ಕೊರೊನಾ ಗೆ ಹೆದರದ ನಗರಿಗರು ಕರಡಿಗೆ ಹೆದರಿದ್ದು, ಕನಸಿನಲ್ಲೂ ಕನವರಸಿತ್ತಿದ್ದಾರೆ. ಇಲಾಖೆ ಧೈರ್ಯ ತುಂಬಬೇಕಿದೆ
ಚನ್ನಪಟ್ಟಣ:ಮೇ/೩೦/೨೦/ಶನಿವಾರ. ಇಡೀ ಜಗತ್ತನ್ನೇ ಆವರಿಸಿ ಬಲಿ ಪಡೆಯುತ್ತಿರುವ ಮಹಾಮಾರಿ ಕೊರೊನಾ (ಕೋವಿಡ್-೧೯) ಗೆ ಅಂಜದೆ, ಅಳುಕದೆ ಅವರಿಷ್ಟದಂತಿದ್ದ ಮಂದಿ ಕರಡಿಗೆ ಹೆದರಿ ಬಾಗಿಲು ಮುಚ್ಚಿ ಮಲಗುವ ಹಂತಕ್ಕೆ ತಲುಪಿದ್ದಾರೆ.
ಹೌದು ಇತ್ತೀಚಿಗೆ ಮೇವು ಹರಸಿ ಕಾಡಿನಿಂದ ನಗರಕ್ಕೆ ಬಂದ ಕರಡಿಯೊಂದು ಜನರ ಭೀತಿಗೆ ಹೆದರಿ, ಮನೆಯೊಂದರ ಕಾಂಪೌಂಡ್ ನೊಳಗೆ ಅವಿತು ಕುಳಿತಿತ್ತು. ಅರಿವಿಲ್ಲದ ಮನೆಯ ಒಡತಿ ಸಾಕಮ್ಮ (೬೫) ಮನೆಯ ಬಾಗಿಲು ತೆಗೆದು ಹೊರ ಬಂದ ತಕ್ಷಣ ಮೊದಲೇ ಹೆದರಿ ಕುಳಿತಿದ್ದ ಕರಡಿಯು ಏಕಾಏಕಿ ಸಾಕಮ್ಮನ ಮೇಲೆರೆಗಿ ಇಡೀ ಮುಖವನ್ನು ಪರಚಿ ಒಂದು ಕಣ್ಣನ್ನು ಕಿತ್ತು ಘಾಸಿಗೊಳಿಸಿದ್ದು, ಪ್ರಾಣಕ್ಕೆ ಯಾವುದೇ ತೊಂದರೆ ಆಗಿಲ್ಲವಾದರೂ ದೃಷ್ಟಿ ಮತ್ತು ಮುಖದ ಅಂದ ಮರಳಿ ಬರುವುದು ಕಷ್ಟಸಾಧ್ಯವಾಗಿದೆ.
ಇದಾದ ಬಳಿಕ ಕರಡಿ ನಗರದಲ್ಲಿಯೇ ತಳ ಊರಿದೆಯಾ ಇಲ್ಲ ಕಾಡು ಪಾಲಾಗಿದೆಯಾ ಎಂಬ ಸಂಶಯ ನಗರದ ಮಂದಿಯ ತಲೆ ಹೊಕ್ಕಿದ್ದು ಅದರಿಂದ ಆಚೆ ಬರಲಾಗದೆ ಕಪ್ಪೆ ವಟರಗುಟ್ಟಿದರೂ, ಕತ್ತೆ ಕಿರುಚಿದರೂ, ಕಪ್ಪು ನಾಯಿ ಅಥವಾ ಹಂದಿಯನ್ನು ಸಂದಿಯಲ್ಲೋ, ಪೊದೆಯಲ್ಲೋ ನೋಡಿದರೂ ಸಹ ಅದು ಕರಡಿಯೇ ಇರಬಹುದು ಎಂದು ಹೀಕರಿಸಿಕೊಂಡಿದ್ದಾರೆ.
ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ ಆ ಕರಡಿಯು ರೈಲು ಹಳಿ ದಾಟಿ ದೇವರಹಳ್ಳಿ ಮೂಲಕ ಅಬ್ಬೂರು ಗುಡ್ಡೆ ಕಡೆ ಹೋಗಿದೆ ಎಂದು ಹೇಳುತ್ತಾರಾದರೂ ಅದು ಇಂತಹ ಕಡೆಗೆ ಹೋಗಿದೆ ಎಂಬ ಕುರುಹು ಕಾಣದಿರುವುದರಿಂದ ನಗರದ ಮಂದಿ ಇಲ್ಲೇ ಇರಬಹುದು ಎಂದು ಕಂಗಾಲಾಗಿರುವುದು ಸತ್ಯ.
ಪೋಲಿಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ನಗರದಲ್ಲಿರುವ ಎಲ್ಲಾ ಸಿಸಿ ಟಿವಿ ಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ವೀಕ್ಷಿಸಿ ಜಾಹಿರು ಪಡಿಸುವ ಮೂಲಕ ಅದು ಎಲ್ಲಿಗೆ, ಎಷ್ಟೊತ್ತಿಗೆ ಹೋಗಿದೆ ಎಂಬುದನ್ನು ಪ್ರಚುರಪಡಿಸಿ ನಗರದ ಮಂದಿಗೆ ಧೈರ್ಯ ತುಂಬಬೇಕಾಗಿದೆ.
*ಅಂದಿನಿಂದ ಇಂದಿನವರೆಗೂ ತಪ್ಪಲಿಲ್ಲ ಗಾಳಿಸುದ್ದಿ*
ಕರಡಿಯೂ ಬಂದು ಹೋದಾಗಿನಿಂದ ಇಂದಿನವರೆಗೂ ನಗರದ ಅಂತರಗಂಗೆ, ಕುಡಿ ನೀರಿನ ಕಟ್ಟೆ, ರಾಮಮ್ಮನಕೆರೆ, ಚರ್ಚ್ ರಸ್ತೆ, ಕುವೆಂಪು ನಗರ, ಅಪ್ಪಗೆರೆ , ಲಾಳಾಘಟ್ಟ ಸೇರಿದಂತೆ ಅಲ್ಲಿತ್ತು, ಇಲ್ಲಿತ್ತು ಎಂಬ ಗಾಳಿ ಸುದ್ದಿಗಳೇ ಹರಿದಾಡುತ್ತಿವೆ. ಕೆಲವರಿಗೆ ಇದೇ ದುರಭ್ಯಾಸವಾಗಿದ್ದು ನಾಳೆ ನಿಜವಾಗಿಯೂ ಕರಡಿ ಕಾಣಿಸಿಕೊಂಡಾಗ ಅವರುಗಳ ಸ್ಥಿತಿ ಭಯಾನಕವಾಗುತ್ತದೆ ಎಂಬ ಅರಿವು ಇರಬೇಕಾಗಿದೆ.
ಕರಡಿ ನಗರದಲ್ಲಂತೂ ಇಲ್ಲ, ನಮ್ಮ ವನ್ಯಜೀವಿ ತಂಡ, ಪ್ರಾಣಿ ವೈದ್ಯ ತಂಡ ಮತ್ತು ಇಲಾಖೆಯು ನಗರದಲ್ಲಿ ಹುಡುಕಾಡಿದ್ದಾರೆ. ಅದು ಈಗಾಗಲೇ ಅರಣ್ಯ ಪ್ರದೇಶಕ್ಕೆ ಹೋಗಿರುವ ಗುರುತುಗಳನ್ನು ಪತ್ತೆ ಹಚ್ಚಿದ್ದಾರೆ. ನಗರದ ನಾಗರೀಕರು ಭಯಪಡುವ ಅಗತ್ಯವಿಲ್ಲ.
ಇನ್ನು ಪಿಟಿಎಸ್ ಬಳಿ ಚಿರತೆಗಳಿರುವುದು ಗಮನಕ್ಕೆ ಬಂದಿದೆ. ಚಿರತೆಗಳು ಯಾವುದೇ ಕಾರಣಕ್ಕೂ ಮನುಷ್ಯನ ಮೇಲೆ ಏಕಾಏಕಿ ಎರಗುವುದಿಲ್ಲ. ಎಲ್ಲಿ ತೊಂದರೆ ಕಂಡುಬಂದರೂ ಶೀಘ್ರವಾಗಿ ಕ್ರಮಕೈಗೊಳ್ಳುತ್ತೇವೆ.
*ಎಸ್ ಎನ್ ಹೆಗ್ಗಡೆ. ಡಿಸಿಎಫ್ ರಾಮನಗರ*
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು