ಪುಟ್ಪಾತ್ ಇಲ್ಲದ ರಾಜ್ಯದ ಹೆದ್ದಾರಿ ? ಸಿಎಂ ಕ್ಷೇತ್ರದಲ್ಲಿ ರಸ್ತೆ ಅಗಲೀಕರಣ ಅಸಾಧ್ಯವೇ ?
Sಮುಖ್ಯಮಂತ್ರಿಗಳ ಕ್ಷೇತ್ರ ಎಂದರೆ ಅಭಿವೃದ್ಧಿಗಳ ಆಗರ ಎಂದೇ ಎಲ್ಲರೂ ಭಾವಿಸುತ್ತಾರೆ, ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ವಲಸೆ ಕ್ಷೇತ್ರವಾದ ಚನ್ನಪಟ್ಟಣ ಯಾವ ಅಭಿವೃದ್ಧಿಯನ್ನು ಕಾಣದೆ ಸಾಮಾನ್ಯ ಶಾಸಕರ ಕ್ಷೇತ್ರಕ್ಕಿಂತಲೂ ಕುಂಠಿತವಾಗಿದೆ.ಬದಲಾವಣೆಗಾಗಿ ನನ್ನನ್ನು ಚುನಾಯಿಸಿ ಎಂದು ಮನವಿ ಮಾಡಿ ಗೆದ್ದು ನಂತರ ಮುಖ್ಯಮಂತ್ರಿಯಾದರೂ ಸಹ ತಾಲ್ಲೂಕಿನ
ಕಳಪೆ ಕಾಮಗಾರಿ ಪರಿಶೀಲನೆ, ಕಿರಿಯ ಇಂಜಿನಿಯರ್ ಶಂಕರ್ ಮೇಲೆ ತೂಗುಗತ್ತಿ
ತಾಲ್ಲೂಕಿನ ಲಾಳಾಘಟ್ಟ ಗ್ರಾಮದ ಶಾಲಾ ಆವರಣದಲ್ಲಿ ನಿರ್ಮಿಸಿರುವ ಮಕ್ಕಳ ಸೈಕಲ್ ನಿಲ್ದಾಣ ಮತ್ತು ಸಾತನೂರು ರಸ್ತೆಯ ಹರಿಸಂದ್ರ ಮತ್ತು ನೀಲಸಂದ್ರ ಗ್ರಾಮದ ಬಸ್ ತಂಗುದಾಣದಲ್ಲಿ ನಡೆದಿರುವ ಕಾಮಗಾರಿಗಳು ಮೇಲ್ನೋಟಕ್ಕೆ ಕಳಪೆ ಗುಣಮಟ್ಟದ ಕಾಮಗಾರಿಗಳು ಎಂದು ತಿಳಿಯುತ್ತಿದೆ, ಕಾಮಗಾರಿ, ಅಂದಾಜು ಪಟ್ಟಿ ಹಾಗೂ ಬಿಲ್ ಪರಿಶೀಲಿಸಿ ವರದಿಯನ್ನು ಸಿಇಓ ರವರಿಗೆ ಒಪ್ಪಿಸುತ್ತೇನೆ, ತಪ್ಪು ಎಂಬುದು ಸಾಬೀತಾದರೆ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ರಾಮ
ಉಜ್ಜನಿ ಗ್ರಾಮದ ಹೆಬ್ಬಾರಮ್ಮ ದೇವಸ್ಥಾನದಲ್ಲಿ ದಲಿತರೇ ಪುರೋಹಿತರು
ದಲಿತರಿಗೆ ದೇವಾಲಯಗಳಲ್ಲಿ ಪ್ರವೇಶ ನಿರಾಕರಣೆ, ದೇವಸ್ಥಾನದ ತೀರ್ಥಪ್ರಸಾದ ವನ್ನು ದೂರದಿಂದ ಹಾಕುತ್ತಾರೆ, ನಮಗೆ ನ್ಯಾಯ ಒದಗಿಸಿ, ದೇವಾಲಯ ಪ್ರವೇಶಿಸಲು, ದೇವರನ್ನು ಪೂಜಿಸಲು ಅನುವು ಮಾಡಿಕೊಡಿ ಎಂದು ಈ ಇಪ್ಪತ್ತೊಂದನೇ ಶತಮಾನದಲ್ಲಿಯೂ ಕೆಲವು ಭಾಗದ ದಲಿತರು ಕೇಳುತ್ತಿದ್ದರೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ (ಚನ್ನಪಟ್ಟಣ ತಾಲ್ಲೂಕಿನ ಗಡಿ ಗೆ ಹೊಂದಿಕೊಂಡಿದೆ) ಉಜ್ಜನಿ ಗ್ರಾಮದ ಗ್ರಾಮ ದೇವತೆ ಶ್ರೀ *ಹೆಬ್ಬಾರಮ್ಮ* ದೇವಾಲಯದಲ್ಲಿ ಎಂಟುನೂರು ವ
ಜಿದ್ದಾಜಿದ್ದಿ ಇಲ್ಲದೆ ಮಂದಗತಿಯಲ್ಲಿ ಏರಿಕೆಯಾದ ಮತದಾನ
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೈತ್ರಿಯಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿ ಅಶ್ವಥ್ ನಾರಾಯಣ ರವರ ನೇರ ಸ್ಪರ್ಧೆಯ ಲೋಕಸಭಾ ಚುನಾವಣೆಯು ಇಂದು ಯಾವುದೇ ತಂಟೆ ತಕರಾರು ಇಲ್ಲದೆ ಬಿರುಬೇಸಿಗೆಯಲ್ಲೂ ತಣ್ಣಗೆ ನಡೆಯಿತು.ಬೆಳಿಗ್ಗೆ ೦೭:೦೦ ಗಂಟೆಗೆ ಆರಂಭಗೊಂಡ ಮತದಾನವು ೦೯:೦೦ ಗಂಟೆಗೆ ೦೭%, ೧೧:೦೦ ಗಂಟೆಗೆ ೨೨%, ಮಧ್ಯಾಹ್ನ ೦೨:೦೦ ಗಂಟೆಗೆ ೪೦% ಸಂಜೆ ೦೪:೦೦ ಗಂಟೆಗೆ ೬
ಮಹಾವೀರ ಜಯಂತಿ ಪ್ರಯುಕ್ತ ಅನ್ನದಾನ
ಅಹಿಂಸಾ ಪರಮೋಧರ್ಮ ಎಂದು ಸಾರಿದ ಶ್ರೀ ಭಗವಾನ್ ಮಹಾವೀರ ತೀರ್ಥಂಕರರ ಜಯಂತಿಯ ಪ್ರಯುಕ್ತ ಚನ್ನಪಟ್ಟಣ ಜೈನ್ ಸಂಘದವರು ಇಂದು ನಗರದ ನಗರಸಭಾ ಆವರಣದಲ್ಲಿ ಅನ್ನದಾನ ಏರ್ಪಡಿಸಿದ್ದರು.ಹಿನ್ನೆಲೆ;ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವ, ಶಿಷ್ಯರಾದ ಮಹಾವೀರ ತೀರ್ಥಂಕರರು ಹಾಗೂ ನಂತರದ ದಿಗಂಬರ ಮತ್ತು ಶ್ವೇತಾಂಬರರು ಸಹ ತಮ್ಮ ಆಶಯಗಳಾದ ಸರ್ವದಾ ತ್ಯಾಗ, ವೈರಾಗ್ಯ ಮತ್ತು ತಪಸ್ಸು ಗಳಿಗೆ ಮಹತ್ವ ನೀಡಿದ ತೀರ್ಥಂಕ
ನಿರ್ಭೀತಿಯಿಂದ ಮತದಾನ ಮಾಡಲು ಸೂಕ್ತ ವ್ಯವಸ್ಥೆ ಮಾಡಿದ ಚುನಾವಣಾ ಆಯೋಗ
ಮತದಾರ ನಿರ್ಭೀತಿಯಿಂದ ಮತ ಚಲಾಯಿಸಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಚುನಾವಣಾ ಆಯೋಗವು ಸೂಕ್ತ ವ್ಯವಸ್ಥೆ ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗದಲ್ಲಿ ೨೦೭, ನಗರ ೫೯ ಸೇರಿದಂತೆ ಒಟ್ಟು ೨೬೬ ಮತಗಟ್ಟೆಗಳಿದ್ದು, ಒಟ್ಟು ಮತದಾರರ ಪೈಕಿ ಗಂಡಸರು ೧,೦೬,೭೧೨, ಹೆಂಗಸರು ೧,೧೧೫೦೬. ಇತರೆ ೦೭, ಸೇವಾ ಮತದಾರರು ೪೯ ಮತದಾರರು ಸೇರಿದಂತೆ ಒಟ್
ದಲಿತರು ಹಿಂದುಳಿದವರು ಉಳಿಯಬೇಕಾದರೆ ಮೈತ್ರಿ ಅಭ್ಯರ್ಥಿ ಗೆ ಮತ ನೀಡಿ, ಜಯಂತ್ ಚಾಲುಕ್ಯ
ಸಂವಿಧಾನ ಉಳಿವಿಗೆ, ದೀನ ದಲಿತರು ಹಾಗೂ ಹಿಂದುಳಿದ ವರ್ಗ ದ ಜನ ಮುಂದುವರಿಯಬೇಕಾದರೆ ಕಾಂಗ್ರೆಸ್ ಪಕ್ಷ ಮತ್ತು ಅದರ ಮೈತ್ರಿ ಪಕ್ಷಗಳಿಂದ ಮಾತ್ರ ಸಾಧ್ಯ, ಬಿಜೆಪಿ ಪಕ್ಷಕ್ಕೆ ಮತ ನೀಡಿದರೆ ಸಂವಿಧಾನಕ್ಕಾಗಲಿ ನಮಗಾಗಲಿ ಉಳಿಗಾಲವಿಲ್ಲವಾದ್ದರಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾದ ಡಿ ಕೆ ಸುರೇಶ್ ರವರಿಗೆ ನನ್ನೆಲ್ಲಾ ಸಮುದಾಯದವರು ಮತ ನೀಡಬೇಕೆಂದು ರಾಮನಗರ ಜಿಲ್ಲಾ ಜೆಡಿಎಸ್ ಎಸ್ಸಿ ಎಸ್ಟಿ ಅಧ್ಯಕ್ಷ ಜಯಕಾಂತ್ ಚಾಲುಕ್ಯ ಪತ
ಜೋಡೆತ್ತುಗಳ ಹುಸಿ ಭರವಸೆಗಳಿಂದ ನೊಂದ ಮತದಾರ ? ಬಿಜೆಪಿ ಪರ ಒಲವು ಹೊಂದಿದ್ದಾನೆ, ಯೋಗೇಶ್ವರ್.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿ ಗಾದಿಗೇರಿದ ಕುಮಾರಸ್ವಾಮಿ ಮತ್ತು ಕನಕಪುರ ಕ್ಷೇತ್ರದಿಂದ ಗೆದ್ದು ಜಲಸಂಪನ್ಮೂಲ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರ ಜೋಡೆತ್ತುಗಳ ಭರವಸೆ ಮತ್ತು ದುರಾಡಳಿತದ ವಿರುದ್ಧ ಬಂಡೆದ್ದಿರುವ ತಾಲ್ಲೂಕಿನ ಮತದಾರ ಬಂಧುಗಳು ಈ ಬಾರಿ ಬಿಜೆಪಿ ಬೆಂಬಲಿಸುತ್ತಾರೆ ಎಂಬ ಆತ್ಮವಿಶ್ವಾಸ ಇದೆ ಎಂಬ ಭರವಸೆಯನ್ನು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಹೊಂದಿರ
ಇಪ್ಪತ್ತು ಗಂಟೆಗಳಲ್ಲಿಯೇ ಅದೇ ಜಾಗದಲ್ಲಿ ಡಿಕೆಶಿಗೆ ಪ್ರತ್ಯುತ್ತರಿಸಿ ಶಿವಕುಮಾರ್ ದುಡ್ಡು ಬಿಜೆಪಿಗೆ ಓಟು ಎಂದ ಸಿಪಿವೈ
ನನ್ನನ್ನು ಗಂಡಸಾ ! ಎಂದು ಕೇಳಿದ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ನಿಜವಾದ ಗಂಡಸಾಗಿದ್ರೆ ನಮ್ಮ ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ನಾನು ಬರಗಾಲ ದಲ್ಲಿ ತುಂಬಿಸಿದ ಹಾಗೆ ನೀರು ತುಂಬಿಸಲಿ, ಆಗ ಅವರನ್ನು ನಾನು ಗಂಡಸು ಎಂದು ಒಪ್ಪಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಸವಾಲು ಹಾಕಿದರು, ನಿನ್ನೆ ದಿನ ಸಂಜೆ ೦೬:೩೦ ರಲ್ಲಿ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ನಗರದ ಅಂಬೇಡ್ಕರ್ ನಗರದಲ್ಲಿ ಹಾಕಿದ ಸವಾಲಿಗೆ ಇಂದು ಮಧ್ಯಾಹ್ನ ೦೩:೦೦
ತಾಲ್ಲೂಕಿನಾದ್ಯಂತ ಶ್ರೀ ರಾಮನವಮಿ ಆಚರಣೆ ಪ್ರಯುಕ್ತ ಮಜ್ಜಿಗೆ, ಪಾನಕ ವಿತರಣೆ
ನಗರದ ದೇವಾಲಯಗಳು ಸೇರಿದಂತೆ ತಾಲ್ಲೂಕಿನ ಬಹುತೇಕ ದೇವಾಲಯಗಳಲ್ಲಿ ಅದರಲ್ಲೂ ರಾಮಮಂದಿರಗಳು, ಶ್ರೀ ರಾಮ ದೇವಾಲಯ ಹಾಗೂ ರಾಮ ಭಕ್ತ ಆಂಜನೇಯ ದೇಗುಲಗಳ ಬಳಿ ಶ್ರೀ ರಾಮನವಮಿ ಯ ಪ್ರಯುಕ್ತ ನೀರು ಮಜ್ಜಿಗೆ, ಬೆಲ್ಲದ ಪಾನಕ ಮತ್ತು ಹೆಸರುಬೇಳೆಯ ಕೋಸಂಬರಿಯನ್ನು ಭಕ್ತಾಧಿಗಳಿಗೆ ವಿತರಿಸಲಾಯಿತು.ಹಲವಾರು ದೇವಾಲಯಗ