ತಾಳೆಯೋಲೆ ೨೬೮: ಗೃಹಸ್ಥನು ಸನ್ಹಾಸಿಗಳಿಗಿಂತ ಹೇಗೆ ಉನ್ನತನಾಗಿ ಇರಬಹುದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಗೃಹಸ್ಥನು ಸನ್ಹಾಸಿಗಳಿಗಿಂತ ಹೇಗೆ ಉನ್ನತನಾಗಿ ಇರಬಹುದು ?
ಒಬ್ಬ ಸನ್ಯಾಸಿ ಸಂಪೂರ್ಣನು ಎಂದು ಭಾವಿಸುವುದು ಸರಿಯಾದುದಲ್ಲ. *ವಾಸ್ತವವಾಗಿ ಒಬ್ಬ ನಿಜವಾದ ಸನ್ಯಾಸದ ಜೀವನವನ್ನು ನಡೆಸುವವನು ಸಾವಿರ ಜನಗಳಲ್ಲಿ ಒಬ್ಬರಿರುವರೆಂದರೆ ಆಶ್ಚರ್ಯ ಪಡಬೇಕಾದುದೇನಿಲ್ಲ. ಸರ್ವ ಸಂಘ ಪರಿತ್ಯಾಗಿಯಾಗಿ, ನಿತ್ಯ ಸಂತುಷ್ಟನಾಗಿ, ಸರ್ವ ವಿಧ ಕಾಮ ಗಳನ್ನು ತ್ಯಜಿಸಿದವನಾಗಿ, ಆತ್ಮದಲ್ಲಿಯೇ ತಮ್ಮ ಮನಸ್ಸನ್ನು ಲಗ್ನ ಮಾಡಿ ಜೀವಿಸುವವನೇ ನಿಜವಾದ ಸನ್ಯಾಸಿ.* ಅಂತಹ ಸನ್ಯಾಸಿ ನಿಜವಾಗಿಯೂ ಸಂಪೂರ್ಣನೆ.
ಆದರೆ *ಜಪ ಧ್ಯಾನಾದಿಗಳೊಂದಿಗೆ ಕಾಲಯಾಪನೆ ಮಾಡುವ ಸತ್ಯ ಹೃದಯವಿಲ್ಲದ ಸನ್ಯಾಸಿಗಿಂತ ಆದರ್ಶನಾಗಿರುವ ಗೃಹಸ್ಥನು ಎಷ್ಟೋ ಉನ್ನತನು.* ಅಂತಹ ಗೃಹಸ್ಥನು ತನ್ನ ಕುಟುಂಬಕ್ಕೆ, ಒಂದು ಕಡೆ ಸಮಾಜಕ್ಕೂ ಸೇವೆ ಮಾಡಿದವನಾಗಿದ್ದು, ದಾನ ಧರ್ಮಗಳನ್ನು ಮಾಡುತ್ತಾ ತನ್ನ ಅಸ್ತಿತ್ವಕ್ಕೆ ಒಂದು ಮೌಲ್ಯವನ್ನು ಹೊಂದಿದವನಾಗಿರುವನು. ನಿಜವಾದ ಸನ್ಯಾಸಿಯೂ ಸಹ ತನ್ನ ದೈವ ಬಲದಿಂದ ಲೋಕ ಕಲ್ಯಾಣವನ್ನು ಮಾಡಬಲ್ಲನು.
ಆದರ್ಶವಂತನಾದ ಗೃಹಸ್ಥನನ್ನು ದೇವರು ಬಹಳಷ್ಟು ಅಭಿಮಾನಿಸುವನು. ತನ್ನ ಸ್ವಾರ್ಥವನ್ನೇ ಲಕ್ಷ್ಯವಾಗಿಟ್ಟುಕೊಳ್ಳದೆ ತನ್ನೊಂದಿಗೆ ಹತ್ತು ಮಂದಿಯ ಒಳ್ಳೆಯದಕ್ಕಾಗಿ ನಿಜವಾಗಿಯೂ ಕೆಲಸ ಮಾಡುವವನ ಮೇಲೆ ದೇವರ ಕೃಪೆ ಸದಾ ಇರುತ್ತದೆ. ಹೀಗೆ ಹತ್ತು ಮಂದಿಗೆ ಸೇವೆಗಳನ್ನು ನೀಡಬಲ್ಲ. ಹಾಗೆಯೇ ಪೋಷಿಸಬಲ್ಲ ಗೃಹಸ್ಥನೇ ಧನ್ಯನು.
ಇಂತಹ ಗೃಹಸ್ಥನು ಕಪಟ ಸನ್ಯಾಸಿಗಿಂತ ಬಹಳಷ್ಟು ಪಾಲು ಉತ್ತಮನು. *ಕೇವಲ ತನ್ನ ಮೋಕ್ಷಕ್ಕಾಗಿಯೇ ಪೂರ್ತಿ ಜೀವನವನ್ನು ನಡೆಸುವ ಸನ್ಯಾಸಿಗಿಂತ ಸಂಘ ಕ್ಷೇಮಕ್ಕೆ ಕೆಲಸ ಮಾಡುವ ಗೃಹಸ್ಥನೇ ಉನ್ನತನು.*
ಸಕ್ರಮವಾದ ಜೀವನ ವಿಧಾನವನ್ನು ಹೊಂದಿ ಭಕ್ತಿ ಶ್ರದ್ಧೆಗಳಿಂದ ತನ್ನ ಬಾಧ್ಯತೆಗಳನ್ನು ನಿರ್ವಹಿಸುವ ಗೃಹಸ್ಥನೂ ಸಹ ಉನ್ನತ ಲೋಕಗಳಿಗೆ ಸೇರುವ ಅರ್ಹತೆಯನ್ನು ಹೊಂದಿರುತ್ತಾನೆ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು