ಅಪಾರ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ ಮಿಸೆಸ್ ಇಂಡಿಯಾ ಕರ್ನಾಟಕ 2018ರ ಆಡಿಷನ್
ಬೆಂಗಳೂರು : ಮಿಸೆಸ್ ಇಂಡಿಯಾ-ಕರ್ನಾಟಕ 2018 ರ ಆಡಿಷನ್ ಚಾನ್ಸೆರಿ ಪೆವಿಲಿಯನ್ನಲ್ಲಿ ಶನಿವಾರ ಅದ್ಧೂರಿಯಾಗಿ ಪ್ರಾರಂಭವಾಯಿತು. ರಾಜ್ಯದ ಮೂಲೆ ಮೂಲೆಯಿಂದ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದು ಅವರ ಸಾಮಥ್ರ್ಯ, ಪ್ರತಿಭೆ ಹಾಗೂ ಸೌಂದರ್ಯದ ಮೂಲಕ ತೀವ್ರ ಸ್ಪರ್ಧೆ ಒಡ್ಡಿದರು. ಭಾಗವಹಿಸಿದ ಎಲ್ಲರಿಗೂ ಸಂಘಟಕರು ಆತ್ಮೀಯ ಸ್ವಾಗತ ನೀಡಿ ಸ್ಪರ್ಧೆಯ ನೀತಿ ನಿಯಮಗಳನ್ನು ವಿವರಿಸಿದರು. ಆಡಿಷನ್ ಪ್ರಾರಂಭವಾದ ನಂತರ ಸ್ಪರ್ಧಿಗಳಿಗೆ ಕ್ಯಾಟ್ ವಾಕ್ ನಡೆಸಿ ತಮ್ಮ ಪರಿಚಯ ಹೇಳಿಕೊಳ್ಳಲು ಸೂಚಿಸಲಾಯಿತು ಮತ್ತು ನಂತರ ತೀರ್ಪುಗಾರರ ತಂಡಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. 22-40, 41-60 ಮತ್ತು 60 ವರ್ಷ ದಾಟಿದ ವಯೋಮಾನದ ವಿಭಾಗಗಳಲ್ಲಿ ಮಹಿಳೆಯರು ಭಾಗವಹಿಸಿದ್ದರು. ಕೆಲವರು ತಮ್ಮ ಪದವಿ ಪೂರ್ಣಗೊಳಿಸಿದ್ದರೆ ಕೆಲವರು ಗೃಹಿಣಿಯರು ಮತ್ತು ಉದ್ಯಮಿಗಳಿದ್ದರು.
ಈ ಸಂದರ್ಭ ಕುರಿತು ಮಿಸೆಸ್ ಇಂಡಿಯಾ ಕರ್ನಾಟಕದ ಸಂಘಟಕಿ ಶ್ರೀಮತಿ ಪ್ರತಿಭಾ ಸೌಂಶಿಮಠ್(ಮಿಸೆಸ್ ಏಷ್ಯಾ ಇಂಟರ್ನ್ಯಾಷನಲ್ ಮತ್ತು ಮಿಸೆಸ್ ಇಂಡಿಯಾ 2015; ಮಿಸೆಸ್ ಇಂಡಿಯಾ-ಕರ್ನಾಟಕ ನಿರ್ದೇಶಕಿ ಮತ್ತು ಮಿಸೆಸ್ ಇಂಡಿಯಾ ಪ್ರಾದೇಶಿಕ ನಿರ್ದೇಶಕಿ), ಮಿಸೆಸ್ ಇಂಡಿಯಾ-ಕರ್ನಾಟಕ ವೈವಿಧ್ಯತೆಯಲ್ಲಿ ಸೌಂದರ್ಯವನ್ನು ಸಂಭ್ರಮಿಸುವ ಏಕೈಕ ಸೌಂದರ್ಯ ಸ್ಪರ್ಧೆಯಾಗಿದೆ ಎಂದರು.
`ಪ್ರತಿ ಸ್ತ್ರೀಯೂ ಸುಂದರವಾಗಿರುತ್ತಾಳೆ ಮತ್ತು ಅವರ ಎತ್ತರ, ತೂಕ, ವಯಸ್ಸು ಅಥವಾ ಬಣ್ಣವನ್ನು ಮೀರಿಯೂ ಸೌಂದರ್ಯವನ್ನು ಭಾವಿಸಬೇಕು. ನಮ್ಮ ಸೌಂದರ್ಯಸ್ಪರ್ಧೆ ಕರ್ನಾಟಕದ ಪ್ರತಿಭಾವಂತ ಮತ್ತು ಸುಂದರ ಸ್ತ್ರೀಯರನ್ನು ಮುಂಚೂಣಿಗೆ ತರುತ್ತದೆ' ಎಂದು ಶ್ರೀಮತಿ ಸೌಂಶಿಮಠ್ ಹೇಳಿದರು. ಅವರು ಅಂತಾರಾಷ್ಟ್ರೀಯ ಶೀರ್ಷಿಕೆ ಗೆದ್ದ ಮೊದಲ ಕನ್ನಡಿಗ ಮಹಿಳೆಯಾಗಿದ್ದಾರೆ. ಅವರು ವಿವಿಧ ಹಿನ್ನೆಲೆಯ ಹೆಚ್ಚು ಮಹಿಳೆಯರನ್ನು ಮುಂಚೂಣಿಗೆ ತರಲು ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ಹೇಳಿದರು. ಈ ಸೌಂದರ್ಯಸ್ಪರ್ಧೆಯ ಆಯೋಜಕರು ಮಹಿಳೆಯರಲ್ಲಿ ವಿಶ್ವಾಸ ಮೂಡಿಸುವ ಮೂಲಕ ಅವರ ಜೀವನ ಬದಲಾಯಿಸಲು ಮತ್ತು ಅವರ ಸಾಮಥ್ರ್ಯ ಸಾಬೀತುಪಡಿಸಿಕೊಳ್ಳಲು ನೆರವಾಗುತ್ತದೆ.
ಈ ಸಲ ಮಿಸೆಸ್ ಇಂಡಿಯಾ-ಕರ್ನಾಟಕ ಕೆಲ ಉಪಕ್ರಮಗಳನ್ನು ಯೋಜಿಸಿದೆ; ಕರ್ನಾಟಕದ ವಿವಿಧ ಕ್ಷೇತ್ರದ ಮಹಿಳಾ ಸಾಧಕರನ್ನು ಸನ್ಮಾನಿಸುವುದು; ಇವರಲ್ಲಿ ಕೆಲವರು ಈಗಾಗಲೇ ಪ್ರಖ್ಯಾತರಾಗಿರಬಹುದು, ಕೆಲವರು ಅಜ್ಞಾತರಾಗಿರಬಹುದು. `ಕರ್ನಾಟಕದಲ್ಲಿ ನಾನು ಈ ಉಪಕ್ರಮವನ್ನು ಮಿಸೆಸ್ ಏಷ್ಯಾ ಶೀರ್ಷಿಕೆ ಗೆದ್ದ ನಂತರ ಮಹಿಳೆಯರು ಬೆಳವಣಿಗೆ ಕಾಣಲು ನೆರವಾಗುವ ಉದ್ದೇಶದಿಂದ ಪ್ರಾರಂಭಿಸಿದೆ. ಈ ಮಹಿಳೆಯರು ಇತರರಿಗೆ ಸ್ಫೂರ್ತಿಯಾಗಬೇಕು ಮತ್ತು ಅವರ ಕಠಿಣ ಪರಿಶ್ರಮ ಗಮನಿಸಲ್ಪಡಬೇಕು ಮತ್ತು ಮಾನ್ಯತೆ ಪಡೆಯಬೇಕು' ಎಂದು ಶ್ರೀಮತಿ ಪ್ರತಿಭಾ ಹೇಳಿದರು.
ಮಿಸೆಸ್ ಇಂಡಿಯಾ-ಕರ್ನಾಟಕ ವಿವಾಹಿತ ಮಹಿಳೆಯರಿಗೆ ತಮ್ಮ ಸೌಂದರ್ಯ, ಪ್ರತಿಭೆ, ಗ್ಲಾಮರ್ ಮತ್ತು ಸಂಸ್ಕøತಿಯನ್ನು ಪ್ರದರ್ಶಿಸಲು ದೇಶದ ಅತ್ಯಂತ ದೊಡ್ಡ ವೇದಿಕೆಯಾಗಿದೆ. ಮಿಸೆಸ್ ಇಂಡಿಯಾ ಮಾಡೆಲ್ಗಳನ್ನು ಎದುರು ನೋಡುತ್ತಿಲ್ಲ. ಬದಲಾಗಿ ಇದು ರೋಲ್ ಮಾಡೆಲ್ಗಳನ್ನು ಸೃಷ್ಟಿಸಲು ಸ್ಫೂರ್ತಿದಾಯಕ ಕಾರ್ಯಕ್ರಮವಾಗಿದೆ. ರಾಜ್ಯಮಟ್ಟದ ಗ್ರಾಂಡ್ ಫೈನಲ್ ಫೆಬ್ರವರಿ 22-24ರಂದು ಯಲಹಂಕದ ರಾಯಲ್ ಆರ್ಕಿಡ್ ರೆಸಾರ್ಟ್ ಅಂಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ. ಫೈನಲ್ ಫೆಬ್ರವರಿ 24ರಂದು ನಡೆಯಲಿದೆ. ಒಮ್ಮೆ ಆಯ್ಕೆಯಾದ ನಂತರ ಮಿಸೆಸ್ ಇಂಡಿಯಾದಲ್ಲಿ ಭಾಗವಹಿಸುತ್ತಾರೆ ಮತ್ತು ನಂತರ ಮಿಸೆಸ್ ಏಷ್ಯಾ, ಮಿಸೆಸ್ ವಲ್ರ್ಡ್ ಮತ್ತು ಮಿಸೆಸ್ ಪ್ಲಾನೆಟ್ನಲ್ಲಿ ಭಾಗವಹಿಸುವ ಅವಕಾಶ ಲಭಿಸುತ್ತದೆ.
ಅಂತಿಮವಾಗಿ 132 ಮಂದಿಯಲ್ಲಿ 32 ಮಹಿಳೆಯರು ರಾಜ್ಯಮಟ್ಟದ ಫೈನಲ್ಸ್ನಲ್ಲಿ ಭಾಗವಹಿಸಲು ಆಯ್ಕೆಯಾದರು.
Recent news in karnataka »
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ರಾಮನಗರ, ಫೆ. 02 : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ
ಸಂವಿಧಾನ ಜಾಗೃತಿ ಜಾಥಾ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ
ಪ್ರತಿಕ್ರಿಯೆಗಳು