Tel: 7676775624 | Mail: info@yellowandred.in

Language: EN KAN

    Follow us :


ಹುತಾತ್ಮ

Posted date: 04 Mar, 2019

Powered by:     Yellow and Red

ಹುತಾತ್ಮ

ಹುತಾತ್ಮ

ನಾನು ಒಂದು ತಿಂಗಳ

ರಜೆ ಪಡೆದು ಬಂದಿದ್ದೆ

ಹೊಸಚೈತ್ರದ ಆಗಮನಕ್ಕಾಗಿ॥


ಇರಲಿಲ್ಲ ನನಗೆಂದೂ

ಹಸೆಮಣೆ ಏರುವಾ ಧಾವಂತ

ಭರವಸೆ ಇರದ ಬದುಕ ಆತಂಕ॥


ಹೆತ್ತವರ ವಂಶಬೆಳೆಸುವ 

ಹೊಣೆ ನನ್ನ ಮೇಲಿತ್ತು

ಹಾಗೇಯೇ ಹರಯದ

ಹುರುಳ ಅರಿವ  ಕೌತುಕ॥


ಕನಸಂತೆ ಮುಗಿದಿತ್ತು

ನನ್ನ ಮದುವೆಯ  ಶಾಸ್ತ್ರ 

ಮೊದಲರಾತ್ರಿಯ ಸವಿಜೇನು

ನನ್ನೊಳಗೂ  ಸ್ಪುರಿಸಿತ್ತು॥


ನನ್ನ ಕನಸರಾತ್ರಿಗಳು

ಮಣ್ಣುಗೂಡಿದ್ದವು

ಯುದ್ದವಾರ್ತೆ ತಂದ

ಆ ಘೋರ ಸುದ್ದಿಯಿಂದ॥


ನನ್ನೆದೆಗೆ ಒರಗಿದ್ದ ನನ್ನವಳ

ಬೆದರುಗಂಗಳಲ್ಲಿ ಆತಂಕ

ಅಭದ್ರತೆಯ ಛಾಯೆ

ಭರವಸೆಯಿರದ ನಾಳೆ॥


ಆರತಿಯ ಸೇಸೆಯಿಕ್ಕಿ

ಬಿಗಿದಪ್ಪಿ ಮತ್ತೆ  ಕಂಬನಿಯುಕ್ಕಿ

ಶುಭಹಾರೈಕೆಯೊಂದಿಗೆ

ಬೀಳ್ಕೊಂಡರು ನನ್ನವರಂದು॥


ಎಂದು ಬರುವಿರೆಂದು ದೃಷ್ಟಿಸಿದ 

ಅಚಲನೇತ್ರಗಳ ದೃಷ್ಟಿಸಲಾರದೆ

ಹೊರಟಿದ್ದೆ ನಾನು

ಹೋಗಿಬರುತ್ತೇನೆಂದು॥


ನಾನಾರೋ ಅವನಾರೋ

ನಮ್ಮ ಕೈಮೈಗಳ ಮೇಲೆಲ್ಲಾ

ಮದ್ದುಗುಂಡುಗಳ ಸರಮಾಲೆ॥


ನಾವಿಬ್ಬರೂ ಕಾದಾಡಲು

ನಮ್ಮಿಬ್ಬರಲ್ಲಿ ವೈಯಕ್ತಿಕ 

ಕಾರಣಗಳಿರಲಿಲ್ಲ  ....

ದೇಶಪ್ರೇಮದ ಹೊರತು

ಆದರೂ ಕಾದಿಕೆಳಗುರುಳಿದ್ದೆವು ॥


ಕ್ಷಣಾರ್ಧದಲ್ಲಿ ನಾವಿಬ್ಬರೂ ಹುತಾತ್ಮರು

ನಮ್ಮಾತ್ಮಗಳು ಮೇಲೇರುತ್ತಿದ್ದವು

ಹಾರ ತುರಾಯಿಗಳ ಹೊತ್ತ ಜನ

ಧಾವಿಸಿತ್ತಲಿದ್ದರು ನಮ್ಮತ್ತ....॥


ರಾಜಕಾರಣಿಗಳು ಮಠಾಧೀಶ್ವರರೂ

ಅವರ ಅನುಕರಿಸಿ ಹಿಂಬಾಲಕರು

ತೋರಿಕೆಯ ದುಃಖ ದುಮ್ಮಾನ

ಸಂತಾಪಗಳು  ಮುಗಿಲೆತ್ತೆರ....॥


ಪಥಸಂಚಲನ ಮದ್ದುಗುಂಡುಗಳ

ಗನ್ ಸೆಲ್ಯೂಟ್ ಶ್ರದ್ಧಾಂಜಲಿ 

ಮೌನ ಮೆರವಣಿಗೆಗಳ ಮಹಾಪೂರ॥


ನಾನೇನೋ ಹೆಣವಾದೆ

ದೇಶದ ದೃಷ್ಟಿಯಲಿ  ನಾನೊಬ್ಬ 

ಯೋಧ ಮಾತ್ರ 

ನಾಳೆ ನನ್ನಜಾಗಕ್ಕೆ ಮತ್ತೊಬ್ಬ॥


ಸೂತ್ರವನ್ನು ಕಳೆದುಕೊಂಡ

ಗಾಳಿಪಟದಂತೆ ತಲ್ಲಣಿಸುತ್ತಿದ್ದ

ನನ್ನವರ ದುಃಖ ನಿರಾಸೆ ಹೇಳ ತೀರ॥


ಸರ್ವಸ್ವವನ್ನೂ ಕಳೆದುಕೊಂಡು

ಜೀವಂತ ಶವಾಗಿ ಬದುಕಬೇಕಾದ

ನನ್ನವಳ ಬದುಕು  ಶೂನ್ಯ..ಶೂನ್ಯ.ಶೂನ್ಯ॥


                   ಶೈಲಾಶ್ರೀನಿವಾಸ್ ರಾಮನಗರ

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ

ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.


<

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ

ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್

ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ  ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ

ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ

Top Stories »  


Top ↑