ತಾಳೆಯೋಲೆ ೩೦೪: ಷಟ್ ದರ್ಶನಗಳು ಯಾವುವು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಷಟ್ ದರ್ಶನಗಳು ಯಾವುವು ?
ದರ್ಶನಗಳು ವಿಶ್ವ ತತ್ವವನ್ನು ಅರ್ಥ ಮಾಡಿಕೊಂಡು ಸತ್ಯಾ ಸತ್ಯಗಳನ್ನು, ನಿತ್ಯಾ ನಿತ್ಯಗಳನ್ನು ಗುರುತಿಸಿ ವಿಶ್ವ ರಹಸ್ಯಗಳನ್ನು ಮಾನವರಿಗೆ ನೀಡಬೇಕು. ಇಂತಹ ಆರು ಸಿದ್ಧಾಂತಗಳು ಪ್ರಾಮುಖ್ಯತೆಯನ್ನು ಹೊಂದಿರುವವು. ಇವುಗಳನ್ನು ಅವಗಾಹನೆ ಮಾಡಿಕೊಂಡು ತಕ್ಕ ದರ್ಶನವನ್ನು ಅನುಷ್ಠಿಸಿಕೊಂಡು ಮಾನವನು ತನ್ನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು.
ವಿಶ್ವವನ್ನು ಶಾಸ್ತ್ರೀಯವಾದ ದೃಷ್ಟಿಯಲ್ಲಿಟ್ಟುಕೊಂಡು ಅವಲೋಕಿಸಿದಾಗ, ಭೌತಿಕ ಮತ್ತು ಅಭೌತಿಕ ಸತ್ಯದಂತಹ ಭಾವಗಳನ್ನು ದರ್ಶನಗಳು ಪ್ರತಿಪಾದಿಸುವವು. ಭೌತಿಕವಾದ ಈ ಜಗತ್ತು ಶಾಶ್ವತವಾದುದಲ್ಲ. ಅಜ್ಞಾನದಿಂದ ನಮ್ಮನ್ನು ಶಾಶ್ವತವಾದ ಪರಮ ಪದದೊಳಗೆ ನೂಕುತ್ತದೆ ಎಂದು ದರ್ಶನಗಳು ತಿಳಿಸುತ್ತವೆ.
ಪ್ರಾಚೀನ ಭಾರತದ ಆರು ದರ್ಶನಗಳು ಯಾವುವೆಂದರೆ *೧). ಕಪಿಲ ಮಹರ್ಷಿಯ ಸಂಖ್ಯಾ ದರ್ಶನ. ೨). ಕಣಾದನನ ವೈಶೀಷಿಕ ದರ್ಶನ. ೩). ಗೌತಮ ಋಷಿಯ ನ್ಯಾಯ ದರ್ಶನ. ೪). ಪತಂಜಲಿ ಮಹಾಮುನಿಯ ಯೋಗ ದರ್ಶನ. ೫). ಜೈಮುನಿ ಮಹರ್ಷಿಯ ಮೀಮಾಂಸ ದರ್ಶನ. ೬). ಬಾದರಾಯಣನ ವೇದಾಂತ ದರ್ಶನ.* ಇವೆಲ್ಲವೂ ಸಹ ಉಪನಿಷತ್ತುಗಳ ಮೂಲದಿಂದ ಉಂಟಾಗಿ ತಮ್ಮ ಶೈಲಿಯಲ್ಲಿ ವಿಶ್ವ ರಚನೆಯನ್ನು ತಿಳಿಸುತ್ತವೆ. ಈ ಷಟ್ ದರ್ಶನಗಳು ಸೃಷ್ಟಿಯನ್ನು ಮುಖ್ಯವಾಗಿ ಮೂರು ಸಿದ್ಧಾಂತಗಳಲ್ಲಿ ತಿಳಿಸುತ್ತದೆ.
ಅವುಗಳೆಂದರೆ *೧).ಆರಂಭವಾದ (ಸೃಷ್ಟಿ ಯಾವ ರೀತಿ ಪ್ರಾರಂಭವಾಯಿತು ಎನ್ನುವ ವಾದ) ೨). ಪರಿಣಾಮವಾದ (ಸೃಷ್ಟಿ ಯಾವ ರೀತಿ ಪರಿಣಮಿಸಿದೆ ಎನ್ನುವ ವಾದ) ೩). ವಿವರ್ತನಾ ವಾದ (ಎಂತಹ ಬದಲಾವಣೆ, ಅಂತಿಮ ಸತ್ಯ ಹಾಗೂ ನಿತ್ಯ ಅಲ್ಲಾ ಎನ್ನುವ ವಾದ)* ಶೂನ್ಯದಿಂದ ಯಾವುದೂ ಉದ್ಭವಿಸುವುದಿಲ್ಲ. ಒಂದರಿಂದ ಮತ್ತೊಂದನ್ನು ಸೃಷ್ಠಿಸಿದೆಯೆಂದು ಆರಂಭವಾದ ತಿಳಿಸುತ್ತದೆ. ನ್ಯಾಯ ಹಾಗೂ ವೈಶೇಷಿಕ ದರ್ಶನಗಳು ಈ ಮೇಲಿನ ಭಾವವನ್ನು ಸಮರ್ಥಿಸುತ್ತವೆ.
ಮೂಲ ಪದಾರ್ಥವು ಬದಲಾಯಿಸುವುದರಿಂದ ಒಂದು ಮತ್ತೊಂದಾಗಿ ಮಾರ್ಪಾಟಾಗುತ್ತದೆ. ಎಂದು *ಪರಿಣಾಮವಾದ* ತಿಳಿಸುತ್ತಿದೆ. ಹಾಲು ಮೊಸರಾಗಿ, ಮೋಡವು ಮಳೆಯಾಗಿ ಪರಿಣಮಿಸಿದ ಹಾಗೆ ಸೃಷ್ಠಿಯೂ ಸಹ ಹಾಗೆಯೇ ಪರಿಣಮಿಸಿದೆ ಎಂದು ತಿಳಿಸುತ್ತಿದೆ. *ಪರಿಣಾಮ ವಾದ* ವನ್ನು ಸಂಖ್ಯಾ ಹಾಗೂ ಯೋಗ ದರ್ಶನಗಳು ಸಮರ್ಥಿಸುತ್ತಿವೆ.
ಭ್ರಾಂತಿ ಕಾರಣದಿಂದ ಒಂದು ಮತ್ತೊಂದಾಗಿ ಕಾಣಿಸುತ್ತದೆಂದು *ವಿವರ್ತನಾ ವಾದ*ವು ತಿಳಿಸುತ್ತಿದೆ. ಭಗವಂತನ ಕಾರಣ ಶರೀರವಾದ ಮಾಯಾಶಕ್ತಿ ವಾಸ್ತವವನ್ನು ಬಚ್ಚಿಟ್ಟು, ಅವಾಸ್ತವವನ್ನು ವಾಸ್ತವವಾಗಿ ತೋರಿಸಿ ಭ್ರಮಿಸುವಂತೆ ಮಾಡುತ್ತದೆ. *ಹಗ್ಗವನ್ನು ನೋಡಿ ಹಾವೆಂದು ಭಯಪಟ್ಟ ಹಾಗೆ* ಎಂದು ವಿವರ್ತನಾ ವಾದವೂ ತಿಳಿಸುತ್ತಿದೆ. ವೇದಾಂತ ದರ್ಶನವು ಈ ವಾದವನ್ನು ಸಮರ್ಥಿಸುವುದು.
ಯಾವುದು ಏನಾದರೂ ಈಶ್ವರಾರಾಧನೆಯಿಂದ ಕೂಡಿದ ಧ್ಯಾನ, ಯೋಗ ಸಾಧನೆಗಳ ಮುಖಾಂತರ ಆತ್ಮ ಜ್ಞಾನವನ್ನು ಪ್ರತ್ಯಕ್ಷವಾಗಿ ಹೊಂದಿ ಮುಕ್ತರಾಗುವುದು ನಮಗೆಲ್ಲರಿಗೂ ಬಹಳ ಅಗತ್ಯ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು