಉಪಯೋಗವಾಗುವ ಕೆಲಸಗಳನ್ನು ಮಾಡಬೇಕು,
"ಹಸಿರು ಕರ್ನಾಟಕ ಅಲ್ಲಾ ! ಅದೊಂದು ಹೆಸರು ಅಷ್ಟೇ "
ಈ ಸಾಲಿನ ಮಳೆಗಾಲದಲ್ಲಿ "ಹಸಿರು ಕರ್ನಾಟಕ" ಎಂಬ ಸಂದೇಶದಡಿಯಲ್ಲಿ ರಾಜ್ಯದಾದ್ಯಂತ ರಾಜ್ಯ ಸರ್ಕಾರವೇ ಅರಣ್ಯ ಇಲಾಖೆಯಿಂದ ಗಿಡಗಳನ್ನು ರೈತರಿಗೆ ಕೊಟ್ಟು ಅವರ ಸ್ವಂತ ಭೂಮಿಯಲ್ಲಿ ಬೆಳೆಯುವಂತೆ ಪ್ರೇರೇಪಿಸುವುದು ಮತ್ತು ಖಾಲಿ ಜಾಗದಲ್ಲಿ ಗಿಡನೆಡುವ ಕೆಲಸ !?
ಅಧಿಕಾರಿಗಳ ತಲೆಯಲ್ಲೇನಿದೆ! ಪ್ರತಿವರ್ಷವೂ ಲಕ್ಷ ಕೋಟಿ ಗಿಡಗಳನ್ನು ಇವರು ಭೂಮಿ ಮೇಲೆ ನೆಡುತ್ತಾರೋ ಅಥವಾ ಆಕಾಶದಲ್ಲಿ ನೆಡುತಿದ್ದಾರೋ ಗೊತ್ತಿಲ್ಲ !
ಅಧಿಕಾರಿಗಳೇ ನೀವು ಪ್ರತಿ ವರ್ಷ ಕೋಟಿ ಗಿಡನೆಡುವುದು ಮುಖ್ಯವಲ್ಲ ಗಿಡಗಳನ್ನು ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಿ, ಗಿಡನೆಡಲು ಖರ್ಚು ಮಾಡುವ ಅರ್ಧ ದುಡ್ಡನ್ನು ವ್ಯಯಿಸಿದರೇ ಸಾಕು ಕನಿಷ್ಠ ನಲವತ್ತರಿಂದ ಐವತ್ತು ವರ್ಷ ಕೋಟಿ ಕೋಟಿ ಗಿಡಗಳನ್ನು ನೆಡುವ ಪ್ರಮೇಯವೇ ಬರುವುದಿಲ್ಲ ಅಲ್ಲವೇ !?.
"ನಿಜವಾದ ಪ್ರಕೃತಿ ಆರಾಧಕರಿವರು"
ನಿಮಗಿಂತ ಕೆಲವು (ಎಲ್ಲಾ ಸಂಘಟನೆಗಳು ಅಲ್ಲಾ) ಸಮಾಜಮುಖಿಯಾಗಿ ಕೆಲಸ ಮಾಡುವ ಸಂಘ ಜೀವಿಗಳು ಮಳೆಗಾಲದಲ್ಲಿ ಬೀಜದುಂಡೆಗಳನ್ನು ಅರಣ್ಯ ಮತ್ತು ಬೆಟ್ಟಗುಡ್ಡಗಳಲ್ಲಿ ಮಾತ್ರ ಹಾಕಿ ಸಾರ್ಥಕವಾಗುವಂತೆ ನೋಡಿಕೊಳ್ಳುತ್ತಾರೆ, ಇನ್ನೂ ಕೆಲವರು ವಿದ್ಯುತ್ ತಂತಿಗಳು ಇಲ್ಲದ ರಸ್ತೆ ಬದಿಯಲ್ಲಿ ಉಪಯುಕ್ತ ಗಿಡಗಳನ್ನು ನೆಟ್ಟು ಅವುಗಳಿಗೆ ಬೇಲಿ ಹಾಕಿ ವಾರಕ್ಕೊಮ್ಮೆಯಾದರೂ ನೀರು ಹಾಕಿ ಕಾಲಕಾಲಕ್ಕೆ ಸವರುವ ಮೂಲಕ ಅವುಗಳನ್ನು ಇಂದು ಹೆಮ್ಮರವಾಗಿ ಮಾಡಿದ್ದಾರೆ ಮತ್ತು ಮಾಡುತಿದ್ದಾರೆ.
ಚನ್ನಪಟ್ಟಣದಲ್ಲಿ ನಾನು ಸೇರಿದಂತೆ ಖ್ಯಾತ ಮೂಳೆ ತಜ್ಞ ಡಾ ಮಲವೇಗೌಡ ರು ಪ್ರಥಮ ಸಾಲಿನಲ್ಲಿ ನಿಲ್ಲುತ್ತಾರೆ, ಇಂದು ಕುವೆಂಪು ನಗರದ ಎರಡನೇ ತಿರುವಿನಿಂದ ಏಳನೇ ತಿರುವಿನ ತನಕ ಹಾಗೂ ಚಾನಲ್ ರಸ್ತೆ ಬದಿಯಲ್ಲಿ ಇರುವ ಗಿಡಗಳು ಇಂದು ಬಹುತೇಕ ಮರಗಳಾಗಿವೆ ಎಂದರೆ ಅಲ್ಲಿ ನಮ್ಮೆಲ್ಲರ ಶ್ರಮ ಅಡಗಿದೆ, ಡಾ ಮಲವೇಗೌಡ, ಅವರ ಪತ್ನಿ ಡಾ ಪ್ರೀತಿ ಮತ್ತು ಅವರ ಆಸ್ಪತ್ರೆಯ ಸಿಬ್ಬಂದಿಯ ಪಾತ್ರ ದೊಡ್ಡದು, ಡಾ ಶಂಕರ್, ವಿಜಯಕುಮಾರ್ ಗುಲೇಚಾ, ಯೋಗಾನಂದ, ಮಮತ, ಸಿರಿ, ಸಾವಿತ್ರಮ್ಮ, ಶ್ಯಾಮ್ ಇನ್ನೂ ಕೆಲ ಸಾಮಾಜಿಕ ಕಳಕಳಿ ಇರುವ ಸ್ನೇಹಿತರು ಸೇರಿ ಇವರ ಜೊತೆ ಸಾಧ್ಯವಾದಷ್ಟು ಕೈ ಜೋಡಿಸಿ ಪರಿಸರ ಅಭಿವೃದ್ಧಿ ಪಡಿಸಲು ಶ್ರಮವಹಿಸಿರುವುದು ಶ್ಲಾಘನೀಯ.
ಇದೇ ತಂಡ ಹಲವು ವರ್ಷಗಳ ಕಾಲ ಸ್ವಚ್ಛ ನಗರದ ಹೆಸರಿನಲ್ಲಿ ವಾರಕ್ಕೆರಡು ಬಾರಿ ರಸ್ತೆಬದಿ, ಚರಂಡಿಗಳನ್ನು ಸ್ವಚ್ಛ ಮಾಡಿದ್ದನ್ನು ಸ್ಮರಿಸಬಹುದು. ಇವರನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು ಮಾತೃಭೂಮಿ ಸೇವಾ ಟ್ರಸ್ಟ್, ಆಸರೆ ಸೇವಾ ಟ್ರಸ್ಟ್ ಇನ್ನು ಕೆಲ ಸಂಘಟನೆಯವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.
"ದುಡ್ಡು ಮಾಡುವ ಯೋಜನೆ"
ಹಸಿರು ಕರ್ನಾಟಕ ಹೆಸರಿನಲ್ಲಿ ಈ ಸಾಲಿನಲ್ಲಿ ನೆಟ್ಟಿರುವ ಬಹುತೇಕ ಗಿಡಗಳು ರಸ್ತೆಬದಿಯಲ್ಲಿವೆ, ಅದರಲ್ಲೂ ಎಲ್ಲೆಲ್ಲಿ ವಿದ್ಯುತ್ ತಂತಿಗಳಿವೆಯೋ ಅಲ್ಲೇ ಗಿಡಗಳನ್ನೂ ನೆಟ್ಟಿರುವುದು ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಅವಿವೇಕತನವನ್ನು ಹೊರಹಾಕುವಲ್ಲಿ ಅವರೇ ಸಫಲವಾಗಿದ್ದಾರೆ. ಈ ಯೋಜನೆ ರೂಪಿಸುವ ಅಧಿಕಾರಿಗಳಿಗೇನಾಗಿದೆ! ವಿದ್ಯುತ್ ತಂತಿ ಕೆಳಗೆ ಗಿಡಗಳನ್ನು ನೆಟ್ಟರೆ ಅವು ಎಷ್ಟು ಎತ್ತರ ಬೆಳೆಯುತ್ತವೆ, ಪ್ರತಿ ತಿಂಗಳು ಸಂಬಂಧ ಪಟ್ಟ ಇಲಾಖೆಯವರು ಕಡಿಯುತ್ತಲೇ ಇರುತ್ತಾರೆ ಎನ್ನುವ ಕನಿಷ್ಠ ಜ್ಞಾನವಾದರು ಇರಬೇಡವೆ ?
ಗಿಡಗಳನ್ನು ನೆಡುವಾಗ ವಿದ್ಯುತ್ ಇಲಾಖೆಯವರು ಏನು ಮಾಡುತ್ತಾರೆ, ಅರಣ್ಯ ಇಲಾಖೆಯವರು ಅನುಮತಿ ಪಡೆದಿದ್ದಾರೆಯೇ ? ಗಿಡ ಬೆಳೆದಂತೆಲ್ಲಾ ದೊಡ್ಡದಾದಾಗ ಎಲ್ಲರಿಗೂ ತೊಂದರೆ ಆಗುತ್ತದೆ ಎನ್ನುವುದು ಈ ಇಲಾಖೆಯ ಅಧಿಕಾರಿಗಳಿಗೂ ತಿಳಿದಿಲ್ಲವೇ ?
ಅಥವಾ ಎರಡು ಇಲಾಖೆಯ ಅಧಿಕಾರಿಗಳಿಗೂ ಇದೊಂದು ದಂಧೆಯಾಗಿದೆಯೆ ? ಗಿಡ ನೆಡುವ ಮೂಲಕ ಒಂದು ಇಲಾಖೆ ದುಡ್ಡು ಮಾಡಿದರೆ ಅವುಗಳನ್ನು ಕಡಿಯುವ ಮೂಲಕ ಮತ್ತೊಂದು ಇಲಾಖೆ ಕೊಳ್ಳೆ ಹೊಡೆಯಬಹುದು ಎಂಬ ದು(ದೂ)ರಾಲೋಚನೆಯ ಒಳಸಂಚುಗಳೇ ?ಸಂಬಂಧಿಸಿದ ಅಧಿಕಾರಿಗಳು ಉತ್ತರಿಸಬೇಕಾಗಿದೆ.
ಗೋ ರಾ ಶ್ರೀನಿವಾಸ...
ಮೊ: 9845856139.
ಪ್ರತಿಕ್ರಿಯೆಗಳು1 comments
Recent news in karnataka »
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ರಾಮನಗರ, ಫೆ. 02 : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ
ಸಂವಿಧಾನ ಜಾಗೃತಿ ಜಾಥಾ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ
Supar Sar Summane grupos madadalla Entha mahethiyannu janarige thilisabekku