ತಾಳೆಯೋಲೆ ೨೯೮: ಭಕ್ತಿಯ ವಿವಿಧ ಸಾಧನಾಂಶಗಳಾವುವು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಭಕ್ತಿಯ ವಿವಿಧ ಸಾಧನಾಂಶಗಳಾವುವು ?
ಭಕ್ತಿ ಪ್ರತಿ ಮಾನವನಿಗೂ ಬಹಳಷ್ಟು ಅವಶ್ಯಕವಾಗಿರುವುದು. ಭಗವಂತನ ಬಗ್ಗೆ ಇರುವ ಪ್ರೇಮವನ್ನೇ ಭಕ್ತಿ ಎಂದು ಕರೆಯುವರು. ಇಂತಹ ಭಕ್ತಿಯಿಂದ ಅಲ್ಪಮನಸ್ಕನಾದ ಮಾನವನು ದಿವ್ಯ ಮನಸ್ಕನಾಗಿ ತಿದ್ದಲ್ಪಡುವನು. ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ಸರಿಪಡಿಸುವುದೇ ಭಕ್ತಿಯ ಮುಖ್ಯ ಲಕ್ಷಣವಾಗಿರುವುದು.
ನಿರಂತರ ಭಕ್ತಿ ಸಾಧನೆಯಿಂದ ಪೂರ್ಣ ವ್ಯಕ್ತಿತ್ವವನ್ನು ಹೊಂದಿದ ಭಕ್ತನು ಪೂರ್ಣವಾದ ಪರಮಾತ್ಮನಲ್ಲಿ ಐಕ್ಯವಾಗುವುದಕ್ಕೆ ಅರ್ಹನಾಗುವನು. ಭೌತಿಕ ಲಾಭಗಳಿಗಾಗಿಯೇ ಅಲ್ಲದೆ, ಪ್ರೇಮ ಸಾಧನವಾಗಿ ಭಕ್ತಿಯನ್ನು ಗ್ರಹಿಸಬೇಕು. ಭಕ್ತಿಯ ಮುಖಾಂತರ ಇಹ ಹಾಗೂ ಪರ ವಾದ ಪ್ರಯೋಜನೆಯು ಭಕ್ತನಿಗೆ ಉಂಟಾಗುತ್ತದೆ.
ಭಕ್ತಿಯಲ್ಲಿ ನವ ವಿಧಗಳೆಂದು ಹೇಳಲಾಗಿದೆ. ಹಾಗೆಯೇ ಭಗವಂತನನ್ನು ಒಂಭತ್ತು ರೀತಿಯ ಸಾಧನೆಗಳ ಮುಖಾಂತರ ಸೇವಿಸಹುದು.
೧) *ಶ್ರವಣ* (ದೈವ ಸಂಬಂಧವಾದ ವಿಷಯಗಳನ್ನು ಕೇಳುವುದು).
೨) *ಕೀರ್ತನೆ (ದೇವರಿಗಾಗಿ ಹಾಡುವುದು).
೩) ಸ್ಮರಣೆ* (ಸದಾ ಭಗವಂತನನ್ನು ನೆನೆಸುತ್ತಿರುವುದು).
೪) *ಪಾದ ಸೇವೆ* (ಸೇವೆ ಮಾಡುವುದು).
೫) *ಅರ್ಚನೆ* (ಪೂಜಿಸುವುದು).
೬) *ವಂದನೆ (ಭಗವಂತನನ್ನು ಸ್ಮರಿಸುತ್ತಾ ಅನೇಕ ಬಾರಿ ನಮಸ್ಕರಿಸುವುದು.
೭) *ದಾಸ್ಯ* (ದೇವರ ಮುಂದು ತಾನು ಬಹಳ ಅಲ್ಪನೆಂದು ಭಾವಿಸುತ್ತಾ, ಆತನ ಸೇವಕನ ಹಾಗೆ ಇರುವುದು).
೮) *ಜನಸೇವೆ* ( ಬಡವರಿಗೆ ಮತ್ತು ಅಶಕ್ತರಿಗೆ ಕೈಲಾದಷ್ಟು ದೇವರ ಹೆಸರಿನಲ್ಲಿ ಸೇವೆ ಮಾಡುವುದು).
೯) *ಆತ್ಮ ನಿವೇದನೆ* (ಧ್ಯಾನದಲ್ಲಿ ಮುಳುಗಿ ತನ್ನನ್ನು ತಾನು ಭಗವಂತನಮಯ ಮಾಡಿಕೊಳ್ಳುವುದು).
ಈ ಒಂಭತ್ತು ಸಾಧನೆಗಳಲ್ಲಿ ಮೊದಲ ಸ್ಥಾನದಲ್ಲಿ ಶ್ರವಣ, ಕೀರ್ತನೆ, ಸ್ಮರಣೆ, ಪಾದಸೇವೆ, ಹಾಗೂ ಅರ್ಚನೆ, ಎರಡನೇ ಸ್ಥಾನದಲ್ಲಿ ಭಕ್ತಿಯಿಂದ ಕೂಡಿದ ವಂದನೆ, ಧ್ಯಾನ ಹಾಗೂ ಜನಸೇವೆ ಬರುವವು. ಭಕ್ತಿಯಲ್ಲಿನ ಮೂರನೇ ಸ್ಥಾನದಲ್ಲಿ ಆತ್ಮ ನಿವೇದನೆ ಬರುತ್ತದೆ. ಈ ಹಂತದಲ್ಲಿ ಭಕ್ತನು ಆತ್ಮಜ್ಞಾನವನ್ನು ಹೊಂದಿ ಶಕ್ತಿವಂತನಾಗುವನು. ವಿಶ್ವದಲ್ಲಿನ ಪ್ರತಿ ಅಂಶವನ್ನು ಹಾಗೂ ಪ್ರತಿ ಪ್ರಾಣಿಯನ್ನು ಭಗವಂತನ ರಾಜ್ಯದಲ್ಲಿ ಒಂದು ಭಾಗವಾಗಿ ಭಾವಿಸಬೇಕು.
ಲೋಕಕ್ಕೆ ತನ್ನಿಂದ ಹಾನಿ ಉಂಟಾಗದಂತೆ ಭಕ್ತನು ಎಚ್ಚರಿಕೆ ವಹಿಸಬೇಕು. ಎಲ್ಲರ ಬಗ್ಗೆ ಪ್ರೇಮವನ್ನು ಹೊಂದಿರಬೇಕು. ಸರ್ವ ಬಾಂಧವ್ಯಗಳನ್ನು ಭಗವಂತನಲ್ಲಿ ಐಕ್ಯ ಮಾಡಿಕೊಳ್ಳಬೇಕು. ತಾಯಿ, ತಂದೆ, ಹೆಂಡತಿ, ಮಕ್ಕಳು, ಬಂಧುಗಳು ಮುಂತಾದವರಲ್ಲಿ ಕೋಪವನ್ನು ಪೂರ್ತಿಯಾಗಿ ತ್ಯಜಿಸಿ, ಅವರ ಬಗ್ಗೆ ಕೇವಲ ಶುದ್ಧವಾದ ಪ್ರೇಮವನ್ನು ಹಾಗೂ ಸೇವಾ ಮನೋಭಾವನೆಯನ್ನು ಹೊಂದಿರಬೇಕು. ಆಗ ಮಾತ್ರವೇ ಮರಣಾನಂತರ ಆತ್ಮ ಊರ್ಧ್ವ ಲೋಕಗಳಿಗೆ ಸುಲಭವಾಗಿ ಪ್ರಯಾಣಿಸಬಲ್ಲದು. ನನ್ನದು, ನನ್ನವು, ನನ್ನವರು ಮೊದಲಾದವು ಆತ್ಮವನ್ನು ಬಂಧಿಸಿ ಮತ್ತೆ ಭೂಮಿಯ ಮೇಲೆ ಜನ್ಮಿಸುವಂತೆ ಮಾಡುತ್ತವೆ. ಕರ್ತವ್ಯ ಧರ್ಮಗಳನ್ನು ಆಚರಿಸುತ್ತಾ ರಾಗರಹಿತವಾದ ಪ್ರೇಮವನ್ನು ನಮ್ಮ ಸಂಬಂಧಿಕರಲ್ಲಿ ಹೊಂದಿರಬೇಕು. ಆಗಲೇ ಭಕ್ತಿಯ ಸಾಧನೆ ಪೂರ್ಣವಾಗಿ ಫಲಿಸುವುದು. ತಮ್ಮವರ ಬಗ್ಗೆ ತನ್ನ ಬಾಧ್ಯತೆಗಳನ್ನು ಭಕ್ತಿಯ ಹೆಸರಲ್ಲಿ ಬಿಡಬಾರದು. ಬಾಧ್ಯತೆಗಳನ್ನು ನೆರವೇರಿಸುತ್ತಾ ರಾಗರಹಿತವಾದ ಪ್ರೇಮವನ್ನು ಮಾತ್ರವೇ ಹೊಂದಿದ್ದರೆ ಆ ಕಡೆ ಭಕ್ತಿ ಈ ಕಡೆ ಕರ್ತವ್ಯಗಳಿಗೂ ಶುಭ ಉಂಟಾಗುತ್ತದೆ.
ಸರ್ವ ಸಂಘ ಪರಿತ್ಯಾಗವನ್ನು ಮಾನಸಿಕವಾಗಿ ಮಾಡಬೇಕೇ ಹೊರತು ಭೌತಿಕವಾಗಿ ಎಲ್ಲರನ್ನೂ ಬಿಟ್ಟು ತನ್ನ ದಾರಿಗೆ ತಾನು ಹೋಗುವುದು ಸಲ್ಲದು. ವೈರಾಗ್ಯವು ಪೂರ್ತಿಯಾಗಿ ಮಾನಸಿಕವಾದದ್ದು. ಭಕ್ತಿಯು ಸಹ ಮಾನಸಿಕವಾದುದ್ದೇ, ಮಾನಸಿಕವಾಗಿ ಪರಿಪೂರ್ಣವಾದ ಶುದ್ಧತ್ವವನ್ನು ಹೊಂದಿದ್ದರೇನೆ ಭಗವಂತನೊಂದಿಗೆ ಸ್ನೇಹವು ಪೂರ್ಣವಾಗಿ ಆತ್ಮಜ್ಞಾನವನ್ನು ನೀಡಿ ಸಿದ್ಧಪುರುಷನನ್ನಾಗಿ ಮಾಡುತ್ತದೆ. ಭಕ್ತಿಯಲ್ಲಿ ಮೇಲೆ ತಳಕು, ಒಳಗೆ ಹುಳುಕು, ಕೆಲಸಕ್ಕೆ ಬರುವುದಿಲ್ಲ ಲ. ಕಪಟ ವೇಷಗಳಿಂದ ಜನರನ್ನು ಮೋಸಗೊಳಿಸಬಹುದೇ ಹೊರತು ಭಗವಂತನನ್ನು ವಂಚಿಸಲಾಗದು. ಭಗವಂತನು ನಮ್ಮ ಪ್ರತಿ ಚಿಕ್ಕ ಆಲೋಚನೆಗಳನ್ನು ಸಹ ಅರ್ಥ ಮಾಡಿಕೊಳ್ಳುವನು. ಆತನು ನಿಜವಾದ ಭಕ್ತರಿಗೆ ತನ್ನ ವೈಭವವನ್ನು ವ್ಯಕ್ತ ಪಡಿಸುವನು. ಸತ್ಯಸಂಕಲ್ಪದಿಂದ ಸತ್ಯ ಮನಸ್ಕರಾಗಿ, ಸತ್ಯವಾದ ಭಕ್ತಿಯಿಂದ, ಸತ್ಯ ರೂಪನಾದ ಭಗವಂತನನ್ನು ಹೊಂದಲು ಸಾಧ್ಯವಾಗುವುದು.
*ಸಂಗ್ರಹ ಮತ್ತು ಪ್ರಚಾರ*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು