Tel: 7676775624 | Mail: info@yellowandred.in

Language: EN KAN

    Follow us :


ವ್ಯವಸಾಯದ ಹಂಗನ್ನು ತೊರೆದ ಯುವ ಸಮೂಹ. ಮಣ್ಣೆತ್ತು ಶಾಶ್ವತವಾಗದೆ ನಿಜೆತ್ತುಗಳಿಗೆ ಬದ್ದರಾಗೋಣಾ

Posted date: 09 Jul, 2021

Powered by:     Yellow and Red

ವ್ಯವಸಾಯದ ಹಂಗನ್ನು ತೊರೆದ ಯುವ ಸಮೂಹ. ಮಣ್ಣೆತ್ತು ಶಾಶ್ವತವಾಗದೆ ನಿಜೆತ್ತುಗಳಿಗೆ ಬದ್ದರಾಗೋಣಾ

ಮಣ್ಣೆತ್ತು ಅಮಾವಾಸ್ಯೆ ಇಂದಿನ ಯುವಸಮೂಹ ಒಂದು ಅವಲೋಕನ


ಇಂದು ಮಣ್ಣೆತ್ತು ಅಮಾವಾಸ್ಯೆ. ಈ ಮಣ್ಣೆತ್ತು ಎಂಬ ಅಮಾವಾಸ್ಯೆ ಅನಾದಿಕಾಲದಿಂದಲೂ ನಡೆಯುತ್ತಾ ಬಂದಿದೆ. ಮಹಾತ್ಮ ಗಾಂಧೀಜಿಯವರು ಹೇಳಿದಂತೆ ನಮ್ಮ ದೇಶ ರೈತಾಪಿ ದೇಶ. ರೈತನೇ ಈ ದೇಶದ ಬೆನ್ನೆಲುಬು. ಇನ್ನೊಂದು ಹೆಜ್ಜೆ ಮುಂದು ಹೋಗಿ ಸ್ವಾಮಿ ವಿವೇಕಾನಂದರು ಮತ್ತೊಂದು ಮಾತು ಹೇಳುತ್ತಾರೆ. ನಮ್ಮ ದೇಶದ ಶಕ್ತಿಯೇ ಯುವ ಸಮೂಹ. ಶೇಕಡಾ 60 ರಷ್ಟು ಯುವ ಸಮೂಹ ನಮ್ಮಲ್ಲಿದೆ. ನಾವು ಇಡೀ ವಿಶ್ವದಲ್ಲೇ ಹೆಚ್ಚು ಯುವಸಮೂಹ ಹೊಂದಿರುವ ದೇಶ ನಮ್ಮದು ಎಂದರು. ಹೌದು ನಾವು ರೈತಾಪಿಗಳು. ನಮ್ಮ ದೇಶದ ಹೆಮ್ಮೆ ಯುವಸಮೂಹ ಆದರೆ ಇದೇ ಯುವಸಮೂಹ ಈಗ ಎತ್ತ ಸಾಗುತ್ತಿದೆ !??


ಮಣ್ಣೆತ್ತು ಎಂದರೆ ಮಣ್ಣಿನಿಂದ ಎತ್ತುಗಳನ್ನು (ಉಳುವ ಜೋಡೆತ್ತುಗಳು)ತಯಾರಿಸಿ ಮುಂಗಾರು ಆರಂಭದ ಈ ದಿನ ಪೂಜಿಸುವುದಕ್ಕೆ ಮಣ್ಣೆತ್ತು ಅಮಾವಾಸ್ಯೆ ಎನ್ನುವುದು ಊವಾಚ. ಇದು ಪೂರ್ವದಿಂದಲೂ ನಡೆದು ಬಂದಿರುವುದರಿಂದ ಆಚರಿಸೋಣಾ. ಆದರೆ ನಮಗೇಕೆ ಬೇಕು ಈ ಮಣ್ಣೆತ್ತು !. ನಾವು ಮತ್ತು ನಮ್ಮ ದೇಶ ಒಕ್ಕಲುತನವನ್ನೇ ನಂಬಿದ ದೇಶ. ಒಕ್ಕಲಿಗರು ಎಂದರೆ ಈಗಲೂ ಕೆಳ ಮತ್ತು ಮೇಲ್ವರ್ಗದ ಜಾತಿಕರಿಗೆ ಕೇವಲ ಗೌಡರು ಎಂಬ ತಾತ್ಸಾರವಿದೆ. ಅದು ತಪ್ಪು ತಿಳುವಳಿಕೆ. ಗೌಡ ಎಂಬುದು ಜಾತಿಯಲ್ಲಾ. ಅದೊಂದು ಸೂಚಕ ಪದ. ಜಗತ್ತಿನಲ್ಲಿ ಯಾವ ಮನುಷ್ಯ ಭೂಮಿಯನ್ನು ಉತ್ತು ಬಿತ್ತುತ್ತಾನೋ ಆತ ಒಕ್ಕಲಿಗ. ಇಲ್ಲಿ ಜಾತಿ ಮತಗಳ ಪ್ರಶ್ನೆಯೇ ಇಲ್ಲ. ಅದಕ್ಕೆ ಹೇಳುವುದು ಒಕ್ಕಲಿಗ ಒಕ್ಕದಿರೆ ಜಗವೆಲ್ಲಾ ಬಿಕ್ಕುವುದು ಎಂದು.


ಇಂದಿನಿಂದ ಮುಂಗಾರು ಆರಂಭ. ಮುಂಜಾನೆದ್ದು ಜೋಡೆತ್ತುಗಳನ್ನು ಮೈತೊಳೆದು ಸಿಂಗರಿಸಿ, ಅವು ಓಡಾಡುವ ಬಾಗಿಲನಲ್ಲಿ, ರೈತ ತಾನು ತನ್ನ ಹೊಲದಲ್ಲಿ ಬಿತ್ತಬೇಕೆಂಬ ಧಾನ್ಯಗಳನ್ನು ಸೇರು ಅಥವಾ ಕೊಳಗದಲ್ಲಿ ಇಡುತ್ತಾನೆ. ಆ ಎತ್ತುಗಳು ಯಾವ ಧಾನ್ಯವನ್ನು ಒದೆಯುತ್ತವೋ ಆ ಧಾನ್ಯವನ್ನು ಧ್ಯಾನಿಸಿ, ತನ್ನ ಹೊಲಕ್ಕೆ ತೆಗೆದುಕೊಂಡು ಹೋಗಿ ಎತ್ತುಗಳನ್ನು (ತಾನೇ ಮಾಡಿದ ಮಣ್ಣೆತ್ತಿನ ಗೊಂಬೆಗಳ ಸಮೇತ) ಭೂತಾಯಿಯನ್ನು ಪೂಜಿಸಿ ಬಿತ್ತುತ್ತಾನೆ. ಇಂದು ಬಿತ್ತಿದ ಒಂದು ಕಾಳು ಸಹಸ್ರ ಕಾಳುಗಳಾಗಲಿ. ಮಳೆರಾಯ ಹದವಾಗಿ ಬಂದು ತೆನೆಗೂಡಿಸಲಿ ಎಂಬ ಧ್ಯೇಯೋದ್ದೇಶಗಳಿಂದ, ಜಗತ್ತಿಗೆ ಅನ್ನ ನೀಡುವಾತನ ಕೈ ಬಲಪಡಿಸಬೇಕೆಂಬುದೇ ಈ ಮಣ್ಣೆತ್ತು ಅಮಾವಾಸ್ಯೆಯ ಹಬ್ಬ.


ಇಂದು ಎಷ್ಟೋ ಮಂದಿ ಯುವ ರೈತರಿಗೆ ಇದರ ಅರಿವಿಲ್ಲದೆ, ಮನೆಯಲ್ಲಿರುವ ನಿಜವಾದ ಎತ್ತುಗಳನ್ನು ಬಿಟ್ಟು, ಕುಂಬಾರ ಮಾಡಿದ ಮಣ್ಣಿನ ಎತ್ತುಗಳನ್ನು ತಂದು ಪೂಜಿಸುತ್ತಾರೆ. ನಗರ ವಾಸಿಗಳಂತೂ ಇನ್ನೂ ಅಪಾಯವಾದ ಸಂಸ್ಕೃತಿಗೆ ಮಾರುಹೋಗಿ, ಮಣ್ಣಿಗೆ ಮಾರಕವಾದ, ಮಕ್ಕಳಿಗೆ ಆರೋಗ್ಯ ಹದಗೆಡುವಂತೆ ಮಾಡುವ, ಪಿಓಪಿ ಗಳಿಂದ, ಪ್ಲಾಸ್ಟಿಕ್ ಗಳಿಂದ ಮಾಡಿದ, ರಾಸಾಯನಿಕ ಬಣ್ಣ ಬಳಿದಿರುವ ಎತ್ತಿನ ಗೊಂಬೆಗಳನ್ನು ತಂದು ಪೂಜಿಸುವುದು ಮಣ್ಣಿನ ಗುಣಕ್ಕೆ ಅವಮಾನ ಮಾಡಿದಂತೆ. ಆದರೂ ಇವರೆಲ್ಲರೂ ಸುಸಂಸ್ಕೃತರು. ನಾನು ಮಾಡುತ್ತಿರುವುದೇ ಶ್ರೇಷ್ಠ ಎಂಬ ಮನಸ್ಥಿತಿ ಉಳ್ಳವರು ಇನ್ನಾದರು ಎಚ್ಚೆತ್ತುಕೊಳ್ಳಬೇಕಾಗಿದೆ.


ನಾವು ತಂತ್ರಜ್ಞಾನದ ಬಳಕೆಯಲ್ಲಿ ಎಷ್ಟೇ ಮುಂದುವರಿದರಿಬಹುದು. ಲಕ್ಷ ಕೋಟಿಗಳ ವ್ಯವಹಾರದಲ್ಲಿ ಮುಳುಗಿರಬಹುದು. ಹಲವಾರು ವಿಷಯಗಳಲ್ಲಿ ಪಾಂಡಿತ್ಯ ಸಾಧಿಸಿರಬಹುದು. ಆದರೆ ಇದನ್ನೆಲ್ಲಾ ಸಾಧಿಸಬೇಕೆಂದರೆ ಹೊಟ್ಟೆಗೆ ಅನ್ನ ಬೀಳಬೇಕು. ನೀ ಏನೇ ಸಾಧಿಸಬೇಕೆಂದರೂ ಹೊಟ್ಟೆ ತುಂಬಿದರೆ ಮಾತ್ರ ಸಾಧ್ಯ. ಆ ಹೊಟ್ಟೆ ತುಂಬಿಸುವ ಸಾಧನ ಯಾವುದೇ ತಂತ್ರಜ್ಞಾನದಿಂದ ಬರುವುದಿಲ್ಲ. ಮುಂದೊಂದು ದಿನ ಬರಬಹುದು ಎಂಬ ಊಹೆ ನಿನ್ನಲ್ಲಿದ್ದರೆ ತಪ್ಪಲ್ಲಾ, ಆದರೆ ಭೂಮಿಯ ಆಗರದಿಂದ ಬಂದ ಆಹಾರ ಅದಾಗಿರುವುದಿಲ್ಲವಾದ್ದರಿಂದ ಅದು ನಿನ್ನ ಆಯಸ್ಸನ್ನು ಕಿತ್ತುಕೊಳ್ಳುತ್ತದೆ ಎಂಬುದು ನೆನಪಿರಲಿ.


ಇಂದು ಯುವ ಸಮೂಹ ಎಂಬ ನಮ್ಮ ದೇಶದ ಅಸ್ತ್ರಗಳು, ಕೇವಲ ಮೋಜುಮಸ್ತಿಯಲ್ಲಿ ತೊಡಗಿವೆ. ಕಾನ್ವೆಂಟ್ ಸಂಸ್ಕೃತಿಯಿಂದಾಗಿ ನಮ್ಮ ಯೂನಿವರ್ಸಿಟಿಗಳು ಸಹ ಹಣ ಗಳಿಸುವ ತತ್ವಕ್ಕೆ ಒಡ್ಡಿಕೊಂಡಿರುವುದರಿಂದ, ಒಕ್ಕಲುತನದ ಸಂಸ್ಕಾರವೇ ಹಾಳಾಗಿಹೋಗಿದೆ. ಹತ್ತಾರು ಎಕರೆ ಜಮೀನು ಇರುವ ವ್ಯಕ್ತಿಗಳು ಅಕ್ಕಪಕ್ಕದವರನ್ನು ನೋಡಿ, ಪೇಟೆ ಹುಚ್ಚು ಹಿಡಿಸಿಕೊಂಡು, ಮಕ್ಕಳನ್ನು ಓದಿಸುವ ನೆಪವೊಡ್ಡಿ ಪೇಟೆ ಸೇರಿದ್ದಾರೆ. ಈಗಾಗಲೇ ರಾಸಾಯನಿಕ ಗೊಬ್ಬರ ತಿಂದ ಅವರ ಭೂಮಿಗಳು ಇಂದು ಪಾಳು ಭೂಮಿಯಾಗಷ್ಟೇ ಉಳಿದಿವೆ. ಇಂದಿನ ಕೊರೊನಾ ಸಮಯದಲ್ಲಿ ಆಕ್ಸಿಜನ್ ಕೊರತೆ ಏಕಾಯಿತು ? ಹೇಗಾಯಿತು ? ಎಂಬುದನ್ನು ಮನಗಾಣಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಅರಿಯಬೇಕಾಗಿದೆ.


ಸರ್ಕಾರಗಳು ಯೂನಿವರ್ಸಿಟಿಗೆ ಕೊಡುತ್ತಿರುವ ಮಹತ್ವವನ್ನು ಯೂನಿವರ್ಸಲ್ ಗೆ ಕೊಡಲಿ. ಕೃಷಿಗೆ ಸಂಬಂಧಿಸಿದ ಇಲಾಖೆಗಳಿಂದ ಇಂದು ಏನೂ ಆಗುತ್ತಿಲ್ಲ. ರೈತ ಬೆಳೆದದ್ದು ಮೂರು ಕಾಸಿಗೆ. ದಲ್ಲಾಳಿಗಳ ಮಧ್ಯಸ್ಥಿಕೆಯಲ್ಲಿ ವ್ಯಾಪಾರಿಗಳಿಂದ ಕೊಂಡುಕೊಳ್ಳಬೇಕಾಗಿದ್ದು ಹತ್ತು ಪಟ್ಟು ಬೆಲೆಗೆ. ರೈತನೇ ಬೆನ್ನೆಲುಬು ಎಂಬ ದೇಶದಲ್ಲಿ ರೈತನಿಗೆ ಅಧಿಕಾರ ಇಲ್ಲದಿರುವುದು ನಮ್ಮ ರೈತರ ದುರ್ದೈವ. ಇಂದಿನ ಯುವಪೀಳಿಗೆಯ ಮಂದಿ ಕುಡಿದು, ಸೇದಿ ಮೋಜು ಮಸ್ತಿಯಲ್ಲೇ ತೊಡಗಿದ್ದಾರೆ. ಹಲವರು ಎಕರೆಗಟ್ಟಲೆ ಜಮೀನಿದ್ದು ಬೆಂಗಳೂರಿನಂತಹ ನಗರಗಳಲ್ಲಿ ವಾಚ್ ಮನ್ ಕೆಲಸ ಮಾಡುತ್ತಿದ್ದಾರೆ. ವ್ಯವಸಾಯ ಎಂದರೆ ನೀ ಸಾಯ, ಮನೆಮಂದಿಯೆಲ್ಲಾ ಸಾಯ ಎಂಬ ನಾಣ್ಣುಡಿಯನ್ನು ಸುಳ್ಳು ಮಾಡಬೇಕಾದ ಕರ್ತವ್ಯ, ಅಧಿಕಾರಿಗಳು ಮತ್ತು ಸರ್ಕಾರದ್ದಾಗಬೇಕಿದೆ. ತಂತ್ರಜ್ಞಾನಕ್ಕೆ ಶಕ್ತಿಗಿಂತ ಯುಕ್ತಿ ಹೆಚ್ಚಿರಬೇಕು. ಆದರೆ ವ್ಯವಸಾಯಕ್ಕೆ ರಟ್ಟೆಯ ಶಕ್ತಿ ಹೆಚ್ಚಿರಬೇಕು. ತಂತ್ರಜ್ಞಾನವನ್ನು ಅಲ್ಪ ಉಪಯೋಗಿಸಿಕೊಂಡು ರೈತನನ್ನು, ಯುವ ಸಮೂಹವನ್ನು ಮೇಲೆತ್ತುವ ಕೆಲಸಕ್ಕೆ ಎಲ್ಲರೂ ಮುಂದಾಗೋಣಾ. ಈ ಮಣ್ಣೆತ್ತು ಅಮಾವಾಸ್ಯೆ ಯನ್ನು ನಿಜವಾದ ಎತ್ತುಗಳೊಂದಿಗೆ, ವ್ಯವಸಾಯ ಮಾಡುವ ಮೂಲಕ, ವೈಚಾರಿಕ ನೆಲೆಗಟ್ಟನ್ನು ಕ್ರಮಿಸಲು ಆಚರಿಸೋಣಾ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ

ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.


<

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ

ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್

ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ  ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ

ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ

Top Stories »  


Top ↑