ತಾಲ್ಲೂಕಿನಲ್ಲಿ ಸರಳ ಸ್ವಾತಂತ್ರ್ಯೋತ್ಸವ ಆಚರಣೆ ತಹಶಿಲ್ದಾರ್ ನಾಗೇಶ್
ಚನ್ನಪಟ್ಟಣ:ಆ/07/20/ಶುಕ್ರವಾರ. ಕೊರೊನಾ (ಕೋವಿಡ್-19) ಹಿನ್ನೆಲೆಯಲ್ಲಿ 74 ನೇ ಸ್ವಾತಂತ್ರ್ಯೋತ್ಸವ ವನ್ನು ಸರಳವಾಗಿ ಆಚರಿಸಲಾಗುವುದು ಎಂದು ತಹಶಿಲ್ದಾರ್ ನಾಗೇಶ್ ರವರು ತಿಳಿಸಿದರು.ಅವರು ಇಂದು ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಅಧಿಕಾರಿಗಳು ಮತ್ತು ನಾಡಹಬ್ಬ ಆಚರಣಾ ಸಮಿತಿಯ ಸದಸ್ಯರ ಜೊತೆ ಚರ್ಚಿಸಿ ಈ ವಿಷಯ ತಿಳಿಸಿದರು.ಯಾವುದೇ ಶಾಲೆಯ ಮಕ್ಕಳನ್ನು ಕ
ಹಣಬಲ ಇರುವವರಿಗೆ ಇ-ಸ್ವತ್ತು ಮಾಡುವುದಲ್ಲಾ, ಬಡವರಿಗೆ ನಿಗದಿತ ಸಮಯದಲ್ಲಿ ಇ-ಸ್ವತ್ತು ನೀಡುವವನು ನೈಜ ಅಧಿಕಾರಿ. ಸಂಸದ ಡಿ ಕೆ ಸುರೇಶ್
ಚನ್ನಪಟ್ಟಣ:ಆ/06/20/ಗುರುವಾರ. ಹಣಬಲ ಇರುವವರಿಗೆ, ರಾಜಕಾರಣಿಗಳ ಹಿಂಬಾಲಕರಿಗೆ ಲಂಚ ಪಡೆದು, ಕೇಳಿದ ತಕ್ಷಣ ಇ-ಸ್ವತ್ತು ಮಾಡುವ ಅಧಿಕಾರಿಗಳು, ಬಡವರಿಗೂ ಅದೇ ಸಮಯದಲ್ಲಿ ಇ-ಸ್ವತ್ತು ಮಾಡಿಕೊಡಬೇಕು. ಆಗಲೇ ಅವನು ನಿಜವಾದ ಅಧಿಕಾರಿಯಾಗಲು ಸಾಧ್ಯ. ಗ್ರಾಮ ಪಂಚಾಯತಿಯಲ್ಲಿ ಪಿಡಿಓ ಆದಿಯಾಗಿ ಯಾವ್ಯಾವ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆಂದು ಗೊತ್ತಿದೆ. ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್
ಬಾಲಕಿಯರ ಮಂದಿರದಿಂದ ಇಬ್ಬರು ನಾಪತ್ತೆ, ಇಲಾಖೆಯ ನಿರ್ಲಕ್ಷ್ಯ
ರಾಮನಗರ:ಆ/06/20/ಗುರುವಾರ. ರಾಮನಗರದ ಐಜೂರಿನಲ್ಲಿರುವ ಬಾಲಕಿಯರ ಮಂದಿರದಿಂದ ನಿನ್ನೆ ಬೆಳಿಗ್ಗೆ ಇಬ್ಬರು ಹುಡುಗಿಯರು ನಾಪತ್ತೆಯಾಗಿದ್ದು ಒಂದು ತಿಂಗಳ ಅವಧಿಯಲ್ಲಿ ಇದು ಎರಡನೇ ಬಾರಿ ಈ ಪ್ರಕರಣ ನಡೆದಿದ್ದು ಇಲಾಖೆಯಲ್ಲಿ ಲೋಪದೋಷಗಳಿವೆ ಎಂಬುದಕ್ಕೆ ಸಾಕ್ಷಿಯಾಗಿದೆ.ಈ ಮೊದಲು ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆ ಬಳಿಯ ಮಾರುತಿ ವಿದ್ಯಾಮಂದಿರದ ಬಾಡಿಗೆ ಕಟ್ಟಡದಲ್
ಅಯೋಧ್ಯೆಯಲ್ಲಿ ಶಿಲನ್ಯಾಸ, ತಾಲ್ಲೂಕಿನಲ್ಲಿ ಸಂಭ್ರಮ
ಚನ್ನಪಟ್ಟಣ:ಆ/05/20/ಬುಧವಾರ. ರಾಮ ರಾಮ ಜಯರಾಮ, ಜೈಶ್ರೀರಾಮ, ಸೀತಾರಾಮ ಜೈ ಎಂಬ ಘೋಷಣೆಗಳು, ನಗರ ಮತ್ತು ಗ್ರಾಮಾಂತರ ಪ್ರದೇಶದ ಹಲವಾರು ದೇವಾಲಯಗಳಲ್ಲಿ, ಮೊಳಗುವ ಮೂಲಕ ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ನ ದೇಗುಲದ ಭೂಮಿ ಪೂಜೆಗನುಸಾರವಾಗಿ, ರಾಮನ ಭಕ್ತರನೇಕರು ಇಂದು ಶ್ರೀರಾಮ ನ ಘೋಷಣೆ ಕೂಗುವ ಮೂಲಕ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.
ತಾಲ್ಲೂಕಿನಲ್ಲಿ ಪುನರಾರಂಭವಾಯಿತೇ ಮರಳು ದಂಧೆ !? ಪುಷ್ಟೀಕರಿಸುತ್ತಿದೆ ಅಪ್ಪಗೆರೆ ಬಳಿಯ ಸಾಕ್ಷಿಗುಡ್ಡೆ
ಚನ್ನಪಟ್ಟಣ:ಆ/05/20/ಬುಧವಾರ. ಕಳೆದ ವರ್ಷದಿಂದ ಮರಳು ಅಥವಾ ಮರಳು ದಂಧೆ ಎಂಬ ಹೆಸರೇ ಮರೆತು ಹೋಗಿದ್ದ ತಾಲ್ಲೂಕಿನ ಮಂದಿಗೆ ನಿನ್ನೆ ರಾತ್ರಿ ಎಡೆಬಿಡದೆ ಓಡಾಡಿದ ಲಾರಿಗಳು ಮತ್ತು ಟ್ರ್ಯಾಕ್ಟರ್ ಗಳ ಗಡಚಿಕ್ಕುವ ಸದ್ದಿನ ಜೊತೆಗೆ ಅಪ್ಪಗೆರೆ ಮತ್ತು ನೀಲಕಂಠನಹಳ್ಳಿ ನಡುವಿನ ಖಾಲಿ ಜಮೀನಿನಲ್ಲಿ ಗುಡ್ಡೆ ಹಾಕಿರುವ ಮರಳುಗುಡ್ಡೆಯು, ದಂಧೆ ಪುನಾರಾರಂಭಗೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಹನೂರು ಪಟ್ಟಣ ಪಂಚಾಯತಿಯಲ್ಲಿ ಇ-ಸ್ವತ್ತು ಭ್ರಷ್ಟಾಚಾರ. ಇಬ್ಬರ ತಲೆದಂಡ
ಹನೂರು:ಆ/೦೩/೨೦/ಸೋಮವಾರ.ಖಾತೆ ಬದಲಾವಣೆ, ಇ-ಸ್ವತ್ತು ವ್ಯವಹಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದ ಹನೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮೂರ್ತಿ ಹಾಗೂ ದ್ವಿತೀಯ ದರ್ಜೆ ಸಹಾಯಕಿ ಜಯಲಕ್ಷ್ಮಿ ರವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಚಾರಣೆ ಕಾಯ್ದಿರಿಸಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಕಾವೇರಿ ಯವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಶಿಸ್ತ
ದಕ್ಷ ತಹಶಿಲ್ದಾರ್ ಸುದರ್ಶನ್ ರವರ ವರ್ಗಾವಣೆ ಖಂಡಿಸಿ ಸಮಾನ ಮನಸ್ಕರಿಂದ ತಾಲ್ಲೂಕು ಕಛೇರಿ ಮುಂದೆ ಧರಣಿ
ಚನ್ನಪಟ್ಟಣ:ಆ/03/20/ಸೋಮವಾರ. ದಕ್ಷ, ಪ್ರಾಮಾಣಿಕ, ಜನಸ್ನೇಹಿ ತಹಶಿಲ್ದಾರ್ ಸುದರ್ಶನ್ ರವರ ವರ್ಗಾವಣೆ ವಿರೋಧಿಸಿ ತಾಲ್ಲೂಕಿನ ಸಮಾನ ಮನಸ್ಕರ ಒಕ್ಕೂಟದ ವತಿಯಿಂದ ಧರಣಿ ನಡೆಸಿ ನೂತನ ತಹಶಿಲ್ದಾರ್ ನಾಗೇಶ್ ರವರಿಗೆ ಮನವಿ ಸಲ್ಲಿಸಿದರು.ಸರ್ಕಾರಿ ಭೂಗಳ್ಳರ ವಿರುಧ್ಧ ನಿರಂತರವಾಗಿ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸುವ ಮೂಲಕ ತಾಲ್ಲೂಕಿನ ಜನಸಾಮಾನ್ಯರ ಮನಸ್ಸನ್ನು
ಕೊರೊನಾ ಹಿನ್ನೆಲೆ: ಸರಳವಾಗಿ ಆಚರಣೆಗೊಂಡ ಬಕ್ರೀದ್ ಹಬ್ಬ
ಚನ್ನಪಟ್ಟಣ:ಆ/01/20 ಮುಸಲ್ಮಾನರ ಕೆಲವೇ ಹಬ್ಬಗಳಲ್ಲಿ ಬಕ್ರೀದ್ ಒಂದು ಪ್ರಮುಖ ಹಬ್ಬ. ತ್ಯಾಗ ಬಲಿದಾನದ ಸಂಕೇತವಾಾದ ಈ ಹಬ್ಬವನ್ನುವ ಭಾರತವೂ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಶ್ರದ್ಧೆ ಭಕ್ತಿಯಿಂದ ಇಂದು ಆಚರಿಸಿದರು.ಈ ಹಿಂದೆ ತಾಲ್ಲೂಕಿನಾದ್ಯಂತ ಇರುವ ಮಸ್ಜಿದ್ ಗಳು ಸೇರಿದಂತೆ ನಗರದ ಬೆಂಗಳೂರು ಮೈಸೂರು ಹೆದ್ದಾರಿಯ ನ್ಯಾಯಾಲಯ ಸಂಕೀರ್ಣದ ದರ್ಗಾ ಪ್ರದೇಶದಲ್ಲಿ ಜಮಾಯಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿ
ದಂಡಾಧಿಕಾರಿ ಸುದರ್ಶನ್ ವರ್ಗಾವಣೆ: ತಾಲ್ಲೂಕು ಕಛೇರಿಗೆ ಬೀಗ ಜಡಿಯಲು ಸಮಾನ ಮನಸ್ಕರಿಂದ ವೇದಿಕೆ ಸಿದ್ದ
ಚನ್ನಪಟ್ಟಣ:ಜು/31/20/ಶುಕ್ರವಾರ. ತಾಲ್ಲೂಕಿನ ನಿಷ್ಠಾವಂತ ಅಧಿಕಾರಿ ಎನಿಸಿಕೊಂಡಿದ್ದ ದಂಡಾಧಿಕಾರಿ ಬಿ ಕೆ ಸುದರ್ಶನ್ ರವರನ್ನು ವರ್ಷ ತುಂಬಿದ ಬೆನ್ನಲ್ಲೇ ಏಕಾಏಕಿ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ತಾಲ್ಲೂಕಿನ ಸಮಾನ ಮನಸ್ಕರ ವೇದಿಕೆಯಿಂದ ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ತಾಲ್ಲೂಕು ಕಛೇರಿಗೆ ಬೀಗ ಜಡಿಯಲು ತೀರ್ಮಾನಿಸಲಾಗಿದೆ ಎಂದು ವೇದಿಕೆಯ ಪ
ಮನೆ ಮತ್ತು ದೇವಾಲಯಗಳಲ್ಲಿ ಸರಳಾಚರಣೆಗೊಂಡ ವರಮಹಾಲಕ್ಷ್ಮಿ ಹಬ್ಬ
ಚನ್ನಪಟ್ಟಣ:ಜು:೩೧/೨೦/ಶುಕ್ರವಾರ. ಕಳೆದ ಒಂದೂವರೆ ದಶಕದಿಂದ ಅದ್ದೂರಿ ಪೂಜೆಗೆ ಅರ್ಹಳಾಗಿದ್ದ ವರಮಹಾಲಕ್ಷ್ಮಿ ದೇವಿ ಯು ಈ ವರ್ಷ ಕೊರೊನಾ ಭಯದಿಂದ ಸ್ವಲ್ಪ ಮಟ್ಟಿಗೆ ಅದ್ದೂರಿತನ ಕಳೆದುಕೊಂಡು ಸರಳಾ ಪೂಜೆಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.ನಗರದ ಮನೆಯ