Tel: 7676775624 | Mail: info@yellowandred.in

Language: EN KAN

    Follow us :


ನಿಮ್ಮಅಮೂಲ್ಯ ಮತ ಅರ್ಹವ್ಯಕ್ತಿಯನ್ನೇ ಆಯ್ಕೆ ಮಾಡಲಿ...?

Posted date: 16 Apr, 2019

Powered by:     Yellow and Red

ನಿಮ್ಮಅಮೂಲ್ಯ ಮತ ಅರ್ಹವ್ಯಕ್ತಿಯನ್ನೇ ಆಯ್ಕೆ ಮಾಡಲಿ...?

ನಮ್ಮ ಭಾರತದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಪ್ರಜೆಗಳೇ ಪ್ರಭುಗಳು ಅಂದರೆ ಅವನು ತನ್ನ ಹಕ್ಕು ಚಲಾಯಿಸಿ ಒಬ್ಬ ನಾಯಕನನ್ನು ಆರಿಸಿಕೊಳ್ಳುವುದು ವಾಡಿಕೆಯಾಗಿದೆ.


ಪ್ರಜೆಯೇ ಪ್ರಭುವಾದ ಮೇಲೆ ಅವನಿಗೆ ಒಬ್ಬ ನಾಯಕ ಬೇಕೆ ಬೇಕು? ಹೌದೆನ್ನುವಿರಾ... ?


ಅದರಲ್ಲೂ ಲಕ್ಷಾಂತರ ಮಂದಿಗೆ ಒಬ್ಬ ನಾಯಕ ! ಎಲ್ಲಾ ಪ್ರಭುಗಳು ನಾಯಕನನ್ನು ಆರಿಸಿದ ಮೇಲೆ ಪ್ರಭುಗಳಾದ ನಾವು ಆ ನಾಯಕ ಹೇಳಿದಂತೆಯೇ ಕೇಳಬೇಕು? ಮತದಾರ ಪ್ರಭುಗಳು ಹೇಳಿದಂತೆ ನಾಯಕನಾಗುವವನು ಕೇಳುವುದು ಚುನಾವಣೆಯ ಸಮಯದಲ್ಲಿ ಮಾತ್ರ ಈ ಪಿಡುಗು ನಮ್ಮ ಭಾರತದಲ್ಲಿತೊಲಗುವುದು ಬಹಳ ಕಷ್ಟಕರವೇಆಗಿದೆ.


ಪ್ರಜ್ಞಾವಂತ ನಾಗರೀಕರೇ, ಮತಬಾಂಧವರೇ, ದಯವಿಟ್ಟು ನಿಮ್ಮಅತ್ಯಮೂಲ್ಯ ಹಕ್ಕುಗಳಲ್ಲೊಂದಾದ ಮತವನ್ನು ವಸ್ತ್ರಾಭರಣಕ್ಕಾಗಿ, ಹೆಂಡಕ್ಕಾಗಿ, ಮುಖ್ಯವಾಗಿ ಹಣಕ್ಕಾಗಿ ಆಸೆಪಟ್ಟು, ಭಿಕ್ಷುಕರಂತೆ ಕೈ ಚಾಚಿ ನಿಮ್ಮತನವನ್ನು ನಿಮ್ಮ ವ್ಯಕ್ತಿತ್ವವನ್ನು ಹಾಳುಮಾಡಿಕೊಳ್ಳಬೇಡಿ, ಹಣವನ್ನುಶ್ರಮದಿಂದಗಳಿಸಿದಾಗ ಮಾತ್ರ ಸಂತೋಷ, ಸುಲಭವಾಗಿ ಪಡೆದ ಗಳಿಕೆ ಅಥವಾ ಮತಕ್ಕಾಗಿ ಅಭ್ಯರ್ಥಿಗಳು ಕೊಟ್ಟ ಹಣ, ವಸ್ತ್ರಾಭರಣವು ತಾತ್ಕಾಲಿಕವಾದದ್ದು ಮತ್ತು ಬಹಳ ಬೇಗ ಕಳೆದುಕೊಳ್ಳುವಂತಹದ್ದು, ಇದರಿಂದ ನಿಮ್ಮ ಮನಸ್ಸು ಕ್ಷಣ ಮಾತ್ರ ಖುಷಿಪಡಿಸಿಕೊಳ್ಳುವಂತಹದ್ದು.


ಇದರಿಂದ ನಿಮ್ಮ ಮನಸ್ಸುಕ್ಷಣ ಮಾತ್ರ ಖುಷಿಪಡಿಸಿಕೊಳ್ಳುತ್ತದೆ  ನಿಜ ಆದರೆ ನಂತರದ ದಿನಗಳಲ್ಲಿ ಮತ ಪಡೆದು ನಾಯಕನಾದವನು ನಿಮ್ಮನ್ನು ಜೀತದಾಳುಗಳನ್ನಾಗಿ ಮಾಡಿಕೊಳ್ಳಲು ಬಂದಾಗ ನಿಮ್ಮಕಣ್ಣಲ್ಲಿ ರಕ್ತ ಸುರಿಯುತ್ತದೆ, ಎಚ್ಚರ ಮತದಾರರೇಎಚ್ಚರ !

ನೀವು ಪ್ರಜ್ಞಾವಂತರಾಗಿ, ಆ ವ್ಯಕ್ತಿಯನ್ನುಅಧ್ಯಯನ ಮಾಡಿ, ಅವನ ವ್ಯಕ್ತಿತ್ವವನ್ನು ಪರೀಕ್ಷಿಸಿ, ಪ್ರಮಾಣಿಕನೆಂದು ದೃಢೀಕರಣಗೊಂಡಾಗ ನಿಮ್ಮ ಮತವನ್ನು ದಾನ ಮಾಡಿ ನಾಯಕನನ್ನಾಗಿ ಮಾಡಿಕೊಳ್ಳಿ ಸರಿಯಾಗಿ ಯೋಚಿಸಿ ನಿಮ್ಮಜನನಾಯಕನನ್ನಾಗಿ ಆರಿಸಿ ಹಳ್ಳಿ, ರಾಜ್ಯ, ದೇಶದ ಹಿತಕ್ಕಾಗಿ ಅರ್ಹ ವ್ಯಕ್ತಿಯನ್ನೆ ಆಯ್ಕೆ ಮಾಡಿ, ಯಾವುದೇ ವಸ್ತುವಿಗೆ ಮತ್ತು ಆಮಿಷಕ್ಕೆ ಬಲಿಯಾಗದೆ ಸದೃಢತೆಯಿಂದ, ಪ್ರಮಾಣಿಕತೆಯಿಂದ ಮತ ಚಲಾಯಿಸಿ.


ಮತದಾರರೇ ಯಾವುದೇ ಕಾರಣವನ್ನು ಮುಂದಿಡದೆ ನೀವು ನಿಮ್ಮ ಮತ ಹಾಕುವುದನ್ನು ಮರೆಯಕೂಡದು, ನಾಗರೀಕರೇ; ಇದರಿಂದ ನಮ್ಮ ಪೌರತ್ವವನ್ನು ಕಾಪಾಡಿಕೊಳ್ಳುವ ಜವಬ್ದಾರಿ ನಿಮ್ಮ ಜನ್ಮ ಸಿದ್ಧ ಹಕ್ಕು ಹೌದು, ಹೊಣೆಗಾರಿಕೆಯು ಹೌದು, ಈ ದೇಶದ ಪೌರರಾದ ನಾವು ಈ ಕೆಲಸವನ್ನು ನಮ್ಮ ಮನೆಯ ಹಿರಿಯನಿಗೆ ಸಲ್ಲುವ ಗೌರವವೆಂದು ತಿಳಿದು ಮತ ಚಲಾಯಿಸಿ.


ಸಾಧ್ಯವಾದರೆ ಅಭ್ಯರ್ಥಿಗಳನ್ನು ಖುದ್ದಾಗಿ ಭೇಟಿ ಮಾಡಿ ನಿಮ್ಮ ಕ್ಷೇತ್ರದ ಸಮಸ್ಯೆಯನ್ನು ತಿಳಿಸಿ ನಿಮಗೆ ಮತ ನೀಡಿದರೆ ಐದು ವರ್ಷಗಳಲ್ಲಿ ನಿಮ್ಮ ಕ್ಷೇತ್ರಕ್ಕೆ ನಿಮ್ಮಕೊಡುಗೆ ಏನು ? ಎಂಬ ಪ್ರಶ್ನೆಯನ್ನು ಕೇಳಿ, ಅಭ್ಯರ್ಥಿಯಿಂದ ಬರುವಉತ್ತರ ಏನೆಂದು ತಿಳಿದುಕೊಳ್ಳಿ ಜೊತೆಗೆ ಈ ಹಿಂದೆ ಏನು ಮಾಡಿದ್ದೀರಿ ? ಯಾವ ಭಾಗವನ್ನು ಅಭಿವೃದ್ಧಿಗೊಳಿಸಿದ್ದೀರೆಂಬ ನಿಮ್ಮ ಪ್ರಶ್ನೆಗೆ ನಿಖರವಾದ ಉತ್ತರ ನಿರೀಕ್ಷಿಸಿ ನಿಮ್ಮ ಪ್ರಶ್ನೆಗೆ  ಅಭ್ಯರ್ಥಿಯ ಕಡೆಯಿಂದ ಹಿಂಬಾಲಕರು ಉತ್ತರಿಸಲು ಬರಬಹುದು, ಅದನ್ನುತಡೆದು ನೇರವಾಗಿ ಅಭ್ಯರ್ಥಿಯನ್ನು ಪ್ರಶ್ನಿಸಿ ಉತ್ತರ ಪಡೆದುಕೊಂಡು ನಿಮಗೆ ಸರಿ ಎನಿಸಿದವರಿಗಷ್ಟೆ ನಿಮ್ಮಅಮೂಲ್ಯವಾದಮತನೀಡಿ.


ಅಭ್ಯರ್ಥಿಯನ್ನು ಭೇಟಿ ಮಾಡಲು ಹೊರಡುರುವುದಾದರೆ ಮೊದಲೇ ನಿಮ್ಮೆಲ್ಲಾ ಸಮಸ್ಯೆಯ ಪ್ರಶ್ನೆಗಳನ್ನು ಸಿದ್ಧಪಡಿಸಿಟ್ಟುಕೊಂಡೆ ಅವರ ಬಳಿ ಹೋಗಿ ಅವರ ಸಹಚರರಿಗೆ ಉತ್ತರಿಸಲು ಅವಕಾಶ ಕೊಡದೇ ಎಚ್ಚರಿಕೆಯಿಂದಉತ್ತರವನ್ನು ಪಡೆದುಕೊಳ್ಳಿರಿ.


ನಮ್ಮ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಗ್ರಾಮ ಹಾಗೂ ಪಟ್ಟಣಗಳ  ಪ್ರಜೆಗಳಾದ ನಿಮಗೆ ಸಹಾಯವಾಗಲೆಂದು ನನಗೆ ತಿಳಿದ ಮಟ್ಟಿಗೆ ಪ್ರಶ್ನಾವಳಿಯನ್ನು ಸಿದ್ಧಪಡಿಸಿ ನಿಮ್ಮಗಳಿಗೆ ಉಣಬಡಿಸುವ ಪ್ರಯತ್ನ ಮಾಡಿರುತ್ತೇನೆ,  ಇವುಗಳ ಜೊತೆಗೆ ನಿಮಗೆ ಗೋಚರಿಸುವ ಸಮಸ್ಯೆಯ ಸರಮಾಲೆಯನ್ನು ಸಹ ಸೇರಿಸಿ ಅಭ್ಯರ್ಥಿಯ ಮುಂದಿಡಿರಿ.


*ಲೋಕಸಭೆ ಕ್ಷೇತ್ರದ ಅಭ್ಯಥಿಯಾದ ನೀವು ನಮ್ಮಗಳ ಮನ ಓಲೈಸಿ ನಿಮ್ಮ ಮಡಿಲಿಗೆ ನಮ್ಮ ಮತವನ್ನು ಹಾಕುತ್ತೇವೆ, ನಿಮಗೆ ಶುಭವಾಗಲಿ ಎಂದು ಆಶಿಸುತ್ತ ನಮ್ಮ ಸಮಸ್ಯೆಯ ಕೆಲವೇ ಕೆಲವು ಪ್ರಶ್ನಾವಳಿಗಳನ್ನು ಮುಂದಿಡೋಣ.


೧. ನೀವು ಗೆದ್ದಂತಹ ಪಕ್ಷವು ಅಧಿಕಾರಕ್ಕೆ ಬರದೇಇದ್ದರೂ ನಮಗೆ ಕೊಟ್ಟಂತಹ ಭರವಸೆಯನ್ನು ಪಾಲಿಸುವಿರಾ ?


೨. ನೀವು ನಮ್ಮ ಕ್ಷೇತ್ರವನ್ನು ಸಂಪೂರ್ಣವಾಗಿ, ಶಾಶ್ವತವಾಗಿ ನೀರಾವರಿ ಕ್ಷೇತ್ರವನ್ನಾಗಿ ಮಾಡುವಿರಾ ?


೩. ನಿಮ್ಮ ಕ್ಷೇತ್ರವನ್ನು ಸಂಪೂರ್ಣವಾಗಿ ಗುಡಿಸಲು ಮುಕ್ತವಾಗಿಸುವಿರಾ ?


೪. ಎಲ್ಲಾ ಹಳ್ಳಿಗಳಿಗೆ ಶುದ್ಧಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವಿರಾ ?  ಈಗಾಗಲೇ ಕಲ್ಪಿಸಿರುವವನ್ನು ಸುಸ್ಥಿತಿಯಲ್ಲಿಡುವಿರಾ ?


೫. ಪ್ರತಿ ಮನೆಗೂ ಶೌಚಾಲಯ ಜಾರಿಯಲ್ಲಿದ್ದರೂ ಸಹ ವಾರಸುದಾರರು ಶೌಚಾಲಯ ನಿರ್ಮಿಸಿಕೊಳ್ಳದಂತೆಯೇ ಹಣ ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ಅದರ ಸಮಸ್ಯೆಯನ್ನು ನೀಗಿಸಲು ಆ ಕ್ಷೇತ್ರದ ವ್ಯಾಪ್ತಿಗೆ ಬರುವ ಅಧಿಕಾರಿಗಳ ಮೂಲಕ ಸಫಲಗೊಳಿಸುವಿರಾ?


೬. ಪ್ರತಿಗ್ರಾಮ ಪಂಚಾಯ್ತಿಗೊಂದರಂತೆ ಸಾರ್ವಜನಿಕ ಆಸ್ಪತ್ರೆ ಮತ್ತು ಜಾನುವಾರಗಳ ಆಸ್ಪತ್ರೆ ನಿರ್ಮಿಸಿಕೊಡುವಿರಾ ?


೭. ಈ ದುಬಾರಿಯುಗದಲ್ಲಿ ಹೆಣ್ಣು ಮಕ್ಕಳಿಗೆ ವರದಕ್ಷಣೆ, ವರೋಪಚಾರಗಳನ್ನು ಕೊಟ್ಟು ವಿವಾಹ ಮಾಡುವುದೇ ಕಷ್ಟಕರ ಅದರಲ್ಲೂ ಅದ್ದೂರಿ ಕಲ್ಯಾಣ ಮಂಟಪದಲ್ಲೇ ಆಗಬೇಕೆಂದು ಕೆಲವು ವರನ ಕಡೆಯವರು ಹೇಳುತ್ತಾರೆ. ಅದಕ್ಕೆ ಕೊನೇ ಪಕ್ಷ ಪಂಚಾಯ್ತಿಗೊಂದರಂತೆ ಸಮುದಾಯ ಭವನವನ್ನು ನಿರ್ಮಿಸಿಕೊಡಲು ಸಹಕರಿಸುವಿರಾ ?


೮. ಮುಖ್ಯವಾಗಿ ಸರ್ಕಾರಿ, ಸಹಕಾರಿ, ಉಚಿತ ಎಂಬ ಅರ್ಥವಿದ್ದರೂ ಸಹ ಸರ್ಕಾರಿ ಆಫೀಸುಗಳಲ್ಲಿ ಅದರಲ್ಲೂ ತಾಲ್ಲೂಕು ಆಫೀಸ್, ಪೊಲೀಸ್‌ಠಾಣೆ,  ನೊಂದಾವಣಿ ಕಛೇರಿಯಲ್ಲಿ ತಾಂಡವವಾಡುತ್ತಿರುವ ಲಂಚ ಕೋರತನವನ್ನು ತಡೆಗಟ್ಟುವ ಹೊಣೆ ಹೊರುವಿರಾ ?


೯.  ಕೆಲವು ಬೀದಿಗಳಲ್ಲಿ ಒಂದು ವಾಹನವನ್ನು ನಿಲ್ಲಿಸಿದರೆ ಮತ್ತೊಂದು ವಾಹನವು ತಿರುಗಾಡಲುಕಷ್ಟಕರವಾಗಿರುವುದರಿಂದ ರಸ್ತೆ ಅಗಲೀಕರಣದ ಬಗ್ಗೆ ಕ್ರಮಗೈಗೊಂಡು ಡಾಂಬರು ಹಾಕಿಸುವತ್ತ ಗಮನ ಹರಿಸುವಿರಾ?


೧೦. ಧರ್ಮಾಂಧತೆಗೊಳಗಾಗಿ ಎಷ್ಟೋ ಯೋಜನೆಗಳು ಎಷ್ಟೋ ವರ್ಷಗಳಿಂದ ನೆಲಕಚ್ಚಿವೆ. ಉದಾಹರಣೆಗೆ ಸಾತನೂರುರಸ್ತೆ, ಚರ್ಚ್ ರಸ್ತೆ ಇನ್ನು ಕೆಲವು ರಸ್ತೆಗಳ ವಿವಾದಿತ ಜಾಗಗಳನ್ನು  ತೆರುವುಗೊಳಿಸಿ  ಅಗಲೀಕರಣಗೊಳಿಸಿ, ಪಾದಚಾರಿಗಳಿಗೆ ಓಡಾಡಲು ಅವಕಾಶ ಮಾಡಿಕೊಡುವಿರಾ?


೧೧. ಎಲ್ಲೆಂದರಲ್ಲಿ ಗಲ್ಲಿಗೊಂದರಂತೆ ತಲೆ ಎತ್ತುತ್ತಿರುವ ಮಸೀದಿಗಳು,  ಬಾರ್‌ಗಳು, ಫುಟ್‌ಪಾತ್ ‌ತಿಂಡಿ ತಿನಿಸುಗಳಿಗೆ ಕಡಿವಾಣ ಹಾಕುವಿರಾ ?


೧೨. ಫುಟ್‌ಪಾತ್ ವ್ಯಾಪಾರಿಗಳಿಗೆ ಇರುವ ಕಟ್ಟಡಗಳನ್ನು ಸರಿಪಡಿಸಿಕೊಟ್ಟು ಅಲ್ಲಿಯೇ ತೆರಳಿ ವ್ಯಾಪಾರ ಮಾಡುವಂತೆ ಅವರು ಹೊಟ್ಟೆ ಪಾಡಿಗೆ ದುಡಿಯಲು ಅನುವು ಮಾಡಿಕೊಡುವಿರಾ ?


೧೩. ನಗರಸಭೆ ಗ್ರಾಮ ಪಂಚಾಯ್ತಿ ಮುಂತದಾದ ಕಡೆಗೆ ಬರುವ ಅನುದಾನವನ್ನು ಸಮರ್ಪಕವಾಗಿ ಹಂಚಿ ಕೆಲಸಕ್ಕೆ ಸೂಕ್ತವಾದ ಮಾರ್ಗದರ್ಶನ ಕೊಡಿಸುವಿರಾ ?


೧೪. ಎಗ್ಗಿಲದೆ ತಲೆ ಎತ್ತುತ್ತಿರುವ ಚೀಟಿ ವ್ಯವಹಾರ, ಚಿಟ್‌ಫಂಡ್,  ಮೀಟರ್ ಬಡ್ಡಿ ಸಾಲ, ರೈತರಿಗೆ ಹಾಗೂ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿರುವ ಈ ದಂಧೆಯನ್ನು ನಿಷೇಧಿಸುವಿರಾ ?


೧೫. ಚನ್ನಪಟ್ಟಣತಾಲ್ಲೂಕಿನಲ್ಲಿ ಇತ್ತೀಚೆಗೆ ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳು ಬಹಳ ಹೆಚ್ಚಾಗುತ್ತಿವೆ. ಅದರ ಬಗ್ಗೆ ಗಮನ ಹರುಸುವಿರಾ ?


ಇಂತಹ ಪ್ರಶ್ನೆಗಳು ತಲೆ ಮತ್ತೆ ಎತ್ತದಂತೆ ನ್ಯಾಯಯುತವಾಗಿ ಸಮಪರ್ಕವಾಗಿರುವಂತೆ ಮಾಡುವುದಾರೆ ಹಾಗೂ ನಮ್ಮೆಲ್ಲರ ಭರವಸೆಯನ್ನು ಕಟ್ಟುನಿಟ್ಟಾಗಿ ಈಡೇರಿಸುವುದಾದರೆ ಈ ಅವಧಿ ಅಷ್ಟೆ ಅಲ್ಲಾ ಎಂದೆಂದೂ ನಮ್ಮಗಳ ಮತ ನಿಮ್ಮ ಪ್ರಮಾಣಿಕ ಸೇವೆಗೆ ಕಟ್ಟಿಟ್ಟ ಬುತ್ತಿ ಹೌದುತಾನೆ.


ಉಪಸಂಹಾರ


ಇಲ್ಲಿ ಅಭ್ಯರ್ಥಿಗಳು ಎಷ್ಟೇ ಇದ್ದರೂ ಹಣಾಹಣಿ ಮಾತ್ರ ಎರಡು ಪಕ್ಷಗಳಿಗಷ್ಟೆ ಸೀಮಿತ. (ಮೈತ್ರಿ ಸೇರಿದಂತೆ)

ಹಾಗಾಗಿ ಭ್ರಷ್ಟ ಹಾಗೂ ಅತಿ ಭ್ರಷ್ಟರನ್ನು ಹುಡುಕಿ ತುಲನೆ ಮಾಡಿ ಪ್ರಾಮಾಣಿಕ ಸಚ್ಚಾರಿತ್ರ ಉಳ್ಳವರಿಗೆ ಮಾತ್ರ ನಿಮ್ಮಅಮೂಲ್ಯವಾದ ಮತ ನೀಡಿರಿ.


ಇಂತಿ

ಲಕ್ಷ್ಮಿ ಗೋ ರಾ ಶ್ರೀನಿವಾಸ್

ಗೋವಿಂದೇಗೌಡನದೊಡ್ಡಿ

ಚನ್ನಪಟ್ಟಣ.

(ಹವ್ಯಾಸಿ ಬರಹಗಾರ್ತಿ)

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in nation »

ಜುಲೈ 8ರಂದು ರಾಷ್ಟೀಯ ಲೋಕ ಅದಾಲತ್
ಜುಲೈ 8ರಂದು ರಾಷ್ಟೀಯ ಲೋಕ ಅದಾಲತ್

ರಾಮನಗರ, ಜೂ. 03:   ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿ ಆಗಬಹುದಾದ ಪ್ರಕರಣಗಳನ್ನು 2023ರ ಜುಲೈ 8ರಂದು ನಡೆಯಲಿರುವ ರಾಷ್ಟ್ರೀಯ ಲೋಕ

ಕೆಂಪೇಗೌಡರ ಸಮಾಧಿಯನ್ನು ಪ್ರೇಕ್ಷಣೀಯ ಹಾಗೂ ಪ್ರೇರಣಾ  ಸ್ಥಳವನ್ನಾಗಿ ಅಭಿವೃದ್ಧಿ: ಸಿಎಂ
ಕೆಂಪೇಗೌಡರ ಸಮಾಧಿಯನ್ನು ಪ್ರೇಕ್ಷಣೀಯ ಹಾಗೂ ಪ್ರೇರಣಾ ಸ್ಥಳವನ್ನಾಗಿ ಅಭಿವೃದ್ಧಿ: ಸಿಎಂ

ರಾಮನಗರ, ಜನವರಿ 03: ನಾಡಪ್ರಭು ಕೆಂಪೇಗೌಡರ ವೀರ ಸಮಾಧಿಯನ್ನು ಪ್ರೇಕ್ಷಣೀಯ ಹಾಗೂ ಪ್ರೇರಣಾ ಸ್ಥಳವನ್ನಾಗಿ ಅಭಿವೃದ್ಧಿ ಮಾಡುವುದು ಸರ್ಕಾರದ ಉದ್ದೇಶ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳ

ನಾಳೆ ಸಂಭವಿಸಲಿದೆ ಈ ವರ್ಷದ ಕೊನೆಯ ಸೂರ್ಯಗ್ರಹಣ
ನಾಳೆ ಸಂಭವಿಸಲಿದೆ ಈ ವರ್ಷದ ಕೊನೆಯ ಸೂರ್ಯಗ್ರಹಣ

ಡಿಸೆಂಬರ್‌ 4ರ ಶನಿವಾರ ಸೂರ್ಯ ಗ್ರಹಣ ಸಂಭವಿಸಲಿದ್ದು ಇದು ಈ ವರ್ಷದ ಕೊನೆಯ ಗ್ರಹಣವಾಗಿರಲಿದೆ. ಪೂರ್ಣ ಸೂರ್ಯ ಗ್ರಹಣದ ವಿದ್ಯಮಾನ ವಿಶೇಷವಾಗಿದ್ದು ಆ ಸಂದರ್ಭದಲ್ಲಿನ ಪ್ರಕೃತಿಯ ವೈಚಿತ್ರ್ಯಗಳನ್ನು ನೋಡ

ಆಗ್ನೇಯ ಭಾಗದಿಂದ ಚಂಡಾಮಾರುತ ಅಪ್ಪಳಿಸುವ ಸಾಧ್ಯತೆ
ಆಗ್ನೇಯ ಭಾಗದಿಂದ ಚಂಡಾಮಾರುತ ಅಪ್ಪಳಿಸುವ ಸಾಧ್ಯತೆ

ನವದೆಹಲಿ: ಆಗ್ನೇಯ ದಿಕ್ಕಿನಿಂದ ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿ ಪ್ರದೇಶಗಳಿಗೆ ಡಿ.4ರಂದು ಬೆಳಗ್ಗೆ ಚಂಡಾಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಕಾಲಿಕ ಮರಣ
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಕಾಲಿಕ ಮರಣ


ಬೆಂಗಳೂರು.ಅ.29/21: ದೊಡ್ಮನೆ ಹುಡುಗ ಎಂದೇ ಖ್ಯಾತರಾದ, ಮೇರುನಟ ಡಾ ರಾಜಕುಮಾರ್ ರವರ ಕೊನೆಯ ಪುತ್ರ ಕನ್ನಡದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ರವರು ಇಂದು ಬೆಳಿಗ್ಗೆ ಅಸುನೀಗಿದ್ದಾರೆ. ಅವರು ಮುಂಜಾನೆ ಜಿಮ್ ನಲ್ಲಿ ಕಸರತ್ತು ನಡ

ಕೆಂಪೇಗೌಡರು ಒಬ್ಬ ವ್ಯಕ್ತಿಗೆ ಸೀಮಿತವಲ್ಲ. ಅವರು ರಾಷ್ಟ್ರದ ನಾಯಕರು. ಎಲ್ಐಸಿ ನಾಗರಾಜು
ಕೆಂಪೇಗೌಡರು ಒಬ್ಬ ವ್ಯಕ್ತಿಗೆ ಸೀಮಿತವಲ್ಲ. ಅವರು ರಾಷ್ಟ್ರದ ನಾಯಕರು. ಎಲ್ಐಸಿ ನಾಗರಾಜು

ಕೆಂಪೇಗೌಡರು ಒಕ್ಕಲಿಗರಿಗಾಗಲಿ, ಬೆಂಗಳೂರು ನಿರ್ಮಾತೃರಾಗಿ ಸೀಮಿತವಾಗಿರಲಿಲ್ಲ. ಕರ್ನಾಟಕದ ಭಾಗವಾಗಿದ್ದ ವಿಜಯನಗರದ ಸಾಮ್ರಾಜ್ಯಕಷ್ಟೇ ಸೀಮೀತವಾಗಿರಲಿಲ್ಲ.‌ಅವರ ಕನಸು ಬಹಳ ವಿಸ್ತಾರವಾಗಿತ್ತು. ಇಡೀ ಭಾರ

ಪಶ್ಚಿಮಬಂಗಾಳದಲ್ಲಿ ಪರಿಶಿಷ್ಟರಿಗೆ ಅವಮಾನ ಮಾಡಿದ  ತೃಣಮೂಲ ಕಾಂಗ್ರೆಸ್. ತಹಶಿಲ್ದಾರ್ ಮುಖೇನ ರಾಷ್ಟ್ರಪತಿಗೆ ದೂರು ಸಲ್ಲಿಸಿದ ಬಿಜೆಪಿ ಎಸ್ಸಿ ಮೋರ್ಚಾ
ಪಶ್ಚಿಮಬಂಗಾಳದಲ್ಲಿ ಪರಿಶಿಷ್ಟರಿಗೆ ಅವಮಾನ ಮಾಡಿದ ತೃಣಮೂಲ ಕಾಂಗ್ರೆಸ್. ತಹಶಿಲ್ದಾರ್ ಮುಖೇನ ರಾಷ್ಟ್ರಪತಿಗೆ ದೂರು ಸಲ್ಲಿಸಿದ ಬಿಜೆಪಿ ಎಸ್ಸಿ ಮೋರ್ಚಾ

ನಾವು ಹಿಂದುಳಿದವರ ಪರ, ಅಲ್ಪಸಂಖ್ಯಾತರ ಪರ ಎಂದು ಬೊಬ್ಬಿರಿಯುವ ಪಶ್ಚಿಮ ಬಂಗಾಳದ ನಾಯಕಿ ಮಮತಾ ಬ್ಯಾನರ್ಜಿಯವರು, ಅವರ ತೃಣಮೂಲ ಕಾಂಗ್ರೆಸ್ ಪಕ್ಷದ ಮತ್ತೋರ್ವ ನಾಯಕಿ ಸುಜಾತ ಮೊಂಡಲ್ ಖಾನ್ ರವರ ಬಾಯಲ್ಲಿ

ಟೊಯೋಟಾ ಕಿರ್ಲೋಸ್ಕರ್  ಮೋಟಾರ್ಸ್ ಹೊಸ ಫಾರ್ಚೂನರ್ ಮತ್ತು ಲೆಜೆಂಡರ್ ನೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸುತ್ತಿದೆ
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಹೊಸ ಫಾರ್ಚೂನರ್ ಮತ್ತು ಲೆಜೆಂಡರ್ ನೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸುತ್ತಿದೆ

ಬೆಂಗಳೂರು:ಜ/06/21ಬುಧವಾರ. ಹೊಸ ಫಾರ್ಚೂನರ್ ತಂಡವು ಈಗ ಹೆಚ್ಚು ಶಕ್ತಿಶಾಲಿ ಡೀಸೆಲ್ ಸ್ವಯಂಚಾಲಿತ ಪ್ರಸರಣ ರೂಪಾಂತರಗಳನ್ನು ಮತ್ತು ವಿಶೇಷ ,

ಅತ್ಯಾಚಾರ ಎಸಗಿ ಕೊಲೆಗೈದ ಪಾಪಿಗಳಿಗೆ ಗಲ್ಲು ಶಿಕ್ಷೆ ನೀಡಿ, ದಲಿತ ಸಂಘಟನೆಗಳ ಆಕ್ರೋಶ
ಅತ್ಯಾಚಾರ ಎಸಗಿ ಕೊಲೆಗೈದ ಪಾಪಿಗಳಿಗೆ ಗಲ್ಲು ಶಿಕ್ಷೆ ನೀಡಿ, ದಲಿತ ಸಂಘಟನೆಗಳ ಆಕ್ರೋಶ

ಚನ್ನಪಟ್ಟಣ:ಅ/05/20/ಸೋಮವಾರ.


ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ ಯುವತಿ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ನಡೆಸಿ, ಅಮಾನುಷವಾಗಿ ಹತ್ಯೆಗೈದ ಕ್ರೂರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಕುಟುಂಬದವರಿಗೂ ಮುಖ ತೋರಿಸದೆ ರಾ

ಇನ್ನು ಮುಂದೆ ಪ್ಯಾರಾಮಿಲ್ಟ್ರಿ ಕ್ಯಾಂಟೀನ್ ಗಳಲ್ಲಿ ಸ್ವದೇಶಿ ವಸ್ತುಗಳಷ್ಟೇ ಮಾರಾಟ ಅಮಿತ್ ಷಾ
ಇನ್ನು ಮುಂದೆ ಪ್ಯಾರಾಮಿಲ್ಟ್ರಿ ಕ್ಯಾಂಟೀನ್ ಗಳಲ್ಲಿ ಸ್ವದೇಶಿ ವಸ್ತುಗಳಷ್ಟೇ ಮಾರಾಟ ಅಮಿತ್ ಷಾ

ದೆಹಲಿ:ಮೇ/೧೩/೨೦/ಬುಧವಾರ. ದೇಶ ಕಾಯುತ್ತಿರುವ ಅರೆಸೈನಿಕ ಪಡೆಯ ದೇಶದ ನಾನಾ ಭಾಗದ ಎಲ್ಲಾ ಕ್ಯಾಂಟೀನ್ ಗಳಲ್ಲೂ ಜೂನ್ ಒಂದನೇ ತಾರೀಖಿನಿಂದ ಸ್ವದೇಶ

Top Stories »  


Top ↑