ತಾಳೆಯೋಲೆ ೧೯೨: ನಾವು ತಿನ್ನುವ ಆಹಾರವನ್ನು ಇತರರೊಂದಿಗೆ ಏಕೆ ಹಂಚಿಕೊಳ್ಳಬೇಕು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ನಾವು ತಿನ್ನುವ ಆಹಾರವನ್ನು ಇತರರೊಂದಿಗೆ ಏಕೆ ಹಂಚಿಕೊಳ್ಳಬೇಕು ?
ನಮ್ಮ ಹೊಟ್ಟೆಯನ್ನು ನಾವೇ ತುಂಬಿಕೊಳ್ಳುವುದು ಇಂದಿನ ಕಲಿಯುಗದ ಧರ್ಮ. ವಾಸ್ತವವಾಗಿ ' ಕಲಿ ' ಕಾಲದ ಪ್ರಭಾವವೇ ಅಲ್ಲದೆ, ನಮ್ಮ ಅಲ್ಪ ಗುಣ ಪ್ರಭಾವ ಇದರಲ್ಲಿ ವ್ಯಕ್ತವಾಗುತ್ತದೆ. *ಅತಿಥಿಗೋ ಇಲ್ಲವೇ ಹಸಿವಿನಿಂದ ಇರುವ ಇತರರಿಗೋ ಆಹಾರ ನೀಡದೆ, ನಾವು ತಿನ್ನುವುದು ಖಂಡಿತವಾಗಿಯೂ ನಮ್ಮ ಭಾರತೀಯ ಧರ್ಮ ಅಲ್ಲ.* ಆದ್ದರಿಂದ ನಾವು ತಿನ್ನುವ ಆಹಾರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಅತಿ ಅವಶ್ಯಕ.
ಬದುಕುವುದಕ್ಕೆ ಆಹಾರ ಬೇಕು. ಜೀವವನ್ನು ಕಾಪಾಡುವ ಆಹಾರ ಇತರರಿಗೆ ಕೊಡುವುದು ಒಂದು ವಿಧವಾಗಿ ಇತರರಿಗೆ ಪ್ರಾಣ ಭಿಕ್ಷೆ ನೀಡಿದ ಹಾಗಾಗುತ್ತದೆ. ಅನ್ನದಾನದ ಹಿರಿತನವನ್ನು ಪ್ರತಿಯೊಬ್ಬರೂ ಆಮೋಧಿಸಿರುವರು. ನಮ್ಮ ದೇಹವನ್ನು ನಾವು ಪೋಷಿಸಿಕೊಳ್ಳುವುದೇ ಅಲ್ಲದೆ ನಮ್ಮ ಸಮಾನರಿಗೆ ಹೊಟ್ಟೆ ತುಂಬಿಸುವುದು ಎಷ್ಟೋ ಸತ್ಕರ್ಮ. *ಮನುಷ್ಯರಿಗೆ ಅಲ್ಲದೆ ಪ್ರಾಣಿಗಳಿಗೆ, ಪಕ್ಷಿಗಳಿಗೆ, ಇರುವೆಗಳಿಗೆ ಮುಂತಾದುವಕ್ಕೂ ಸಹ ನಮ್ಮ ಕಷ್ಟಾರ್ಜಿತವನ್ನು ಸ್ವಲ್ಪ ಧರ್ಮವನ್ನು ಮಾಡುವುದೇ ಭಾರತೀಯ ಧರ್ಮ* ಎನ್ನುವುದನ್ನು ಮರೆಯಬಾರದು.
*ಹಸಿವಿನಿಂದ ಕಂಗಾಲಾಗಿ ನಿನ್ನ ಮುಂದೆ ನಿಂತಿರುವವರನ್ನು ತಿರಸ್ಕರಿಸದೇ ಆಹಾರ ನೀಡುವುದಾದರೆ ನಿನಗೆ ಪುಣ್ಯ ಉಂಟಾಗಿ ಇಹಲೋಕದಲ್ಲೇ ಅಲ್ಲದೆ ಪರಲೋಕದಲ್ಲಿಯೂ ಸಹ ಒಳ್ಳೆಯದಾಗುತ್ತದೆ. ಅದಕ್ಕೆ ನಾವು ನಮ್ಮ ಅಕ್ಕ ಪಕ್ಕದವರನ್ನು ಮಾತನಾಡಿಸುವಾಗ “ ಊಟವಾಯಿತೇ ಎಂದು ಕೇಳುತ್ತೇವೆ. ಇದರ ಅರ್ಥವೇನೆಂದರೆ ನಿನಗೆ ತಿನ್ನುವುದಕ್ಕೆ ಇಲ್ಲದಿದ್ದರೆ ನಾನು ಆಹಾರ ನೀಡುತ್ತೇನೆ ಎಂದು.*
ಇನ್ನು ಅತಿಥಿಯನ್ನು ನಾವು ದೇವರಿಗೆ ಸಮಾನವಾಗಿ ಭಾವಿಸುವೆವು. ಅತಿಥಿಗೆ ಆತಿಥ್ಯ ನೀಡದ ಭಾರತೀಯನಂತಹ ನೀಚನು ಬೇರೊಬ್ಬನಿರುವುದಿಲ್ಲ. ಹಾಗೆಯೇ ಗಿಡಬಳ್ಳಿಗಳಿಗೆ ನೀರುಣಿಸುವುದು ಮನೆಯ ಮುಂದೆ ಓಡಾಡುವ ನಾಯಿಗೆ ಹಾಗೂ ಬೆಕ್ಕಿಗೆ ಆಹಾರ ನೀಡುವುದು ಒಂದು ಯಜ್ಞೆದಂತಹುದೆ. ಹಸಿವಿನಿಂದ ಇರುವವನ ಹೊಟ್ಟೆ ತುಂಬಿಸಿದ ಪುಣ್ಯಾತ ನಿಜವಾಗಿಯೂ ದೇವರಿಗೆ ಭಕ್ತನೆ !
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು