ಕಳಪೆ ಹೆಲ್ಮೆಟ್ ದಂಧೆ, ಎರಡೇ ದಿನದಲ್ಲಿ ಒಂದೂವರೆ ಲಕ್ಷ ದಂಡ, ಅರಿವು ಪ್ರಯತ್ನ
ಚನ್ನಪಟ್ಟಣ: ಕಾಟಾಚಾರದ ಸವಾರರು
ಚನ್ನಪಟ್ಟಣ ತಾಲೂಕಿನಾದ್ಯಂತ ಬಹುತೇಕ ದ್ವಿಚಕ್ರ
ಸವಾರರ ತಲೆ ಮೇಲೆ ಬಣ್ಣಬಣ್ಣದ ತರಹೇವಾರಿ ಶಿರಸ್ತ್ರಾಣಗಳು (ಹೆಲ್ಮೆಟ್) ರಾರಾಜಿಸುತ್ತಿವೆ.
ಮನೆಯ ಮೂಲೆಯಲ್ಲಿ, ಅಟ್ಟದ ಮೇಲಿದ್ದ, ತಾತ್ಕಾಲಿಕವಾಗಿ ಇರಲೆಂದು ಹೊಸದಾಗಿ ಖರೀದಿಸಿದ ಹೆಲ್ಮೆಟ್ ಗಳೆಲ್ಲವೂ ತಲೆಯ ಮೇಲೆ ವಿರಾಜಮಾನಗೊಂಡಿವೆ, ನಮ್ಮ ಪ್ರಾಣ ಉಳಿಸಲೋಸುಗ ಹೆಲ್ಮೆಟ್ ಕಡ್ಡಾಯ ಮಾಡಿದ್ದಾರೆಂಬುದನ್ನು ಮರೆತು ಪೋಲಿಸರನ್ನು ಬೈದುಕೊಂಡು ಹೀಯಾಳಿಸಿಕೊಂಡು ಒಳ್ಳೆಯದೋ, ಕೆಟ್ಟದ್ದೋ ದಂಡ ಕಟ್ಟದಂತಿರಲಿ ಎಂಬುದಷ್ಟೇ ಅವನ ತಲೆಯಲ್ಲಿ ಹೊಕ್ಕಿರುವುದು ಚಾಲಕನ ಕುಟುಂಬದ ದುರಾದೃಷ್ಟ ಎನ್ನಬಹುದು.
*ಎರಡೇ ದಿನದಲ್ಲಿ ಲಕ್ಷಾಂತರ ರೂಪಾಯಿ ದಂಡ*
ಮೊದಲ ದಿನ ಅಂದರೆ ಆಗಸ್ಟ್ ೧೫ ನೇ ಸ್ವಾತಂತ್ರ್ಯ ದಿನಾಚರಣೆಯ ದಿನ ಸಂಚಾರಿ ಪೋಲೀಸರೇ ೬೦೫ ದ್ವಿಚಕ್ರ ವಾಹನಗಳ ಸವಾರರಿಗೆ ತಲಾ ೧೦೦ ರೂಪಾಯಿ ದಂಡ ವಿಧಿಸಿದರೆ, ಇನ್ನಿತರ ಠಾಣೆಯ ಪೋಲಿಸರು ೨೫೦ ಸವಾರರಿಗೆ ದಂಡ ವಿಧಿಸಿದ್ದು ಇಂದೂ ಸಹ (೧೬/೦೮) ಅನೇಕ ಸವಾರರಿಗೆ ದಂಡ ವಿಧಿಸಲಾಗಿದ್ದು ೧,೫೦,೦೦೦ ದಂಡ ಸಂಗ್ರಹ ವಾಗಿರಬಹುದು ಎಂದು ಸಂಚಾರಿ ಪೋಲಿಸ್ ಠಾಣೆಯ ಪಿ ಎಸ್ ಐ ಶಿವಕುಮಾರ್ ತಿಳಿಸಿದ್ದಾರೆ.
*ಅರಿವು ಮೂಡಿಸಲು ಪೋಲಿಸರ ಜಾಥಾ*
ನಗರದಾದ್ಯಂತ ಎರಡು ಪೋಲಿಸ್ ಜೀಪುಗಳು ಮತ್ತು ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸಿದ ಸಿಬ್ಬಂದಿಗಳು ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಕೇವಲ ಕಾನೂನು ಮತ್ತು ಪೋಲಿಸರಿಗೆ ಹೆದರಿ ಹೆಲ್ಮೆಟ್ ಧರಿಸುವುದು ಬೇಡ, ತಮ್ಮ ಅತ್ಯಮೂಲ್ಯ ಪ್ರಾಣ ರಕ್ಷಣೆ ಹಾಗೂ ತಮ್ಮ ಕುಟುಂಬದ ರಕ್ಷಣೆಗಾಗಿ ಹೆಲ್ಮೆಟ್ ಧರಿಸಬೇಕೆಂದು ತಿಳಿಸಿದರು.
*ಐಎಸ್ಐ ಇಲ್ಲದ ಹೆಲ್ಮೆಟ್ ದಂಧೆ*
ಪೋಲಿಸರು ಹೆಲ್ಮೆಟ್ ಧರಿಸದ ಸವಾರರಿಗೆ ದಂಡ ವಿಧಿಸುತ್ತಿರುವುದನ್ನೇ ಬಂಡವಾಳ ಮಾಡಿಕೊಂಡ ಅನೇಕ ಹೆಲ್ಮೆಟ್ ವ್ಯಾಪಾರಿಗಳು *ಐಎಸ್ಐ* ಮುದ್ರೆ ಇಲ್ಲದ ಕನಿಷ್ಠ ಗುಣಮಟ್ಟದ ಕೇವಲ ೧೫೦ ರೂಪಾಯಿಗಳ ಹೆಲ್ಮೆಟ್ ಗಳನ್ನು ಮಾರುವ ಮೂಲಕ ಸವಾರರ ಪ್ರಾಣದ ಜೊತೆ ಚಲ್ಲಾಟವಾಡುತ್ತಿರುವುದು ಪೋಲಿಸರ ಎದುರೇ ನಡೆಯುತ್ತಿದ್ದರೂ ಸಹ ಪೋಲಿಸರು ಅವರ ವಿರುದ್ಧ ಕ್ರಮ ಕೈಗೊಳ್ಳದೇ ಗ್ರಾಹಕರ ವಿರುದ್ಧ ಮಾತ್ರ ಕೈಗೊಳ್ಳುತ್ತಿರುವುದು ಯಾವ ನ್ಯಾಯ ಎಂದು ಸಾರ್ವಜನಿಕರು.
*ಕಳಪೆ ಹೆಲ್ಮೆಟ್ ನಿಂದ ತಲೆಗೆ ಪೆಟ್ಟು ಮಾಡಿಕೊಂಡ ಶಿಕ್ಷಕಿ*
ಇಂದು (೧೬/೦೮) ಬೆಳಿಗ್ಗೆ ತನ್ನ ಮಗಳ ಜೊತೆ ಶಾಲೆಗೆ ಹೊರಟಿದ್ದ ಹಾರಿಜ್ಹಾನ್ ಶಾಲೆಯ ಮುಖ್ಯೋಪಾಧ್ಯಾಯಿನಿ ಮಂಜುಳಾರಾಜ್ ರವರು ಸಾತನೂರು ವೃತ್ತ ದ ಬಳಿ ಬರುತ್ತಿದ್ದಂತೆ ಆಕಸ್ಮಿಕ ಅಪಘಾತವಾಗಿದ್ದು ಆಕೆಯ ತಲೆಗೆ ಪೆಟ್ಟು ಬಿದ್ದು ಪ್ರಜ್ಞೆ ತಪ್ಪಿದ್ದಾರೆ, ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಚೇತರಿಕೆ ತುಸು ಕಷ್ಟವಾಗಬಹುದು ಎಂದು ಆಪ್ತ ಮೂಲಗಳು ತಿಳಿಸಿವೆ.
*ಅಪಘಾತ ಸಂದರ್ಭದಲ್ಲಿ ಅವರು ಕಳಪೆಯ ಅರ್ಧ ಭಾಗವಿರುವ ಹೆಲ್ಮೆಟ್ ಧರಿಸಿದ್ದರು, ಐಎಸ್ಐ ಮುದ್ರೆ ಇರುವ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸಿದ್ದರೆ ತಲೆಗೆ ಪೆಟ್ಟು ಬೀಳುತ್ತಿರಲಿಲ್ಲ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದರು*
*ವ್ಹೀಲಿಂಗ್ ಕ್ರಮಕೈಗೊಳ್ಳಿ*
ದ್ವಿಚಕ್ರ ವಾಹನ ಸವಾರರಿಗೆ ಕೇವಲ ಹೆಲ್ಮೆಟ್ ಒಂದೇ ಅಲ್ಲದೆ ಹಲವಾರು ವಿದ್ಯಾರ್ಥಿಗಳು ಮತ್ತು ಕೆಲವು ಯುವಕರು *ವ್ಹೀಲಿಂಗ್* ಮಾಡುವುದು *ಸೈಲೆನ್ಸರ್ ನ ಫಿಲ್ಟರ್* ತೆಗೆದು ಜೋರಾದ ಶಬ್ದದೊಂದಿಗೆ ಅಡ್ಡಾದಿಡ್ಡಿ ಯಾಗಿ ಸಾಗಿ ದಾರಿಹೋಕರು ಮತ್ತು ಇನ್ನಿತರ ವಾಹನ ಸವಾರರಿಗೆ ಪ್ರಾಣ ಭೀತಿ ಉಂಟು ಮಾಡುತ್ತಿದ್ದು ಇವರ ಮೇಲೆ ನಿಗಾ ಇರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ.
*ಗುಣಮಟ್ಟದ ಪೂರ್ಣಪ್ರಮಾಣದ ಹೆಲ್ಮೆಟ್ ಧಾರಣೆ ನಿಮ್ಮ ಪ್ರಾಣ ರಕ್ಷಣೆಗೆ ಹೊರತು ಪೋಲಿಸರ ಉದ್ದಾರಕ್ಕಲ್ಲ*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು