ತಾಳೆಯೋಲೆ ೩೨೭* (ಇಂದಿಗೆ ಮುಗಿಯಿತು)
*ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
*ಬಿಲ್ವಪತ್ರೆ ಕಾಯಿಯ ಮಹತ್ವವೇನು ?*
ಬಿಲ್ವ ಮರವು ಲಕ್ಷ್ಮಿಯ ಬಲದ ಕೈ ಕಮಲದಿಂದ ಹುಟ್ಟಿರುವುದೆಂದು ನಮ್ಮ ಪುರಾಣಗಳ ಮತ್ತು ಋಷಿ ಶ್ರೇಷ್ಠರ ಅಭಿಪ್ರಾಯ. ಈ ವೃಕ್ಷವು ಹೂಗಳನ್ನು ಬಿಡದೇ ಕಾಯಿಗಳನ್ನು ನೀಡುವ ಮನಸ್ಪತಿಯಾಗಿದೆ. ಬಿಲ್ವ ವೃಕ್ಷವನ್ನು ಶ್ರೀ ವೃಕ್ಷವೆಂದು ಕರೆಯುತ್ತಾರೆ. ಈ ವೃಕ್ಷದ 10 ಕಡ್ಡಿಗಳನ್ನು ಪಾಯಸದಲ್ಲಿ ಅದ್ದಿ ಪ್ರತಿ ಶ್ರೀ ಸೂಕ್ತದ ಋಕ್ಕನ್ನು ಹೇಳಿ ಹೋಮ ಮಾಡಬೇಕೆಂದು ಹೇಳಲಾಗಿದೆ.
ಇಂತಹ ಪವಿತ್ರವಾದ ಬಿಲ್ವ ಫಲವು ಒಳಗಿನ ಇಂದ್ರಿಯಗಳಿಗೆ ಸಂಬಂಧಪಟ್ಟ ಮೌಡ್ತ, ಆಲಸ್ಯ, ಅವಿದ್ಯೆ ಇತ್ಯಾದಿಗಳನ್ನು ಹೊರಗಿನ ಇಂದ್ರಿಯಗಳಿಗೆ ಸಂಬಂಧಪಟ್ಟಂತೆ ಸುಮ್ಮನೆ ನಗುವುದು, ಹಲ್ಲು ಕಿಸಿಯುವುದು ಮುಂತಾದ ಅಂಗ ಚೇಷ್ಟೆಗಳನ್ನು ನಾಶಪಡಿಸುತ್ತದೆ. ಈ ವೃಕ್ಷದ ಕೆಳಗೆ ಕುಳಿತು ಲಕ್ಷ್ಮಿ ಮಂತ್ರವನ್ನು ಹೇಳಿದರೆ ಅದು ಸಿದ್ದಿಯಾಗುವುದೆಂದು ನಂಬಿಕೆ. ತುಳಸಿ, ನೆಲ್ಲಿ, ಬಿಲ್ವ ಈ ಮೂರು ಪಾರ್ವತಿ, ಸರಸ್ವತಿ ಮತ್ತು ಲಕ್ಷ್ಮಿಯ ಸ್ವರೂಪಗಳೆಂದು ಪುರಾಣಗಳು ತಿಳಿಸುತ್ತವೆ.
ಬಿಲ್ವ ಫಲವನ್ನು ವಾಸ್ತು ಹೋಮಗಳಲ್ಲಿ ಪೂರ್ಣ ಫಲವಾಗಿ ಉಪಯೋಗಿಸುವರು. ಈ ಫಲಕ್ಕೆ ಯಾವುದೇ ರೀತಿಯ ಹುಳುವಾಗಲಿ, ಕೆಡುವ ಹಾಗೂ ಕೊಳೆಯುವ ಗುಣಗಳಿಲ್ಲ. ಈ ಫಲವನ್ನು ವ್ಯಾಪಾರಿಗಳು ಶುಕ್ರವಾರ ಪೂಜಿಸಿದ್ದೇ ಆದರೆ ಅವರ ವ್ಯಾಪಾರ ವ್ಯವಹಾರಗಳು ಅಭಿವೃದ್ಧಗೊಳ್ಳುತ್ತದೆ. ಮನೆಯಲ್ಲಿಟ್ಟು ಪೂಜಿಸಿದರೆ ಆರ್ಥಿಕ ಮುಗ್ಗಟ್ಟು ಇರುವುದಿಲ್ಲ. ಬಿಲ್ವ ಫಲವು ಲಕ್ಷ್ಮಿಯ ಸ್ವರೂಪವೆಂದು, ಇದನ್ನು ಈಶ್ವರನು ಬಳುವಳಿಯಾಗಿ ಲಕ್ಷ್ಮಿಗೆ ನೀಡಿದನೆಂದು ಪುರಾಣಗಳು ಹೇಳುತ್ತಿವೆ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
*ತಾಳೆಯೋಲೆ ಇಂದಿಗೆ ಮುಕ್ತಾಯ. ಓದಿ ಅರ್ಥೈಸಿಕೊಂಡು ಪ್ರೋತ್ಸಾಹಿಸಿದ ಓದುಗ ಮಹಾಶಯರಿಗೆ ಪತ್ರಿಕಾ ಬಳಗದಿಂದ ಅಭಿನಂದನೆಗಳು*
ಆತ್ಮೀಯ ತಾಳೆಯೋಲೆ ಓದುಗ ಮಿತ್ರರಿಗೆ ಮೊದಲನೆಯದಾಗಿ ನಮಸ್ಕಾರಗಳು;
ಕಳೆದ ವರ್ಷ ಅಂದರೆ ಆಗಸ್ಟ್ ೦೧/೨೦೧೯ ರಲ್ಲಿ ತಾಳೆಯೋಲೆ ಎಂಬ ಗ್ರಂಥದಲ್ಲಿನ ಲೇಖನವನ್ನು ಪ್ರಾರಂಭಿಸಿದೆವು. ಇದು ಡಾ ವೆಂಗನೂರು ಬಾಲಕೃಷ್ಣನ್ ರವರ ಮೂಲ ಕೃತಿಯಾಗಿದ್ದು, ಊರುಕುಂಟೆ ನರಸಿಂಹಮೂರ್ತಿ ಯವರು ಈ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಈ ಗ್ರಂಥದಲ್ಲಿ ಭಾರತೀಯ ಆಚಾರ ವಿಚಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ. ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿರುವ ಗ್ರಂಥ ವಾಗಿದ್ದು, ಅನೇಕ ಆಚಾರಗಳಲ್ಲಿ ಅಡಗಿರುವ ವೈಜ್ಞಾನಿಕ ವಿಚಾರವನ್ನು ತಿಳಿಸಲಾಗಿತ್ತು. ಈ ಲೇಖನಗಳು ಕಳೆದ ಒಂದು ವರ್ಷದಲ್ಲಿ ಸಹಸ್ರಾರು ಓದುಗರು ಸಂಪಾದಿಸಿಕೊಂಡಿದ್ದು ಜನಮನ್ನಣೆ ಗಳಿಸಿತ್ತು.
ಸತತ ಒಂದು ವರ್ಷಗಳ ಕಾಲ ೩೨೭ ಲೇಖನಗಳನ್ನು ಓದಿ, ಅರ್ಥೈಸಿಕೊಂಡು ಪ್ರೋತ್ಸಾಹಿಸಿದ ನನ್ನೆಲ್ಲಾ ಓದುಗ ಮಿತ್ರರಿಗೆ ಮತ್ತೊಮ್ಮೆ ಧನ್ಯವಾದಗಳು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು