ಭಾರತ ಜಗತ್ತಿನ ಜನಕ, ಜಗತ್ತಿಗೆ ಪಾರಂಪರಿಕ ವೈದ್ಯಕೀಯ ಪರಿಚಯಿಸಿದ ಹೆಗ್ಗಳಿಕೆ ಭಾರತದ್ದು ನಿರ್ಮಲಾನಂದ ಶ್ರೀ
ಭಾರತ ಜಗತ್ತಿನ ಜನಕ, ಭಾರತ ಇಲ್ಲದಿದ್ದರೆ ಜಗತ್ತೇ ಇಲ್ಲ, ಪಾರಂಪರಿಕ ವೈದ್ಯವನ್ನು ಹೇಳಿಕೊಟ್ಟವರು ಭಾರತೀಯರು, ಜಗತ್ತಿಗೆ ಲೆಕ್ಕ ಬರೆದಿಡಲು ಅಂಕಿ ಅಂಶಗಳನ್ನು ಹೇಳಿಕೊಟ್ಡವರು ನಮ್ಮ ದೇಶದ ಮಹಾನ್ ಇತಿಹಾಸಕಾರರು, ನಮ್ಮ ಆರೋಗ್ಯ ಗಿಡ ಮೂಲಿಕೆಗಳಲ್ಲಿದೆ ಎಂದು ಜಗತ್ತಿಗೆ ಸಾರಿದವರು ನಮ್ಮ ಭಾರತೀಯ ಋಷಿ ಮುನಿಗಳು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ದ ಪೀಠಾಧ್ಯಕ್ಷ ಡಾ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಅವರು ಅರ್ಚಕರಹಳ್ಳಿಯ ಶಾಖಾ ಮಠದ ಬಿಜಿಎಸ್ ವಲ್ಡ್೯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೧೩ ನೇ ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನ ಹಾಗೂ ಮೂಲಿಕಾ ಉತ್ಸವ-೨೦೧೯ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ನಡೆದಾಡಿದರೆ ಆರೋಗ್ಯ ಎಂದು ಭಾರತೀಯ ಪಾರಂಪರಿಕ ಆಯುರ್ವೇದ ವೈದ್ಯರು ಸಾರಿದರೆ ಪಾಶ್ಚಿಮಾತ್ಯ ಹಾಗೂ ನಮ್ಮ ಇಂಗ್ಲಿಷ್ ವೈದ್ಯರು ವಿಶ್ರಾಂತಿ (ರೆಸ್ಟ್) ಪಡೆದರೆ ಆರೋಗ್ಯ ಎನ್ನುತ್ತಾರೆ. ಚಿಕಿತ್ಸೆ ಗೆ ಬಗ್ಗದ ಆರೋಗ್ಯ ಪ್ರೀತಿಗೆ ಬಗ್ಗುತ್ತದೆ. ಧನ್ವಂತರಿ ಚಿಕಿತ್ಸೆ ಜಗತ್ತಿಗೆ ಪೂರಕವಾಗಿ ನಿಂತಿದೆ, ಭಾರತ ಜಗತ್ತಿನ ನಾಗರೀಕತೆಯ ತೊಟ್ಟಿಲು ಎಂದು ಪಾಶ್ಚಿಮಾತ್ಯ ದೇಶದ ಇತಿಹಾಸಕಾರರು ಹೊಗಳಿದ್ದಾರೆ, ಜಗತ್ತಿಗೆ ಅಕ್ಷರ ಬಾರದ ಸಮಯದಲ್ಲಿ ನಳಂದ ಮತ್ತು ತಕ್ಷಶಿಲಾ ವಿಶ್ವ ವಿದ್ಯಾಲಯ ಇದ್ದ ದೇಶ ನಮ್ಮದು, ಇಡೀ ಜಗತ್ತಿಗೆ ಗಣಿತ ಮತ್ತು ವಿಜ್ಞಾನವನ್ನು ಕೊಡುಗೆಯಾಗಿ ನೀಡಿದ ನಮ್ಮ ಭಾರತ, ಪ್ರಕೃತಿಯಲ್ಲಿ ಸಿಗುವ ವಸ್ತುಗಳೆಲ್ಲವೂ ನಮ್ಮ ದೇಹಕ್ಕೆ ಪೂರಕವಾಗಿವೆ, ಪ್ರಕೃತಿಯ ನಿಯಮಾನುಸಾರ ನಡೆದರೆ ನೂರು ಸಂವತ್ಸರಗಳನ್ನು ಲೀಲಾಜಾಲವಾಗಿ ದಾಟಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ನ ಗೌರವ ಉಪಾಧ್ಯಕ್ಷ ಗಾ ನಂ ಶ್ರೀಕಂಠಯ್ಯ ಮಾತನಾಡಿ ಮೂಲಿಕಾ ವೈದ್ಯಕೀಯ ಚಿಕಿತ್ಸೆಯನ್ನು ನಾವು ಸಂಪೂರ್ಣವಾಗಿ ಅಳವಡಿಸಿಕೊಳ್ಳಬೇಕು, ಆಯುಷ್ ವೈದ್ಯಕೀಯ ಕಾರ್ಯಕರ್ತರನ್ನಾಗಿ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ನೇಮಕ ಮಾಡಿಕೊಂಡು ಪಾರಂಪರಿಕ ವೈದ್ಯಕೀಯಕ್ಕೆ ಹೆಚ್ಚು ಒತ್ತು ನೀಡಬೇಕು, ಬ್ರಿಟಿಷರಿಂದ ಬಳುವಳಿಯಾಗಿ ಪಡೆದ ಇಂಗ್ಲಿಷ್ ವೈದ್ಯಕ್ಕಿಂತಲೂ ನಮ್ಮ ಪುರಾತನ ಪಾರಂಪರಿಕ ಔಷಧ ಹೆಚ್ಚು ಪರಿಣಾಮಕಾರಿ ಎಂದು ತಿಳಿಸಿದರು.
ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಡಿ ಬಿ ನಾಯಕ್ ಮಾತನಾಡಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಇದೆ, ಪಾರಂಪರಿಕ ವೈದ್ಯ ದಲ್ಲಿ ಸ್ಪರ್ಧೆಗಿಂತ ಜ್ಞಾನ ಮುಖ್ಯವಾದದ್ದು ಅದು ನಮ್ಮ ವೈದ್ಯ ರತ್ನ ರಲ್ಲಿದೆ. ಇಂಗ್ಲಿಷ್ ಔಷಧಗಳ ಜೊತೆಗೆ ಪಾರಂಪರಿಕ ಆಯುರ್ವೇದ ಔಷಧ ಗಳು ಮುಖಾಮುಖಿಯಾಗಬೇಕಾಗಿದೆ.
ಇಂದು ಪ್ರಕೃತಿ ಮತ್ತು ವಿಜ್ಞಾನ ಗಳು ಸಂಘರ್ಷಕ್ಕೆ ಇಳಿದಿವೆ ಎಂದು ವಿಷಾದಿಸಿದರು.
ಮಹಾಮಾರಿ ಏಡ್ಸ್ ಮತ್ತು ಕ್ಯಾನ್ಸರ್ ನಂತಹ ಖಾಯಿಲೆಗಳಿಗೂ ನಮ್ಮಲ್ಲಿ ಔಷಧೋಪಚಾರ ಇದೆ ಆದರೆ ಪ್ರಚಾರದ ಕೊರಯೆಯಿಂದ ಜನರ ಅರಿವು ಕಡಿಮೆಯಾಗುತ್ತಿರುವುದರಿಂದ ಪಾರಂಪರಿಕ ವೈದ್ಯ ಮೂಲೆಗುಂಪಾಗುತ್ತಿರುವುದು ವಿಷಾದನೀಯ. ಹೆಚ್ಚು ಜನಸಂಖ್ಯೆ ಮತ್ತು ಅಭಿವೃದ್ಧಿ ದೇಶಗಳಲ್ಲಿ ಪ್ರಚಾರ ಮತ್ತು ಅಧ್ಯಯನ ಕೈಗೊಳ್ಳುವ ಮೂಲಕ ಉಳಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಮನಗರ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಗಾಣಕಲ್ ನಟರಾಜು ಮತ್ತು ಸನ್ಮಾನಿತರು ಮಾತನಾಡಿದರು.
ತುರುವೇಕೆರೆ ಯ ರೆಹನಾ ಬೇಗಂ, ಬಸವನಬಾಗೇವಾಡಿ ಯ ದುರಗಪ್ಪ ನರಸಪ್ಪ, ರಾಮನಗರ ದ ಮೂಡಲಪ್ಪ, ರಾಯಚೂರಿನ ನೀಲಕಂಠಪ್ಪ ಮತ್ತು ಹಾನಗಲ್ ನ ಗಣಪತಿ ಹೈದ ರವರಿಗೆ ರಾಜ್ಯ ಮಟ್ಟದ ವೈದ್ಯಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಸನ್ನನಾಥ ಸ್ವಾಮೀಜಿ, ಅನ್ನದಾನೇಶ್ವರ ನಾಥ ಸ್ವಾಮೀಜಿ, ತಿರುವೆಂಕಟ ಜೀಯರ್, ಮೂರ್ತಿ ಸ್ವಾಮೀಜಿ ಸೇರಿದಂತೆ ಅನೇಕ ಮಠದ ಸ್ವಾಮಿಗಳು, ಪಾರಂಪರಿಕ ವೈದ್ಯ ಮಹಾಶಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಪಾರಂಪರಿಕ ವೈದ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಶಿಕ್ಷಕಿ ಹಾಗೂ ಕವಯಿತ್ರಿ ಶೈಲಾಶ್ರೀನಿವಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು