ತಾಳೆಯೋಲೆ ೩೫: ಗೃಹ ಪ್ರವೇಶದ ಸಮಯದಲ್ಲಿ ಮಾವಿನ ತೋರಣ ಕಟ್ಟುವರೇಕೆ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಗೃಹ ಪ್ರವೇಶದ ಸಮಯದಲ್ಲಿ ಮಾವಿನ ತೋರಣ ಕಟ್ಟುವರೇಕೆ ?
ನೂತನ ಮನೆ ಪ್ರವೇಶಿಸುವುದಕ್ಕೆ ಮೊದಲು ಮಾವಿನ ತೋರಣವನ್ನು ಕಟ್ಟುತ್ತಾರೆ, ಹಾಗೆಯೇ ಹಬ್ಬಗಳ ಸಮಯದಲ್ಲೂ ಸಹ ಮಾವಿನ ತೋರಣಗಳನ್ನು ಕಟ್ಟುತ್ತಾರೆ. ಮಾವಿನ ತೋರಣಗಳ ಉಪಯೋಗ ತಿಳಿಯದೆಯೇ ಜನರು ಮಾವಿನ ಎಲೆಗಳನ್ನು ಹತ್ತಿರತ್ತಿರ ಜೋಡಿಸಿ ಹೊಲಿದು ತಮ್ಮ ಮನೆಯ ಬಾಗಿಲಿಗೆ ಕಟ್ಟುತ್ತಾರೆ.
ಅದೇ ರೀತಿ ಗೃಹ ಪ್ರವೇಶದ ಸಮಯದಲ್ಲಿ *ಅಡುಗೆ ಮನೆಯಲ್ಲಿ ಒಂದು ಹೊಸ ಪಾತ್ರೆಯನ್ನಿಟ್ಟು ಹಾಲನ್ನು ಉಕ್ಕಿಸುವುದನ್ನು* ನಾವು ನೋಡುತ್ತಿರುತ್ತೇವೆ.
ಈ ದೃಶ್ಯ ನೋಡಲು ಬಹಳ ಮನೋಹರವಾಗಿರುತ್ತದೆ. ಹಾಲು ಉಕ್ಕಿ ನೆಲದ ಮೇಲೆ ಹರಿಯುವುದು ಗೃಹ ಪ್ರವೇಶದ ಸಮಯದಲ್ಲಿ ಶುಭಸೂಚಕವೆಂದು ಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ.
ಗೃಹ ಪ್ರವೇಶ ಆಗಿರುವ ಮನೆಯಲ್ಲಿ ಮಾವಿನ ತೋರಣಗಳು ಶೋಭೆಯಿಂದ ಅತಿಥಿಗಳಿಗೆ ಸ್ವಾಗತವನ್ನು ಹೇಳುತ್ತಿರುವಂತೆ ತೋರುತ್ತವೆ. ಈ ಆಚಾರದ ಹಿಂದೆ ಶಾಸ್ತ್ರೀಯ ಅಂಶವೊಂದು ಅಡಗಿದೆ. ನಮ್ಮ ಪೂರ್ವಿಕರು ಈ ವಿಷಯವನ್ನು ಗ್ರಹಿಸಿರುವರು. ಆದ್ದರಿಂದ ಅನೇಕ ಶುಭ ಕಾರ್ಯಗಳಲ್ಲಿ ಮಾವಿನ ಎಲೆಗಳನ್ನು ಉಪಯೋಗಿಸುವರು.
ಗೃಹ ಪ್ರವೇಶದ ಸಮಯದಲ್ಲಿ ಅನೇಕ ಬಂಧು ಮಿತ್ರರು ಮನೆಯೊಳಗೆ ಇರುತ್ತಾರೆ. *ಈ ಕಾರಣದಿಂದ ಸಹಜವಾಗಿ ಮನೆಯಲ್ಲಿನ ಗಾಳಿ ಕಲುಷಿತವಾಗುತ್ತದೆ.* *ಮಾವಿನ ಎಲೆಗಳಿಗೆ ಗಾಳಿಯನ್ನು ಶುದ್ದಿ ಮಾಡುವ ಗುಣವಿರುವ ಕಾರಣದಿಂದ ತೋರಣಗಳನ್ನು ಬಾಗಿಲಿಗೆ ದಟ್ಟವಾಗಿ ಕಟ್ಟುತ್ತಾರೆ.*
ಮಾವಿನ ಎಲೆಗಳಿಗೆ ಹಲ್ಲಿನಲ್ಲಿರುವ ಸೂಕ್ಷ್ಮ ಕ್ರಿಮಿಗಳನ್ನು ನಾಶ ಮಾಡುವ ಸಾಮಥ್ರ್ಯ ಇರುವ ಕಾರಣ ನಮ್ಮ ಪೂರ್ವಿಕರು ಹಲ್ಲುಗಳನ್ನು ಉಜ್ಜಲು ಮಾವಿನ ಎಲೆಗಳನ್ನು ಉಪಯೋಗಿಸುತ್ತಿದ್ದರು.
ಬಾವಿಯಲ್ಲಿ ಇಳಿದು ಸ್ವಚ್ಛ ಮಾಡುವವರಿಗೆ ಮೊದಲು ಹೆಚ್ಚಿನ ಮಾವಿನ ಎಲೆಗಳನ್ನು ಹೊಂದಿರುವ ಒಂದು ರೆಂಬೆಯನ್ನು ಕೊಟ್ಟು ಬಾವಿಯ ಸುತ್ತಲೂ ಸ್ವಲ್ಪ ಸಮಯ ಸುತ್ತು ಎಂದು ಹೇಳುತ್ತಿದ್ದರು.
*ಈ ರೀತಿ ಮಾಡುವುದರಿಂದ ಬಾವಿಯಲ್ಲಿರುವ ವಿಷ ವಾಯುವು ಹೊರಗೆ ಹೋಗುತ್ತದೆ.* ಈ ರೀತಿ ಮಾಡುವವರು ನಮ್ಮ ದೇಶದ ಗ್ರಾಮೀಣ ಪ್ರಾಂತ್ಯಗಳಲ್ಲಿ ಇಂದಿಗೂ ಇರುವರು. ಹಾಗಾಗಿ ಹಿರಿಯರ ಮಾತು ಅರ್ಥಪೂರ್ಣವಾಗಿದೆ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು