Tel: 7676775624 | Mail: info@yellowandred.in

Language: EN KAN

    Follow us :


ಸಾಮಾಜಿಕ ಅರಣ್ಯ ಇಲಾಖೆಯ ಯೋಜನೆಯಲ್ಲಿ ಐವತ್ತೆಂಟೂವರೆ ಲಕ್ಷ ರೈತರ ಖಾತೆಗೆ

Posted date: 16 Dec, 2018

Powered by:     Yellow and Red

ಸಾಮಾಜಿಕ ಅರಣ್ಯ ಇಲಾಖೆಯ ಯೋಜನೆಯಲ್ಲಿ ಐವತ್ತೆಂಟೂವರೆ ಲಕ್ಷ ರೈತರ ಖಾತೆಗೆ

ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯು ನರೇಗಾ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಗಿಡ ನೆಡಲು ಗುಂಡಿಗಳ ಅಳತೆ ಪ್ರಮಾಣದಲ್ಲಿ ಪ್ರತಿ ಗಿಡಕ್ಕೆ ತಲಾ ನಲವತ್ತೊಂದು ಮತ್ತು ಎಂಭತ್ತನಾಲ್ಕು ರೂಪಾಯಿಗಳಂತೆ ೨೦೧೭/೧೮ ಸಾಲಿನಲ್ಲಿ ಐವತ್ತೆಂಟೂವರೆ ಲಕ್ಷ ರೂಪಾಯಿಗಳನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್ ಪುಟ್ಟಮ್ಮ ತಿಳಿಸಿದರು.

ಸಸ್ಯಗಳು ಲಕ್ಷ, ಹಣವೂ ಲಕ್ಷ ಲಕ್ಷ ವಾದರೂ ತಾಲ್ಲೂಕಿನಲ್ಲಿ ಶಾಶ್ವತವಾಗಿ ಎಷ್ಟು ಗಿಡಗಳು ಉಳಿದಿವೆ ಎಂಬ ಲೆಕ್ಕ ಮಾತ್ರ ಕೃಷ್ಣನ ಲೆಕ್ಕವಾಗಿದೆ.


ವರ್ಷದಲ್ಲಿ ಐವತ್ತೆಂಟೂವರೆ ಲಕ್ಷ ರೈತರ ಖಾತೆಗೆ


ಪ್ರತಿ ವರ್ಷವೂ ಜಿಲ್ಲೆಯ ಸಾಮಾಜಿಕ ಅರಣ್ಯ ವಿಭಾಗಕ್ಕೆ ಎರಡು ಕಾಲು ಕೋಟಿ ಮಂಜೂರಾಗುತ್ತದೆ, ಚನ್ನಪಟ್ಟಣ ತಾಲೂಕಿಗೆ ಐವತ್ತೆಂಟೂವರೆ ಲಕ್ಷ ಹಣ ಬಿಡುಗಡೆಯಾಗುತ್ತದೆ ಆ ಹಣವನ್ನು ನಿಯಮಗಳ ಪ್ರಕಾರ ದಾಖಲೆಗಳನ್ನು ಸಲ್ಲಿಸಿ ನಮ್ಮ ಸಸ್ಯಕಾಶಿಯಲ್ಲೇ ಸಸಿಗಳನ್ನು ತೆಗೆದುಕೊಂಡು ಹೋಗುವ ರೈತರ ಖಾತೆಗೆ ಅಷ್ಟು ಹಣವನ್ನು ಜಮಾ ಮಾಡಲಾಗುತ್ತದೆ.


ರೈತರು ಸಸಿಗಳನ್ನು ಪಡೆಯಲು ಬೇಕಾದ ದಾಖಲೆಗಳು


ಇಲಾಖೆಯಲ್ಲಿ ರೈತರು ಸಸ್ಯಗಳನ್ನು ಪಡೆದುಕೊಳ್ಳಬೇಕಾದರೆ ಗ್ರಾಮ ಪಂಚಾಯತಿಯಿಂದ ಶಿಫಾರಸ್ಸು ಪತ್ರ, ಆ ಸಾಲಿನ ಪಹಣಿ, ಉದ್ಯೋಗ ಚೀಟಿ ಯ ಪ್ರತಿ, ಬಿಪಿಎಲ್ ರೇಷನ್ ಕಾಡ್೯ ಅಥವಾ ಸಣ್ಣ ರೈತರ ಧೃಡೀಕರಣ ಪತ್ರ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಪ್ರಮಾಣದ ಪ್ರತಿ ಮತ್ತು ಎರಡು ಪಾಸ್ ಪೋರ್ಟ್ ಅಳತೆಯ ಪೋಟೋಗಳನ್ನು ಕೊಟ್ಟರೆ ಸಸಿಗಳನ್ನು ವಿತರಿಸುತ್ತಾರೆ, ನಂತರ ಯಾವ ಗಿಡಗಳು, ಎಷ್ಟು ಅಳತೆಯ ಗುಂಡಿಗಳು ಎಂಬುದರ ಮೇಲೆ ಅವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ, ಉದ್ಯೋಗ (job card) ಚೀಟಿ ಇಲ್ಲವಾದರೆ ಅವರಿಗೆ ಸಸ್ಯಗಳನ್ನು ಮಾತ್ರ ವಿತರಿಸಲಾಗುತ್ತದೆ. ಹಣ ಸಿಗುವುದಿಲ್ಲ.



ಸಸಿ ಮತ್ತು ಗುಂಡಿಗೆ ಎಷ್ಟು ಹಣ


೮*೧೨ ಅಳತೆಯ ಗಾತ್ರದ ಸಸಿಗಳನ್ನು ನೆಡಲು ೦.೬೦*೦.೬೦*೦.೬೦ ಅಳತೆಯ ಗುಂಡಿ ಮಾಡಿ ಸಸಿ ನೆಡಲು ೮೪ ರೂಪಾಯಿಗಳನ್ನು, ೬*೯ ಅಳತೆಯ ಗಿಡ ನೆಡಲು ೦.೫೦*೦.೫೦*೦.೫೦ ಅಳತೆಯ ಗುಂಡಿ ತೆಗೆದು ನೆಟ್ಟರೆ ೪೧ ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗೆ ಪ್ರೋತ್ಸಾಹ ಅಥವಾ ಕೂಲಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.


ಯಾವಯಾವ ಸಸ್ಯಗಳು ದೊರೆಯುತ್ತವೆ


ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ರೈತರಿಗೆ *ಹೆಬ್ಬೇವು, ಸಿಲ್ವರ್, ತೇಗ, ನುಗ್ಗೆ, ನೇರಳೆ, ರಕ್ತಚಂದನ, ಶ್ರೀಗಂಧ, ಬೇವು, ಮಹಾಗನಿ, ಹೊಂಗೆ,ಹುಲಚಿಯ ಜೊತೆಗೆ ಪಕ್ಷಿಗಳಿಗೆ ಉಪಯೋಗವಾಗುವ ಅನೇಕ ಹಣ್ಣಿನ ಗಿಡಗಳು, ನೆರಳಿಗಾಗಿ ಬೆಳೆಸುವ ಗಿಡಗಳು ದೊರೆಯುತ್ತವೆ.


ರೈತರಲ್ಲದ ಸಾಮಾಜಿಕ ಕಾರ್ಯಕರ್ತರಿಗೂ ವಿತರಣೆ


ಬೇಡಿಕೆಯ ಮೇರೆಗೆ ಆಸಕ್ತ ರಸ್ತೆ ಬದಿ ನೆಡುವವರು, ಗ್ರಾಮ ಪಂಚಾಯತಿ ಆವರಣ, ಶಾಲಾ ಕಾಲೇಜುಗಳಲ್ಲಿ, ಸ್ಮಶಾನ, ಉದ್ಯಾನವನ ಇನ್ನಿತರ ಕಡೆಗಳಲ್ಲಿ ಗಿಡ ನೆಡುವವರಿಗೆ ಉಚಿತವಾಗಿ ಸಸ್ಯಗಳನ್ನು ವಿತರಿಸಲಾಗುತ್ತದೆಯಾದರೂ ಅವರಿಗೆ ಪ್ರೋತ್ಸಾಹ ಧನ ಸಿಗುವುದಿಲ್ಲ, ಪ್ರತಿ ವರ್ಷವೂ ಸುಮಾರು ಹತ್ತು ಸಾವಿರ ಸಸ್ಯಗಳನ್ನು ಸಾಮಾಜಿಕವಾಗಿ ನೆಡುವವರಿಗೆ ಹಾಗೂ ರೈತರಿಗೆ ಒಂದು ಕಾಲು ಲಕ್ಷ ಗಿಡಗಳನ್ನು ವಿತರಿಸಲಾಗುತ್ತದೆ.


ಕೊಟ್ಟಿದ್ದೆಷ್ಟು ? ಬೆಳೆಸಿದ್ದೆಷ್ಟು ? ಉಳಿದದ್ದೆಷ್ಟು ?


ನರೇಗಾ ಯೋಜನೆ ಬರುವ ಮೊದಲು ಮತ್ತು ಈಗ ಸೇರಿದಂತೆ ಪ್ರತಿವರ್ಷವೂ ಒಂದು ಲಕ್ಷದ ಮೂವತ್ತೈದು ಸಾವಿರ ಗಿಡಗಳನ್ನು ವಿರಿಸಲಾಗುತ್ತದೆ ಎಂದು ಅಧಿಕಾರಿ ಪುಟ್ಟಮ್ಮ ಹೇಳುತ್ತಾರಾದರೂ ಕೇವಲ ಹತ್ತೆನ್ನೆರೆಡು ವರ್ಷಗಳ ಅವಧಿಯಲ್ಲಿ ತಾಲ್ಲೂಕಿನಾದ್ಯಂತ ಒಂದೂವರೆ ಕೋಟಿ ಗಿಡಗಳು ಇಂದು ಮರಗಳಾಗಬೇಕಿತ್ತು, ಐವತ್ತು ಲಕ್ಷ ಗಿಡಗಳು ಅನೇಕ ಕಾರಣಗಳಿಂದ ಹಾಳಾಗಿವೆ ಎಂದುಕೊಂಡರೂ ಒಂದು ಕೋಟಿ ಮರಗಳು ತಾಲ್ಲೂಕಿನಲ್ಲಿ ಇವೆಯೇ ?


ಸಸಿ ಮತ್ತು ಹಣ ಕೊಡುವುದಷ್ಟೇ ಇಲಾಖೆಯ ಕೆಲಸವೇ?


ಗಿಡಗಳನ್ನು ಬೆಳೆಸಲು ಒಂದು ಇಲಾಖೆಯೇ ಇದ್ದು ಅದನ್ನು ನೆಡಲು ಹಣದ ನೆರವು ನೀಡಿಯೂ ಸಹ ಅಷ್ಟೊಂದು ಮರಗಳು ಏನಾದವು, ಹತ್ತು ವರ್ಷಗಳಲ್ಲಿ ಎಲ್ಲಾ ಗಿಡಗಳು ಹೆಮ್ಮರವಾಗಿ ಬೆಳೆದು ಒಟ್ಟಿಗೆ ಕಡಿದು ಬಿಟ್ಟರೆ ? ರೈತರಿಗೆ ಅಥವಾ ಮತ್ತಿತರರಿಗೆ ಗಿಡ ಕೊಟ್ಟ ನಂತರ ಅದರ ಉಸಾಬರಿ ಇಲಾಖೆಗಿಲ್ಲವೇ ? ಇದ್ದರೆ ಆ ಗಿಡಗಳೆಲ್ಲವೂ ಏನಾದವು ಎಂಬ ಪ್ರಶ್ನೆಯೂ ಇಲಾಖೆಯ ಅಧಿಕಾರಿಗಳ ಮುಂದೆ ಪ್ರಶ್ನೆಗಳಾಗಿಯೇ ಉಳಿದುಹೋದವು.


ವಾಹನ ಇಲ್ಲ ಎನ್ನುವುದು ಬಿಟ್ಟರೆ ಸಿಬ್ಬಂದಿ ಕೊರತೆ ಇಲ್ಲಾ


ಇಲಾಖೆಯಲ್ಲಿ ಬಹುತೇಕ ಎಲ್ಲಾ ಸಿಬ್ಬಂದಿಗಳು ಇದ್ದು ಸಿಬ್ಬಂದಿಗಳ ಕೊರತೆ ಇಲ್ಲಾ ಆದಾಗ್ಯೂ ಕೃಷಿ ಭೂಮಿಯಲ್ಲಿ ಶೇಕಡಾವಾರು ಒಣ ಪ್ರದೇಶವೇ ಕಂಡುಬರುತ್ತದೆ, ಇಲಾಖೆಯಲ್ಲಿ ಸರ್ಕಾರದ ಒಂದು ವಾಹನವೂ ಇಲ್ಲದಿರುವುದು ರೈತರು ಗಿಡಗಳನ್ನು ಬೆಳೆಸುತ್ತಿದ್ದಾರೋ ಇಲ್ಲವೋ ಎಂಬುದನ್ನು ತಿಳಿಯಲಾಗುತ್ತಿಲ್ಲ ಎಂಬುದು ಅಧಿಕಾರಿಗಳ ಅಳಲು.


ಮುಂದಾದರೂ ಎಚ್ಚೆತ್ತುಕೊಳ್ಳಲಿ


ಕಳದೆರಡು ವರ್ಷಗಳ ಹಿಂದೆ ಜಿಲ್ಲಾಡಳಿತವೂ ಸಹ ಕೋಟಿ ಗಿಡ ನೆಟ್ಟಿದ್ದೇವೆ ಎಂದು ಘೋಷಿಸಿಕೊಂಡರೇ ವಿನಹ ಆ ಗಿಡಗಳು ಇದ್ದಾವೆಯೇ ಎಂಬುದು ಯಾರಿಗೂ ಗೊತ್ತಿಲ್ಲ, ಸಾಮಾಜಿಕ ಅರಣ್ಯ ಇಲಾಖೆಯವರು ಇನ್ನು ಮುಂದಾದರು ಸಸ್ಯ ಮತ್ತು ಹಣ ಕೊಟ್ಟು ಕೈತೊಳೆದುಕೊಳ್ಳದೆ ಅವುಗಳನ್ನು ಬೆಳೆಸಿಸಲು ಕ್ರಮ ಕೈಗೊಂಡು ಬೇರೆ ತಾಲ್ಲೂಕಿನ ಅಧಿಕಾರಿಗಳಿಗೆ ಮಾದರಿಯಾಗಲಿ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ

ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

ರಾಮನಗರ, ಫೆ. 02  :  ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು

ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ

ಸಂವಿಧಾನ ಜಾಗೃತಿ ಜಾಥಾ

ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ

ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ

ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,

ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ರಾಮನಗರ:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ  ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ

೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ  ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ

ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್

ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ

Top Stories »  


Top ↑